ಅನ್ನ ಕೊಟ್ಟ ಅವಲಕ್ಕಿ!


Team Udayavani, Feb 19, 2020, 5:56 AM IST

skin-3

ಎಸ್ಸೆಸ್ಸೆಲ್ಸಿವರೆಗಷ್ಟೇ ಓದಿರುವ ಸುಬ್ಬಲಕ್ಷ್ಮಿ, ಕುಟುಂಬ ನಿರ್ವಹಣೆಗಾಗಿ ಅವಲಕ್ಕಿ ತಯಾರಿಸಿ ಮಾರಲು ಆರಂಭಿಸಿದರು. ಅದೀಗ, ಒಂದು ಫ್ಯಾಕ್ಟರಿಯಾಗಿ ಬೆಳೆದಿದೆ…

ಅಕ್ಕಿ ಮಿಲ್‌, ಹಿಟ್ಟಿನ ಗಿರಣಿ ಅಥವಾ ಬೇರೆ ಯಾವುದೇ ಕಾರ್ಖಾನೆಯಿರಬಹುದು, ಅಲ್ಲಿ ಮಹಿಳೆಯರು ಕೆಲಸ ಮಾಡುತ್ತಿರಬಹುದು. ಆದರೆ, ಮಾಲೀಕರು ಮಾತ್ರ ಗಂಡಸರೇ. ಯಾಕಂದ್ರೆ, “ಹೆಂಗಸೊಬ್ಬಳು ಕಾರ್ಖಾನೆ ನಡೆಸೋದು ಸುಲಭದ ಮಾತಲ್ಲ’ ಎಂಬ ಅಭಿಪ್ರಾಯವಿದೆ. “ಸುಲಭವಲ್ಲ, ಹಾಗಂತ ಕಷ್ಟವೂ ಅಲ್ಲ’ ಅನ್ನುತ್ತಿದ್ದಾರೆ ಸುಬ್ಬಲಕ್ಷ್ಮಿ. ಇವರು,

ವಿಜಯಪುರದ ಇಂಡಿ ಬೈಪಾಸ್‌ ರಸ್ತೆಯಲ್ಲಿರುವ ಅವಲಕ್ಕಿ ಕಾರ್ಖಾನೆಯ ಮಾಲಕಿ. ದಿನಕ್ಕೆ 150 ಚೀಲ ಅವಲಕ್ಕಿ ಉತ್ಪಾದಿಸುವ ಈ ಕಾರ್ಖಾನೆಯಲ್ಲಿ, ಮಹಿಳೆಯರೇ ಅವಲಕ್ಕಿ ತಯಾರಿಸುವುದು ವಿಶೇಷ.

ಅನ್ನ ನೀಡಿದ ಅವಲಕ್ಕಿ
ಸುಬ್ಬಲಕ್ಷ್ಮಿ ಅವರು ಓದಿದ್ದು 10ನೇ ತರಗತಿ ಮಾತ್ರ. ಗಂಡನ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಅಸ್ಥಿರವಾದಾಗ, ಅವರ ಜೀವನಕ್ಕೆ ದಾರಿ ತೋರಿಸಿದ್ದು ಅವಲಕ್ಕಿ ತಯಾರಿಕೆ. ಹತ್ತು ಸಾವಿರ ರೂ. ಬಂಡವಾಳ ಹಾಕಿ, ಅಗತ್ಯ ಸಾಮಗ್ರಿಗಳನ್ನು ಖರೀದಿಸಿ, ಚಿಕ್ಕ ಪ್ರಮಾಣದಲ್ಲಿ ಉತ್ಪಾದನೆ ಶುರುಮಾಡಿದರು. ಚಿಕ್ಕ ಚಿಕ್ಕ ಕಡಾಯಿಗಳಲ್ಲಿ ಮರಳಿನೊಂದಿಗೆ ಭತ್ತವನ್ನು ಹುರಿದು ಅವಲಕ್ಕಿ ತಯಾರಿಸತೊಡಗಿದರು. ನಂತರ, ಸ್ವತಃ ಮಾರುಕಟ್ಟೆಗೆ ತೆರಳಿ ಅವಲಕ್ಕಿ ಮಾರಾಟಕ್ಕೂ ಮುಂದಾದರು.

ಹತ್ತರಿಂದ ನೂರೈವತ್ತು !
ಉತ್ಪಾದನೆ, ಮಾರಾಟ; ಎರಡರಲ್ಲೂ ಸುಬ್ಬಲಕ್ಷ್ಮಿ ಅವರು ಪರಿಶ್ರಮಪಟ್ಟರು. ಪ್ರತಿಫ‌ಲವಾಗಿ, ಅವರ ವ್ಯಾಪಾರ ದಿನದಿನಕ್ಕೂ ಹೆಚ್ಚತೊಡಗಿತು. ಪ್ರಾರಂಭದಲ್ಲಿ 10 ಚೀಲದಷ್ಟು ಅವಲಕ್ಕಿ ತಯಾರಿಸುತ್ತಿದ್ದ ಸುಬ್ಬಲಕ್ಷ್ಮಿ, ನಂತರ ಇಬ್ಬರು ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಅವಲಕ್ಕಿ ತಯಾರಿಸತೊಡಗಿದರು. 2001ರಲ್ಲಿ ಚಿಕ್ಕ ಬಂಡವಾಳದಲ್ಲಿ ಕಾರ್ಖಾನೆ ಪ್ರಾರಂಭವಾಯಿತು. ಈಗ ಸಹಕಾರಿ ಸಂಘಗಳಿಂದ 50 ಲಕ್ಷ ರೂ. ಬಂಡವಾಳದ ನೆರವಿನಿಂದ ರೋಸ್ಟರ್‌, ರೋಲರ್, ಗ್ರೈಂಡಿಂಗ್‌ ಉಪಕರಣಗಳು ಮತ್ತು ಇಂಡಸ್ಟ್ರಿಯಲ್‌ ಎರಿಯಾದಲ್ಲಿ ಒಂದು ಎಕರೆ ಭೂಮಿ ಖರೀದಿಸಿ ದೊಡ್ಡ ಮಟ್ಟ ತಲುಪಿದೆ. ಈಗ ದಿನಕ್ಕೆ 150 ಚೀಲಗಳಷ್ಟು ಅವಲಕ್ಕಿ ತಯಾರಿಸುತ್ತಿದ್ದಾರೆ.

ಅವಲಕ್ಕಿ ಮಾಡುವ ವಿಧಾನ
ಕೆಂಬಾವಿ, ಗಂಗಾವತಿ, ಬೆಳಗಾವಿ ಸುತ್ತಲಿನ ಊರುಗಳಿಂದ “”64-ಭತ್ತ” ಎಂಬ ದಪ್ಪ ಕಾಳಿನ ಭತ್ತ ಖರೀದಿಸುತ್ತಾರೆ. ನಂತರ, ನಿಗದಿತ ಉಷ್ಣಾಂಶದಲ್ಲಿ ಭತ್ತವನ್ನು ರಾತ್ರಿ ಇಡೀ ನೆನೆ ಹಾಕಿ, (ಕನಿಷ್ಠ 8 ಗಂಟೆ ಕಾಲ ಭತ್ತ ನೆನೆಯಬೇಕು) ಆಮೇಲೆ ಅದನ್ನು ರೋಸ್ಟರ್‌ನಲ್ಲಿ ಹುರಿದು ಮಾರಾಟ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಭತ್ತ ಮತ್ತು ರಾಗಿಯ ಅವಲಕ್ಕಿ (ಫ್ಲೇಕ್ಸ್‌) ತಯಾರಿಸುತ್ತಿದ್ದರು. ಈಗ ಜೋಳದ ಅವಲಕ್ಕಿ ತಯಾರಿಕೆಗೂ ಕೈ ಹಾಕಿದ್ದಾರೆ. ಈಗಾಗಲೇ, ಬೆಂಗಳೂರು ಮತ್ತು ತಂಜಾವೂರಿಗೆ ಜೋಳದ ಅವಲಕ್ಕಿಯ ಸ್ಯಾಂಪಲ್‌ ಅನ್ನೂ ಕಳಿಸಿದ್ದಾರೆ. ಒಂದು ಟನ್‌ ಅವಲಕ್ಕಿಯಿಂದ 15 ಸಾವಿರ ರೂ. ಲಾಭ ಪಡೆಯುವ ಸುಬ್ಬಲಕ್ಷ್ಮಿ, ಕಾರ್ಖಾನೆಯಲ್ಲಿ ಅನೇಕ ಮಹಿಳೆಯರಿಗೆ ಕೆಲಸ ಕೊಟ್ಟು ಮಾದರಿ ಉದ್ಯಮಿಯಾಗಿದ್ದಾರೆ.

-ವಿದ್ಯಾಶ್ರೀ ಗಾಣಿಗೇರ

ಟಾಪ್ ನ್ಯೂಸ್

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

8-kvasantha-bangera

K. Vasantha Bangera: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅಸ್ತಂಗತ

15

Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್‌ನ ಗೋಡೆ ಕುಸಿದು 7 ಮಂದಿ ಸಾವು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

6-bantwala

Bantwala: ನೀರಿನ ಅಭಾವದಿಂದ ಕೃಷಿ ಹಾನಿ; ಮನನೊಂದು ಕೃಷಿಕ ಆತ್ಮಹತ್ಯೆ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

3-kollegala

Kollegala: ಖಾಸಗಿ ಬಸ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

8-kvasantha-bangera

K. Vasantha Bangera: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅಸ್ತಂಗತ

ಚಿತ್ರದುರ್ಗ-ಬಸವ ತತ್ವ ಪ್ರತಿ ಮನೆಗೆ ತಲುಪಲಿ: ಡಾ| ಬಸವಕುಮಾರ ಶ್ರೀ

ಚಿತ್ರದುರ್ಗ-ಬಸವ ತತ್ವ ಪ್ರತಿ ಮನೆಗೆ ತಲುಪಲಿ: ಡಾ| ಬಸವಕುಮಾರ ಶ್ರೀ

15

Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್‌ನ ಗೋಡೆ ಕುಸಿದು 7 ಮಂದಿ ಸಾವು

ಚಿಕ್ಕಮಗಳೂರು: 436 ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ

ಚಿಕ್ಕಮಗಳೂರು: 436 ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.