ರಚನಾತ್ಮಕ ನೆಲೆಯತ್ತ ಸಾಗುವುದು ಅವಶ್ಯ: ಅಪಾಯಕಾರಿ ಕಾನೂನು 


Team Udayavani, Aug 25, 2018, 6:00 AM IST

16.jpg

ಸೋಷಿಯಲ್‌ ಮೀಡಿಯಾ ಜನಪ್ರಿಯಗೊಂಡ ಬಳಿಕ ಧಾರ್ಮಿಕ ಅವಹೇಳನದ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅಲ್ಲದೆ ಧರ್ಮ ನಿಂದನೆಯ ಸುಳ್ಳು ಪ್ರಕರಣಗಳು ಕೂಡಾ ದಾಖಲಾಗುತ್ತಿರುತ್ತವೆ. 

ಪಂಜಾಬಿನ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ನೇತೃತ್ವದ ಸರಕಾರದ ಸಚಿವ ಸಂಪುಟ ಸಭೆ ಭಾರತೀಯ ದಂಡ ಸಂಹಿತೆಯಲ್ಲಿರುವ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವವರನ್ನು ಶಿಕ್ಷಿಸುವ ನಿಯಮಕ್ಕೆ ಹೊಸದೊಂದು ತಿದ್ದುಪಡಿ ತರಲು ಅನುಮತಿಸಿದೆ. ವಿವಿಧ ಧರ್ಮಗಳ ಧಾರ್ಮಿಕ ಗ್ರಂಥಗಳಾದ ಗುರುಗ್ರಂಥ ಸಾಹಿಬ್‌, ಭಗವದ್ಗೀತೆ, ಕುರಾನ್‌ ಮತ್ತು ಬೈಬಲ್‌ ಗ್ರಂಥಗಳಿಗೆ ಯಾರಾದರೂ ಹಾನಿ ಮಾಡಿದರೆ ಅಥವಾ ಅಪಚಾರ ಎಸಗಿದವರಿಗೆ ಜೀವಾವಧಿ ಶಿಕ್ಷೆ ವಿಧಿಸುವುದು ಈ ತಿದ್ದುಪಡಿಯ ಉದ್ದೇಶ.  

ಭಾರತೀಯ ದಂಡಸಂಹಿತೆಗೆ 295ಎಎ ಎಂಬ ಹೊಸದೊಂದು ಸೆಕ್ಷನ್‌ ಸೇರಿಸುವ ಮೂಲಕ ಸರಕಾರ ರಾಜ್ಯದಲ್ಲಿ ಧರ್ಮನಿಂದನೆ ಮಾಡಿದವರಿಗೆ ಜೀವಾವಧಿ ಶಿಕ್ಷೆ ನೀಡಲು ಮುಂದಾಗಿದೆ. ಈಗಾಗಲೇ ಭಾರತೀಯ ದಂಡಸಂಹಿತೆಯಲ್ಲಿರುವ 295ಎ ಸೆಕ್ಷನ್‌ನಲ್ಲಿ ಧರ್ಮ ನಿಂದನೆ ವಿರುದ್ಧ ಕ್ರಮ ಕೈಗೊಳ್ಳಲು ಸಾಕಷ್ಟು ಅವಕಾಶವಿದ್ದರೂ ಪಂಜಾಬ್‌ ಸರಕಾರ ಮತ್ತಷ್ಟು ಕಠಿನಗೊಳಿಸಲು ಹೊರಟಿರುವುದಕ್ಕೆ ಟೀಕೆ ವ್ಯಕ್ತವಾಗಿದೆ. 

ಯಾವುದೇ ಧರ್ಮವನ್ನು ಅವಹೇಳನ ಮಾಡುವುದು ಅಥವಾ ಧಾರ್ಮಿಕ ಗ್ರಂಥಗಳಿಗೆ ಅಪಚಾರ ಎಸಗುವುದು ಶಿಕ್ಷಾರ್ಹ ಅಪರಾಧ ಎನ್ನುವುದು ಸರಿ. ಆದರೆ ಇಂಥ ಪ್ರಕರಣಗಳಿಗೆ ಜೀವಾವಧಿಯಂಥ ಶಿಕ್ಷೆ ವಿಧಿಸಬೇಕೇ ಎಂಬುದು ಚರ್ಚೆಗೀಡಾಗಿರುವ ಅಂಶ. ಈ ಮಾದರಿಯ ಕಾನೂನು ದುರುಪಯೋಗವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಅಮರೀಂದರ್‌ ಸಿಂಗ್‌ ಸರಕಾರ ಇನ್ನಷ್ಟು ಚಿಂತನ-ಮಂಥನ ನಡೆಸುವ ಅಗತ್ಯವಿತ್ತು.  

ಹಾಗೆಂದು ಇದು ಈ ಸರಕಾರದ ಪರಿಕಲ್ಪನೆಯಲ್ಲ. ಹಿಂದಿನ ಅಕಾಲಿದಳ-ಬಿಜೆಪಿ ಮೈತ್ರಿ ಸರಕಾರ ಸಿಕ್ಖರ ಧರ್ಮಗ್ರಂಥವಾಗಿರುವ ಗುರುಗ್ರಂಥ ಸಾಹಿಬ್‌ನ ಕೆಲವು ಪುಟಗಳು ದಾರಿ ಬದಿಯಲ್ಲಿ ಸಿಕ್ಕಿದ ಬಳಿಕ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಗುರುಗ್ರಂಥ ಸಾಹಿಬ್‌ಗ ಅಪಚಾರ ಎಸಗಿದವರಿಗೆ ಕಠಿನ ಶಿಕ್ಷೆ ವಿಧಿಸುವ ಮಸೂದೆಯನ್ನು ಅಂಗೀಕರಿಸಿತ್ತು. ರಾಜ್ಯದಲ್ಲಿ ಮಂಜೂರಾದ ಈ ಮಸೂದೆಯನ್ನು ಕೇಂದ್ರ ಜಾತ್ಯತೀತ ತತ್ವಕ್ಕೆ ಇದರಿಂದ ಧಕ್ಕೆಯಾಗಬಹುದು ಎಂಬ ಅಭಿಪ್ರಾಯ ಪಟ್ಟು ವಾಪಸು ಕಳುಹಿಸಿತ್ತು. ಇದೀಗ ಹೊಸ ಸರಕಾರ ಇನ್ನೂ ಕೆಲವು ಧರ್ಮಗಳ ಗ್ರಂಥವನ್ನು ಕಾನೂನು ವ್ಯಾಪ್ತಿಗೆ ಸೇರಿಸಿಕೊಂಡು ಅದಕ್ಕೊಂದು ಜಾತ್ಯಾತೀತ ಸ್ವರೂಪ ನೀಡಿ ಜಾರಿಗೊಳಿಸಲು ಮುಂದಾಗಿದೆ. 

ದೇಶದಲ್ಲಿ ಧಾರ್ಮಿಕ ಅವಹೇಳನ ಪ್ರಕರಣಗಳು ಆಗಾಗ ನಡೆಯುತ್ತಿರುತ್ತದೆ. ಸೋಷಿಯಲ್‌ ಮೀಡಿಯಾ ಜನಪ್ರಿಯಗೊಂಡ ಬಳಿಕ ಇಂಥ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅಲ್ಲದೆ ಧರ್ಮ ನಿಂದನೆಯ ಸುಳ್ಳು ಪ್ರಕರಣಗಳು ಕೂಡಾ ದಾಖಲಾಗುತ್ತಿರುತ್ತವೆ. ಯಾರನ್ನಾದರೂ ಸಿಕ್ಕಿಸಿ ಹಾಕಬೇಕೆಂದು ಉದ್ದೇಶಪೂರ್ವಕವಾಗಿ ಧರ್ಮ ನಿಂದನೆ ಕೇಸು ದಾಖಲಾಗುವುದೂ ಇದೆ. ಇಂಥ ಸಂದರ್ಭದಲ್ಲಿ ಕಾನೂನು ದುರುಪಯೋಗವಾಗುವುದಿಲ್ಲ ಎನ್ನುವುದಕ್ಕೆ ಯಾವ ಖಾತರಿಯೂ ಇಲ್ಲ. ಧರ್ಮಕ್ಕೆ ಅಪಚಾರ ಎಸಗುವವರನ್ನು ಶಿಕ್ಷಿಸಲು ಈಗಾಗಲೇ ಕಠಿನ ಕಾನೂನು ಇರುವಾಗ ಅಮರೀಂದರ್‌ ಸರಕಾರ ಹೊಸದಾಗಿ ಕಾನೂನು ರಚಿಸುವ ಅಗತ್ಯವಿರಲಿಲ್ಲ.  

ಕಾನೂನು ಈಗಿರುವ ಸ್ವರೂಪದಲ್ಲಿ ಜಾರಿಯಾದರೆ ಪಾಕಿಸ್ಥಾನದ ಧರ್ಮನಿಂದನೆ ಕಾನೂನಿನಂತಾಗಲಿದೆ ಎಂಬ ಟೀಕೆಗಳಲ್ಲಿ ಹುರುಳಿದೆ. ಪಾಕಿನಲ್ಲಿ ಧಾರ್ಮಿಕ ಗ್ರಂಥಕ್ಕೆ ಅಪಚಾರ ಎಸಗಿದರೆ ಗಲ್ಲಿಗೇರಿಸುವ, ಅನೇಕ ವರ್ಷಗಳ ತನಕ ಜೈಲಿಗೆ ತಳ್ಳುವ ಕಾನೂನು ಇದೆ. ಮೂಲಭೂತವಾದಿಗಳು ಧರ್ಮ ನಿಂದೆ ಮಾಡಿದ ಆರೋಪಕ್ಕೊಳಗಾಗಿರುವವರನ್ನು ಗುಂಡಿಕ್ಕಿ ಸಾಯಿಸಿದ ಪ್ರಕರಣಗಳು ಸಂಭವಿಸಿವೆ. ಸಚಿವರೇ ಅಲ್ಲಿ ಧರ್ಮ ನಿಂದನೆ ಆರೋಪದಲ್ಲಿ ಮೂಲಭೂತವಾದಿಗಳ ಗುಂಡಿಗೆ ಬಲಿಯಾಗಿದ್ದಾರೆ. 

ಸರಕಾರ ಎಲ್ಲ ಧರ್ಮಗಳಿಂದಲೂ ಸಮಾನ ಅಂತರ ಕಾಯ್ದುಕೊಳ್ಳಬೇಕೆನ್ನುವುದು ಜಾತ್ಯಾತೀತ ತತ್ವದ ಮೂಲ ಆಶಯ. ಅದನ್ನು ಇನ್ನಷ್ಟು ಬಲಗೊಳಿಸುವತ್ತ ಪ್ರಯತ್ನಿಸಬೇಕು. ಅಂಥ ರಚನಾತ್ಮಕ ನೆಲೆಯತ್ತ ಸಾಗುವುದು ಅತ್ಯವಶ್ಯ. 

ಟಾಪ್ ನ್ಯೂಸ್

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

Prajwal Revanna ವೀಡಿಯೋ ವೈರಲ್‌: ಓರ್ವನ ಸೆರೆ

Prajwal Revanna ವೀಡಿಯೋ ವೈರಲ್‌: ಓರ್ವನ ಸೆರೆ

ನೀತಿ ಸಂಹಿತೆ ಸಡಿಲಿಕೆ: ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರಕಾರ ಮನವಿ

ನೀತಿ ಸಂಹಿತೆ ಸಡಿಲಿಕೆ: ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರಕಾರ ಮನವಿ

Siddaramaiah ಚುನಾವಣ ಪ್ರಚಾರ: 14 ಲಕ್ಷ ಜನರನ್ನು ಉದ್ದೇಶಿಸಿ ಸಿಎಂ ಮಾತು

Siddaramaiah ಚುನಾವಣ ಪ್ರಚಾರ: 14 ಲಕ್ಷ ಜನರನ್ನು ಉದ್ದೇಶಿಸಿ ಸಿಎಂ ಮಾತು

D.K. Shivakumar ಲೋಕದ ಡೊಂಕು ನೀವೇಕೆ ತಿದ್ದುವಿರಿ, ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ

D.K. Shivakumar ಲೋಕದ ಡೊಂಕು ನೀವೇಕೆ ತಿದ್ದುವಿರಿ, ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾಂತಿಯುತ ಮತದಾನ: ಸಾಂಘಿಕ ಪ್ರಯತ್ನ ಸಫ‌ಲ…

ಶಾಂತಿಯುತ ಮತದಾನ: ಸಾಂಘಿಕ ಪ್ರಯತ್ನ ಸಫ‌ಲ…

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

IMD

ಮತದಾನಕ್ಕೆ ಬಿಸಿಲು ಅಡ್ಡಿಯಾಗದಿರಲಿ

Editorial:ಮಣಿಪುರ- ಒಡೆದ ಮನಸು‌ ಬೆಸೆಯುವ ಕಾರ್ಯವಾಗಲಿ

Editorial: ಮಣಿಪುರ- ಒಡೆದ ಮನಸು‌ ಬೆಸೆಯುವ ಕಾರ್ಯವಾಗಲಿ

Economy

ಉತ್ಪಾದನ ವಲಯದಲ್ಲಿ ಜಿಗಿತ: ಆರ್ಥಿಕತೆಗೆ ಮತ್ತಷ್ಟು ಬಲ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

1-wqeqewqewq

Tennis; ಇದೇ ಕೊನೆಯ ಸೀಸನ್‌:ಡೊಮಿನಿಕ್‌ ಥೀಮ್‌

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

Prajwal Revanna ವೀಡಿಯೋ ವೈರಲ್‌: ಓರ್ವನ ಸೆರೆ

Prajwal Revanna ವೀಡಿಯೋ ವೈರಲ್‌: ಓರ್ವನ ಸೆರೆ

ನೀತಿ ಸಂಹಿತೆ ಸಡಿಲಿಕೆ: ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರಕಾರ ಮನವಿ

ನೀತಿ ಸಂಹಿತೆ ಸಡಿಲಿಕೆ: ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರಕಾರ ಮನವಿ

Siddaramaiah ಚುನಾವಣ ಪ್ರಚಾರ: 14 ಲಕ್ಷ ಜನರನ್ನು ಉದ್ದೇಶಿಸಿ ಸಿಎಂ ಮಾತು

Siddaramaiah ಚುನಾವಣ ಪ್ರಚಾರ: 14 ಲಕ್ಷ ಜನರನ್ನು ಉದ್ದೇಶಿಸಿ ಸಿಎಂ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.