ಮಂಗಳೂರು : ಬಾವಿಗಿಳಿದು ಶ್ವಾನ ರಕ್ಷಿಸಿದ ಧೀರ ಮಹಿಳೆ
Team Udayavani, Feb 1, 2020, 12:02 AM IST
ರಜನಿ ದಾಮೋದರ್ ಅವರು ಬಾವಿಗಿಳಿದು ನಾಯಿಯನ್ನು ರಕ್ಷಿಸುತ್ತಿರುವುದು.
ಮಹಾನಗರ: ನಗರದ ಬಲ್ಲಾಳ್ಬಾಗ್ನಲ್ಲಿರುವ ಮೈದಾನದಲ್ಲಿ ಬಾವಿಗೆ ಬಿದ್ದಂತಹ ನಾಯಿಯನ್ನು ಮಹಿಳೆಯೊಬ್ಬಳು ಬಾವಿಗಿಳಿದು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾವಿಗೆ ಬಿದ್ದ ನಾಯಿ
ಬಲ್ಲಾಳ್ಬಾಗ್ನ ರಜನಿ ದಾಮೋದರ್ ಶೆಟ್ಟಿ ಅವರು ಈ ದಿಟ್ಟ ಮಹಿಳೆ. ಶ್ವಾನಗಳು ಕಚ್ಚಾಡುವ ವೇಳೆ ಒಂದು ನಾಯಿ ಬಾವಿಗೆ ಬಿದ್ದಿತ್ತು. ಕೂಡಲೇ ಸ್ಥಳೀಯರಿಗೆ ಈ ವಿಷಯ ತಿಳಿದು ನಾಯಿಯನ್ನು ಮೇಲೆತ್ತಲು ಸ್ಥಳೀಯರು ಪ್ರಯತ್ನಿಸಿದ್ದರಾದರೂ ಫಲ ನೀಡಲಿಲ್ಲ. ಆಗ ಸ್ಥಳಿಯರೊಬ್ಬರು ರಜನಿ ದಾಮೋದರ ಶೆಟ್ಟಿ ಅವರಿಗೆ ಕರೆ ಮಾಡಿದರು.
ರಜನಿ ಅವರು ಪ್ರಾಣಿ ಮೇಲೆತ್ತಲು ಹಲವರಲ್ಲಿ ಸಹಾಯಕ್ಕೆ ಬರುವಂತೆ ಯಾಚಿಸಿದರೂ ಸಾಧ್ಯವಾಗಲಿಲ್ಲ. ಆಗ ತಾವೇ ಸ್ವತಃ ಬಾವಿಗಿಳಿದು ನಾಯಿ ಮೇಲೆತ್ತಲು ಯಶಸ್ವಿಯಾದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಜನಿ ಅವರ ಪ್ರಯತ್ನಕ್ಕೆ ಶಹಬ್ಟಾಸ್ಗಿರಿ ದೊರಕುತ್ತಿದೆ.