ಗ್ರಾಮೀಣ ಜನರಲ್ಲಿ ಆರ್ಥಿಕ ಬೆಳವಣಿಗೆಗೆ ಕಾರಣವಾದ ಸಂಸ್ಥೆ

ಮಜೂರು ಹಾಲು ಉತ್ಪಾದಕರ ಸಹಕಾರ ಸಂಘ

Team Udayavani, Feb 19, 2020, 4:10 AM IST

skin-28

ಮಜೂರು – ಮಲ್ಲಾರು ಅವಳಿ ಗ್ರಾಮಗಳ ಕಾರ್ಯ ವ್ಯಾಪ್ತಿಯ ಹೈನುಗಾರರ ಬೆಳವಣಿಗೆಯ ಉದ್ದೇಶವನ್ನು ಇಟ್ಟುಕೊಂಡು ದ. ಕ. ಹಾಲು ಒಕ್ಕೂಟದ ಅಧೀನದಲ್ಲಿ 1989 ಮೇ 5ರಂದು ಮಜೂರು ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪನೆಗೊಂಡಿತು.

ಕಾಪು: ಮಜೂರು ಗ್ರಾಮದ ಹಿರಿಯರಾದ ಗುರುರಾಜ್‌ ಮಾರ್ಪಳ್ಳಿ ಅವರು ಪ್ರವರ್ತಕರನ್ನಾಗಿದ್ದುಕೊಂಡು, ಉದಯ ಶೆಟ್ಟಿ ಅವರ ಸ್ಥಾಪಕಾಧ್ಯಕ್ಷತೆಯಲ್ಲಿ ಮಜೂರು ಹಾಲು ಉತ್ಪಾದಕರ ಸಹಕಾರ ಸಂಘವು ಪ್ರಾರಂಭಗೊಂಡಿತು. ಗ್ರಾಮೀಣ ಭಾಗದ ಹೈನುಗಾರರು ಮತ್ತು ಕೃಷಿಕರನ್ನು ಸೇರಿಸಿಕೊಂಡು ಪ್ರಾರಂಭಿಸಿದ ಸೊಸೈಟಿಯು ಮುಂದೆ ಗ್ರಾಮೀಣ ಭಾಗದ ಹೈನುಗಾರರ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಬೆಳವಣಿಗೆಯಲ್ಲೂ ಮುಖ್ಯ ಭೂಮಿಕೆಯನ್ನು ನಿರ್ವಹಿಸಿದೆ.

ಸೊಸೈಟಿ ಆರಂಭಕ್ಕೆ ಕಾರಣವೇನು ?
ಮಜೂರು ಶ್ರೀನಿವಾಸ್‌ ಭಟ್‌ ಅವರು ಮನೆಯಲ್ಲಿ ಹತ್ತಾರು ದನಗಳನ್ನು ಸಾಕುತ್ತಿದ್ದ ಕಾಲಘಟ್ಟದಲ್ಲಿ ಮನೆಯಲ್ಲಿ ದೊರಕುತ್ತಿದ್ದ ಲೀಟರ್‌ ಗಟ್ಟಲೆ ಹಾಲಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆಗಳು ಇಲ್ಲದೆ ಇರುವುದನ್ನು ಮನಗಂಡು ಮಂಗಳೂರು ಕೆ.ಎಂ.ಎಫ್‌ ಡೈರಿಗೆ ಹೋಗಿ ವೈಯಕ್ತಿಕ ಡೈರಿ ಪ್ರಾರಂಭಿಸಲು ಬೇಡಿಕೆಯಿಟ್ಟಿದ್ದರು. ಆದರೆ ವೈಯಕ್ತಿಕ ಡೈರಿಗೆ ಅನುಮೋದನೆ ನೀಡಲು ಸಾಧ್ಯವಿಲ್ಲ. ಗ್ರಾಮಕ್ಕೆ ಬೇಕಾದರೆ ಡೈರಿ ನೀಡಬಹುದು ಎಂಬ ಉತ್ತರ ಬಂದ ಕಾರಣ, ಅವರು ಸಮಾನ ಮನಸ್ಕರಾದ ಗುರುರಾಜ್‌ ಮಾರ್ಪಳ್ಳಿ, ಉದಯ ಶೆಟ್ಟಿ, ಸುಬ್ರಹ್ಮಣ್ಯ ರಾವ್‌ ಮೊದಲಾದವರನ್ನು ಸೇರಿಸಿಕೊಂಡು ನಿಯೋಗ ತೆರಳಿ ಡೈರಿ ಪ್ರಾರಂಭಕ್ಕೆ ಪ್ರಸ್ತಾವನೆಯಿಟ್ಟಿದ್ದರು.

ಅವಳಿ ಗ್ರಾಮಗಳ ಗ್ರಾಮೀಣ ಜನರ ಪ್ರಸ್ತಾವನೆಯನ್ನು ಸ್ವೀಕರಿಸಿದ ಕೆ.ಎಂ.ಎಫ್‌ ಮಂಗಳೂರು ಡೈರಿಯ ಅಧಿಕಾರಿಗಳು ಗ್ರಾಮ ಸರ್ವೆ ನಡೆಸಿ, ಸ್ಥಳೀಯ ಹೈನುಗಾರರು, ಕೃಷಿಕರು ಮತ್ತು ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಮಜೂರು ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಾರಂಭಕ್ಕೆ ಮುನ್ನುಡಿ ಬರೆಯಲಾಯಿತು. ಈ ವೇಳೆ ಸೈಕಲ್‌ನಲ್ಲಿ ಹಾಲು ಸಂಗ್ರಹಿಸುತ್ತಿದ್ದ ವ್ಯಕ್ತಿಗಳು ಗ್ರಾಮೀಣ ಹೈನುಗಾರರ ಹಾಲಿಗೆ ಕನಿಷ್ಠ ಮೊತ್ತದ ದರವನ್ನು ನೀಡುತ್ತಿದ್ದುದೂ ಸೊಸೈಟಿ ಪ್ರಾರಂಭಕ್ಕೆ ಮತ್ತೂಂದು ಕಾರಣ. 99 ಸದಸ್ಯರೊಂದಿಗೆೆ ಆರಂಭಗೊಂಡ ಮಜೂರು ಸೊಸೈಟಿಯಲ್ಲಿ ಆರಂಭದ ದಿನಗಳಲ್ಲಿ 18 ಲೀಟರ್‌ ಹಾಲು ಸಂಗ್ರಹವಾಗುತ್ತಿತ್ತು. ಲೀಟರ್‌ಗೆ 2 ರೂ. ಇದ್ದ ಹಾಲಿನ ದರ ಈಗ 32 ರೂ. ವರೆಗೆ ಏರಿದೆ.

ಕಳೆದ ಇಪ್ಪತ್ತು ವರ್ಷಗಳಿಂದ ಶ್ರೀನಿವಾಸ್‌ ರಾವ್‌ ಅವರು ಅತೀ ಹೆಚ್ಚು ಹಾಲು ಹಾಕಿ ಉತ್ತಮ ಹೆ„ನುಗಾರರಾಗಿ ಮೂಡಿ ಬಂದಿದ್ದು, ಪ್ರಸ್ತುತ ಕೃಷ್ಣ ಎಂ. ಶೆಟ್ಟಿ ಅವರು ಅತೀ ಹೆಚ್ಚು ಹಾಲನ್ನು ಸರಬರಾಜು ಮಾಡುತ್ತಿದ್ದಾರೆ. ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಿಗೆ ಪ್ರತೀ ವರ್ಷ ಪ್ರೋತ್ಸಾಹಕ ಬಹುಮಾನವನ್ನು ಸಹ ನೀಡಲಾಗುತ್ತದೆ. ಹಸಿರು ಹುಲ್ಲಿನ ತಾಕು ಖರೀದಿಗೆ ಅವಕಾಶವಿದೆ. ಪ್ರಥಮ ಚಿಕಿತ್ಸಾ ಸೌಲಭ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ. ರೈತರು ಅಥವಾ ರೈತರ ಹ‌ಸುಗಳು ಮೃತಪಟ್ಟಲ್ಲಿ ಸಂಘದ ಶಿಫಾರಸ್ಸಿನೊಂದಿಗೆ ಒಕ್ಕೂಟದ ಮುಖಾಂತರ ರೈತರ ಡೈರಿ ಕಲ್ಯಾಣ ಟ್ರಸ್ಟ್‌ ಪರಿಹಾರ ಧನ ಒದಗಿಸಲಾಗುತ್ತದೆ.

ಆರಂಭದ ದಿನಗಳಲ್ಲಿ ಮಜೂರು ಗ್ರಾಮ ಪಂಚಾಯತ್‌ನ ವಸತಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಸೊಸೈಟಿಯು 10 ವರ್ಷಗಳ ಬಳಿಕ ಪಂಚಾಯತ್‌ ವತಿಯಿಂದ ಒದಗಿಸಲಾದ ಸ್ವಂತ ನಿವೇಶನದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಿಕೊಂಡು ಕಾರ್ಯಾಚರಿಸುತ್ತಿದೆ. ಅಲ್ಲಿ ಸಂಘದ ಹೊಸ ಕಟ್ಟಡದಲ್ಲೇ ದಶಮಾನೋತ್ಸವ, ವಿಂಶತಿ ವರ್ಷಾಚರಣೆ ಮತ್ತು ರಜತ ಮಹೋತ್ಸವ ವರ್ಷಾಚರಣೆಯೂ ನಡೆದಿದೆ.

ಸಂಘದ ಸದಸ್ಯರು ಮತ್ತು ಹೈನುಗಾರರ ಬೆಳವಣಿಗೆಯಲ್ಲಿ ನಿರಂತರ ಏಳಿಗೆ ಕಂಡು ಬರುತ್ತಿದ್ದು ಗ್ರಾಮೀಣ ಭಾಗದ ಜನರಲ್ಲಿ ಹೈನುಗಾರಿಕೆ ಮೂಲಕವಾಗಿ ಬದುಕು ಕಟ್ಟಿಕೊಳ್ಳಲು ಉತ್ತಮ ಅವಕಾಶ ದೊರಕಿದೆ. ಸಂಘವು ಸದಸ್ಯರ ಆರ್ಥಿಕ ಉದ್ದೇಶಕ್ಕಾಗಿ ಮಾತ್ರಾ ಶ್ರಮಿಸದೇ ಸಾಮಾಜಿಕ ಚಟುವಟಿಕೆಗಳತ್ತವೂ ಪ್ರಯತ್ನಿಸುತ್ತಿದೆ.
ಲೀಲಾಧರ ಶೆಟ್ಟಿ ಅಧ್ಯಕ್ಷರು

ಅಧ್ಯಕ್ಷರು
ಉದಯ ಶೆಟ್ಟಿ, ಪೂವಪ್ಪ ಮೊದಲಿಯಾರ್‌, ರಘುರಾಮ ರಾವ್‌, ಶ್ರೀನಿವಾಸ್‌ ರಾವ್‌, ಕೆ. ಲೀಲಾಧರ್‌ ಶೆಟ್ಟಿ (ಹಾಲಿ)
ಕಾರ್ಯದರ್ಶಿಗಳು
ಕಾರ್ಯದರ್ಶಿ : ಬೀರಪ್ಪ, ಗುರುರಾಜ್‌ (ಹಾಲಿ)

ಪ್ರಸ್ತುತ ಸ್ಥಿತಿಗತಿ
ಪ್ರಸ್ತುತ 235 ಸದಸ್ಯರಿದ್ದು 845 ಲೀಟರ್‌ ಹಾಲು ಸಂಗ್ರಹಣೆ ಆಗುತ್ತಿದೆ. ಪ್ರಸ್ತುತ ವಾರ್ಷಿಕ 1 ಕೋಟಿ 10ಲಕ್ಷ ರೂ.ಗಳ ವ್ಯವಹಾರ ಮಾಡಿ ವಾರ್ಷಿಕ 5 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಘವು ಎ ಗ್ರೇಡ್‌ ದರ್ಜೆಯ ಸಂಘವಾಗಿ ಮೂಡಿ ಬಂದಿದೆ.

- ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

16 ಹಾಕಿ ಆಟಗಾರರ ಸಾವಿಗೆ ಕಾರಣನಾಗಿದ್ದ ಭಾರತೀಯನ ಗಡಿಪಾರು

16 ಹಾಕಿ ಆಟಗಾರರ ಸಾವಿಗೆ ಕಾರಣನಾಗಿದ್ದ ಭಾರತೀಯನ ಗಡಿಪಾರು

Pune Porsche crash case ಚಾಲಕನಿಗೆ ಬೆದರಿಸಿ, ಕೂಡಿ ಹಾಕಿದ್ದ ಆರೋಪಿಯ ಅಜ್ಜ ಅರೆಸ್ಟ್‌!

Pune Porsche crash case ಚಾಲಕನಿಗೆ ಬೆದರಿಸಿ, ಕೂಡಿ ಹಾಕಿದ್ದ ಆರೋಪಿಯ ಅಜ್ಜ ಅರೆಸ್ಟ್‌!

Drugs Case; ಕಠಿಣ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಪಂಜಾಬ್ ಅನ್ನು ಮೀರಿಸಲಿದೆ; ಜೋಶಿ

Drugs Case; ಕಠಿಣ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಪಂಜಾಬ್ ಅನ್ನು ಮೀರಿಸಲಿದೆ; ಜೋಶಿ

Congress party: ಕಾಂಗ್ರೆಸ್ ಪಕ್ಷದಿಂದ ಪ್ರತಾಪ್ ರೆಡ್ಡಿ ಉಚ್ಚಾಟನೆ

Congress party: ಕಾಂಗ್ರೆಸ್ ಪಕ್ಷದಿಂದ ಪ್ರತಾಪ್ ರೆಡ್ಡಿ ಉಚ್ಚಾಟನೆ

Cannes Award 2024; ಮೊದಲ ಬಾರಿ ಭಾರತದ ನಟಿಗೆ ಪ್ರತಿಷ್ಠಿತ ಕ್ಯಾನಸ್‌ ಪ್ರಶಸ್ತಿ ಗೌರವ!

Cannes Award 2024; ಮೊದಲ ಬಾರಿ ಭಾರತದ ನಟಿಗೆ ಪ್ರತಿಷ್ಠಿತ ಕ್ಯಾನಸ್‌ ಪ್ರಶಸ್ತಿ ಗೌರವ!

Supreme Court 40 ವರ್ಷ ದುಡಿದವರಿಗೆ ನಿವೃತ್ತಿ ಪ್ರಯೋಜನ ನಿರಾಕರಿಸುವಂತಿಲ್ಲ

Supreme Court 40 ವರ್ಷ ದುಡಿದವರಿಗೆ ನಿವೃತ್ತಿ ಪ್ರಯೋಜನ ನಿರಾಕರಿಸುವಂತಿಲ್ಲ

7

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ: ಮಾಜಿ ಶಾಸಕ ರಘುಪತಿ ಭಟ್‌ ಬಿಜೆಪಿ ಪಕ್ಷದಿಂದ ಉಚ್ಚಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ: ಮಾಜಿ ಶಾಸಕ ರಘುಪತಿ ಭಟ್‌ ಬಿಜೆಪಿ ಪಕ್ಷದಿಂದ ಉಚ್ಚಾಟನೆ

Udupi; ಗುಡುಗು ಸಿಡಿಲಿಗೆ ಬೆಚ್ಚಿಬಿದ್ದ ಜನತೆ, ತಡರಾತ್ರಿ ಧಾರಕಾರ ಮಳೆಗೆ ಹಲವೆಡೆ ಕೃತಕ ನೆರೆ

Udupi; ಗುಡುಗು ಸಿಡಿಲಿಗೆ ಬೆಚ್ಚಿಬಿದ್ದ ಜನತೆ, ತಡರಾತ್ರಿ ಧಾರಕಾರ ಮಳೆಗೆ ಹಲವೆಡೆ ಕೃತಕ ನೆರೆ

Udupi: ನಡುರಸ್ತೆಯಲ್ಲಿ ಗ್ಯಾಂಗ್ ವಾರ್; ಹೊಡೆದಾಟದ ವಿಡಿಯೋ ವೈರಲ್

Udupi: ನಡುರಸ್ತೆಯಲ್ಲಿ ಗ್ಯಾಂಗ್ ವಾರ್; ಹೊಡೆದಾಟದ ವಿಡಿಯೋ ವೈರಲ್

ಎಂಒ4 ಬದಲು ಸಹ್ಯಾದ್ರಿ ಕೆಂಪುಮುಖ್ತಿಗೆ ಆದ್ಯತೆ

ಎಂಒ4 ಬದಲು ಸಹ್ಯಾದ್ರಿ ಕೆಂಪುಮುಖ್ತಿಗೆ ಆದ್ಯತೆ

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

16 ಹಾಕಿ ಆಟಗಾರರ ಸಾವಿಗೆ ಕಾರಣನಾಗಿದ್ದ ಭಾರತೀಯನ ಗಡಿಪಾರು

16 ಹಾಕಿ ಆಟಗಾರರ ಸಾವಿಗೆ ಕಾರಣನಾಗಿದ್ದ ಭಾರತೀಯನ ಗಡಿಪಾರು

Pune Porsche crash case ಚಾಲಕನಿಗೆ ಬೆದರಿಸಿ, ಕೂಡಿ ಹಾಕಿದ್ದ ಆರೋಪಿಯ ಅಜ್ಜ ಅರೆಸ್ಟ್‌!

Pune Porsche crash case ಚಾಲಕನಿಗೆ ಬೆದರಿಸಿ, ಕೂಡಿ ಹಾಕಿದ್ದ ಆರೋಪಿಯ ಅಜ್ಜ ಅರೆಸ್ಟ್‌!

Drugs Case; ಕಠಿಣ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಪಂಜಾಬ್ ಅನ್ನು ಮೀರಿಸಲಿದೆ; ಜೋಶಿ

Drugs Case; ಕಠಿಣ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಪಂಜಾಬ್ ಅನ್ನು ಮೀರಿಸಲಿದೆ; ಜೋಶಿ

Congress party: ಕಾಂಗ್ರೆಸ್ ಪಕ್ಷದಿಂದ ಪ್ರತಾಪ್ ರೆಡ್ಡಿ ಉಚ್ಚಾಟನೆ

Congress party: ಕಾಂಗ್ರೆಸ್ ಪಕ್ಷದಿಂದ ಪ್ರತಾಪ್ ರೆಡ್ಡಿ ಉಚ್ಚಾಟನೆ

Cannes Award 2024; ಮೊದಲ ಬಾರಿ ಭಾರತದ ನಟಿಗೆ ಪ್ರತಿಷ್ಠಿತ ಕ್ಯಾನಸ್‌ ಪ್ರಶಸ್ತಿ ಗೌರವ!

Cannes Award 2024; ಮೊದಲ ಬಾರಿ ಭಾರತದ ನಟಿಗೆ ಪ್ರತಿಷ್ಠಿತ ಕ್ಯಾನಸ್‌ ಪ್ರಶಸ್ತಿ ಗೌರವ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.