ರಾಜ್ಯದಲ್ಲೂ ಹಳಿಯೇರಲಿದೆ ಖಾಸಗಿ ರೈಲು; ಮಾರ್ಗ ನಿಗದಿ ಪರಾಮರ್ಶೆ ಪ್ರಕ್ರಿಯೆ ಆರಂಭ

ಟೆಂಡರ್‌ ಪ್ರಕ್ರಿಯೆ ಶೀಘ್ರ, 2030ರೊಳಗೆ ಖಾಸಗಿ ರೈಲು ಓಡಾಟ; ಸುಸಜ್ಜಿತ ಸೌಲಭ್ಯಗಳು ಇರಲಿವೆ

Team Udayavani, Jul 28, 2020, 10:48 AM IST

ರಾಜ್ಯದಲ್ಲೂ ಹಳಿಯೇರಲಿದೆ ಖಾಸಗಿ ರೈಲು; ಮಾರ್ಗ ನಿಗದಿ ಪರಾಮರ್ಶೆ ಪ್ರಕ್ರಿಯೆ ಆರಂಭ

ಮಹಾನಗರ: ರಾಜ್ಯದಲ್ಲಿ ಖಾಸಗಿ ರೈಲು ಓಡಾಟಕ್ಕೆ ಸಂಬಂಧಿಸಿದ ಚಟುವಟಿಕೆಗಳು ಆರಂಭಗೊಂಡಿವೆ. ಯಾವ ಮಾರ್ಗಗಳಲ್ಲಿ ಮೊದಲ ರೈಲು ಸಂಚಾರಕ್ಕೆ ಅವಕಾಶ ನೀಡಬೇಕೆಂಬ ಕುರಿತಾಗಿ ಪರಾಮರ್ಶೆ ಇಲಾಖೆಯಲ್ಲಿ ನಡೆಯುತ್ತಿದೆ. ಶೀಘ್ರದಲ್ಲಿಯೇ ಇದಕ್ಕೆ ಸಂಬಂ ಧಿಸಿದಂತೆ ಟೆಂಡರ್‌ ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ. ರೈಲ್ವೇ ಇಲಾಖೆಯು ನಿಗದಿಪಡಿಸುವ ಮಾರ್ಗಗಳಲ್ಲಿ ಖಾಸಗಿ ರೈಲು ಓಡಿಸಲು ಆಸಕ್ತಿ ಇರುವ ಕಂಪೆನಿಗಳು ಟೆಂಡರ್‌ನಲ್ಲಿ ಭಾಗವಹಿಸಿ, ಆಯ್ಕೆಯಾಗಲಿದ್ದಾರೆ. ಪ್ರಯಾಣಿಕರು ಹಾಗೂ ರೈಲ್ವೇಗೆ ಲಾಭ ಆಗುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸಿಕೊಂಡು ಈ ಪ್ರಕ್ರಿಯೆ ನಡೆಯಲಿದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು 2023ರ ಎಪ್ರಿಲ್‌ ವೇಳೆಗೆ ರಾಜ್ಯದಲ್ಲಿಯೂ ಖಾಸಗಿ ರೈಲು ಸಂಚಾರ ಹಳಿ ಏರುವ ಗುರಿ ಇರಿಸಲಾಗಿದೆ.

ಸದ್ಯದ ಮಾಹಿತಿ ಪ್ರಕಾರ, ಬೆಂಗಳೂರಿ ನಿಂದ ಹೊಸದಿಲ್ಲಿ, ಪಟ್ನಾ ಸಹಿತ ದೇಶದ ವಿವಿಧ ಕಡೆಗಳಿಗೆ ತೆರಳುವ ಸುಮಾರು ಹತ್ತು ಮಾರ್ಗಗಳಲ್ಲಿ ಖಾಸಗಿ ರೈಲಿಗೆ ಅವಕಾಶ ನೀಡುವ ಸಂಬಂಧ ಮಾತುಕತೆ ನಡೆಯುತ್ತಿದೆ. ಉಳಿದಂತೆ ರಾಜ್ಯದೊಳಗೆ ಮೈಸೂರು-ಬೆಂಗಳೂರು, ಹುಬ್ಬಳ್ಳಿ-ಬೆಂಗಳೂರು, ಮಂಗಳೂರು- ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸುವ ಬಗ್ಗೆಯೂ ಪರಾಮರ್ಶೆ ನಡೆಯುತ್ತಿದೆ. ಜತೆಗೆ ಮಂಗಳೂರಿನಿಂದ ಕೊಯಮತ್ತೂರು ಮೂಲಕ ಚೆನ್ನೈಗೂ ಖಾಸಗಿ ರೈಲಿಗೆ ಅವಕಾಶ ನೀಡುವ ಬಗ್ಗೆ ಚಿಂತನೆಯಿದೆ.

ಗಂಟೆಗೆ 160 ಕಿ.ಮೀ. ವೇಗ
ಈ ಖಾಸಗಿ ರೈಲಿನಲ್ಲಿ ಒಟ್ಟು 16 ಕೋಚ್‌ಗಳು ಇರಲಿವೆ. ಪ್ರತೀ ರೈಲಿನ ಗರಿಷ್ಠ ವೇಗ ಗಂಟೆಗೆ 160 ಕಿ.ಮೀ.ಗೆ ನಿಗದಿಗೊಳಿಸಲಾಗಿದೆ. ಯಾವುದೇ ಖಾಸಗಿ ಕಂಪೆನಿಯು ರೈಲ್ವೇ ಇಲಾಖೆಯ ಜತೆಗೆ ಮಾಡಿಕೊಳ್ಳುವ ಒಪ್ಪಂದಕ್ಕೆ 35 ವರ್ಷಗಳ ಕಾಲಾವಧಿ ಇರಲಿದೆ. ಪ್ರತೀ ರೈಲಿನ ಓಡಾಟಕ್ಕೆ ತಕ್ಕಂತೆ ಮಾರ್ಗ ಬಳಕೆ ಶುಲ್ಕ, ಇಂಧನ ಶುಲ್ಕವನ್ನು ಪಾವತಿಸಲಿದೆ. ಈ ರೈಲುಗಳನ್ನು ಓಡಿಸುವ ಚಾಲಕ/ಗಾರ್ಡ್‌ಗಳು ರೈಲ್ವೇ ಇಲಾಖೆಯವರೇ ಆಗಿರುತ್ತಾರೆ.

ದೇಶದ ಮೊದಲ ಖಾಸಗಿ “ತೇಜಸ್‌’ ರೈಲು ಹೊಸದಿಲ್ಲಿ ಹಾಗೂ ಲಕ್ನೋ ನಡುವೆ ಕಳೆದ ವರ್ಷ ಅ. 4ರಿಂದ ಸಂಚಾರ ಆರಂಭಿಸಿದೆ. ಈ ಎಕ್ಸ್‌ಪ್ರೆಸ್‌ ರೈಲು ಎಲ್ಲ ಹವಾನಿಯಂತ್ರಿತವಾಗಿದ್ದು, ಶತಾಬ್ಧಿ ಎಕ್ಸ್‌ ಪ್ರಸ್‌ನ ಹಾಗೂ ಐಷಾರಾಮಿ ರೈಲಿನ ಎಲ್ಲ ಸೌಲಭ್ಯ ಒಳಗೊಂಡಿರುತ್ತದೆ. ಬಯೋ ಟಾಯ್ಲೆಟ್‌ ಹಾಗೂ ಪ್ರವೇಶ- ನಿರ್ಗಮನಕ್ಕಾಗಿ ಸ್ವಯಂ ಚಾಲಿತ ಸ್ಲೆ„ಡಿಂಗ್‌ ಬಾಗಿಲು ವ್ಯವಸ್ಥೆಯಿದೆ. ಸಿಸಿಟಿವಿ ಕೆಮರಾ, ಎಲ್‌ಇಡಿ ಟಿವಿ, ನಿಯತಕಾಲಿಕ ಇನ್ನಿತರ ಸೌಲಭ್ಯವೂ ಇವೆ.

14 ಮಾರ್ಗಗಳಲ್ಲಿ ನಿರೀಕ್ಷೆ
ರಾಜ್ಯದ 14 ಪ್ರಮುಖ ಮಾರ್ಗಗಳಲ್ಲಿ ಖಾಸಗಿ ರೈಲ್ವೇ ಸೇವೆ ನೀಡಲು ಯೋಚಿಸಲಾಗಿದೆ. ಈ ಮಾರ್ಗಗಳಲ್ಲಿ ಈಗಾಗಲೇ ರೈಲು ಸಂಚರಿಸುತ್ತಿದ್ದರೂ ಕೂಡ ಹೆಚ್ಚುವರಿಯಾಗಿ ಖಾಸಗಿ ರೈಲು ಸೇವೆಗೆ ಈ ಮಾರ್ಗವನ್ನು ನೀಡುವ ಕುರಿತು ಪರಾಮರ್ಶೆ ನಡೆಯುತ್ತಿದೆ. ಇಂಡಿಗೋ, ವಿಸ್ತಾರ, ಸ್ಪೈಸ್‌ಜೆಟ್‌, ಅದಾನಿ, ಮೇಕ್‌ ಮೈ ಟ್ರಿಪ್‌ ಸಹಿತ ಹಲವು ಕಂಪೆನಿಗಳು ರೈಲು ಸೇವೆ ಒದಗಿ ಸಲು ಆಸಕ್ತಿ ವ್ಯಕ್ತಪಡಿಸಿವೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.

ಅಂತಿಮವಾಗಿಲ್ಲ; ಪರಾಮರ್ಶೆ ನಡೆಯುತ್ತಿದೆ
ಕರ್ನಾಟಕದ ಯಾವ ರೈಲ್ವೇ ಮಾರ್ಗಗಳಲ್ಲಿ ಖಾಸಗಿ ರೈಲು ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಪ್ರಯಾಣಿಕರಿಗೆ ಹಾಗೂ ರೈಲ್ವೇಗೆ ಲಾಭವಾಗುವ ನಿಟ್ಟಿನಲ್ಲಿ ರಾಜ್ಯದ ಹಲವು ಮಾರ್ಗಗಳ ಸಾಧ್ಯತೆಗಳ ಬಗ್ಗೆ ಪರಾಮರ್ಶೆ ನಡೆಯುತ್ತಿದೆ. ಅಂತಿಮವಾಗಿ ರೈಲ್ವೇ ಇಲಾಖೆಯು ಟೆಂಡರ್‌ ಆಹ್ವಾನಿಸಲಿದೆ. ಆ ಬಳಿಕ ಪ್ರಕ್ರಿಯೆಗಳು ನಡೆಯಲಿವೆ.
 - ಸುರೇಶ್‌ ಅಂಗಡಿ, ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವರು

ಟಾಪ್ ನ್ಯೂಸ್

1-kalburgi

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ;ನಾಗೇಂದ್ರ ವಜಾಕ್ಕೆ ಬಿಜೆಪಿ ಆಗ್ರಹ

Sringeri: ದೇವರ ದರ್ಶನಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ

Sringeri: ದೇವರ ದರ್ಶನಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ

2002 ರಲ್ಲಿ ನಡೆದ ಹತ್ಯೆ ಪ್ರಕರಣ: ಡೇರಾ ಸಚ್ಚಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಖುಲಾಸೆ

2002 ರಲ್ಲಿ ನಡೆದ ಹತ್ಯೆ ಪ್ರಕರಣ: ಡೇರಾ ಸಚ್ಚಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಖುಲಾಸೆ

12

Violation of road rules: ಸದಾಶಿವನಗರಠಾಣೆ ವ್ಯಾಪ್ತಿಯಲ್ಲೇ 5 ತಿಂಗಳಲ್ಲಿ 1 ಲಕ್ಷ ಕೇಸ್‌!

8

ಎಚ್. ಆಂಜನೇಯ, ಎಂ.ಡಿ. ಲಕ್ಷ್ಮೀನಾರಾಯಣ ಅವರಿಗೆ ಎಂಎಲ್ಸಿ ಚುನಾವಣೆಗೆ ಅವಕಾಶ ನೀಡುವಂತೆ ಆಗ್ರಹ

Hubballi: ನಮಗೆ ಆದ ಅನ್ಯಾಯ ಬೇರೆ‌ ಯಾರಿಗೂ ಆಗಬಾರದು… ನಿರಂಜನ ಹಿರೇಮಠ ಹೇಳಿಕೆ

Hubballi: ನಮಗೆ ಆದ ಅನ್ಯಾಯ ಬೇರೆ‌ ಯಾರಿಗೂ ಆಗಬಾರದು… ನಿರಂಜನ ಹಿರೇಮಠ ಹೇಳಿಕೆ

Shivamogga: ವಾಲ್ಮೀಕಿ ನಿಗಮದ ಮಂತ್ರಿಯನ್ನು ಕೂಡಲೇ ವಜಾಗೊಳಿಸಿ; ಕೆ.ಬಿ ಪ್ರಸನ್ನ ಆಗ್ರಹ

Shivamogga: ವಾಲ್ಮೀಕಿ ನಿಗಮದ ಮಂತ್ರಿಯನ್ನು ಕೂಡಲೇ ವಜಾಗೊಳಿಸಿ; ಕೆ.ಬಿ ಪ್ರಸನ್ನ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ, ಇಲ್ಲವಾದರೆ.. ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ

ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ, ಇಲ್ಲವಾದರೆ.. ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ

Train; ಜೂನ್‌ ತಿಂಗಳ ಮೊದಲ ವಾರದಲ್ಲಿ ರೈಲು ವ್ಯತ್ಯಯ

Train; ಜೂನ್‌ ತಿಂಗಳ ಮೊದಲ ವಾರದಲ್ಲಿ ರೈಲು ವ್ಯತ್ಯಯ

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

bಶಿಕ್ಷಣ ಕ್ಷೇತ್ರ ಹದಗೆಡಿಸಿದ ಕಾಂಗ್ರೆಸ್‌: ಬಿ.ವೈ. ವಿಜಯೇಂದ್ರ

ಶಿಕ್ಷಣ ಕ್ಷೇತ್ರ ಹದಗೆಡಿಸಿದ ಕಾಂಗ್ರೆಸ್‌: ಬಿ.ವೈ. ವಿಜಯೇಂದ್ರ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-kalburgi

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ;ನಾಗೇಂದ್ರ ವಜಾಕ್ಕೆ ಬಿಜೆಪಿ ಆಗ್ರಹ

Sringeri: ದೇವರ ದರ್ಶನಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ

Sringeri: ದೇವರ ದರ್ಶನಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ

Sandalwood: ʼಪೆನ್‌ಡ್ರೈವ್‌ʼ ಇದು ಸಿನಿಮಾ ಟೈಟಲ್‌

Sandalwood: ʼಪೆನ್‌ಡ್ರೈವ್‌ʼ ಇದು ಸಿನಿಮಾ ಟೈಟಲ್‌

Sandalwood: ಮಾರಿಗೆ ದಾರಿ ಬಿಟ್ಟ ನವ ತಂಡ

Sandalwood: ಮಾರಿಗೆ ದಾರಿ ಬಿಟ್ಟ ನವ ತಂಡ

UI Movie: ಯುಐ ಹಾಡುಗಳಲ್ಲಿ ಉಪ್ಪಿ ಬಿಝಿ

UI Movie: ಯುಐ ಹಾಡುಗಳಲ್ಲಿ ಉಪ್ಪಿ ಬಿಝಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.