ಕಳ್ಳ-ಪೊಲೀಸ್‌ ಆಟ


Team Udayavani, Aug 18, 2020, 8:07 PM IST

ಕಳ್ಳ-ಪೊಲೀಸ್‌ ಆಟ

ಸಾಂದರ್ಭಿಕ ಚಿತ್ರ

ಚೀಟಿಯಾಟ, ಕಳ್ಳ- ಪೋಲಿಸ್‌ ಆಟವೆಂದೆಲ್ಲ ನಾನಾ ಹೆಸರುಗಳು ಈ ಆಟಕ್ಕಿವೆ. ರಜೆಗೆಂದು ಅಜ್ಜಿ ಊರಿಗೆ ಹೋದಾಗ, ಹಿಂದೊಮ್ಮೆ ಎಲ್ಲಾ ಮಕ್ಕಳೂ ತಪ್ಪದೇ ಆಡುತ್ತಿದ್ದ ಜನಪ್ರಿಯ ಆಟ ಇದಾಗಿತ್ತು.

ಮಳೆಗಾಲದಲ್ಲಿ ಒಳಾಂಗಣ ಆಟಗಳೇ ಬೇಕು. ಹೊರಗೆ ನೀರಿನಲ್ಲಿ ನೆನೆಯುವುದಕ್ಕಿಂತ, ಮನೆಯಲ್ಲೇ ಕುಳಿತು ಆಡುವ ಆಟವಿದ್ದರೆ ಚೆನ್ನ. ಅದಕ್ಕೆಂದೇ ಹುಟ್ಟಿದ ಕಳ್ಳ-ಪೊಲೀಸ್‌ಆಟದ ಕುರಿತು ನೋಡೋಣ. ನಾಲ್ಕು ಅಥವಾ ಐದಾರು ಆಟಗಾರರು ಆಡಬಹುದಾದ ಈ ಆಟದಲ್ಲಿ, ರಾಜ, ರಾಣಿ, ಕಳ್ಳ, ಪೊಲೀಸ್‌, ಡಾಕ್ಟರ್‌ ಎಂದೆಲ್ಲಾ ಎಂದು ನಮೂದಿಸಿ 4 ಚೀಟಿಗಳನ್ನು ಮಾಡಿಟ್ಟುಕೊಳ್ಳಬೇಕು. ಈ ಪೈಕಿ ರಾಜ, ರಾಣಿ, ಡಾಕ್ಟರ್‌, ಪೊಲೀಸ್‌ ಎಂದಿರುವ ಚೀಟಿಗಳಿಗೆ, ಇಂತಿಷ್ಟು ಎಂದು ಅಂಕಗಳು ಇರುತ್ತವೆ. ಈಗ ಆಟಗಾರರು ವೃತ್ತಾಕಾರದಲ್ಲಿ ಕುಳಿತುಕೊಳ್ಳಬೇಕು. ನಂತರ ಯಾರಾದರೊಬ್ಬ ಚೀಟಿಗಳನ್ನು ಮಡಚಿ ಕೆಳಗೆ ಹಾಕಬೇಕು. ಲಾಟರಿ ತೆಗೆಯುವಂತೆ ಒಬ್ಬೊಬ್ಬರು ಒಂದೊಂದು ಚೀಟಿಯನ್ನು ಎತ್ತಿಕೊಳ್ಳಬೇಕು. ನಿಮಗೆ ರಾಜ, ರಾಣಿ, ಡಾಕ್ಟರ್‌ ಎಂದು ಬರೆದಿರುವ ಚೀಟಿ ಬಂದರೆ 1000, 800,600 ಅಂಕಗಳು ನಿಮ್ಮ ಪಾಲಿಗೆ. “ಪೊಲೀಸ್‌’ ಚೀಟಿ ದೊರೆತವನು “ಕಳ್ಳ’ ಚೀಟಿ ಯಾರ ಬಳಿ ಇದೆಯೋ, ಅದನ್ನು ಸರಿಯಾಗಿ ಊಹಿಸಿ ಹೇಳಬೇಕು. ಸರಿಯಾಗಿದ್ದರೆ ಆ ಆಟಗಾರನಿಗೆ 500 ಅಂಕಗಳು, ಕಳ್ಳನಿಗೆ 0 ಅಂಕ. ತಪ್ಪಾಗಿ ಊಹಿಸಿದರೆ, ಪೊಲೀಸ್‌ ಚೀಟಿ ಹೊಂದಿದ್ದವನಿಗೆ 0 ಅಂಕ. ಕಳ್ಳ ಎಂಬ ಚೀಟಿ ಎತ್ತಿಕೊಂಡೂ ಸಿಕ್ಕಿಬೀಳದವನಿಗೆ 500 ಅಂಕ ದೊರೆಯುತ್ತದೆ.

ಇದೇ ರೀತಿ, ಚೀಟಿಯನ್ನು ಮತ್ತೆ ಮಡಚಿ ಪುನರಾವರ್ತಿಸುತ್ತಾ ಸಾಗಿ, ಕೊನೆಯಲ್ಲಿ ಯಾರು ಜಾಸ್ತಿ ಅಂಕಗಳ ಮೊತ್ತ ಹೊಂದಿರುತ್ತಾರೋ, ಅವರು ಗೆದ್ದಂತೆ. ಜಾಸ್ತಿ ಆಟಗಾರರಿದ್ದರೆ ಸೇವಕ, ಮಂತ್ರಿ ಎಂದೆಲ್ಲ ಚೀಟಿಗಳನ್ನೂ ಹೆಚ್ಚಿಸುತ್ತಾ ಹೋಗಬಹುದು. ರಾಜ ಮಂತ್ರಿಯನ್ನು ಹುಡುಕುವ, ಮಂತ್ರಿ ಸೇವಕನನ್ನು ಹುಡುಕುವ ಆಟವನ್ನೂ ಹಲವು  ಕಡೆ ಆಡುತ್ತಾರೆ. ಇನ್ನು ಕೆಲವರು, ರಾಜ ರಾಣಿಯನ್ನು ಹುಡುಕಿ, ರಾಣಿ ಪೋಲಿಸನನ್ನು, ಪೋಲಿಸ್‌ ಕಳ್ಳನನ್ನು ಹುಡುಕುವ ಆಟವಾಡಿ, ಊಹೆಯಲ್ಲಿ ತಪ್ಪಿದ್ದರೆ ಅವರ ಚೀಟಿಯನ್ನು ಬದಲಾಯಿಸಿಕೊಳ್ಳುವ ಆಟವನ್ನೂ ಆಡುತ್ತಾರೆ. ಹೀಗೆ ಊಹೆ, ಸರಿ, ತಪ್ಪು ಇವುಗಳೊಂದಿಗೆ ಆಟವಾಡುವ ಮಜವೇ ಬೇರೆ.

ಚೀಟಿಯಾಟ, ಕಳ್ಳ- ಪೊಲೀಸ್‌ ಆಟವೆಂದೆಲ್ಲ ನಾನಾ ಹೆಸರುಗಳು ಈ ಆಟಕ್ಕೆ ಇವೆ. ರಜೆಗೆಂದು ಅಜ್ಜಿ ಊರಿಗೆ ಹೋದಾಗ ಹಿಂದೊಮ್ಮೆ ಎಲ್ಲಾ ಮನೆಯ ಮಕ್ಕಳೂ ತಪ್ಪದೇ ಆಡುತ್ತಿದ್ದ ಜನಪ್ರಿಯ ಆಟ ಇದಾಗಿತ್ತು. ಎಷ್ಟೋ ಜನರ ನೋಟ್‌ ಬುಕ್ಕಿನ ಕೊನೆಯ ಪುಟಗಳು ಕಳ್ಳ- ಪೊಲೀಸ್‌ ಆಟದ ಎಂಟ್ರಿಯಿಂದಲೇ ತುಂಬಿರುತ್ತಿದ್ದವು. ಈ ಆಟವನ್ನು ಕೆಲವೊಮ್ಮೆ ಹಾಸ್ಟೆಲ್‌ನಲ್ಲಿ ಆಡುತ್ತಾ ಕುಳಿತು, ಅದಕ್ಕಾಗಿಯೇವಾರ್ಡನ್‌ ಕೈಲಿ ಏಟು ತಿಂದವರ ಸಂಖ್ಯೆ ಅತಿ ಅನ್ನುವಷ್ಟಿದೆ ಎಂದರೆ, ಈ ಆಟದ ಜನಪ್ರಿಯತೆಯನ್ನು ಊಹಿಸಬಹುದು. ರಜೆಯ ಮಜಾ ಸವಿಯಲು, ಬೋರು ಎನ್ನುವ ಮಕ್ಕಳೊಂದಿಗೆ ಸಮಯದ ಸದುಪಯೋಗ ಪಡೆಯಲು, ಒಮ್ಮೆ ಆಡಿನೋಡಿ.

 

 

 -ಸಾವಿತ್ರಿ ಶ್ಯಾನುಭಾಗ

ಟಾಪ್ ನ್ಯೂಸ್

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.