ಫೇಲಾಗೋದು ಪಾರ್ಟ್‌ ಆಫ್ ಲೈಫ್

ಡುಮ್ಕಿ ಹೇಳುವ ಗೆಲುವಿನ ಫಿಲಾಸಫಿ

Team Udayavani, Jul 14, 2020, 3:59 PM IST

ಫೇಲಾಗೋದು ಪಾರ್ಟ್‌ ಆಫ್ ಲೈಫ್

ಸಾಂದರ್ಭಿಕ ಚಿತ್ರ

ನಾನು ಫೇಲ್‌ ಆದೆನೆಂದು ಗೊತ್ತಾದಾಗ, ಮನೇಲಿ ಒತ್ತಡ ಹಾಕಲಿಲ್ಲ. ಮುಂದೆ ಚೆನ್ನಾಗಿ ಓದಬೇಕು ಅಂತೆಲ್ಲ ಹೇಳಿ, ನನ್ನನ್ನು ಚಿಕ್ಕಮ್ಮನ ಮನೆಗೆ ಬಿಟ್ಟರು. ಚಿಕ್ಕಮ್ಮ, ಚೆನ್ನಾಗಿ ಪಾಠ ಹೇಳಿಕೊಟ್ಟರು.

ಪರೀಕ್ಷೆ ಅಂದರೆ ನಮ್ಮಕ್ಕನ ಪಟ ಕಣ್ಣ ಮುಂದೆ ಬರ್ತದೆ. ನನ್ನ ಮಾರ್ಕು, ರಿಮಾರ್ಕುಗಳನ್ನು ಪರೀಕ್ಷೆ ಮಾಡುತ್ತಿದ್ದದ್ದೇ ಅವಳು. ನಾನೇನು ಸುಮ್ಮನೆ ಅಂದುಕೊಳ್ಳಬೇಡಿ. ಮೇಷ್ಟ್ರು, ಅಕ್ಕನ ಕಣ್ಗಾವಲಿನ ನಡುವೆಯೂ ಕ್ಲಾಸ್‌ ಬಂಕ್‌ ಮಾಡಿಬಿಡುತ್ತಿದ್ದೆ. ಕುಂದಾಪುರದಲ್ಲಿ ಆಗ ಗಡ್‌ಬಡ್‌ ಬಹಳ ಫೇಮಸ್ಸು. ಅದನ್ನು ತಿಂದುಕೊಂಡು ಮಜಾ ಉಡಾಯಿಸ್ತಾ ಇದ್ದೆ. ಶಾಲೆ ಸಮಯದಲ್ಲಿ ಕ್ರಿಕೆಟ್‌ ಆಡ್ತಿದ್ದೆ. ಅಕ್ಕನಿಗೆ ಇದೆಎಲ್ಲಾ ಮಾಹಿತಿ ಹೋದಾಗ, ಸರಿಯಾಗಿ ಭಾರಿಸ್ತಾ ಇದ್ದಳು. ಇವತ್ತೇನಾದರೂ ಸ್ವಲ್ಪ ಸರಿಯಾಗಿ ಬದುಕುತ್ತಿದ್ದೀನಿ ಅಂದರೆ ಅಕ್ಕ ಮತ್ತು ಅವಳು ಕೊಟ್ಟ ಏಟುಗಳೇ ಕಾರಣ. ಥ್ಯಾಂಕ್ಸು ಟು ಅಕ್ಕ.

ಈಗ, ನನ್ನ ಫೇಲಿನ ಕತೆಯನ್ನು ನಿಮಗೆ ಹೇಳಬೇಕು. ಮೊದಲಿಂದಲೂ ನಾನು ವಿಪರೀತ ತರಲೆ. ವರ್ಷವಿಡೀ ಓದುತ್ತಿರಲಿಲ್ಲ. ಮನೆಯಲ್ಲಿ ಟ್ಯೂಷನ್‌ಗೆ ಕಳಿಸುತ್ತಿದ್ದರು. ಪರೀಕ್ಷೆಗೂ ಮುನ್ನ ಒಂದು ತಿಂಗಳು, ಅಕ್ಕ ಕುತ್ತಿಗೆ ಹಿಡಿದು ಓದಿಸ್ತಿದ್ದಳು. ಎಕ್ಸಾಂ ಬರೆದು ಮನೆಗೆ ಬಂದರೆ, ಪ್ರಶ್ನೆ ಪತ್ರಿಕೆ ಹಿಡಿದು ಪ್ರಶ್ನೆ ಕೇಳ್ಳೋಳು. ಏನೇನು ಬರೆದಿದ್ದೀಯ ಹೇಳು ಅಂತ. ಹಾಗಾಗಿ, ಎಕ್ಸಾಂ ಮುಗೀತಿದ್ದಂತೆಯೇ, ಟೆಕ್ಸ್ಟ್ ಬುಕ್ ಹಿಡಿದು, ಪ್ರಶ್ನೆಗಳಿಗೆಎಲ್ಲಾ ಉತ್ತರ ಹುಡುಕಿಕೊಂಡು, ಅಕ್ಕ ಕೇಳುವ ಪ್ರಶ್ನೆಗೆ 35 ಮಾರ್ಕ್‌ ಬರೋ ಹಾಗೆ ನೋಡಿಕೊಂಡು ಹೋಗೋದೇ ನನ್ನ ಪಾಲಿಗೆ ದೊಡ್ಡ ಕೆಲಸ ಆಗಿತ್ತು. ಎಷ್ಟೋ ಸಲ ಅಲ್ಲೂ ತಪ್ಪು ತಪ್ಪು ಹೇಳಿ,ಚೆನ್ನಾಗಿ ಒದೆ ತಿಂದದ್ದೂ ಇದೆ. ಒಂದು ಸಲ ಐದನೇ ಕ್ಲಾಸಲ್ಲಿ ಫೇಲಾಗಿದ್ದೆ. ಮನೆಗೆ ಹೋದರೆ ಹೊಡೀತಾರೆ ಅಂತ, ಅಲ್ಲೇ ಸ್ಕೂಲ್‌ ಸುತ್ತಮುತ್ತ ಓಡಾಡ್ತಾ ಇದ್ದೆ. ಅದನ್ನು ನೋಡಿದ ಮೇಷ್ಟ್ರು, ಏನಾಯ್ತು ಅಂದರು.

“ಸಾರ್‌, ಫೇಲಾಗೋಗಿದ್ದೀನಿ. ಮನೆಗೆ ಹೋಗಲ್ಲ, ಹೊಡೀತಾರೆ’ ಅಂದೆ. ಸರಿ, ನೀನು ಪಾಸ್‌ ಆಗಿದ್ದೀಯಾ ಹೋಗೋ, ಅಂದರು. ಮನೆಗೆ ಹೋಗಿ, ಪಾಸಾಗಿದ್ದೀನಿ ಅಂತ ಹೇಳಿದ್ದೆ . ಮುಂದಿನ ವರ್ಷ ಶುರುವಾಯಿತು. “ನಾವು ಹೆಸರು ಓದುತ್ತೀವಿ. ಎಲ್ಲರೂ ಈ ಕ್ಲಾಸಲ್ಲಿ ಬಂದು ಕೂತ್ಕೊಳಿ’ ಅಂದರು ಮೇಷ್ಟ್ರು. ಎಷ್ಟು ಕಾದರೂ ನನ್ನ ಹೆಸರನ್ನು ಕೂಗಲೇ ಇಲ್ಲ.

ನಾನು ಪಾಸಾಗಿಲ್ಲ ಅಂತ ಆಗ ತಿಳೀತು. ಫೇಲಾಗಿದ್ದು ಏಕೆ ಅಂತಲೂ ಆಮೇಲೆ ಗೊತ್ತಾಯ್ತು. ನಮ್ಮಣ್ಣ ಪ್ರವೀಣ ಅಂತ. ಅವನು ನನಗಿಂತ ದಡ್ಡ. ಸುಮಾರು ಕ್ಲಾಸಲ್ಲಿ ಡುಮ್ಕಿ ಹೊಡೆದಿದ್ದ. ನಮ್ಮ ತಂದೆ ಜ್ಯೋತಿಷ್ಯ ಹೇಳ್ಳೋರು. ಒಂದು ಸಲ ಊರಲ್ಲಿ ಅಪ್ಪನಿಗೆ ಹೆಡ್‌ ಮಾಸ್ಟರ್‌ ಸಿದ್ದಾರೆ. ಅಪ್ಪ, ಅವರಿಗೆ- “ದೊಡ್ಡ ಮನುಷ್ಯರ ಮಕ್ಕಳು ಅಂತ ನೀವು ಎಲ್ಲರನ್ನೂ ಪಾಸ್‌ ಮಾಡುತ್ತಿದ್ದೀರ. ಹೀಗೆ ಮಾಡಿದರೆ ಆ ಮಕ್ಕಳಿಗೆ ಫ್ಯೂಚರ್‌ ಇರೋಲ್ಲ. ಶೇ.50ಕ್ಕಿಂತ ಕಡಿಮೆ ಅಂಕ ತೆಗೆದರೆ ಫೇಲ್‌ ಮಾಡಬೇಕು. ನನ್ನ ಮಾತು ಮೀರಿ ಪಾಸ್‌ ಮಾಡಿದರೆ ನಿಮ್ಮ ಕೆಲಸಕ್ಕೆ ಕುತ್ತು ಬರುತ್ತದೆ’ ಅಂತ ತಮಾಷೆಗೆ ಹೇಳಿದ್ದಾರೆ. ಈ ಮಾತನ್ನು ಸೀರಿಯಸ್ಸಾಗಿ ತಗೊಂಡಿದ್ದ ಮೇಷ್ಟ್ರು, ಕಡಿಮೆ ಅಂಕ ಪಡೆದಿದ್ದ ನನ್ನನ್ನೇ ಫೇಲ್‌ ಮಾಡಿಬಿಟ್ಟಿದ್ದರು. ಈಗೇನಿಗಾದೆ ಅಂದರೆ, ಓದೇ ಜೀವನ, ಓದದಿದ್ದರೆ- ರ್‍ಯಾಂಕ್‌, ಡಿಸ್ಟಿಂಕ್ಷನ್‌, ಬರದಿದ್ದರೆ ಭವಿಷ್ಯವಿಲ್ಲ ಎಂದು ಹೆದರಿಸಲಾಗುತ್ತಿದೆ. ಇದು ಖಂಡಿತ ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರುತ್ತದೆ. ಟಾಪರ್‌, ಡಿಸ್ಟಿಂಕ್ಷನ್‌ ಬರೋದೇ ಈಗ ಐಡೆಂಟಿಟಿ. ನಮ್ಮ ಕಾಲದಲ್ಲಿ ಹೆತ್ತವರು ಒತ್ತಡ ಹಾಕುತ್ತಿರಲಿಲ್ಲ.

ಬಿಡುವಿನಲ್ಲಿ ಯಕ್ಷಗಾನ ನೋಡೋದು, ಆಟ ಆಡೋದು… ಹೀಗೆ, ಮಕ್ಕಳು ಮಕ್ಕಳಾಗಿರುತ್ತಿದ್ದೆವು. ಈಗ ಒತ್ತಡ ಜಾಸ್ತಿ ಹಾಕಿ, ಮೆಚ್ಯುರಿಟಿ ಬೇಗ ಬರ್ತಿದೆ. ಬದುಕು ರಾಂಗ್‌ ವೇನಲ್ಲಿ ಹೋಗ್ತಿದೆ. ನಾನು ಫೇಲ್‌ ಆದೆನೆಂದು ಗೊತ್ತಾದಾಗ, ಮನೇಲಿ ಒತ್ತಡ ಹಾಕಲಿಲ್ಲ. ಮುಂದೆ ಚೆನ್ನಾಗಿ ಓದಬೇಕು ಅಂತೆಲ್ಲ ಹೇಳಿ, ನನ್ನನ್ನು ಚಿಕ್ಕಮ್ಮನ ಮನೆಗೆ ಬಿಟ್ಟರು. ಚಿಕ್ಕಮ್ಮ, ಚೆನ್ನಾಗಿ ಪಾಠ ಹೇಳಿಕೊಟ್ಟರು. ನಮಗೆ ಯಾವುದೇ ಟಾರ್ಗೆಟ್‌ ಇರಲಿಲ್ಲ. ಪಾಸಾದರೆ ಸಾಕಿತ್ತು. ಮಾಥ್ಸ್, ಇಂಗ್ಲಿಷ್‌ ಕಷ್ಟ ಆಗ್ತಿತ್ತು.

ಕಾರಂತಜ್ಜ ಅಂತ ಮಾಸ್ತರ್‌ ಇದ್ದರು. ಅವರು ಅದ್ಭುತವಾಗಿ ಪಾಠ ಮಾಡೋರು. ಪಾಸ್‌ ಆಗುವುದು ಹೇಗೆ ಅಂತ ಹೇಳಿಕೊಡ್ತಿದ್ದರು. ಹತ್ತನೇ ತರಗತಿಯಲ್ಲಿ ಶೇ.47ರಷ್ಟು ಅಂಕ ಬಂತು. ನಿಜ ಹೇಳ್ತೀನಿ, ನನಗೆ ಅನ್ನಿಸೋದು ಏನು ಗೊತ್ತಾ? ಮಾರ್ಕ್ಸ್ ಎಷ್ಟೇ ತೆಗೀರಿ, ಅದು ಸರ್ಟಿಫಿಕೇಟ್‌ನಲ್ಲಿ ಉಳಿಯುತ್ತೆ. ನೀವು ಫಿಲ್ಡಿಗಿಳಿದು ಪ್ರಾಕ್ಟೀಸ್‌ ಮಾಡಿದರೆ, ಪ್ರಾಕ್ಟಿಕಲ್‌ ನಾಲೆಡ್ಜ್ ಬರುತ್ತೆ. ನಾನು ಎಷ್ಟೋ ಜನ ಆವರೇಜ್‌ ಮಾರ್ಕ್ಸ್ ತೆಗೆದ ಸಿವಿಲ್‌ ಎಂಜಿನಿಯರ್‌ಗಳು, ಲಾಯರ್‌ಗಳನ್ನು ನೋಡಿದ್ದೀನಿ. ಆನ್‌ಗ್ರೌಂಡ್‌ನ‌ಲ್ಲಿ ಅವರೆಎಲ್ಲಾ ತುಂಬಾ ಬ್ರಿಲಿಯಂಟ್‌ ಆಗಿರ್ತಾರೆ.

ನನ್ನ ಬದುಕಿನ ಹೈಯಸ್ಟ್ ಪರ್ಸೆಂಟೇಜ್‌ ಶೇ.51. ಅದೂ ಪಿಯೂಸಿಯಲ್ಲಿ. ಇದನ್ನು ನೋಡಿ ನಮ್ಮಪ್ಪ ಖುಷಿಯಾಗಿ ಬೆಂಗಳೂರಿಗೆ ಎತ್ತಾಕ್ಕೊಂಡು ಬಂದು ಬಿಟ್ಟರು. ಊರಲ್ಲಿದ್ರೆ ಹಾಳಾಗಿ ಹೋಗ್ತಿನಿ ಅಂತ. ಮುಂದೆ ಎಂಬಿಎ ಸೇರಿದೆ. ಅದು ಅರ್ಧಕ್ಕೇ ನಿಂತಿತು. ಸಿನಿಮಾ ಶುರುವಾಯ್ತು. ಬದುಕು ಈಗ ಕಲರ್‌ ಕಲರ್‌ ಆಗಿದೆ. ಫೇಲ್ಯೂರ್‌ನಲ್ಲಿ ಸುತ್ತಾಡಿದ ಅನುಭವವೇ, ಜೀವನದ ಬಹುದೊಡ್ಡ ಆತ್ಮವಿಶ್ವಾಸ ಅಂತ ತಿಳಿದಿದೆ.

ಕಟ್ಟೆ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.