“ಒನ್‌’ ಕೇಂದ್ರಗಳಲ್ಲಿ ಹಿರಿಯರಿಗೆ ಗುರುತಿನ ಚೀಟಿ


Team Udayavani, May 19, 2018, 11:49 AM IST

one-kendra.jpg

ಬೆಂಗಳೂರು: ಜೀವನದ ಮುಸ್ಸಂಜೆಯಲ್ಲಿರುವ ಹಿರಿಯ ಜೀವಿಗಳು ಇನ್ನುಮುಂದೆ ಹಿರಿಯ ನಾಗರಿಕರ ಗುರುತಿನ ಚೀಟಿ, ಗ್ರಂಥಾಲಯ ಗುರುತಿನ ಚೀಟಿ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಗಿಲ್ಲ. ಬೆಂಗಳೂರು ಒನ್‌ ಮತ್ತು ಕರ್ನಾಟಕ ಒನ್‌ ಕೇಂದ್ರಗಳಿಗೆ ಹೋದರೆ ಸಾಕು.

ಹೌದು. ವಿದ್ಯುತ್‌ ಬಿಲ್‌, ನೀರಿನ ಬಿಲ್‌ ಸೇರಿದಂತೆ ವಿವಿಧ ಸೇವೆಗಳನ್ನು ನೀಡುತ್ತಿರುವ ಈ ಕೇಂದ್ರಗಳಲ್ಲೇ ಹಿರಿಯರಿಗೆ ನಾಗರಿಕರಿಗೆ ಗುರಿತಿನ ಚೀಟಿ ವಿತರಿಸುವ ಕೆಲಸವೂ ಶುರುವಾಗುತ್ತಿದೆ. ಸೇವಾ ಸಿಂಧು ಯೋಜನೆಯ ಸುಮಾರು 500 ಸೇವೆಗಳನ್ನು ಒದಗಿಸಲು ಇ-ಅಡಳಿತ ಇಲಾಖೆಯ ನಾಗರಿಕ ಸೇವೆಗಳ ವಿದ್ಯುನ್ಮಾನ ವಿತರಣಾ ನಿರ್ದೇಶನಾಲಯ (ಇಡಿಸಿಎಸ್‌) ವಿಭಾಗ ಎಲ್ಲ ರೀತಿಯ ಸಿದ್ಧತೆ ನಡೆಸಿದೆ.

ಹಿರಿಯ ನಾಗರಿಕರ ಗುರುತಿನ ಚೀಟಿ ಸೇರಿದಂತೆ ನಾಲ್ಕು ಹೆಚ್ಚುವರಿ ಸೇವೆಗಳನ್ನು ಒದಗಿಸುವ ಪ್ರಾಯೋಗಿಕ ಕಾರ್ಯ ಶನಿವಾರದಿಂದ ಬೆಂಗಳೂರು ಒನ್‌ ಮತ್ತು ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಆರಂಭವಾಗಲಿದೆ. ಆರಂಭದಲ್ಲಿ ಬೆಂಗಳೂರು ಒನ್‌ ಮತ್ತು ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿ ಮತ್ತು ಅವರಿಗೆ ಗ್ರಂಥಾಲಯ ಚೀಟಿಗಳನ್ನು ಒದಗಿಸಲಾಗುವುದು.

ನಂತರದಲ್ಲಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಅಟಲ್‌ ಸೇವಾ ಕೇಂದ್ರ ಸೇರಿದಂತೆ ರಾಜ್ಯದಲ್ಲಿರುವ ಆರು ಸಾವಿರ ಖಾಸಗಿ ಮತ್ತು ಸಾರ್ವಜನಿಕ ಸೇವಾ ಕೇಂದ್ರಗಳ ಮೂಲಕ ಈ ಸೇವೆಗಳನ್ನು ನೀಡಲು ತಿರ್ಮಾನಿಸಲಾಗಿದೆ ಎಂದು ಇ-ಅಡಳಿತ ಇಲಾಖೆಯ ನಾಗರಿಕ ಸೇವೆಗಳ ವಿದ್ಯುನ್ಮಾನ ವಿತರಣಾ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಹಿರಿಯ ನಾಗರಿಕರು ಗುರುತಿನ ಚೀಟಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ನಾಲ್ಕಾರು ಬಾರಿ ಓಡಾಡಿದರೂ ಗುರುತಿನ ಚೀಟಿ ಸಿಗುವುದಿಲ್ಲ. ಈ ಪ್ರಕ್ರಿಯೆ ಅವರಿಗೆ ತ್ರಾಸದಾಯಕ. ಈ ತೊಂದರೆ ತಪ್ಪಿಸುವ ಉದ್ದೇಶದಿಂದ ಶನಿವಾರದಿಂದ ಪ್ರಾಯೋಗಿಕವಾಗಿ “ಒನ್‌’ ಕೇಂದ್ರಗಳಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿ ಒದಗಿಸುವ ಕೆಲಸಕ್ಕೆ ಆದ್ಯತೆ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಮತ್ತಷ್ಟು ಸೇವೆಗಳು ಆನ್‌ಲೈನ್‌ ವ್ಯಾಪ್ತಿಗೆ: ಕಳೆದ ವರ್ಷ ಸೇವಾ ಸಿಂಧು ಯೋಜನೆ ಆರಂಭವಾಗಿದ್ದು, ಆರಂಭದಲ್ಲಿ 60 ಕೇಂದ್ರಗಳನ್ನು ಹೊಂದಿತ್ತು. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಸ್ತುತ ಸುಮಾರು ಆರು ಸಾವಿರ ಕೇಂದ್ರಗಳು ಸೇವಾ ಸಿಂಧು ಯೋಜನೆಯಡಿ ಕಾರ್ಯನಿರ್ವಹಿಸುತ್ತಿವೆ.

ಕಂದಾಯ ಆರೋಗ್ಯ, ಕುಟುಂಬ ಕಲ್ಯಾಣ, ವಾಣಿಜ್ಯ ತೆರಿಗೆ, ಸಾರಿಗೆ, ಆಹಾರ ಮತ್ತು ನಾಗರಿಕ ಪೊರೈಕೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳ 40 ಸೇವೆಗಳು ಇದರಲ್ಲಿ ಲಭ್ಯವಿದೆ. ಒಂದು ವರ್ಷದಲ್ಲಿ 3.19 ಲಕ್ಷ ಜನರಿಗೆ ಸೇವೆ ಒದಗಿಸಲಾಗಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಜತೆಗೆ ಆನ್‌ಲೈನ್‌ಗೆ ಒಳಪಡಿಸಬಹುದಾದ ಹಲವು ಇಲಾಖೆಗಳ ಸೇವೆಗಳನ್ನೂ ಗುರುತಿಸಲಾಗಿದೆ.

ಸರ್ಕಾರಿ ಸೇವೆಯಲ್ಲಿ ಪಾರದರ್ಶಕತೆ ತರುವಲ್ಲಿಯೂ ಇದು ಸಹಕಾರಿಯಾಗಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವೆಗಳು ಆನ್‌ಲೈನ್‌ ಮೂಲಕ ಸಿಗಲಿವೆ. ಈಗಾಗಲೇ ಕೇಂದ್ರಗಳಲ್ಲಿ ಸಾಮಾನ್ಯ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದೀಗ ಅಂತಾರಾಷ್ಟ್ರೀಯ ಜನನ ಮತ್ತು ಮರಣ ಪ್ರಮಾಣಪತ್ರ ಸೇವೆಗಳು ಸಾರ್ವಜನಿಕರಿಗೆ ದೊರೆಯಲಿವೆ ಎಂದಿದ್ದಾರೆ. 

ಹಿರಿಯರು ಸೇರಿದಂತೆ ಇನ್ನಿತರಿಗೆ ಅನುಕೂಲವಾಗಲಿ ಅನ್ನುವ ಉದ್ದೇಶದಿಂದ ನಾಲ್ಕು ಹೆಚ್ಚುವರಿ ಸೇವೆಗಳನ್ನು ಆರಂಭಿಸಿದ್ದು, ಪ್ರಯೋಗಿಕವಾಗಿ ಶನಿವಾರದಿಂದ ಈ ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗಲಿವೆ. 
-ಸುನೀಲ್‌ ಪನ್ವಾರ್‌, ಇಡಿಸಿಎಸ್‌ ನಿರ್ದೇಶಕ

* ದೇವೇಶ ಸೂರಗುಪ್ಪ 

ಟಾಪ್ ನ್ಯೂಸ್

Pune Porsche crash case ಚಾಲಕನಿಗೆ ಬೆದರಿಸಿ, ಕೂಡಿ ಹಾಕಿದ್ದ ಆರೋಪಿಯ ಅಜ್ಜ ಅರೆಸ್ಟ್‌!

Pune Porsche crash case ಚಾಲಕನಿಗೆ ಬೆದರಿಸಿ, ಕೂಡಿ ಹಾಕಿದ್ದ ಆರೋಪಿಯ ಅಜ್ಜ ಅರೆಸ್ಟ್‌!

Drugs Case; ಕಠಿಣ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಪಂಜಾಬ್ ಅನ್ನು ಮೀರಿಸಲಿದೆ; ಜೋಶಿ

Drugs Case; ಕಠಿಣ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಪಂಜಾಬ್ ಅನ್ನು ಮೀರಿಸಲಿದೆ; ಜೋಶಿ

Congress party: ಕಾಂಗ್ರೆಸ್ ಪಕ್ಷದಿಂದ ಪ್ರತಾಪ್ ರೆಡ್ಡಿ ಉಚ್ಚಾಟನೆ

Congress party: ಕಾಂಗ್ರೆಸ್ ಪಕ್ಷದಿಂದ ಪ್ರತಾಪ್ ರೆಡ್ಡಿ ಉಚ್ಚಾಟನೆ

Cannes Award 2024; ಮೊದಲ ಬಾರಿ ಭಾರತದ ನಟಿಗೆ ಪ್ರತಿಷ್ಠಿತ ಕ್ಯಾನಸ್‌ ಪ್ರಶಸ್ತಿ ಗೌರವ!

Cannes Award 2024; ಮೊದಲ ಬಾರಿ ಭಾರತದ ನಟಿಗೆ ಪ್ರತಿಷ್ಠಿತ ಕ್ಯಾನಸ್‌ ಪ್ರಶಸ್ತಿ ಗೌರವ!

Supreme Court 40 ವರ್ಷ ದುಡಿದವರಿಗೆ ನಿವೃತ್ತಿ ಪ್ರಯೋಜನ ನಿರಾಕರಿಸುವಂತಿಲ್ಲ

Supreme Court 40 ವರ್ಷ ದುಡಿದವರಿಗೆ ನಿವೃತ್ತಿ ಪ್ರಯೋಜನ ನಿರಾಕರಿಸುವಂತಿಲ್ಲ

7

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ: ಮಾಜಿ ಶಾಸಕ ರಘುಪತಿ ಭಟ್‌ ಬಿಜೆಪಿ ಪಕ್ಷದಿಂದ ಉಚ್ಚಾಟನೆ

China ನಮ್ಮ ಜಾಗ ಅತಿಕ್ರಮಿಸಿದೆ, 56 ಇಂಚಿನ ಎದೆ ಎಲ್ಲಿದೆ?: ಖರ್ಗೆ

China ನಮ್ಮ ಜಾಗ ಅತಿಕ್ರಮಿಸಿದೆ, 56 ಇಂಚಿನ ಎದೆ ಎಲ್ಲಿದೆ?: ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru Rave Party; 86 ಜನರು ಡ್ರಗ್ ಸೇವೆನೆ ಮಾಡಿರುವುದು ರಕ್ತ ಪರೀಕ್ಷಯಲ್ಲಿ ದೃಢ

Bengaluru Rave Party; 86 ಜನರು ಡ್ರಗ್ ಸೇವೆನೆ ಮಾಡಿರುವುದು ರಕ್ತ ಪರೀಕ್ಷಯಲ್ಲಿ ದೃಢ

ಕೈಗಾರಿಕೆಗೆಂದು ಅಭಿವೃದ್ಧಿಪಡಿಸಿದ ಜಾಗದಲ್ಲಿ ನೂರಾರು ದೊಡ್ಡ ಗಿಡ ನೆಟ್ಟ ಅನಾಮಿಕರು!

ಕೈಗಾರಿಕೆಗೆಂದು ಅಭಿವೃದ್ಧಿಪಡಿಸಿದ ಜಾಗದಲ್ಲಿ ನೂರಾರು ದೊಡ್ಡ ಗಿಡ ನೆಟ್ಟ ಅನಾಮಿಕರು!

8

Bengaluru Road: ಮಳೆ ನಿಂತ ನಂತರ ರಸ್ತೆ ಗುಂಡಿ ದುರಸ್ತಿ  ಶುರು 

7

ಹೊಯ್ಸಳ ಪೊಲೀಸರನ್ನು ಕಳ್ಳ ಕಳ್ಳ ಎಂದು ಬೆನ್ನಟ್ಟಿದ ಸಾರ್ವಜನಿಕರು!

6

Bengaluru: 13 ವರ್ಷದ ಅಪ್ರಾಪ್ತ ಸಹೋದರನಿಂದಲೇ 3 ತಿಂಗಳ ಗರ್ಭಿಣಿಯಾದ ತಂಗಿ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Pune Porsche crash case ಚಾಲಕನಿಗೆ ಬೆದರಿಸಿ, ಕೂಡಿ ಹಾಕಿದ್ದ ಆರೋಪಿಯ ಅಜ್ಜ ಅರೆಸ್ಟ್‌!

Pune Porsche crash case ಚಾಲಕನಿಗೆ ಬೆದರಿಸಿ, ಕೂಡಿ ಹಾಕಿದ್ದ ಆರೋಪಿಯ ಅಜ್ಜ ಅರೆಸ್ಟ್‌!

Drugs Case; ಕಠಿಣ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಪಂಜಾಬ್ ಅನ್ನು ಮೀರಿಸಲಿದೆ; ಜೋಶಿ

Drugs Case; ಕಠಿಣ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಪಂಜಾಬ್ ಅನ್ನು ಮೀರಿಸಲಿದೆ; ಜೋಶಿ

Congress party: ಕಾಂಗ್ರೆಸ್ ಪಕ್ಷದಿಂದ ಪ್ರತಾಪ್ ರೆಡ್ಡಿ ಉಚ್ಚಾಟನೆ

Congress party: ಕಾಂಗ್ರೆಸ್ ಪಕ್ಷದಿಂದ ಪ್ರತಾಪ್ ರೆಡ್ಡಿ ಉಚ್ಚಾಟನೆ

Cannes Award 2024; ಮೊದಲ ಬಾರಿ ಭಾರತದ ನಟಿಗೆ ಪ್ರತಿಷ್ಠಿತ ಕ್ಯಾನಸ್‌ ಪ್ರಶಸ್ತಿ ಗೌರವ!

Cannes Award 2024; ಮೊದಲ ಬಾರಿ ಭಾರತದ ನಟಿಗೆ ಪ್ರತಿಷ್ಠಿತ ಕ್ಯಾನಸ್‌ ಪ್ರಶಸ್ತಿ ಗೌರವ!

9

ಶೇಡಿಮನೆ ಹೋಟಲ್‌ ಉದ್ಯಮಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.