ಪಟ್ಟಣದ ಜನತೆಗೆ ಪೊಟ್ಟಣಗಳಲ್ಲಿ ಸಿಗಲಿದೆ ಮಟ್ಟುಗುಳ್ಳ

ಖರೀದಿಗೆ ಕಿಯೋಸ್ಕ್ ಬಳಕೆ, ಗ್ರೀನ್‌ ಹೌಸ್‌ ನಿರ್ಮಾಣ ಚಿಂತನೆ

Team Udayavani, Mar 8, 2020, 6:03 AM IST

MATTU-GULLA.

ಉಡುಪಿ: ಮಟ್ಟುಗುಳ್ಳದ ವಿವಿಧ ಖಾದ್ಯಗಳ ರುಚಿ ಸವಿಯದಿರುವವರು ವಿರಳ. ಇನ್ನು ಮುಂಬಯಿ, ಕೇರಳ, ಬೆಂಗಳೂರಿನಂತಹ ನಗರದ ವಾಸಿಗಳಿಗೂ ಮಟ್ಟುಗುಳ್ಳ ಬದನೆ ಖಾದ್ಯ ಸವಿಯುವ ಅವಕಾಶ ಸಲೀಸಾಗಿ ಸಿಗಲಿದೆ. ಮಟ್ಟುಗುಳ್ಳ ಖರೀದಿಗೆ ಹಾಪಕಾಮ್ಸ್ ಮಾದರಿಯಲ್ಲಿ ಕಿಯೋಸ್ಕೋ ಸೆಂಟರ್‌ ಆರಂಭವಾಗಲಿದೆ.

ಬಸ್‌ ನಿಲ್ದಾಣ, ರೈಲ್ವೇ ನಿಲ್ದಾಣ ಮೊದಲಾದ ಕಡೆಗಳಲ್ಲಿ ಜನ ಸಂಚಾರವಿರುವ ಪ್ರದೇಶಗಳಲ್ಲಿ ತಾಜಾ ಮಟ್ಟುಗುಳ್ಳ ಮಾರಾಟಕ್ಕೆ ತೆರೆದುಕೊಳ್ಳಲಿದೆ. 50, 100 ಕೆ.ಜಿ ತೂಕದ ಮಟ್ಟುಗುಳ್ಳದ ಬ್ಯಾಗ್‌ಗಳನ್ನು ದೂರದೂರುಗಳಿಗೆ ಸಾಗಿಸುವುದು ಕಷ್ಟ. ಪ್ಯಾಕ್‌ ಮಾಡುವ ವೇಳೆ ಅಡಿ ಭಾಗದಲ್ಲಿರುವ ಗುಳ್ಳ ಹಾಳಾಗಿ ನಷ್ಟ ಉಂಟಾಗುತ್ತದೆ. ಅದನ್ನು ತಪ್ಪಿಸಲು ಮತ್ತು ಒಂದೆರಡು ಕೆ.ಜಿ ಪೊಟ್ಟಣಗಳಲ್ಲಿ ಸುಲಭವಾಗಿ ಕೊಂಡೊಯ್ಯುವಂತೆ ಮಾಡಲು ಈ ಕಿಯೋಸ್ಕ್ ಮಾದರಿ ಸಹಕಾರಿಯಾಗಲಿದೆ. ಅಗತ್ಯವಿರುವಷ್ಟೆ ಖರೀದಿ, ಇವೆಲ್ಲವನ್ನು ಗಮನದಲ್ಲಿರಿಸಿ ಹಾಪಾRಮ್ಸ… ಮಾದರಿಯಲ್ಲಿ ಕಿಯೋಸ್ಕ್ ಸೆಂಟರ್‌ಗಳನ್ನು ತೆರೆಯಲಾಗುತ್ತಿದೆ.

ಮೇ ತಿಂಗಳಲ್ಲಿ ತರಬೇತಿ
ಮಳೆಗಾಲದ ಅವಧಿಯಲ್ಲಿ ಮಟ್ಟುಗುಳ್ಳ ಬೆಳೆಯುವ ಪರಿಸರದ ಮಹಿಳೆಯರಿಗೆ ಹಳೆಯ ಪೇಪರ್‌ಗಳಿಂದ ಟ್ರೇ ತಯಾರಿಸುವ ಬಗ್ಗೆ ಮಾಹಿತಿ ನೀಡಲಾಗುವುದು. ಮೇ ತಿಂಗಳಲ್ಲಿ ತರಬೇತಿ ನೀಡಲಾಗುತ್ತದೆ. ಮಹಿಳೆಯರು ತಯಾರಿಸಿದ ಟ್ರೇಗಳನ್ನು ಮಟ್ಟುಗುಳ್ಳ ಬೆಳೆಗಾರರ ಸಂಘಕ್ಕೆ ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಈ ಟ್ರೇನಲ್ಲಿ ಮಟ್ಟುಗುಳ್ಳಗಳನ್ನು ಇರಿಸಿ ದೂರದೂರುಗಳಿಗೆ ಸಾಗಿಸುವ ಚಿಂತನೆ ಮಾಡುತ್ತಿದ್ದೇವೆ ಎಂದು ಮಾಹೆ ವಿ.ವಿ. ಎಂಐಎಂ ಪ್ರಾಧ್ಯಾಪಕ ಡಾ| ಹರೀಶ್‌ ಜಿ. ಜೋಷಿ ಹೇಳುತ್ತಾರೆ.

ರೈಲ್ವೆ ಇಲಾಖೆ ಅನುಮತಿ ಪಡೆಯಲು ನಿರ್ಧಾರ
ಮಹಿಳೆಯರು ತಯಾರಿಸುವ ಟ್ರೇಗಳನ್ನು ಖರೀದಿಸಿ ಅದರಲ್ಲಿ ಸೇಬು ಜೋಡಿಸಿಡುವ ಮಾದರಿಯಲ್ಲಿ ಮಟ್ಟುಗುಳ್ಳವನ್ನು ಜೋಡಿಸಲಾಗುವುದು. ಬದನೆಯಲ್ಲಿ ತೊಟ್ಟುಗಳು ಇರುವುದರಿಂದ ಪ್ಯಾಕಿಂಗ್‌ ತುಸು ಕಷ್ಟ. ಆದಾಗ್ಯೂ ಸಾಗಾಟಕ್ಕೆ ಅನುಕೂಲವಾಗುವಂತೆ ಪ್ಯಾಕಿಂಗ್‌ ಮಾಡಲಾಗುವುದು. ಪ್ಲಾಸ್ಟಿಕ್‌ನಲ್ಲಿ ಗುಳ್ಳವಿಟ್ಟರೆ ಅದು ಕಂದು ಬಣ್ಣಕ್ಕೆ ತಿರುಗುತ್ತದೆ. ಟ್ರೇನಲ್ಲಿ ಇರಿಸಿದಲ್ಲಿ ಕಪ್ಪಾಗುವುದು ತಪ್ಪುತ್ತದೆ. ಈ ರೀತಿ ಪ್ಯಾಕ್‌ ಮಾಡಿದ ಪೊಟ್ಟಣಗಳ ಮಾರಾಟ ಕೇಂದ್ರಗಳನ್ನು ಪ್ರಾಯೋಗಿಕವಾಗಿ ಉಡುಪಿ ಬಸ್‌ ನಿಲ್ದಾಣ, ರೈಲು ನಿಲ್ದಾಣ, ರಾಜಾಂಗಣದ ಪಾರ್ಕಿಂಗ್‌ ಸ್ಥಳಗಳಲ್ಲಿ ಅನುಮತಿ ಪಡೆದು ತೆರೆಯಲಾಗುವುದು. ಇದಕ್ಕೂ ಮೊದಲು ಸಂಬಂಧಿಸಿದವರಿಂದ ಅನುಮತಿ ಪಡಕೊಳ್ಳಲಾಗುತ್ತದೆ ಎಂದು ಜೋಷಿ ತಿಳಿಸಿದ್ದಾರೆ.

ಸ್ಮರಣಿಕೆಯಾಗಿಯೂ ಮಟ್ಟುಗುಳ್ಳ
ಭೌಗೋಳಿಕ ಮಾನ್ಯತೆ ಪಡೆದ ಮಟ್ಟುಗುಳ್ಳ ಹಾಗೂ ಮಲ್ಲಿಗೆಯ ಭವಿಷ್ಯಕ್ಕಾಗಿ ರೂಪುರೇಖೆ ಹಾಗೂ ಸುಸ್ಥಿರ ಅಭಿವೃದ್ಧಿಯ ಕಾರ್ಯತಂತ್ರದ ಭಾಗವಾಗಿ ಕೆಲ ಸಮಯಗಳ ಹಿಂದೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಮಟ್ಟುಗುಳ್ಳವನ್ನೇ ಸ್ಮರಣಿಕೆಯಾಗಿ ನೀಡಲಾಯಿತು. 2 ಕೆ.ಜಿ ತೂಕದ ಮಟ್ಟುಗುಳ್ಳ ಕೊಟ್ಟರೂ ಸ್ಮರಣಿಕೆಗೆ ತಗಲುವ ವೆಚ್ಚಕ್ಕಿಂತ ಕಡಿಮೆಯಾಗುತ್ತದೆ. 2 ದಿನದ ಕಾರ್ಯಾಗಾರಕ್ಕೆ ತಲಾ 20 ಕೆಜಿಯಷ್ಟು ಗುಳ್ಳಕ್ಕೆ ಬೇಡಿಕೆ ಇತ್ತು ಅನ್ನುತ್ತಾರೆ ಡಾ| ಹರೀಶ್‌ ಜಿ. ಜೋಷಿ.

ಮಾಡೆಲ್‌ ಫಾರ್ಮಿಂಗ್‌ ಸ್ಥಾಪನೆ
ಮಟ್ಟುಗುಳ್ಳ ಬದನೆಗೆ ಹೊರ ದೇಶದಲ್ಲೂ ಬೇಡಿಕೆಯಿದೆ. ಮಟ್ಟುಗುಳ್ಳದ ಇತಿಹಾಸ, ಬೆಳವಣಿಗೆ, ನಾಟಿ ಕಾರ್ಯದ ವಿವರಣೆ, ಪ್ರಾತ್ಯಕ್ಷಿಕೆೆಗಳನ್ನು ಹಮ್ಮಿಕೊಂಡು ಯುವ ಜನತೆಯನ್ನು ತಮ್ಮೆಡೆಗೆ ಸೆಳೆಯುವುದಕ್ಕಾಗಿ ಮಟ್ಟುವಿನ ಒಂದು ಎಕರೆ ಜಾಗದಲ್ಲಿ ಮಾಡೆಲ್‌ ಫಾರ್ಮಿಂಗ್‌ ವರ್ಷದೊಳಗೆ ಸ್ಥಾಪಿಸಲು ಮಟ್ಟುಗುಳ್ಳ ಬೆಳೆಗಾರರ ಸಂಘ ಚಿಂತನೆ ನಡೆಸಿದೆ. ಜತೆಗೆ ಸಂಶೋಧಕರು, ವಿದ್ಯಾರ್ಥಿಗಳನ್ನು ರೈತರು ಮಟ್ಟುಗುಳ್ಳ ಪ್ರದೇಶಕ್ಕೆ ಭೇಟಿ ನೀಡುವಂತೆ ಮಾಡಿ ಸಂಶೋಧನೆಗೂ ಅವಕಾಶ ಕಲ್ಪಿಸಲಾಗುತ್ತಿದೆ. ಮಾಡೆಲ್‌ ಫಾರ್ಮಿಂಗ್‌ ಸ್ಥಾಪನೆಗೆ ನಬಾರ್ಡ್‌ ಅನುದಾನ, ಖಾಸಗಿ ಸಂಸ್ಥೆಗಳ ನೆರವು ಪಡೆದುಕೊಳ್ಳಲಾಗುತ್ತಿದೆ.

ಬೆಳೆಗಾರರಿಗೆ ಅನುಕೂಲ
ಮಟ್ಟುಗುಳ್ಳಕ್ಕೆ ವಿಶೇಷ ಸ್ಥಾನಮಾನವಿದೆ. ಈ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೂ ಅವಕಾಶವಿದೆ. ಮಟ್ಟುಗುಳ್ಳ ಬೆಳೆಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅದರಲ್ಲಿ ಮಾಡೆಲ್‌ ಫಾರ್ಮಿಂಗ್‌ ಕೂಡ ಒಂಂದಾಗಿದೆ.
-ಲಕ್ಷ್ಮಣ ಮಟ್ಟು,  ಕಾರ್ಯನಿರ್ವಾಹಣಾಧಿಕಾರಿ, ಮಟ್ಟು ಬೆಳೆಗಾರರ ಸಂಘ.

ಸಂಶೋಧನೆ ಅಗತ್ಯ
ಮಟ್ಟುಗುಳ್ಳಕ್ಕೆ ಮಾರುಕಟ್ಟೆ ಸೃಷ್ಟಿಸುವುದು, ಉದ್ಯೋಗ ಸೃಷ್ಟಿ ಇದೆಲ್ಲವನ್ನು ಗಮನದಲ್ಲಿರಿಸಿಕೊಂಡು ಆ್ಯಪ್‌ ಅನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಮತ್ತಷ್ಟೂ ಸಂಶೋಧನೆಗಳು ನಡೆಯಬೇಕು ಅನ್ನುವ ಉದ್ದೇಶ ನಮ್ಮದು. ಯುವ ಜನತೆಯನ್ನು ಇದರತ್ತ ಸೆಳೆಯುವ ಪ್ರಯತ್ನ ಕೂಡ ನಡೆಸಲಾಗುತ್ತಿದೆ.
-ಡಾ| ಹರೀಶ್‌ ಜಿ. ಜೋಷಿ, ಪ್ರಾಧ್ಯಾಪಕರು, ಎಂಐಎಂ, ಮಣಿಪಾಲ

ಮಟ್ಟುಗುಳ್ಳ
ಮಟ್ಟುಗುಳ್ಳ ಬೆಳೆಗಾರರ ಸಂಘದ ಸದಸ್ಯರ ಸಂಖ್ಯೆ: 210
ಪ್ರಸ್ತುತ ಮಟ್ಟುಗುಳ್ಳ ಬೆಳೆಯಲು ಅನುಕೂಲವಾಗಿರುವ ಭೂಮಿ: 350 ಎಕರೆ
ಎಷ್ಟು ಎಕರೆಯಲ್ಲಿ ಈಗ ಮಟ್ಟುಗುಳ್ಳ ಬೆಳೆಯಲಾಗುತ್ತಿದೆ: 201 ಎಕರೆ
ನಾಟಿ ಅವಧಿ: 8 ತಿಂಗಳು
ಸೂಕ್ತ ಅವಧಿ: ನವೆ‌ಂಬರ್‌-ಮೇ ತನಕ
ನಾಟಿ ಕಟಾವಿಗೆ ಬರಲು ಹಿಡಿಯುವ ದಿನಗಳು: 45ರಿಂದ 60 ದಿನ
ಖರ್ಚು: 1 ಎಕರೆಗೆ 60 ಸಾವಿರ ರೂ.
1 ಎಕರೆಯಲ್ಲಿ ಆದಾಯ ಗಳಿಕೆ : 2.30 ಲಕ್ಷ ರೂ.
ಸಂಘದಿಂದ ನಿಗದಿಪಡಿಸಿದ ದರ: ಕೆ.ಜಿಗೆ -40.ರೂ

ಟಾಪ್ ನ್ಯೂಸ್

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

1-24-sunday

Daily Horoscope: ವಿರಾಮ ಆಚರಣೆಯ ನಡುವೆ ಹೊಸ ಕಾರ್ಯಗಳ ಪ್ರಸ್ತಾವ

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

1-qweewq

IPL ಇಂದು ಲೀಗ್‌ ಪಂದ್ಯಗಳಿಗೆ ತೆರೆ: KKR vs RR ಟೇಬಲ್‌ ಟಾಪರ್‌ಗಳ ಸೆಣಸಾಟ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಉಭಯ ಜಿಲ್ಲೆಯಲ್ಲೂ ಶಾಲಾರಂಭಕ್ಕೆ ಭರದ ಸಿದ್ಧತೆ

ಉಭಯ ಜಿಲ್ಲೆಯಲ್ಲೂ ಶಾಲಾರಂಭಕ್ಕೆ ಭರದ ಸಿದ್ಧತೆ

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Udupi District ನಾನ್‌ ಸಿಆರ್‌ಝಡ್‌ ಮರಳು ಆಸರೆ; 2.45 ಲಕ್ಷ ಮೆ. ಟನ್‌ ಮರಳು ತೆರವು

Udupi District ನಾನ್‌ ಸಿಆರ್‌ಝಡ್‌ ಮರಳು ಆಸರೆ; 2.45 ಲಕ್ಷ ಮೆ. ಟನ್‌ ಮರಳು ತೆರವು

Kapu ಟಿಪ್ಪರ್‌ಗೆ ಪಿಕಪ್‌ ಢಿಕ್ಕಿ: ಚಾಲಕ ಗಂಭೀರ

Kapu ಟಿಪ್ಪರ್‌ಗೆ ಪಿಕಪ್‌ ಢಿಕ್ಕಿ: ಚಾಲಕ ಗಂಭೀರ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

1-24-sunday

Daily Horoscope: ವಿರಾಮ ಆಚರಣೆಯ ನಡುವೆ ಹೊಸ ಕಾರ್ಯಗಳ ಪ್ರಸ್ತಾವ

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.