ನೊಂದವರ ನೆರವಿಗೆ ತತ್‌ಕ್ಷಣ ಸ್ಪಂದಿಸಿದ ಒಕ್ಕಲಿಗರ ಸಂಘ


Team Udayavani, Oct 13, 2020, 7:04 PM IST

ನೊಂದವರ ನೆರವಿಗೆ ತತ್‌ಕ್ಷಣ ಸ್ಪಂದಿಸಿದ ಒಕ್ಕಲಿಗರ ಸಂಘ

ಮುಂಬಯಿ, ಅ. 12: ಮುಂಬಯಿ ನಗರಿಗೆ ಬಂದ ಗೌಡ ಸಮಾಜದ ಪ್ರಯತ್ನಶೀಲ ಮಹನೀಯರು ಸಂಘಟನೆಯ ಕನಸೊಂದನ್ನು ಕಂಡರು. ಇದರ ಪರಿಣಾಮ 1998ರಲ್ಲಿ ಸಂಘಟನೆಯನ್ನು ಸ್ಥಾಪಿಸಿದರು. 2000ದ ಸಾಲಿನಲ್ಲಿ ಒಕ್ಕಲಿಗರ ಸಂಘ ಮಹಾರಾಷ್ಟ್ರ ಎಂಬ ಹೆಸರಲ್ಲಿ ಪೂರ್ಣ ಪ್ರಮಾಣದಲ್ಲಿ ಈ ಸಂಘಟನೆಯು ಸಮಾಜ ಸೇವೆಯಲ್ಲಿ ತೊಡಗಿಕೊಂಡಿತು.

ಹಲವಾರು ವರ್ಷಗಳಿಂದ ಸಮಾಜ ಬಾಂಧವರ ಕಷ್ಟ-ಸುಖಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವ ಸಂಘವು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಇನ್ನಿತರ ಕ್ಷೇತ್ರಗಳಲ್ಲಿ ಮಾಡುತ್ತಿರುವ ಸಾಧನೆ ಅಪಾರ. ಅದರಲ್ಲೂ ಆರೇಳು ತಿಂಗಳ ಹಿಂದೆ ಬಂದೆರಗಿದ ಕೋವಿಡ್ ಸೋಂಕು ಮತ್ತು ಲಾಕ್‌ಡೌನ್‌ನಿಂದಾಗಿ ಕಂಗಾಲಾಗಿದ್ದ ಸಮಾಜ ಬಾಂಧವರು ಮಾತ್ರವಲ್ಲದೆ ಮಹಾನಗರದಲ್ಲಿ ನೆಲೆಸಿರುವ ಅನೇಕ ಕನ್ನಡಿಗರು, ಅನ್ಯಭಾಷಿಗರಿಗೂ ನೆರವಿನ ಹಸ್ತವನ್ನು ಚಾಚಿದ ಒಕ್ಕಲಿಗರ ಸಂಘವು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಒಗ್ಗಟ್ಟಿನ ಸೇವೆ :

ಒಕ್ಕಲಿಗ ಸಮಾಜ ಬಾಂಧವರಲ್ಲಿ ಹೆಚ್ಚಿನವರು ವ್ಯಾಪಾರ ಸಹಿತ ಇನ್ನಿತರ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ಸಮಾಜ ಬಾಂಧವರ ಸಂಕಷ್ಟವನ್ನು ಅರಿತ ಸಂಘವು, ಅಧ್ಯಕ್ಷ ಜಿತೇಂದ್ರ ಗೌಡ ಅವರ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರೊಂದಿಗೆ ಒಗ್ಗಟ್ಟಿ ನಿಂದ ಕಾರ್ಯನಿರ್ವಹಿಸಿ ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರಿಗೆ ಲಕ್ಷಾಂತರ ರೂ.ಗಳ  ನೆರವು ಒದಗಿಸಿತು.

ಆಹಾರದ ಕಿಟ್‌ ವಿತರಣೆ :  ಸಮಾಜ ಬಾಂಧವರೂ ಸಹಿತ 610ಕ್ಕೂ ಹೆಚ್ಚು ತುಳು-ಕನ್ನಡಿಗ ಕುಟುಂಬಗಳಿಗೆ ಲಕ್ಷಾಂತರ ರೂ. ಗಳ ಆಹಾರ ಕಿಟ್‌ ವಿತರಿಸಿದ ಹೆಗ್ಗಳಿಕೆ ಸಂಘದ್ದು. ಮುಂಬಯಿ, ಥಾಣೆ, ನವಿಮುಂಬಯಿ, ಪನ್ವೇಲ್‌ ಇನ್ನಿತರ ಪ್ರದೇಶಗಳಲ್ಲಿ ನೆಲೆಸಿರುವ ಸಮಾಜ ಬಾಂಧವರ ಮನೆ ಬಾಗಿಲಿಗೆ ಕಿಟ್‌ಗಳನ್ನು ತಲುಪಿಸಲಾಯಿತು.

ಊರಿಗೆ ತೆರಳುವವರಿಗೆ ನೆರವು :  ಈ ಮಧ್ಯೆ ಕೆಲವರು ಅತೀ ಅಗತ್ಯವಾಗಿ ಊರಿಗೆ ತೆರಳಲು ಬಯಸಿದ್ದನ್ನು ಗಮನಿಸಿದ ಸಂಘದ ಪದಾಧಿಕಾರಿಗಳು, ಸ್ಥಳೀಯ ಎಂಎಸ್‌ಆರ್‌ಟಿಸಿ ಅಧಿ ಕಾರಿಗಳನ್ನು ಸಂಪರ್ಕಿಸಿ ಸಹಕರಿಸಿದರು. ಅಲ್ಲದೆ ಹುಬ್ಬಳ್ಳಿಯಿಂದ ಮುಂಬಯಿಗೆ ಬಸ್‌ಗಳನ್ನು ತರಿಸಿ ಅಗತ್ಯವಿದ್ದವರಿಗೆ ಊರಿಗೆ ಪ್ರಯಾಣಿಸುವ ಅವಕಾಶವನ್ನು  ಕಲ್ಪಿಸಿದರು. ಸರಕಾರದ ಆದೇಶದಂತೆ ಸಾಮಾಜಿಕ ಅಂತರವನ್ನು ಕಾಪಾಡುವಲ್ಲಿ ಮರೆಯಲಿಲ್ಲ.

ಕೊಲ್ಲಾಪುರದಲ್ಲಿ  ಸಿಕ್ಕಿಬಿದ್ದ  34 ಮಂದಿಗೆ ಸಹಾಯ :   ಲಾಕ್‌ಡೌನ್‌ ಸಂದರ್ಭದಲ್ಲಿ ಮಕ್ಕಳು ಸಹಿತ ಸುಮಾರು 34 ಮಂದಿ ಕನ್ನಡಿಗರು ಕೊಲ್ಲಾಪುರದಲ್ಲಿ ಸಿಕ್ಕಿಕೊಂಡಿದ್ದು, ಅತ್ತ ಊರಿಗೂ ಹೋಗಲಾ ರದೆ, ಇತ್ತ ಮುಂಬಯಿಗೂ ಆಗಮಿಸಲಾರದೆ ಇಕ್ಕಟ್ಟಿಗೆ ಸಿಲುಕ್ಕಿದ್ದರು. ಈ ಸಂದರ್ಭದಲ್ಲಿ ಅವರ ನೆರವಿಗೆ ಧಾವಿಸಿದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಅಲ್ಲಿನ ಕೆಲವು ಗಣ್ಯರನ್ನು ಸಂಪರ್ಕಿಸಿ ಅವರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾದರು.

ಶಾಸಕ-ಸಚಿವರೊಂದಿಗೆ ನಿರಂತರ ಸಂಪರ್ಕ :

ಈ ಎಲ್ಲ ಕಾರ್ಯಗಳಿಗಾಗಿ ಮಂಡ್ಯ, ಹಾಸನ ಹಾಗೂ ಮೈಸೂರು ಜಿಲ್ಲೆಯ ನಾಲ್ವರು ಶಾಸಕರು ಹಾಗೂ ಸಚಿವರಾದ ಡಾ| ಕೆ. ಸಿ. ನಾರಾಯಣ ಗೌಡ, ಶಾಸಕರಾದ ಬಾಲಕೃಷ್ಣ ಗೌಡ, ಸಿ. ಎಸ್‌. ಪುಟ್ಟರಾಜು ಇವರೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಸಂಘವು ಕಾರ್ಯನಿರ್ವಹಿಸಿದೆ. ಅಗತ್ಯ ಸಂದರ್ಭದಲ್ಲಿ ಸಚಿವ ಡಾ| ಕೆ. ಸಿ. ನಾರಾಯಣ ಗೌಡ ಅವರು ಸಮಾಜ ಬಾಂಧವರಿಗೆ ನೆರವನ್ನು ನೀಡಿದ್ದಾರೆ.

ಕಾರ್ಯಕಾರಿ ಸಮಿತಿಯ ಸಮಯೋಚಿತ ಸೇವೆ :  

ಸಂಘದ ಕೋಶಾಧಿ ಕಾರಿ ದೀಪಕ್‌ ಆರ್‌. ಗೌಡ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಕುಮಾರ್‌ ಆರ್‌. ಗೌಡ, ಚೌಡಪ್ಪ ಗೌಡ, ಸುನಿಲ್‌ ಬಿ. ಗೌಡ, ಯೋಗೇಶ್ವರ್‌ ಗೌಡ, ಮಂಜ ಗೌಡ, ರಮೇಶ್‌ ಗೌಡ, ನಟೇಶ್‌ ಗೌಡ, ಮುತ್ತಣ್ಣ ಗೌಡ ಅಲ್ಲದೆ ಆಹಾರ ಸಾಮಗ್ರಿಗಳ ವಿತರಣೆಯಲ್ಲಿ ಸಂದೀಪ್‌ ಗೌಡ, ಸಂದೀಪ್‌ ಪಸಿ, ರಮೇಶ್‌ ಗೌಡ, ಚೇತು ಗೌಡ, ಸತೀಶ್‌ ಗೌಡ, ಮಂಜು ಗೌಡ, ಭಾರತಿ ಗೌಡ, ಮಂಜಣ್ಣ ಗೌಡ, ಕೃಷ್ಣ ಗೌಡ ಮತ್ತು ಇತರ ಅನೇಕ ಸದಸ್ಯರು ಸಹಕರಿಸಿದ್ದಾರೆ.

ತಡರಾತ್ರಿಯವರೆಗೂ  ಜನಸೇವೆಗೈದ ಕಾರ್ಯಕರ್ತರು  :

ಸಂಘದ ಕಾರ್ಯಕರ್ತರು ಸಮಾಜ ಬಾಂಧವರು, ತುಳು – ಕನ್ನಡಿಗರು ಯಾವ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿ ಕಲೆ ಹಾಕಿ, ನೆರವು ಒದಗಿಸಲಾಯಿತು. ಸಮಿತಿಯ ಎಲ್ಲ ಸದಸ್ಯರು ಕೊರೊನಾ ಭಯದ ಮಧ್ಯೆ ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸಿ, ಬಿಡುವಿಲ್ಲದೆ ತಡರಾತ್ರಿ ತನಕ ಈ ಸೇವೆಯಲ್ಲಿ ನಿರತರಾಗಿದ್ದರು.

ನಮ್ಮ ಸಮಾಜದಲ್ಲಿ ಅನೇಕರು ಹೊಟೇಲ್‌ ಕಾರ್ಮಿಕರು, ಸಣ್ಣ ವ್ಯಾಪಾರಿಗಳಿದ್ದು, ದೈನಂದಿನ ಖರ್ಚಿಗೆ ಬೇಕಾದಷ್ಟು ಮಾತ್ರ ಸಂಪಾದಿಸುತ್ತಿದ್ದು ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಇದರಲ್ಲೂ ಹೆಚ್ಚಿನವರು ಮುಂಬಯಿ, ನವಿಮುಂಬಯಿ, ಥಾಣೆ ಹಾಗೂ ಪಾಲ^ರ್‌ ಜಿಲ್ಲೆಯಲ್ಲಿದ್ದು, ಅವರವರ ಪರಿಸರದಲ್ಲಿರುವ ನಮ್ಮ ಸಂಘದ ಪ್ರಮುಖರು ಇವರನ್ನು ಸಂಪರ್ಕಿಸಿ ಕಿಟ್‌ ಅನ್ನು ವಿತರಿಸಿದರು. ಈಗಾಗಲೇ ಸಂಘದ ವತಿಯಿಂದ ಇದಕ್ಕೆ ಲಕ್ಷಾಂತರ ರೂ. ಗಳನ್ನು ಖರ್ಚು ಮಾಡಲಾಗಿದ್ದು, ಈ ತನಕ ಯಾರಿಂದಲೂ ದೇಣಿಗೆ ಪಡೆಯಲಿಲ್ಲ. ಸಂಘದ ವತಿಯಿಂದ ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ಬೀದಿ ಬದಿಯ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ. ಇದರಲ್ಲಿ ಅನೇಕರು ಕನ್ನಡಿಗರಾಗಿದ್ದು, ಸಣ್ಣ ಪುಟ್ಟ ವ್ಯಾಪಾರಗಳಾದ ದೋಸೆ, ಇಡ್ಲಿ ಮುಂತಾದವುಗಳನ್ನು ತಯಾರಿಸಿ ಮಾರಾಟ ಮಾಡಿ ಬದುಕುತ್ತಿದ್ದಾರೆ. ಈ ಎಲ್ಲ ಕೆಲಸಗಳನ್ನು ಯಶಸ್ವಿಗೊಳಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞನಾಗಿದ್ದೇನೆ. -ಜಿತೇಂದ್ರ ಗೌಡ  ಅಧ್ಯಕ್ಷರು, ಒಕ್ಕಲಿಗರ ಸಂಘ ಮಹಾರಾಷ್ಟ್ರ

ಟಾಪ್ ನ್ಯೂಸ್

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

The Election Commission banned the BJP candidate from campaigning for 24 hours

W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ

17

Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Kottigehara ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Kottigehara ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

World Mother’s Day 2024: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!

Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!

ಕರ್ನಾಟಕ ಸಂಘ ಕತಾರ್‌: ವಾರ್ಷಿಕ ಸಂಭ್ರಮ ವಸಂತೋತ್ಸವ-24 ಆಚರಣೆ

ಕರ್ನಾಟಕ ಸಂಘ ಕತಾರ್‌: ವಾರ್ಷಿಕ ಸಂಭ್ರಮ ವಸಂತೋತ್ಸವ-24 ಆಚರಣೆ

Desi Swara: ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಅರಿಯೋಣ

Desi Swara: ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಅರಿಯೋಣ

Desi Swara: ಸಿರಿಗನ್ನಡ ಮ್ಯೂನಿಕ್‌: ನವವರ್ಷವನ್ನು ಹರುಷದಿ ಸ್ವಾಗತಿಸಿದ ಸಿರಿಗನ್ನಡಿಗರು

Desi Swara: ಸಿರಿಗನ್ನಡ ಮ್ಯೂನಿಕ್‌: ನವವರ್ಷವನ್ನು ಹರುಷದಿ ಸ್ವಾಗತಿಸಿದ ಸಿರಿಗನ್ನಡಿಗರು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

The Election Commission banned the BJP candidate from campaigning for 24 hours

W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ

17

Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.