ಆತ್ಮವಿಶ್ವಾಸ ಸ್ವಾವಲಂಬಿ ಬದುಕಿನ ಮಾರ್ಗ


Team Udayavani, Mar 15, 2020, 4:59 AM IST

occupayion

“ಸ್ವ -ಆರೈಕೆಯಲ್ಲಿ ಸ್ವಾವಲಂಬನೆ’ ಎಂಬುದು ಅನಾರೋಗ್ಯಗಳು, ಅಂಗವೈಕಲ್ಯದಂತಹ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ಗಗನಕುಸುಮವಾಗಿರುತ್ತದೆ. ಶ್ಯಾಮ್‌ ಅವರ ಜೀವನದ ಕತೆಯೂ ಹೀಗೆಯೇ ಇದೆ. ಶಾಲಾಕಾಲೇಜು ದಿನಗಳಲ್ಲಿಯೇ ಅವರು ಚೆನ್ನಾಗಿ ಓದಿ ತನ್ನ ಕಾಲಮೇಲೆ ನಿಂತು ಬದುಕು ಕಟ್ಟಿಕೊಳ್ಳಬೇಕು, ತಂದೆ -ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದಾಗಿ ಕನಸು ಕಟ್ಟಿದ್ದರು. ಆದರೆ ಎರಡು ವರ್ಷಗಳ ಹಿಂದಿನ ಒಂದು ಕೆಟ್ಟ ದಿನ ಇದೆಲ್ಲವನ್ನೂ ತಲೆಕೆಳಗು ಮಾಡಿತು. 28 ವರ್ಷ ವಯಸ್ಸಿನ ಶ್ಯಾಮ್‌ ಅಪಘಾತಕ್ಕೆ ಈಡಾಗಿದ್ದರಿಂದ ಶೌಚಕ್ಕೆ ಹೋಗುವುದು, ಸ್ನಾನ ಮಾಡುವುದು, ಕೂದಲು ಬಾಚುವುದು, ಉಡುಪು ಧರಿಸಿಕೊಳ್ಳುವಂತಹ ಸ್ವಯಂ ಆರೈಕೆಯ ಕೆಲಸಕಾರ್ಯಗಳಿಗೂ ಶ್ಯಾಮ್‌ ಅವರು ತನ್ನ ವಯೋವೃದ್ಧ ತಂದೆ-ತಾಯಂದಿರನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಬಂತು. ಪ್ರತಿ ದಿನ ತನ್ನ ತಾಯಿಯ ಸಹಾಯದಿಂದ ಈ ಎಲ್ಲ ಕೆಲಸಗಳನ್ನು ಮಾಡಿಕೊಳ್ಳುವಾಗ ಶ್ಯಾಮ್‌ ಬಹಳ ಖನ್ನರಾಗುತ್ತಾರೆ ಮತ್ತು ಬದುಕಿನ ಬಗ್ಗೆ ಆಶಾವಾದವನ್ನೇ ಕಳೆದುಕೊಳ್ಳುತ್ತಾರೆ. ಒಂದು ಕಾಲದಲ್ಲಿ ಅವರಿಗೆ ತನ್ನ ಕಾಲಿನ ಮೇಲೆ ನಿಂತು ಸ್ವಾವಲಂಬಿಯಾಗಬೇಕು ಎಂಬ ಕನಸಿತ್ತು. ಆದರೆ ಇಂದು ಅವರಿಗೆ ಆತ್ಮವಿಶ್ವಾಸವೇ ಇಲ್ಲವಾಗಿದೆ.

ಜಗತ್ತಿನ ಒಟ್ಟು ಜನಸಂಖ್ಯೆಯ ಶೇ.2ರಿಂದ 5ರಷ್ಟು ಮಂದಿ ಶ್ಯಾಮ್‌ ಅವರಂತೆಯೇ ತೀವ್ರ ತರಹದ ಅಂಗವೈಕಲ್ಯಗಳಿಂದ ಬಳಲುತ್ತಿದ್ದಾರೆ. ದೈಹಿಕ ಸಾಮರ್ಥ್ಯದ ಕೊರತೆಯು ಈ ವ್ಯಕ್ತಿಗಳನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ತಡೆಹಿಡಿಯುತ್ತದೆ. ಇದರಿಂದಾಗಿ ಅವರು ಮನೆ ಮತ್ತು ಸಮಾಜದ ಆಗುಹೋಗುಗಳು, ಚಟುವಟಿಕೆಗಳಿಂದ ದೂರ ಉಳಿಯಬೇಕಾಗುತ್ತದೆಯಲ್ಲದೆ ಮನುಷ್ಯನಿಗೆ ವ್ಯಕ್ತಿತ್ವ ಗುರುತನ್ನು ತಂದುಕೊಡುವ ದೈನಿಕ ಬದುಕಿನ ಅನೇಕ ಅರ್ಥವತ್ತಾದ ಕೆಲಸಕಾರ್ಯಗಳಲ್ಲಿ ಭಾಗವಹಿಸುವುದಕ್ಕೆ ಅವರಿಗೆ ಸಾಧ್ಯವಾಗುವುದಿಲ್ಲ. ಸ್ವಯಂ ಆರೈಕೆಯ ಕೊರತೆಯಿಂದ ಸಾಮಾಜಿಕ ಚಟುವಟಿಕೆಗಳಿಂದ ದೂರ ಉಳಿಯುವುದು ಅನೇಕರಿಗೆ ಮಾನಸಿಕ ಸಮಸ್ಯೆಗಳನ್ನೂ ಉಂಟು ಮಾಡಬಹುದು. ಶ್ಯಾಮ್‌ ಅವರಂತೆ ಇತರರ ಸಹಾಯದಿಂದ ದೈನಂದಿನ ಕೆಲಸಕಾರ್ಯಗಳನ್ನು ಪೂರೈಸಿಕೊಳ್ಳಬೇಕಾದ ಸ್ಥಿತಿ ಒತ್ತಡ ಮತ್ತು ಸಮಸ್ಯಾತ್ಮಕವಾಗುತ್ತದೆ.

ದೈನಂದಿನ ಬದುಕಿನ ಚಟುವಟಿಕೆಗಳಲ್ಲಿ ಸ್ವಾವಲಂಬಿಯಾಗಿದ್ದರೆ ನಮ್ಮ ಒಟ್ಟಾರೆ ಆರೋಗ್ಯ ಮತ್ತು ಕ್ಷೇಮ ಚೆನ್ನಾಗಿರುತ್ತದೆ, ಇದರಿಂದ ಜೀವನ ಗುಣಮಟ್ಟವೂ ವೃದ್ಧಿಸುತ್ತದೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ಅಲ್ಲದೆ ಇದು ನಮ್ಮ ಬದುಕಿಗೊಂದು ಚೌಕಟ್ಟನ್ನೂ ಅರ್ಥವನ್ನೂ ಸೃಷ್ಟಿಸಿಕೊಡುತ್ತದೆ. ಇದಲ್ಲದೆ, ನಮ್ಮ ಸಂಧಿಗಳು ಮತ್ತು ಸ್ನಾಯುಗಳಿಗೂ ಬಲ ನೀಡುತ್ತವೆಯಲ್ಲದೆ ನಮ್ಮ ಚಟುವಟಿಕೆಗಳ ಮಟ್ಟವನ್ನು ಉತ್ತಮಪಡಿಸುತ್ತದೆ. ದೈನಂದಿನ ಚಟುವಟಿಕೆಗಳು ಮಿದುಳಿಗೆ ಚೈತನ್ಯ ನೀಡುತ್ತವೆ ಮತ್ತು ದೇಹದ ಲಯ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತವೆ. ಅದು ಆಸ್ಪತ್ರೆ ವಾಸದ ಅವಧಿಯನ್ನು, ಖರ್ಚನ್ನು ಮತ್ತು ಭವಿಷ್ಯದಲ್ಲಿ ಸಾಂಸ್ಥಿಕ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂಬುದಾಗಿಯೂ ಅಧ್ಯಯನಗಳು ಹೇಳಿವೆ. ಸ್ವಾವಲಂಬನೆಯು ಹೆಚ್ಚಿದಂತೆ ವ್ಯಕ್ತಿಗೆ ತಾನು ಬಯಸಿದಂತೆ ಬದುಕುವ ಮುಕ್ತ ಅವಕಾಶ ಒದಗುತ್ತದೆ, ಆತ್ಮವಿಶ್ವಾಸ ವೃದ್ಧಿಸುತ್ತದೆ ಮತ್ತು ವ್ಯಕ್ತಿತ್ವ ಗುರುತಿನ ಸಂವೇದನೆಯೂ ವೃದ್ಧಿಸುತ್ತದೆ. ಸ್ನಾನ ಮಾಡುವುದು, ಉಡುಪು ಧರಿಸುವುದು, ಶೌಚಕ್ರಿಯೆಗಳು, ಕೂದಲು ಬಾಚುವುದು ಮತ್ತು ಊಟ ಉಪಾಹಾರ ಸೇವಿಸುವಂತಹ ದೈನಂದಿನ ಚಟುವಟಿಕೆಗಳಲ್ಲಿ ಸ್ವಾವಲಂಬನೆಯು ವ್ಯಕ್ತಿಯ ಕುಟುಂಬ ಸದಸ್ಯರ ಮೇಲಿನ ಹೊರೆಯನ್ನು ಕೂಡ ತಗ್ಗಿಸುತ್ತದೆ.

ಅನಾರೋಗ್ಯ ಸ್ಥಿತಿಗಳಿಂದಾಗಿ ಕಾರ್ಯಚಟುವಟಿಕೆಗಳನ್ನು ನಡೆಸಲು ಅಡ್ಡಿಯನ್ನು ಅನುಭವಿಸುವ ವ್ಯಕ್ತಿಗಳು ದೈನಂದಿನ ಬದುಕಿನ ಚಟುವಟಿಕೆಗಳನ್ನು ನಡೆಸುವಲ್ಲಿ ಸಂಕಷ್ಟವನ್ನು ಅನುಭವಿಸುವುದು ಹೆಚ್ಚು ಮತ್ತು ಗುಣ ಹೊಂದುವ ಸಮಯದಲ್ಲಿ ದೈನಿಕ ಬದುಕಿನ ಚಟುವಟಿಕೆಗಳನ್ನು ಮತ್ತೆ ನಡೆಸುವ ಸ್ವಾವಲಂಬನೆಗೆ ಒತ್ತು ನೀಡಲಾಗುವುದಿಲ್ಲ. ಈ ಸ್ವಾವಲಂಬನೆಯನ್ನು ಸಾಧಿಸುವುದು ವಸ್ತುಶಃ ಅಸಾಧ್ಯ ಅಥವಾ ವಿಶ್ರಾಂತಿಯ ಬಳಿಕ ಸ್ವಲ್ಪ ಮಟ್ಟಿನ ಸ್ವಾವಲಂಬನೆ ಅವರಿಗೆ ಸಾಧ್ಯವಾಗುತ್ತದೆ ಎಂದು ಭಾವಿಸಲಾಗುತ್ತದೆ. ಆದ್ದರಿಂದ ಅಂತಹ ವ್ಯಕ್ತಿಗಳು ತಮ್ಮನ್ನು ತಾವು ಇನ್ನಷ್ಟು ಸೀಮಿತಗೊಳಿಸಿಕೊಳ್ಳುತ್ತಾರೆ ಮತ್ತು ಇದರಿಂದಾಗಿ ಅವರ ಗುಣಹೊಂದುವ ಸಮಯವೂ ದೀರ್ಘ‌ವಾಗುತ್ತದೆ. ದೈನಂದಿನ ಬದುಕಿನ ಚಟುವಟಿಕೆಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸುವುದಕ್ಕೆ ಆದ್ಯತೆ ನೀಡಿದಲ್ಲಿ ಅದರಿಂದ ಗುಣ ಹೊಂದುವಿಕೆಗೆ ವೇಗ ಸಿಗುತ್ತದೆಯಲ್ಲದೆ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಹೆಚ್ಚು ಸಾಧಿಸುವುದಕ್ಕೂ ಇದು ಇಂಧನವಾಗುತ್ತದೆ.

ಪಲ್ಲವಿ ಭಟ್‌, ಕೌಶಿಕಾ ವಿ.,  ಸಂಜನಾ ಟಿಪ್ನಿಸ್‌
ಪ್ರಥಮ ವರ್ಷದ ಎಂಒಟಿ ವಿದ್ಯಾರ್ಥಿಗಳು
ಕೌಶಿಕ್‌ ಸಾಹು, ಸಹಾಯಕ ಪ್ರೊಫೆಸರ್‌, ಸೀನಿಯರ್‌ ಸ್ಕೇಲ್‌,
ಅಕ್ಯುಪೇಶನಲ್‌ ತೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ.

ಟಾಪ್ ನ್ಯೂಸ್

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.