ಅವಳು, ಇ-ಟೀಚರ್‌ ಆಗಿಯೂ ಗೆದ್ದಳು!


Team Udayavani, Feb 10, 2021, 6:57 PM IST

ಅವಳು, ಇ-ಟೀಚರ್‌ ಆಗಿಯೂ ಗೆದ್ದಳು!

ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬುದು ನಮಗೆ ತಿಳಿದಿರುವ ನುಡಿ. ಈ ಶೈಕ್ಷಣಿಕ ವರ್ಷಕ್ಕೆ ಸರಿಹೊಂದುವ ನುಡಿ ಎಂದರೆ: ಮನೆಯೇ ದಿನದ ಪಾಠಶಾಲೆ, ಆನ್‌ಲೈನ್‌ ಶಿಕ್ಷಕಿಯೇ ಇ- ಗುರು. ಕೋವಿಡ್ ಕಾಟದ ಕಾಲದಲ್ಲೂ ಕಲಿಕೆ-ಕಲಿಸುವಿಕೆ ನಡೆದೇಹೋಯಿತು. ಈ ಕಲಿಸುವಿಕೆಯ ಜವಾಬ್ದಾರಿ ಹೊತ್ತವರು, ಲೆಕ್ಕಕ್ಕೆ ಸಿಗದ ಅದೆಷ್ಟೋ ಶಿಕ್ಷಕರು. ಹೀಗೆ ಆನ್‌ಲೈನ್‌ ತರಗತಿಯಲ್ಲಿ ಪಾಠ ಹೇಳಿದವರಲ್ಲಿ ಮಹಿಳೆಯರ ಸಂಖ್ಯೆಯೇ ದೊಡ್ಡದಿತ್ತು.

ಮನೆಯಲ್ಲಿನ ಕೆಲಸ ಕಾರ್ಯಗಳ ನಡುವೆ, ನಿರ್ದಿಷ್ಟ ಸಮಯಕ್ಕೆ, ನಿರ್ದಿಷ್ಟ ತರಗತಿಯವರಿಗೆ ಪಾಠ ಹೇಳಿಕೊಡುವುದು ಸುಲಭದ ಮಾತಲ್ಲ. ಇಷ್ಟು ದಿನ ಶಾಲೆ- ಕಾಲೇಜುಗಳಲ್ಲಿ ಕಪ್ಪು ಹಲಗೆಯ ಮುಂದೆ ನಿಂತು ಪಾಠ ಹೇಳುತ್ತಿದ್ದವರು, ಬದಲಾದ ಪರಿಸ್ಥಿತಿಯಲ್ಲಿ ಕಂಪ್ಯೂಟರ್‌, ಲ್ಯಾಪ್‌ ಟಾಪ್‌ ಮುಂದೆ ಕುಳಿತು ಪಾಠ ಹೇಳಿಕೊಟ್ಟು, ನಮ್ಮಿಂದ ಇದೂ ಸಾಧ್ಯ ಎಂದು ತೋರಿಸಿದ್ದಾರೆ. ಎಷ್ಟೋ ಶಿಕ್ಷಕರಿಗೆ ಕಂಪ್ಯೂಟರ್‌ ಬಳಸುವುದರಲ್ಲಿ ಪರಿಣಿತಿ ಇರಲಿಲ್ಲ. ಅಂಥವರೂ ಸಹ ಕಲಿತು, ಬಳಸಿದ್ದಾರೆ.

ಇದರ ಜೊತೆ ಇಂಟರ್ನೆಟ್‌ ಅಡೆ ತಡೆ, ಹೊಸ ಸಾಫ್ಟ್ ವೇರ್‌ಗಳ ಬಳಕೆ, ವಿದ್ಯುತ್‌ ವ್ಯತ್ಯಯದಂತಹ ಸಮಸ್ಯೆಗಳ ಮಧ್ಯೆಯೂ ಕೆಲಸ ನಿರ್ವಹಿಸಿದ್ದಾರೆ. ಶಾಲೆ- ಕಾಲೇಜುಗಳಲ್ಲಿ ಮುಖಾಮುಖೀ ಪಾಠ ಹೇಳಿಕೊಡುವುದೇ ಕೆಲವೊಮ್ಮೆ ಕಷ್ಟ. ಅಂತಹುದರಲ್ಲಿ ಕ್ಯಾಮರಾ ಕಣ್ಣಿನ ಮೂಲಕ ಪಾಠ ಹೇಳಿ, ಪ್ರಶ್ನೆಗಳನ್ನು ಕೇಳಿ, ಹೋಂ ವರ್ಕ್‌ ಕೊಟ್ಟು, ನಂತರ ಮಕ್ಕಳು ಅಪ್ಲೋಡ್‌ ಮಾಡಿರುವ ಹೋಂ ವರ್ಕ್‌ ಅನ್ನು ಒಂದೊಂದಾಗಿ ಡೌನ್ಲೌಡ್‌ ಮಾಡಿ, ಸರಿಯಿದೆಯೇ ಎಂದು ನೋಡಿ, ತಪ್ಪಿದ್ದರೆ ಅದನ್ನು ಸರಿಮಾಡಲು ಹೇಳುವುದು… ಅಬ್ಟಾ! ಇಷ್ಟೆಲ್ಲಾ ಕೆಲಸ. ಪಾಠಕ್ಕೆ ಸಂಬಂಧಿಸಿದ ಆಫ್‌ಲೈನ್‌ ವಿಡಿಯೋಗಳನ್ನು ಮಾಡುವಾಗ ಶಿಕ್ಷಕರು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಹೊರಗಿನ ಶಬ್ಧ ಆದಷ್ಟೂ ಕೇಳದಂತೆ ನೋಡಿಕೊಳ್ಳಬೇಕು. ಕುಕ್ಕರ್‌ ಶಬ್ಧ ಇರಬಹುದು, ರಸ್ತೆಯಲ್ಲಿ ವಾಹನಗಳ ಸದ್ದು, ತರಕಾರಿ ವ್ಯಾಪಾರಿಗರ ಕೂಗು… ಹೀಗೆ ಇನ್ನು ಹಲವು. ಎಷ್ಟೋ ಬಾರಿ ಸರಿಯಾಗಿ ಬರುವವರೆಗೂ ಮಾಡಬೇಕಾಗುತ್ತದೆ. ಇದರ ಮಧ್ಯೆ ಆ ಶಿಕ್ಷಕಿಯು ಮನೆಯಲ್ಲಿರುವ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೂ ಗಮನ

ಕೊಡಬೇಕಿತ್ತು… ಮಕ್ಕಳಂತೂ ಪಾಠ ನಡೆಯುವಾಗ ಮ್ಯಾಮ್‌ ಕೇಳಿಸ್ತಿಲ್ಲ, ಮ್ಯಾಮ್‌ ಕಾಣಿಸ್ತಿಲ್ಲ ಅನ್ನುತ್ತಿದ್ದರು. ಅದಕ್ಕೆ ಸಮಾಧಾನದಿಂದಲೇ ಉತ್ತರಿಸುತ್ತ, ಪಾಠಕ್ಕೆ ಪೂರಕವಾದ ವಸ್ತುಗಳನ್ನು ಮನೆಯಲ್ಲಿಯೇ ಸ್ವತಃ ಮಾಡಿ ತೋರಿಸಿ, ಅರ್ಥ ಮಾಡಿಸುವಲ್ಲಿ ಶಿಕ್ಷಕಿಯರು ಸಫಲರಾಗಿದ್ದಾರೆ. ಎಷ್ಟೋ ಕಡೆ ಅವರಿಗೆ ಸಿಗಬೇಕಾದ ಪೂರ್ಣ ವೇತನ ಸಿಕ್ಕಿಲ್ಲ ಆದರೂ ಮಕ್ಕಳ ಹಿತಾಸಕ್ತಿಯ ದೃಷ್ಟಿಯಿಂದ ಅವರು ಕೆಲಸ ನಿರ್ವಹಿಸಿದ್ದಾರೆ. ಆ ಮೂಲಕ ಹೆಣ್ಮಕ್ಳು ಸ್ಟ್ರಾಂಗ್‌ ಗುರೂ ಎಂದು ಮತ್ತೂಮ್ಮೆ ಸಾರಿ ಹೇಳಿದ್ದಾರೆ.

 

-ಶ್ರೀಲಕ್ಷ್ಮೀ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.