ಚಳಿಗೆ ಕಾಡುವ ಶಿಲೀಂಧ್ರ ಸೋಂಕು


Team Udayavani, Jan 21, 2020, 5:14 AM IST

fungal-infection

ಚಳಿಗಾಲ ಕಾಲಿಡುತ್ತಿದ್ದಂತೆ ಚರ್ಮದ ವಿವಿಧ ಕಾಯಿಲೆಗಳು ದಾಂಗುಡಿ ಇಡುತ್ತವೆ. ಇವುಗಳಲ್ಲಿ ಚರ್ಮದ ಫ‌ಂಗಸ್‌ ಸೋಂಕು ಒಂದು. ಚರ್ಮ, ಕೂದಲು ಮತ್ತು ಉಗುರುಗಳಲ್ಲಿ ಶಿಲೀಂಧ್ರ ಸೋಂಕು ಉಂಟಾಗುತ್ತದೆ. ಇದಕ್ಕೆ ಕಾರಣ ಪೋಷಕಾಂಶಗಳ ಕೊರತೆ. ರಿಂಗ್‌ ವರ್ಮ್ ಅಥವಾ ಹುಳುಕಡ್ಡಿ ಕೂಡ ಇದೇ ಸಾಲಿನಲ್ಲಿ ಸೇರ್ಪಡೆಯಾಗಿದೆ. ಆಡುಭಾಷೆಯಲ್ಲಿ ಇದನ್ನು ಹುಳುಕಡ್ಡಿ, ಚಿಬ್ಬು ಎಂದು ಕರೆಯುತ್ತೇವೆ. ಮಧುಮೇಹ ನಿಯಂ ತ್ರಣ ಕಳೆದುಕೊಂಡಾಗ ಇಂತಹ ರೋಗ ಬೇಗನೆ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ದೀರ್ಘ‌ ಕಾಲದ ಆ್ಯಂಟಿ ಬಯಾಟಿಕ್‌ ಅಥವಾ ಸ್ಟಿರಾಯ್ಡ ಬಳಕೆ ಕೂಡ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಲ್ಲದು.

ಗುಣಲಕ್ಷಣ
ಬಿಳಿ, ಕೆಂಪು, ಕಪ್ಪು, ಕಂದು ಬಣ್ಣದ ಮಚ್ಚೆಗಳು ದೇಹದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ. ಇದರಿಂದ ತುರಿಕೆ, ಉರಿ ಉಂಟಾಗಬಹುದು. ತುರಿಸಿದರೆ ನೋವು ಹೆಚ್ಚಾಗಿ, ರಕ್ತ ಜಿನುಗುವ ಸಾಧ್ಯತೆಯೂ ಇರುತ್ತವೆ. ಮುಖ್ಯವಾಗಿ ಕುತ್ತಿಗೆ, ಬೆನ್ನು, ಭುಜ, ಕಾಲಿನಲ್ಲಿ, ಸೊಂಟದ ಭಾಗದಲ್ಲಿ ಫ‌ಂಗಸ್‌ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಎಳೆ ಮಕ್ಕಳಲ್ಲಿ ಈ ಶಿಲೀಂಧ್ರಗಳ ಕಾಟ ಹೆಚ್ಚಾಗಿರುತ್ತದೆ. ಮಕ್ಕಳ ನಾಲಿಗೆ ಮೇಲೆ, ಬಾಯಿಯ ಒಳಭಾಗದಲ್ಲಿ ಬಿಳಿ ಬಣ್ಣದ ಲೇಪನ ಕಂಡುಬರುತ್ತವೆ. ಇದನ್ನು ನಿವಾರಿಸಲು, ದಿನನಿತ್ಯ ದೇಹ ಶುದ್ಧಿಯ ಕಡೆ ಗಮನ ಹರಿಸಬೇಕು. ಸ್ನಾನ ಮಾಡುವಾಗ, ಹಲ್ಲು ತೊಳೆಯುವಾಗ ಸರಿಯಾಗಿ ಶುಚಿಗೊಳಿಸಬೇಕು. ಇದ ರಿಂದ ಚರ್ಮದ ಫ‌ಂಗಸ್‌ ಮಕ್ಕಳಿಗೆ ಬಾಧಿಸದಂತೆ ತಡೆಗಟ್ಟಬಹುದು.

ಹೀಗೆ ಮಾಡಿ
ಚರ್ಮದಲ್ಲಿ ತೇವಾಂಶ ಇರದಂತೆ ನೋಡಿಕೊಳ್ಳುವುದು ಅಗತ್ಯ. ಸ್ನಾನ ಮಾಡಿ, ಕೈಕಾಲು ತೊಳೆದು ಹಾಗೇ ಕುಳಿತುಕೊಳ್ಳುವುದು ಉತ್ತಮ ಲಕ್ಷಣ ವಲ್ಲ. ಒಂದು ವೇಳೆ ಹೀಗೆ ಮಾಡಿದರೆ ನೀರಿನಲ್ಲಿರುವ ಶಿಲೀಂಧ್ರಗಳು ಬಹು ಬೇಗನೆ ಬೆಳೆಯುತ್ತವೆ. ಇಂತಹ ಹಲವು ಸಕಾಲಿಕ ಕ್ರಮದ ಮೂಲಕ ಇವುಗಳನ್ನು ಶಮನ ಮಾಡಬಹುದು. ಜತೆಗೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅಗತ್ಯವಾಗಿ ತೆಗೆದುಕೊಳ್ಳಲೇಬೇಕು. ಶಿಲೀಂಧ್ರಗಳ ಹಾವಳಿಯಿಂದ ಚರ್ಮದ ಸೋಂಕು ಕಂಡುಬಂದ ತತ್‌ಕ್ಷಣ ವೈದ್ಯರನ್ನು ಕಾಣುವುದು ಒಳಿತು. ಹೆಚ್ಚಾದಂತೆ ನೋವಿನ ಕಾಟ ಹೆಚ್ಚು. ಇದಕ್ಕೆ ಅವಕಾಶ ನೀಡದಿರುವುದು ಒಳಿತು.

ದಿನನಿತ್ಯದ ಜೀವನದಲ್ಲಿ ಅಳವಡಿಸಬೇಕಾದ ಸಿಂಪಲ್‌ ಸೂತ್ರಗಳಿವು. ಇದೇನು ಮಹಾ ಎಂದು ಹೇಳಿಕೊಳ್ಳುವಂತೆಯೂ ಇಲ್ಲ. ಇಂತಹ ಸಣ್ಣ ವಿಚಾರಗಳು, ಆರೋಗ್ಯ ಹಾಗೂ ತ್ವಚೆ ರಕ್ಷಣೆ ವಿಚಾರದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ.

-ದೇಹದ ನೀರಿನಂಶ ತೆಗೆಯಲು ಒಣಗಿದ ಟವೆಲ್‌ ಬಳಸಿಕೊಳ್ಳಿ.
-  ಟವೆಲ್‌, ಸಾಬೂನ್‌, ಬಾಚಣಿಗೆ ಪ್ರತ್ಯೇಕವಾಗಿ ಇಡುವುದು ಉತ್ತಮ.
- ಟವೆಲ್‌, ಕಾಲುಚೀಲ, ಕರವಸ್ತ್ರ, ಒಳಉಡುಪುಗಳನ್ನು ಪ್ರತಿನಿತ್ಯ ಸ್ವತ್ಛಗೊಳಿಸಬೇಕು.
- ಮಧುಮೇಹಿಗಳು ನಿಯಮಿತ ವಾಗಿ ರಕ್ತದ ಸಕ್ಕರೆ ಅಂಶವನ್ನು ಪರೀಕ್ಷೆ ಮಾಡಿಕೊಳ್ಳಬೇಕು.
-ಆ್ಯಂಟಿಬಯಾಟಿಕ್‌, ಸ್ಟಿರಾಯ್ಡ ಬಳಕೆಯ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ.

ಟಾಪ್ ನ್ಯೂಸ್

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

2nd PUC Exam-2 Result Declared; 35.25% students passed

2nd PUC ಪರೀಕ್ಷೆ-2 ಫಲಿತಾಂಶ ಪ್ರಕಟ; ಶೇ. 35.25 ವಿದ್ಯಾರ್ಥಿಗಳು ಉತ್ತೀರ್ಣ

13

Poonam Pandey: ನನ್ನ ಬೆತ್ತಲೆ ವಿಡಿಯೋ ಲೀಕ್‌ ಮಾಡಿದ್ದೇ ನನ್ನ ಮಾಜಿ ಗೆಳೆಯ – ಪೂನಂ ಪಾಂಡೆ

12-hondisi-bareyiri

YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

state’s state of education has deteriorated; N. Ravikumar

Bellary; ರಾಜ್ಯದ ಶಿಕ್ಷಣದ ಸ್ಥಿತಿ ಅಧೋಗತಿಗೆ ತಲುಪಿದೆ; ಎನ್.ರವಿಕುಮಾರ್

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

colon cancer

Colon Cancer; ಸಂಕೇತಗಳು ಮತ್ತು ಲಕ್ಷಣಗಳು, ರೋಗನಿರ್ಣಯ ಮತ್ತು ಚಿಕಿತ್ಸೆ

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.