ರೇರಾ ಜಾರಿ: ಸಣ್ಣಪುಟ್ಟ ಬಿಲ್ಡರ್‌ಗಳಿಗೆ ಉಳಿಗಾಲವಿಲ್ಲ


Team Udayavani, Jul 8, 2017, 3:50 AM IST

REAL-0707071.jpg

ಬೆಂಗಳೂರು: ರಾಜ್ಯದಲ್ಲಿ ರಿಯಲ್‌ ಎಸ್ಟೇಟ್‌ ಕಾಯ್ದೆ ಜಾರಿಯಾದರೆ ಸಣ್ಣ-ಪುಟ್ಟ ರಿಯಲ್‌ ಬಿಲ್ಡರ್‌ಗಳಿಗೆ ಉಳಿಗಾಲವಿಲ್ಲ.

ಹೌದು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಿಯಲ್‌ ಎಸ್ಟೇಟ್‌ ಕಾಯ್ದೆಗೆ ರಾಜ್ಯ ಸರ್ಕಾರ ರೂಪಿಸಿರುವ ನಿಯಮಾವಳಿಗಳ ಪ್ರಕಾರ 500 ಚದರ ಮೀಟರ್‌ (ಐದು ಸಾವಿರ ಚದರಡಿಗಿಂತ ಮೇಲ್ಪಟ್ಟ) ವಿಸ್ತೀರ್ಣದಲ್ಲಿ ನಿರ್ಮಾಣವಾಗುವ ವಸತಿ ಸಮುಚ್ಚಯಕ್ಕೆ ಮಾತ್ರ ಅನುಮತಿ. ಹೀಗಾಗಿ, ಅದಕ್ಕಿಂತ ಕಡಿಮೆ ವಿಸ್ತೀರ್ಣದ ಯೋಜನೆಗಳಿಗೆ ಅನುಮತಿ ಸಿಗುವುದೇ ಅನುಮಾನ ಎಂದು ಮೂಲಗಳು ತಿಳಿಸಿವೆ.

ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ ಅನುಮತಿ ಪಡೆಯದ ಯೋಜನೆಗಳು ಒಂದು ರೀತಿಯಲ್ಲಿ ಅನಧಿಕೃತವಾಗಲಿದೆ. ಹೀಗಾಗಿ, ಸಣ್ಣ -ಪುಟ್ಟ 2000 ಚದರಡಿ, 2500 ಚದರಡಿ, 3000 ಚದರಡಿ ಹೀಗೆ ಜಂಟಿ ಸಹಭಾಗಿತ್ವದಡಿ 1200 ವಿಸ್ತೀರ್ಣದ ಎರಡು-ಮೂರು ನಿವೇಶನ ಸೇರಿಸಿ ಅಪಾರ್ಟ್‌ಮೆಂಟ್‌ ನಿರ್ಮಿಸಿ ಮಾರಾಟ ಮಾಡುವ ಸಣ್ಣ ಪ್ರಮಾಣದ ಬಿಲ್ಡರ್‌ಗಳಿಗೆ ನಿಯಮಾವಳಿಯಲ್ಲಿ ಅವಕಾಶ ಸಿಗದು.

ಏಕೆಂದರೆ, ಪ್ರತಿ ಯೋಜನೆಯಲ್ಲೂ ತೆರೆದ ಪ್ರದೇಶ, ನಾಗರಿಕ ಬಳಕೆಗೆ ಕಾಯ್ದಿರಿಸಿದ ಪ್ರದೇಶ, ಹಸಿರು ವಲಯ ಎಲ್ಲವೂ ಇರಬೇಕು. ಹೀಗಾಗಿ, ಸಣ್ಣ-ಪುಟ್ಟ ಯೋಜನೆಗಳಲ್ಲಿ ಇದೆಲ್ಲವನ್ನೂ ಒಳಗೊಂಡಂತೆ ವಸತಿ ಸಮುತ್ಛಯ ನಿರ್ಮಾಣ ಅಸಾಧ್ಯ.

ಜತೆಗೆ, ಬಡಾವಣೆ ರಚನೆ ಅಥವಾ ನಕ್ಷೆ ಮಂಜೂರಾತಿಗೆ ಅನುಗುಣವಾಗಿ ನಿಯಮಾವಳಿ ಪ್ರಕಾರ ಕಟ್ಟಡ ನಿರ್ಮಾಣ ಮತ್ತು ಗುಣಮಟ್ಟ ಕಾಯ್ದುಕೊಳ್ಳುವಿಕೆ, ಗ್ರಾಹಕರಿಂದ ಪಡೆದ ಮುಂಗಡ ಮೊತ್ತದಲ್ಲಿ ಶೇ.70 ರಷ್ಟು ಠೇವಣಿ ಇಡುವುದು ಆಗದ ಕೆಲಸ. ಎಲ್ಲದಕ್ಕಿಂತ ಹೆಚ್ಚಾಗಿ ಸಣ್ಣ ಸಣ್ಣ ವಸತಿ ಸಮುತ್ಛಯಕ್ಕೆ (ವೈಯಕ್ತಿಕ ಬಳಕೆಗೆ ಹೊರತುಪಡಿಸಿ) ಅನುಮತಿ ಸಿಗುವುದೇ ಅನುಮಾನ ಎಂದು ಹೇಳಲಾಗಿದೆ.ಹೀಗಾಗಿ, ಗ್ರಾಹಕರು ನೋಂದಾಯಿತ ಹಾಗೂ “ಬ್ರಾಂಡೆಡ್‌’ ರಿಯಲ್‌ ಎಸ್ಟೇಟ್‌ ಹಾಗೂ ಬಿಲ್ಡರ್‌ಗಳ ಕಂಪನಿಗಳ ಯೋಜನೆಗಳತ್ತಲೇ ಹೋಗಬೇಕಾಗುತ್ತದೆ.

ದೊಡ್ಡ ದೊಡ್ಡ ಕಂಪನಿಗಳು ಸಹ ಕೇಂದ್ರ ಸರ್ಕಾರದ ರಿಯಲ್‌ ಎಸ್ಟೇಟ್‌ ಕಾಯ್ದೆ ಪ್ರಕಾರ ರಾಜ್ಯ ಸರ್ಕಾರ ರೂಪಿಸಿರುವ ನಿಯಮಾವಳಿಗಳನ್ನು ಪರಿಪೂರ್ಣವಾಗಿ ಪಾಲಿಸಲೇಬೇಕು. ಬಿಲ್ಟಪ್‌ ಏರಿಯಾ (ಒಟ್ಟಾರೆ ನಿರ್ಮಿತ ಪ್ರದೇಶ) ಕಾಪೆìಟ್‌ ಏರಿಯಾ (ವಾಸಯೋಗ್ಯ ಪ್ರದೇಶ) ವಿಚಾರದಲ್ಲೂ ಸ್ಪಷ್ಟವಾಗಿ ಒಪ್ಪಂದದಲ್ಲೇ ತಿಳಿಸಬೇಕು. ಸರ್ಕಾರಿ ಮಾರ್ಗಸೂಚಿ ದರವನ್ನೇ ಆಧಾರವಾಗಿಟ್ಟುಕೊಂಡು ದರ ನಿಗದಿಪಡಿಸಬೇಕು ಎಂಬ ಅಂಶಗಳು ನಿಯಮಾವಳಿಯಲ್ಲಿ ಸೇರಿವೆ.

ಪ್ರತಿ ಯೋಜನೆಯ ಕಾಮಗಾರಿ ಆರಂಭಿಕ ಪ್ರಮಾಣ ಪತ್ರ (ಕಮೆಸ್‌°ಮೆಂಟ್‌ ಸರ್ಟಿಫಿಕೇಟ್‌) ಆ ನಂñರ ಕಾಮಗಾರಿ ಪೂರ್ಣಗೊಳಿಸಿದ ಪ್ರಮಾಣಪತ್ರ (ಕಂಪ್ಲೀಷನ್‌ ಸರ್ಟಿಫಿಕೇಟ್‌) ಕೊನೆಯದಾಗಿ ಸ್ವಾಧೀನ ಪ್ರಮಾಣಪತ್ರ (ಆಕ್ಯುಪೇಷನ್‌ ಸರ್ಟಿಫಿಕೇಟ್‌)  ಈ ಮೂರು ಪ್ರಮಾಣಪತ್ರಗಳು ನೀಡುವಾಗ ಸಕ್ಷಮ ಪ್ರಾಧಿಕಾರಗಳು ಪಾಲಿಸಬೇಕಾದ ಕ್ರಮಗಳ ಬಗ್ಗೆಯೂ ನಿಯಮಾವಳಿಯಲ್ಲಿ ಸ್ಪಷ್ಟ ಸೂಚನೆಗಳಿದ್ದು ಯಾವುದೇ ಹಂತದಲ್ಲೂ ಲೋಪ ಅಥವಾ ಅಕ್ರಮ ಎಸಗಲು ಅವಕಾಶ ಇಲ್ಲ. ನಿಯಂತ್ರಣ ಪ್ರಾಧಿಕಾರದ ಅನುಮತಿಯೇ ಅಂತಿಮವಾಗಲಿದೆ ಎಂದು ಹೇಳಲಾಗಿದೆ.

ಬ್ಯಾಂಕ್‌ ಸಾಲ ಪಡೆಯುವ ಹಾಗೂ ಸಾಲ ಮಂಜೂರಾದ ಮೇಲೆ ಮಾಲೀಕನಿಗೆ ಯಾವ ಹಂತದಲ್ಲಿ ಎಷ್ಟೆಷ್ಟು ಮೊತ್ತ ಸಂದಾಯವಾಗಬೇಕು. ಯಾವ ಆಧಾರದಲ್ಲಿ ಬ್ಯಾಂಕುಗಳ ಯೋಜನೆಗಳಿಗೆ ಸಾಲ ನೀಡಬೇಕು ಎಂಬ ಅಂಶವೂ ನಿಯಮಾವಳಿಯಲ್ಲಿದೆ  ಎನ್ನಲಾಗಿದೆ.

ಈಗಲೂ ಲಾಬಿ
ಈಮಧ್ಯೆ, 500 ಚದರ ಮೀಟರ್‌ ವಿಸ್ತೀರ್ಣ ಹಾಗೂ ಅದಕ್ಕೆ ಮೇಲ್ಪಟ್ಟ ಯೋಜನೆಗಳು ಮಾತ್ರ ಪರಿಗಣಿಸುವ ಅಂಶದ ವಿಚಾರದಲ್ಲಿ ಸರಳೀಕರಣ ಮಾಡಲು ಸರ್ಕಾರದ ಮೇಲೆ ಒತ್ತಡಗಳು ಹೆಚ್ಚಾಗಿವೆ.

ಸಂಪುಟದಲ್ಲಿ ಒಪ್ಪಿಗೆ ಪಡೆದು ನಿಯಮಾವಳಿ ರೂಪಿಸುತ್ತಿರುವ ಹಂತದಲ್ಲೂ ಇನ್ನೂ ಕಡಿಮೆ ವಿಸ್ತೀರ್ಣದ ಯೋಜನೆಗೂ ಒಪ್ಪಿಗೆ ಕೊಡುವಂತೆ ನಿಯಮಾವಳಿ ಸರಳೀಕರಣ ಮಾಡಿ ಎಂದು ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಹೇಳಲಾಗಿದೆ.

ಕಾನೂನು ಎಲ್ಲರಿಗೂ ಒಂದೇ
ಕೇಂದ್ರ ಸರ್ಕಾರದ ಕಾಯ್ದೆ ವ್ಯಾಪ್ತಿಯ ಚೌಕಟ್ಟಿನಲ್ಲೇ ನಾವು ನಿಯಮಾವಳಿ ರೂಪಿಸಿದ್ದೇವೆ. ಕಾನೂನು ಎಂದರೆ ಎಲ್ಲರೂ ಪಾಲನೆ ಮಾಡಬೇಕು. ಒಟ್ಟಾರೆ ಗ್ರಾಹಕರ ಹಿತಾಸಕ್ತಿ ಮುಖ್ಯ, ಯಾರದೋ ನಿವೇಶನ, ಯಾವುದೋ ಜಾಗ ತೋರಿಸಿ ಗ್ರಾಹಕರಿಂದ ಹಣ ಪಡೆದು ವಂಚಿಸುವ ಅಥವಾ ಯಾವುದೇ ಸೌಲಭ್ಯಗಳಿಲ್ಲದೆ ಗುಣಮಟ್ಟ ಕಾಯ್ದುಕೊಳ್ಳದ ಯೋಜನೆಗಳ ಹಾವಳಿ ನಿಲ್ಲಲಿದೆ.

– ಟಿ.ಬಿ.ಜಯಚಂದ್ರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

ಮೋಸಗಾರರಿಗೆ ಕಡಿವಾಣ
ರೇರಾ ಕಾಯ್ದೆ ಪರಿಣಾಮಕಾರಿ ಅನುಷ್ಟಾನದಿಂದ ಅನಧಿಕೃತ ರಿಯಲ್‌ ಎಸ್ಟೇಟ್‌ ಹಾಗೂ ಬಿಲ್ಡರ್‌ ಕಂಪನಿ ಅಥವಾ ವೈಯಕ್ತಿಕವಾಗಿ ಅಪಾರ್ಟ್‌ಮೆಂಟ್‌, ವಾಣಿಜ್ಯ ಸಂಕೀರ್ಣ ನಿರ್ಮಿಸುವವರಿಗೆ ಕಡಿವಾಣ ಬೀಳಲಿದೆ. ಇದು ಅಗಲೇಬೇಕಾದ ಕಾರ್ಯ. ಇಲ್ಲದಿದ್ದರೆ, ಗ್ರಾಹಕರನ್ನು ಮೋಸ ಮಾಡುವ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿ ಅಮಾಯಕರು ಹಣ ಕಳೆದುಕೊಳ್ಳಬೇಕಾಗುತ್ತದೆ.
– ಸುರೇಶ್‌, ಪ್ರಧಾನ ಕಾರ್ಯದರ್ಶಿ, ಕ್ರೆಡಾಯ್‌

– ಎಸ್‌.ಲಕ್ಷ್ಮಿನಾರಾಯಣ
 

ಟಾಪ್ ನ್ಯೂಸ್

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

1

Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಯದಿರಿ

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ಡಿಕೆಶಿ ಬದಲಾವಣೆಗಿದು ಕಾಲವಲ್ಲ; ರಾಜಣ್ಣಗೆ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌ ತಿರುಗೇಟು

D. K. Shivakumar ಬದಲಾವಣೆಗಿದು ಕಾಲವಲ್ಲ; ರಾಜಣ್ಣಗೆ ಜಿ.ಸಿ. ಚಂದ್ರಶೇಖರ್‌ ತಿರುಗೇಟು

ಕಾಂಗ್ರೆಸ್‌ನ ಗ್ಯಾರಂಟಿ ಚುನಾವಣಾ ಅಕ್ರಮ ಅಲ್ಲ: ಸುಪ್ರೀಂ ಕೋರ್ಟ್‌

ಕಾಂಗ್ರೆಸ್‌ನ ಗ್ಯಾರಂಟಿ ಚುನಾವಣಾ ಅಕ್ರಮ ಅಲ್ಲ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

ಡಿಕೆಶಿ ಬದಲಾವಣೆಗಿದು ಕಾಲವಲ್ಲ; ರಾಜಣ್ಣಗೆ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌ ತಿರುಗೇಟು

D. K. Shivakumar ಬದಲಾವಣೆಗಿದು ಕಾಲವಲ್ಲ; ರಾಜಣ್ಣಗೆ ಜಿ.ಸಿ. ಚಂದ್ರಶೇಖರ್‌ ತಿರುಗೇಟು

bjpಸರ್ಕಾರದ ಕಮಿಷನ್‌ ದಾಹಕ್ಕೆ ಅಧಿಕಾರಿ ಬಲಿ: ಬಿಜೆಪಿ

ಸರ್ಕಾರದ ಕಮಿಷನ್‌ ದಾಹಕ್ಕೆ ಅಧಿಕಾರಿ ಬಲಿ: ಬಿಜೆಪಿ

ಜಾಮೀನಿಗಾಗಿ ಕೋರ್ಟ್‌ ಮೊರೆ ಹೋದ ಭವಾನಿ ರೇವಣ್ಣ

ಜಾಮೀನಿಗಾಗಿ ಕೋರ್ಟ್‌ ಮೊರೆ ಹೋದ ಭವಾನಿ ರೇವಣ್ಣ

ಇಂದು ಸಿಎಂ, ಡಿಸಿಎಂ ಹೈಕಮಾಂಡ್‌ ಭೇಟಿ

ಇಂದು ಸಿಎಂ, ಡಿಸಿಎಂ ಹೈಕಮಾಂಡ್‌ ಭೇಟಿ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

1

Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಯದಿರಿ

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.