ವಿಶ್ವ ಆರೋಗ್ಯ ದಿನ: ಜಗತ್ತಿನ ಎಲ್ಲ ಜನರಿಗೆ ಸಮಾನವಾದ ಆರೋಗ್ಯ ಸೇವೆ ಒದಗಿಸುವುದು ಆದ್ಯತೆ


Team Udayavani, Apr 7, 2020, 10:17 AM IST

ವಿಶ್ವ ಆರೋಗ್ಯ ದಿನ

ಆರೋಗ್ಯವೇ ಭಾಗ್ಯ ಎನ್ನುವ ಮಾತೊಂದಿದೆ. ಆರೋಗ್ಯವಿದ್ದರೆ ಮಾತ್ರ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯ. ಅದೊಂದನ್ನು ಬಿಟ್ಟು ಉಳಿದೆಲ್ಲ ಇದ್ದರೂ ಮನುಷನ್ಯನಿಗೆ ಅವುಗಳನ್ನು ಅನುಭವಿಸಲು ಸಾಧ್ಯವೇ ಆಗುವುದಿಲ್ಲ. ಹಾಗಾಗಿ ಯಾವುದೇ ವ್ಯಕ್ತಿ ಆಸ್ತಿ, ಐಶ್ವರ್ಯ, ಪದವಿ, ಸ್ಥಾನಮಾನ ಈ ಎಲ್ಲದಕ್ಕಿಂತ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾನೆ.

ವಿಶ್ವಾದ್ಯಂತ ಸಾರ್ವತ್ರಿಕವಾಗಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವ ಸದುದ್ಧೇಶದಿಂದ 1950 ರಿಂದ ಇಚೇಗೆ ಪ್ರತಿ ವರ್ಷವೂ ವಿಶ್ವ ಆರೋಗ್ಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. 1948ರಲ್ಲಿ ಜಿನೆವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗ ಸಭೆಯಲ್ಲಿ ಹಲವಾರು ದೇಶಗಳ ಪ್ರತಿನಿಧಿಗಳು ಸಮಾಲೋಚಿಸಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಿಸು ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯಿತು. ಅದರಂತೆ 1950 ಎಪ್ರೀಲ್ 7ರಂದು ಮೊಟ್ಟ ಮೊದಲಬಾರಿಗೆ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು.

ಈ ಬಾರಿಯ ಥೀಮ್ ಏನು
ವಿಶ್ವ ಆರೋಗ್ಯ ದಿನವನ್ನು ಆಚರಿಸಲು ಪ್ರಾರಂಭಿಸಿದನಿಂದ ಪ್ರತಿ ವರ್ಷವೂ ಒಂದು ಥೀಮ್ ಅಂದರೆ ಒಂದು ವಿಷಯವನ್ನು ಪ್ರಮುಖವಾಗಿ ಇಟ್ಟುಕೊಳ್ಳಲಾಗುತ್ತದೆ. ಆ ದಿನದಂದು ಆ ವಿಷಯದ ಬಗ್ಗೆ ವಿಶೇಷವಾದ ಸಮಾಲೋಚನೆ, ಜಾಗೃತಿ ಕಾರ್ಯಕ್ರಮ, ವಿವಿಧ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತದೆ ಮತ್ತು ನಿರ್ದಿಷ್ಟ ರೋಗದ ಕುರಿತು ಹೆಚ್ಚಿನ ಹಾಗೂ ವಿಶೇಷ ಜಾಗೃತಿ ಮೂಡಿಸಲಾಗುತ್ತದೆ. “ಆರ್ಥಿಕ ಸಂಕಷ್ಟವನ್ನು ನಿರಿಕ್ಷಿಸದೇ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳಿಗೆ ಪ್ರವೇಶ ಒದಗಿಸುವುದು.” ಈ ವರ್ಷದ ವಿಷಯವಾಗಿದೆ ಇದರ ಪ್ರಕಾರ ಇಲ್ಲಿ ಜನರು ಯಾರು, ಯಾವ ಪ್ರದೇಶ ಎಂಬಿತ್ಯಾದಿ ಭೇದ ತೋರದೇ ಜಗತ್ತಿನ ಎಲ್ಲ ಜನರಿಗೆ ಸಮಾನವಾದ ಆರೋಗ್ಯ ಸೇವೆ ಒದಗಿಸುವುದು ಆದ್ಯತೆಯಾಗಿದೆ.

ಆರೋಗ್ಯ ದಿನವನ್ನು ಏಕೆ ಆಚರಿಸಬೇಕು
ಕೆಲವು ಸರಕಾರೇತ ಸಂಸ್ಥೆ (ಎನ್‌ಜಿಒ)ಗಳು ಸೇರಿಕೊಂಡು ಈ ಕಾರ್ಯಕ್ರಮದಲ್ಲಿ ಸಮಾಲೋಚನೆ ನಡೆಸುತ್ತವೆ. ಜನರಿಗೆ ತಮ್ಮ ದಿನನಿತ್ಯದ ಜೀವನ ಶೈಲಿಯಲ್ಲಿ ಆರೋಗ್ಯದ ಪಾತ್ರವೇನು, ಕಾಲ ಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧ, ಪಾಲಿಸಬೇಕಾದ ನೈರ್ಮಲ್ಯ, ಪರಿಸರದ ಸ್ವಚ್ಛತೆ, ನೀರಿನ ದುಂದು ವೆಚ್ಚ ನಿಲ್ಲಿಸುವುದು ಹೀಗೆ ಮುಂತಾದ ಗಂಭೀರ ವಿಷಯಗಳ ಕುರಿತು ಜನರಲ್ಲಿ ಕಾಳಜಿ ಮೂಡಿಸುವುದು ಮತ್ತು ಮಾಹಿತಿ ಒದಗಿಸಲಾಗುತ್ತದೆ. ಹೀಗಾಗಿ ಈ ದಿನವನ್ನ ನಾವೆಲ್ಲರೂ ಅರ್ಥಪೂರ್ಣವಾಗಿ ಆಚರಿಸಬೇಕಾದ ಅಗತ್ಯವಿದೆ.

ವಿಶ್ವದ ಅಗ್ರ 5 ಆರೋಗ್ಯವಂತ ರಾಷ್ಟ್ರಗಳು
ಬ್ಲೂಮ್ ಬರ್ಗ್ ಜಾಗತಿಕ ಆರೋಗ್ಯ ಸೂಚ್ಯಂಕದ ವರದಿಯೊಂದರ ಪ್ರಕಾರ ಜಾಗಾತಿಕವಾಗಿ ಆರೋಗ್ಯವಂತ ರಾಷ್ಟ್ರಗಳ ಪಟ್ಟಿ ತಯಾರಿಸುತ್ತದೆ. ಆಯಾ ದೇಶದ ವಾಯು ಮಾಲಿನ್ಯದ ಪ್ರಮಾಣ, ಗುಣಮಟ್ಟದ ಆರೋಗ್ಯ ಕೇಂದ್ರಗಳು, ಕಡಿಮೆ ಮಾಲಿನ್ಯ, ಶುದ್ಧ ಮತ್ತು ಗುಣಮಟ್ಟದ ಕುಡಿಯುವ ನೀರು, ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ದೇಶಗಳ ಆರೋಗ್ಯದ ಶ್ರೇಯಾಂಕವನ್ನು ಸಿದ್ಧಪಡಿಸುತ್ತದೆ. ಅವುಗಳ ಪಟ್ಟಿ ಈ ಕೆಳಗಿನಂತಿದೆ.

1. ಸ್ಪೇನ್ (92.75)
2. ಇಟಲಿ (91.59)
3. ಐಸ್‌ಲ್ಯಾಂಡ್ (91.44)
4. ಜಪಾನ್ (91.28)
೫. ಸ್ವಿಜರ್‌ಲ್ಯಾಂಡ್ (90.93),
ಭಾರತ 120ನೇ ಸ್ಥಾನದಲ್ಲಿದೆ.

ಅತ್ಯುತ್ತಮ ಹೆಲ್ತ್ ಕೇರ್ ಹೊಂದಿರುವ ರಾಷ್ಟ್ರಗಳು.
1. ಕೆನಡಾ
2. ಕತಾರ್
3. ಫ್ರಾನ್ಸ್
4. ನಾರ್ವೆ
5. ನ್ಯೂಜಿಲೆಂಡ್
6. ಜರ್ಮನಿ

ಭಾರತದ ಜನರ ಆರೋಗ್ಯ ಪರಿಸ್ಥಿತಿ ಹೇಗಿದೆ
· ಸಂಸ್ಥೆಯೊಅದರ ಅಂದಾಜಿನ ಪ್ರಕಾರ ದೇಶದಲ್ಲಿ ಜನರ ಸರಾಸರಿ ಜೀವಿತಾವಧಿ.
ಮಹಿಳೆ –7೦, ಪುರುಷ 67.

· 2018ರ ವರದಿಯ ಪ್ರಕಾರ ದೇಶದಲ್ಲಿ 5 ವರ್ಷದ ಒಳಗಿನ ಮಕ್ಕಳಲ್ಲಿ 1000ಕ್ಕೆ 37 ಮಕ್ಕಳು ಸಾವನ್ನಪ್ಪುತ್ತಾರೆ.

· ಜನರ ಆರೋಗ್ಯ ಪ್ರಮಾಣದಲ್ಲಿ ಜಾಗತಿಕವಾಗಿ ಭಾರತ 125ನೇ ಸ್ಥಾನದಲ್ಲಿದೆ.

· ಶಿಶು ಮರಣದರದಲ್ಲಿ ದೇಶ 113ನೇ ಸ್ಥಾನ ಹೊಂದಿದೆ.


· ಭಾರತ ವಾರ್ಷಿಕವಾಗಿ ತನ್ನ ಜೀಡಿಪಿಯಲ್ಲಿ ಶೇ 3.65ರಷ್ಟ ಪ್ರಮಾಣವನ್ನು ಹೆಲ್ತ್ ಕೇರ್ ಗೆ ವ್ಯಯಿಸುತ್ತದೆ.


· ದೇಶಾದ್ಯಂತ ಪ್ರತಿ 10,000 ಸಾವಿರ ಜನಸಂಖ್ಯೆಗೆ ಕೇವಲ 7 ಜನ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಇಟಲಿಯಲ್ಲಿ 4೦ ಜನ ವೈದ್ಯರು ಸೇವೆ ಸಲ್ಲಿಸುತ್ತಾರೆ.


· 2018ರ ವರದಿಯೊಂದರ ಪ್ರಕಾರ ದೇಶದಲ್ಲಿ ಸುಮಾರು 28,899 ಆಸ್ಪತ್ರೆಗಳು ಮಾತ್ರ ಇವೆ.

– ಶಿವಾನಂದ H.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.