ಲ್ಯಾಪ್‌ಟಾಪ್‌ಬಾಳಿಕೆಗೆ ಪಂಚ ಸೂತ್ರಗಳು


Team Udayavani, Nov 30, 2020, 3:41 PM IST

laptop

ಸಾಂದರ್ಭಿಕ ಚಿತ್ರ

ಕೋವಿಡ್ ನ ಕಾರಣದಿಂದ ಈಗ ಹೆಚ್ಚಿನವರಿಗೆ ಮನೆಯಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಆ ನೆಪದಲ್ಲಿ ಎಲ್ಲರಿಗೂ ಲ್ಯಾಪ್‌ ಟಾಪ್‌ನ ಬಳಕೆ ಅನಿವಾರ್ಯ ಮತ್ತು ಅಗತ್ಯವಾಗಿದೆ. ಲ್ಯಾಪ್‌ ಟಾಪ್‌ಗ್ಳು ವೇಗವಾಗಿ ಆಪರೇಟ್‌ ಆಗಬೇಕು ಮತ್ತು ದೀರ್ಘ‌ಕಾಲ ಬಾಳಿಕೆ ಬರಬೇಕು ಅನ್ನುವುದು ಎಲ್ಲರ ಆಸೆ. ಹೀಗೆ ಆಗಬೇಕೆಂದರೆ, ಇಲ್ಲಿ ನೀಡಲಾಗಿರುವ ಮಾರ್ಗದರ್ಶಿ ಸೂತ್ರಗಳನ್ನು ತಪ್ಪದೇ ಪಾಲಿಸಬೇಕು.

1. ಲ್ಯಾಪ್‌ ಟಾಪನ್ನು ಇಡೋದೆಲ್ಲಿ ?

ಇದೆಂಥಾ ಪ್ರಶ್ನೆ? ಹೆಸರಲ್ಲೇ  ಇದೆಯಲ್ಲಾ, ಇದನ್ನು ತೊಡೆ ಮೇಲೆ ಇಟ್ಟುಕೊಳ್ಳೋದು ಅಂದಿರಾ? ಆ ಗ್ರಹಿಕೆ ತಪ್ಪು! ಲ್ಯಾಪ್‌ಟಾಪಿನಕೆಳಗಿರೋ ಫ್ಯಾನುಗಳಿಂದ ಬಿಸಿಯಾದ ಗಾಳಿ ಹೊರಬರುತ್ತಿರುತ್ತೆ. ಹೆಚ್ಚು ಹೊತ್ತು ಇದನ್ನು ತೊಡೆಗಳ ಮೇಲೆ ಇಟ್ಟರೆ ಚರ್ಮ ಸುಡುತ್ತೆ! ಇದನ್ನ ದಿಂಬು ಅಥವಾ ಹಾಸಿಗೆಯ ಮೇಲೆ ಇಟ್ಟರೆ ಇದರಕೆಳಗಿನ ಫ್ಯಾನುಗಳಿಂದ ಗಾಳಿ ಹೊರಹೋಗೋಕೆ ಸರಿಯಾಗದೇ ಲ್ಯಾಪ್‌ಟಾಪ್‌ ಬೇಗ ಬಿಸಿಯಾಗುತ್ತೆ. ಲ್ಯಾಪ್‌ ಟಾಪ್‌ ಬಿಸಿಯಾಗಿ ಹೆಚ್ಚೆಚ್ಚು ಹೊತ್ತು ಇದ್ದಷ್ಟೂ ಅದರ ಬ್ಯಾಟರಿ ಮತ್ತು ಒಳಗಿನ ಸಕೀìಟುಗಳ ಬಾಳಿಕೆಕಮ್ಮಿಯಾಗುತ್ತೆ. ಹಾಗಾಗಿ ಗಾಳಿ ಸೂಕ್ತವಾಗಿ ಆಡುವಂತಹ ಟೇಬಲ್ಲಿನ ಮೇಲೋ, ಲೆಟರ್‌ ಪ್ಯಾಡಿನ ಮೇಲೋ ಇಟ್ಟು ಬಳಸೋದು ಉತ್ತಮ

2.ಪಾಸ್‌ವರ್ಡ್‌

ಮನೆಗೆ ಬೀಗ ಹೇಗೆ ಮುಖ್ಯವೋ ಲ್ಯಾಪ್‌ಟಾಪ್‌ಗೆ ಪಾಸ್‌ವರ್ಡೂ ಅಷ್ಟೇ ಮುಖ್ಯ. ಪ್ರತೀ ಸಲ ಲಾಗಿನ್‌ ಆಗುವಾಗಲೂ ಪಾಸ್‌ವರ್ಡ್‌ ಕೊಡೋದು ಹಿಂಸೆ ಅಂತಕೆಲವೊಬ್ಬರು ಪಾಸ್‌ವರ್ಡ್‌ ಅನ್ನೇ ಇಟ್ಟಿರೋಲ್ಲ, ಇಟ್ಟರೂ ಪಾಸ್‌ವರ್ಡ್‌ ಅಂತಲೋ  ವೆಲ್‌ಕಂ ಅಂತಲೋ, ಅವರ ಹುಟ್ಟಿದ ದಿನಾಂಕವನ್ನೋ ಪಾಸ್‌ವರ್ಡ್‌ ಆಗಿ ಇಟ್ಟಿರುತ್ತಾರೆ. ಇದನ್ನು ಯಾರು ಬೇಕಾದರೂಊಹಿಸಬಹುದು. ಹಾಗಾಗಿ ಯಾರೂಊಹಿಸಲಾಗದಕ್ಲಿಷ್ಟಕರವಾದ ಪಾಸ್‌ವರ್ಡ್‌ ಒಂದನ್ನು ಇಡೋದು, ಇಟ್ಟಿರೋ ಪಾಸ್‌ವರ್ಡನ್ನು ಆಗಾಗ ಬದಲಿಸುವುದು ಅತೀ ಅಗತ್ಯ.

ಇದನ್ನೂ ಓದಿ:ಜನಾಕರ್ಷಿಸಿದ ಗೋಪಿಚಂದ್‌ ಛಾಯಾಚಿತ್ರ ಪ್ರದರ್ಶನ

3. ಡೆಸ್ಕ್ಟಾಪ್‌ ಮತ್ತು ಬೇರೆ ಡ್ರೈವ್‌ ಬಳಕೆ

ಕಂಪ್ಯೂಟರ್‌ ಬಳಸೋ ಸುಮಾರು ಜನ ದಿನದಕೆಲಸಕ್ಕೆ ಬೇಕಾದ ವರ್ಡ್‌ ಡಾಕ್ಯುಮೆಂಟ್ , ಎಕ್ಸೆಲ್‌ ಫೈಲು, ಪಿಡಿಎಫ್ ಫೈಲುಗಳನ್ನಕಂಪ್ಯೂಟರಿನ ಡೆಸ್ಕ್  ಟಾಪ್‌ ನ ಮೇಲೇ ಇಟ್ಟುಬಿಡುತ್ತಾರೆ. ಒಳಗೆಲ್ಲೋ ಫೋಲ್ಡರ್‌ ಒಳಗೆ ಇಟ್ಟರೆ ಬೇಕೆಂದಾಗ ಹುಡುಕೋದು ತಲೆನೋವು ಅಂತ ಎಲ್ಲವನ್ನೂ ಡೆಸ್ಕ್  ಟಾಪ್‌ನಲ್ಲಿ ಇಡೋದು ಯೋಗ್ಯವಲ್ಲ. ಡೆಸ್ಕ್ ಟಾಪಿನಲ್ಲಿರೋದು ನಿಮ್ಮ ಲ್ಯಾಪ್‌ಟಾಪಿನ ಸಿ ಡ್ರೈವಿನ ಮೇಲಿರುತ್ತೆ. ಸಿ ಡ್ರೈವಿನಲ್ಲಿ ಹೆಚ್ಚೆಚ್ಚು ಫೈಲುಗಳನ್ನ ತುಂಬಿದಂತಂತೆಲ್ಲಾ ಕಂಪ್ಯೂಟರಿನ ವೇಗಕಮ್ಮಿಯಾಗುತ್ತಾ ಹೋಗುತ್ತೆ. ಹಾಗಾಗಿ ತೀರಾ ಅಗತ್ಯವಿದ್ದದ್ದನ್ನು ಮಾತ್ರ ಡೆಸ್ಕ್ ಟಾಪಿನ ಮೇಲಿಡಿ. ಉಳಿದದ್ದನ್ನೆಲ್ಲಾ ಲ್ಯಾಪ್‌ಟಾಪಿನ ಬೇರೆ ಡ್ರೈವುಗಳಲ್ಲಿ ಸೂಕ್ತ ಹೆಸರಿನ ಫೋಲ್ಡರ್‌ ಮಾಡಿ ಹಾಕಿಡಿ.

4. ಎಲ್ಲಕ್ಕೂ ಸಿ ಡ್ರೈವ್‌ ಸೂಕ್ತವಲ್ಲ ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್‌

ಮಾಡೋಕೆ ನೋಡೋ ತಂತ್ರಾಂಶಗಳನ್ನೆಲ್ಲಾ ಸಿ ಡ್ರೈವಿನಲ್ಲೇ ಇನ್‌ ಸ್ಟಾಲ್‌ ಆಗೋಕೆ ನೋಡುತ್ತೆ. ಕಂಪ್ಯೂಟರಿನಲ್ಲಿ ಫೋಟೋಸ್‌, ವಿಡಿಯೋಸ್‌ ಅಂತ ಇರೋ ಫೋಲ್ಡರ್‌ ಕೂಡ ಡ್ರೈವಿನಲ್ಲೇ ಇರುತ್ತೆ! ಸುಮಾರು ಜನ ಫೋಟೋ-  ವಿಡಿಯೋಗಳನ್ನು ಈ ಫೋಲ್ಡರುಗಳಲ್ಲಿಟ್ಟು ಲ್ಯಾಪ್‌ಟಾಪ್‌ ನಿಧಾನವಾಯ್ತು ಅಂತ ಒದ್ದಾಡುತ್ತಾರೆ. ಹಾಗಾಗಿ ಲ್ಯಾಪ್‌ ಟಾಪಿನಲ್ಲಿ ಡಿ, ಇ, ಎಫ್ ಮುಂತಾರ ಪಾರ್ಟಿಷನ್‌ ಮಾಡಿ ಒಂದನ್ನು ಸಾಫ್ಟ್ವೇರ್‌ಗಳ ಸಂಗ್ರಹಕ್ಕೆ, ಇನ್ನೊಂದು ಸಂಗೀತ, ಫೋಟೋ ಮುಂತಾದವು ಗಳ ಸಂಗ್ರಹಕ್ಕೆ ಮತ್ತೂಂದು ಇತರೇಕಡತಗಳ ಸಂಗ್ರಹಕ್ಕೆ ಅಂತ ವಿಂಗಡಿಸಿಟ್ಟು ಕೊಂಡರೆ, ನಿಮಗೆ ಬೇಕಾದದ್ದನ್ನು ಬೇಕಾದಾಗ ವೇಗವಾಗಿ ಹುಡುಕಬಹುದು.

5. ದಿನನಿತ್ಯದ ಶಟ್‌ಡೌನ್‌

ನಮಗೆ ನಿದ್ದೆ ಹೇಗೆ ಅಗತ್ಯವೋ ಹಾಗೆ ಲ್ಯಾಪ್‌ಟಾಪ್‌ಗೆ ಶಟ್‌ ಡೌನು. ನಿಮ್ಮ ದೈನಂದಿನಕೆಲಸಗಳನ್ನು ಮುಗಿಸಿದ ನಂತರ, ತೆರೆದ ಫೈಲುಗಳನ್ನೆಲ್ಲಾ ಮುಚ್ಚಿ ಲ್ಯಾಪ್‌ಟಾಪ್‌ ಅನ್ನು ಶಟ್‌ಡೌನ್‌ ಮಾಡೋದು, ಮತ್ತೆ ಮಾರನೇ ದಿನ ಲ್ಯಾಪ್‌ಟಾಪ್‌ ಅನ್ನು ಹೊಸದಾಗಿ ಸ್ಟಾರ್ಟ್‌ ಮಾಡೋದು ಅತೀ ಅಗತ್ಯ. ಕೆಲವರು ಮತ್ತೆ ಯಾರು ಫೈಲುಗಳನ್ನು ತೆಗೆಯುತ್ತಾರೆ ಅಂತ ಫೈಲುಗಳನ್ನು,ಲ್ಯಾಪ್‌ ಟಾಪ್‌ ಅನ್ನು ದಿನಗಟ್ಟಲೇ ಹಾಗೇ ಇಟ್ಟಿರುತ್ತಾರೆ. ಹೀಗೆ ಶಟ್‌ಡೌನೇ ಮಾಡದಿದ್ದರೆ ನಿಧಾನವಾಗಿ ಲ್ಯಾಪ್‌ ಟಾಪಿನ ವೇಗಕುಂದುತ್ತಾ ಬರುತ್ತೆ.

„ ಪ್ರಶಸ್ತಿ. ಪಿ

ಟಾಪ್ ನ್ಯೂಸ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.