Moorane Krishnappa Review; ಕಾಮಿಡಿ ಡೋಸ್‌ನಲ್ಲಿ ಕೃಷ್ಣಪ್ಪ ಕಮಾಲ್‌!


Team Udayavani, May 25, 2024, 10:51 AM IST

moorane krishnappa review

ಸಿನಿಮಾ ಎಂದರೆ ಕೇವಲ ಗ್ಲಾಮರ್‌, ಕಲರ್‌ಫ‌ುಲ್‌ ಅಲ್ಲ, ಅದರಾಚೆ ಒಂದು ಗ್ರಾಮರ್‌ ಇದೆ, ಅದನ್ನು ಅರ್ಥಮಾಡಿಕೊಂಡು ಸಿನಿಮಾ ಕಟ್ಟಿಕೊಟ್ಟರೆ ಪ್ರೇಕ್ಷಕರನ್ನು ಖುಷಿಪಡಿಸಬಹುದು ಎಂದು ಆಗಾಗ ಅನೇಕ ಸಿನಿಮಾಗಳು ಸಾಬೀತು ಮಾಡುತ್ತವೆ. ಈ ವಾರ ತೆರೆಕಂಡಿರುವ “ಮೂರನೇ ಕೃಷ್ಣಪ್ಪ’ ಕೂಡಾ ಈ ಸಾಲಿನಲ್ಲಿ ನಿಲ್ಲುವ ಸಿನಿಮಾ.

ಪಕ್ಕಾ ಹಳ್ಳಿಸೊಗಡಿನಲ್ಲಿ ಮೂಡಿಬಂದಿರುವ ಈ ಸಿನಿಮಾ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕನ ಮುಖದಲ್ಲೊಂದು ನಗುಮೂಡಿಸುತ್ತಲೇ ಸಾಗುತ್ತದೆ. ಆ ಮಟ್ಟಿಗೆ ಚಿತ್ರತಂಡದ ಶ್ರಮವನ್ನು ಮೆಚ್ಚಲೇಬೇಕು. ಒಂದು ಸಾದಾಸೀದಾ ಕಥೆಯನ್ನು, ಒಂದಷ್ಟು ಮಜವಾದ ಅಂಶಗಳೊಂದಿಗೆ ಹೇಗೆ ಕಟ್ಟಿಕೊಡಬಹುದು ಎಂಬುದಕ್ಕೆ ಈ ಸಿನಿಮಾ ಒಂದೊಳ್ಳೆಯ ಉದಾಹರಣೆಯಾಗಬಹುದು.

ಗ್ರಾಮಪಂಚಾಯ್ತಿ ಅಧ್ಯಕ್ಷ ಹಾಗೂ ಆತನ ಬೆಂಬಲಿಗರ ಎಡವಟ್ಟು ಗಳಿಂದ ಆರಂಭವಾಗುವ ಸಿನಿ ಮಾದ ಪರಮ ಉದ್ದೇಶ ನಗು. ಫ‌ನ್ನಿ, “ಮಸಾಲಾ’ ಸಂಭಾ ಷಣೆ, ಹಳ್ಳಿ ಬೈಗುಳಗಳ ಮೂಲಕ ಸಾಗುವ ಸಿನಿಮಾ ಅದರ ಭಾಷೆಯ ಮೂಲಕ ಹೆಚ್ಚು ಗಮನ ಸೆಳೆಯುತ್ತದೆ. ಆನೇಕಲ್‌ ಭಾಗದ ಭಾಷೆಯ ಸೊಗಡು ಈ ಸಿನಿಮಾದ ಹೈಲೈಟ್‌.

ಸಿನಿಮಾದ ಮೊದಲರ್ಧ ಪೂರ್ತಿ ಕೃಷ್ಣಪ್ಪನದ್ದು ಕಾಮಿಡಿ ಹಾದಿ. ದ್ವಿತೀಯಾರ್ಧ ಒಂದಷ್ಟು ಗಂಭೀರ ಅಂಶಗಳು… ಸಿನಿಮಾ ಮುಂದೆ ಹೀಗೆ ಆಗುತ್ತದೆ ಎಂಬ ಸಣ್ಣ ಸುಳಿವನ್ನು ಪ್ರೇಕ್ಷಕರಿಗೆ ಬಿಟ್ಟುಕೊಟ್ಟೇ ಸಾಗುವ ಸಿನಿಮಾ ಎಲ್ಲೂ ಬೋರ್‌ ಹೊಡೆಸುವು ದಿಲ್ಲ. ಆ ಮಟ್ಟಿಗೆ ಚಿತ್ರ ಲವಲವಿಕೆಯನ್ನು ಕಾಪಾಡಿಕೊಂಡು ಬಂದಿದೆ. ಮೊದಲೇ ಹೇಳಿದಂತೆ ಈ ಚಿತ್ರದಲ್ಲಿ ಗ್ಲಾಮರ್‌ ಎಂಬುದಿಲ್ಲ. ಆಗಾಗ ಚಡ್ಡಿಯಲ್ಲಷ್ಟೇ ಕಾಣಿಸಿಕೊಳ್ಳುವ “ಉಗ್ರಂ’ ಮಂಜುವನ್ನು ಈ ಸಿನಿಮಾದ “ಗ್ಲಾಮರ್‌’ ಎಂದುಕೊಳ್ಳಬಹುದು!

ಇಡೀ ಸಿನಿಮಾದ ಹೈಲೈಟ್‌ ರಂಗಾಯಣ ರಘು. ಅವರ ಹಾವಭಾವ, ಮಾತಿನ ಶೈಲಿ ಎಲ್ಲವೂ ಪಾತ್ರಕ್ಕೆ ಹೇಳಿಮಾಡಿಸಿದಂತಿದೆ. ಅದರಾಚೆ ಸಂಪತ್‌ ಮೈತ್ರೆಯಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಇತರ ಪಾತ್ರಧಾರಿಗಳು ಕೂಡಾ ಅಲ್ಲಲ್ಲಿ ನಗೆಬುಗ್ಗೆ ಎಬ್ಬಿಸುತ್ತಾರೆ. “ಮೂರನೇ ಕೃಷ್ಣಪ್ಪ’. ಫ್ಯಾಮಿಲಿಗಿಂತ ಫ್ರೆಂಡ್ಸ್‌ ಜೊತೆ ಹೋದರೆ ಹೆಚ್ಚು ಎಂಜಾಯ್‌ ಮಾಡಬಹುದು

ಆರ್‌.ಪಿ.

ಟಾಪ್ ನ್ಯೂಸ್

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

2-thirthahalli

Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

love li movie review

Love Li movie review: ಪ್ರೀತಿ, ದ್ವೇಷ ಮತ್ತು ಅವನು!

Shivamma movie review;

Shivamma movie review; ಗಟ್ಟಿಗಿತ್ತಿಯ ಬದುಕಿನ ಕನಸು

Kotee movie review: ಕೋಟಿ ಲೆಕ್ಕ ಹುಲಿಬೇಟೆ ಪಕ್ಕಾ

Kotee movie review: ಕೋಟಿ ಲೆಕ್ಕ ಹುಲಿಬೇಟೆ ಪಕ್ಕಾ

Anartha Movie Review

Anartha Movie Review; ‘ಅನರ್ಥ’ದಿಂದ ಅರ್ಥದೆಡೆಗೆ ಸಸ್ಪೆನ್ಸ್‌ ಯಾನ

Evidence movie review

Evidence movie review: ತ್ರಿಕೋನ ಪ್ರೇಮದ ಕರಾಳ ಮುಖ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

2-thirthahalli

Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.