ಅರಿಶಿನದಿಂದ ಹಲವು ಉಪಯೋಗ


Team Udayavani, Feb 4, 2020, 4:33 AM IST

pro-22

ಅರಿಶಿನ ದಿನನಿತ್ಯದ ಬಳಕೆಯಲ್ಲಿ ಉಪಯೋಗಿಸಲ್ಪಡುವ ಒಂದು ಸಾಂಬಾರು ಪದಾರ್ಥ. ಆದರೆ ಇದು ಸಾಂಬಾರ ಪದಾರ್ಥಕ್ಕಿಂತ ಹೆಚ್ಚಾಗಿ ಔಷಧ ಗುಣವುಳ್ಳ ವಸ್ತುವಾಗಿ ಹೆಚ್ಚು ಪ್ರಚಲಿತದಲ್ಲಿದೆ. ಅರಶಿನದಿಂದ ಪ್ರಯೋಜನಗಳು ಹಲವಾರು. ಹಸಿ ಅರಿಶಿನ, ಒಣ ಅರಶಿನ, ಕಸ್ತೂರಿ ಅರಶಿನ ಹೀಗೆ ಬೇರೆ ಬೇರೆ ವಿಧಗಳ ಅರಿಶಿನಗಳು ಲಭ್ಯವಿವೆ. ಶೀತವಾದರೆ ಹಾಲಿಗೆ ಅರಿಶಿನವನ್ನು ಬೆರೆಸಿ ಕುಡಿದರೆ ಶೀತ ಬೇಗನ ಕಡಿಮೆಯಾಗುತ್ತದೆ. ಆಯುರ್ವೇದ ಔಷಧ ಪದ್ಧತಿಗಳಲ್ಲೂ ಅರಿಶಿನಕ್ಕೆ ಒಂದು ಪ್ರಮುಖ ಸ್ಥಾನವಿದೆ.

ರೋಗ ನಿರೋಧಕ ಶಕ್ತಿ
ಅರಿಶಿನದಲ್ಲಿ ಕ್ಯುರಿಕಂ ಎಂಬ ಅಂಶವು ಅಧಿಕವಾಗಿದ್ದು ಇದು ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ. ದೇಹದಲ್ಲಿ ಉಂಟಾಗುವ ಗಾಯಗಳಿಗೆ ಅರಿಶಿನವನ್ನು ಹಚ್ಚಿದರೆ ಬೇಗನೆ ಗುಣವಾಗುತ್ತದೆ. ಹಿಂದೆ ಆಹಾರ ತಯಾರಿಸುವಾಗ ಅರಿಶಿನವನ್ನು ಕಡ್ಡಾಯವಾಗಿ ಹಾಕುತ್ತಿದ್ದರು. ಅದೂ ಮಾಂಸಾಹಾರದಲ್ಲಿ ಅರಶಿನ ಇದ್ದೇ ಇರುತ್ತಿತ್ತು. ಯಾಕೆಂದರೆ ಆಹಾರ ಪದಾರ್ಥಗಳಲ್ಲಿ ದೇಹಕ್ಕೆ ಹಾನಿಯಾಗು ವಂತಹ ಯಾವುದೇ ವಿಷಯುಕ್ತ ಪದಾರ್ಥ ಗಳಿದ್ದರೆ ಅದನ್ನು ಅರಿಶಿನ ಹೀರುತ್ತಿತ್ತು.

ದೇಹದ ಆ್ಯಂಟಿ ಆಕ್ಸೈಡ್‌ ಅಂಶ ಹೆಚ್ಚಳ
ದೇಹವನ್ನು ರಕ್ಷಿಸುವ ಆ್ಯಂಟಿ ಆಕ್ಸೈಡ್‌ ಅಂಶವನ್ನು ಅರಿಶಿನ ಕ್ರಮೇಣವಾಗಿ ಹೆಚ್ಚಿಸುತ್ತೆ. ಇದರಿಂದ ದೇಹಾರೋಗ್ಯ ಉತ್ತಮವಾಗುತ್ತದೆ.

ಟೈಪ್‌ 2 ಡಯಾಬಿಟಿಸ್‌ ನಿಯಂತ್ರಣಕ್ಕೆ ಸಹಕಾರಿ
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಟೈಪ್‌ 2 ಡಯಾಬಿಟಿಸ್‌ ರೋಗ ನಿಯಂತ್ರಣಕ್ಕೆ ಅರಿಶಿನ ಸಹಾಯ ಮಾಡುತ್ತದೆ. ಅರಿಶಿನವನ್ನು ಆಹಾರದ ಮೂಲಕ ಸೇವಿಸುವುದರಿಂದ ಡಯಾಬಿಟಿಸ್‌ ನಿಯಂತ್ರಣಕ್ಕೆ ಬರುತ್ತದೆ.

ಕೊಲೆಸ್ಟ್ರಾಲ್‌
ದೇಹದಲ್ಲಿ ಹೆಚ್ಚಾಗಿರುವ ಬ್ಯಾಡ್‌ ಕೊಲೆಸ್ಟ್ರಾಲ್‌ ನಿಯಂತ್ರಿಸಲು ಅರಶಿನ ಸಹಾಯ ಮಾಡುತ್ತದೆ. ಇದು ಉಷ್ಣ ಅಧಿಕವಾಗಿರುವ ಒಂದು ಆಹಾರವಾಗಿದ್ದು, ಕೊಬ್ಬು ಕರಗಿಸಲು ಸಹಕಾರಿ.

ಸೌಂದರ್ಯ ವರ್ಧಕ
ಸೌಂದರ್ಯ ವರ್ಧಕವಾಗಿಯೂ ಅರಿಶಿನ ಕೆಲಸ ಮಾಡುತ್ತದೆ. ಮುಖದ ಮೇಲೆ ಮೂಡುವ ಮೊಡವೆಗಳ ನಿಯಂತ್ರಿಸಲು, ಮುಖದ ಮೇಲಿರುವ ಅನಗತ್ಯ ಕೂದಲುಗಳ ಬೆಳವಣಿಗೆಯನ್ನು ತಡೆಯಲು ಕೂಡ ಅರಿಶಿನವನ್ನು ಹಚ್ಚುತ್ತಾರೆ.

– ಸುಶ್ಮಿತಾ ಶೆಟ್ಟಿ, ಸಿರಿಬಾಗಿಲು

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.