ಕೋವಿಡ್ 19: ತಿಪ್ಪೆಗೆ ಸೇರಿದ ಕ್ಯಾಪ್ಸಿಕಂ
Team Udayavani, Apr 4, 2020, 11:32 AM IST
ದೇವನಹಳ್ಳಿ: ಕೋವಿಡ್ 19 ಸೋಂಕು ಭೀತಿಯಿಂದ ರೈತರು ತತ್ತರಿಸುತ್ತಿದ್ದು ತಾಲೂಕಿನ ಕ್ಯಾಪ್ಸಿಕಂ ಬೆಳೆದ ರೈತ ಸಾಲದ ಸುಳಿಯಲ್ಲಿ ಸಿಲುಕಿದ್ದು, ಬೆಳೆದ ಬೆಳೆಯನ್ನು ತಿಪ್ಪೆಗೆ ಸುರಿದಿದ್ದಾರೆ.
ಇಲ್ಲಿನ ಅಣ್ಣೇಶ್ವರ ಗ್ರಾಮದ ಕ್ಯಾಪ್ಸಿಕಂ ಬೆಳೆಗಾರ ರೈತ ಮುನಿರಾಜು 2 ಎಕರೆ ಜಮೀನಿನಲ್ಲಿ ಹಳದಿ, ಕೆಂಪು, ಹಸಿರು ಬಣ್ಣದ ಕ್ಯಾಪ್ಸಿಕಂ ಬೆಳೆಯಲು ಬ್ಯಾಂಕಿನಿಂದ 24 ಲಕ್ಷ ಸಾಲ ಪಡೆದಿದ್ದರು. ಬೆಳೆ ಮೂರು ಬಾರಿ ಕೊಯ್ಲಿನಿಂದ 2 ಟನ್ ಆಗಿತ್ತು. ಪ್ರತಿ ಕ್ವಿಂಟಲ್ ಕ್ಯಾಪ್ಸಿಕಂ 800 ರೂಗೆ ಮಾರಾಟವಾಗಿತ್ತು. ಲಾಕ್ ಡೌನ್ ನಂತರ ಬೆಳೆ ಸಾಗಾಟಕ್ಕೆ ಈವರೆಗೆ ಪಾಸ್ ನೀಡಿಲ್ಲ. ಕಾಡಿ ಬೇಡಿ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮಾರುಕಟ್ಟೆಗೆ ಹೋದರೆ ಪ್ರತಿ ಕೆ.ಜಿ ಗೆ 3-4 ರೂ ಬೆಳೆ ಹೇಳುತ್ತಾರೆ. ಹೀಗಾಗಿ ತಿಪ್ಪೆಗೆ ಸುರಿದಿದ್ದೇನೆ. ಕೋವಿಡ್ 19 ಭೀತಿ ಇಲ್ಲದಿದ್ದರೆ ಬಂಡವಾಳ ತೆಗೆದು ಕನಿಷ್ಠ 8-10 ಲಕ್ಷ ರೂ ಲಾಭ ಸಿಗುವ ನಿರೀಕ್ಷೆ ಇತ್ತು ಎಂದು ತಮ್ಮ ಅಳಲು ತೋಡಿಕೊಂಡರು.
ಕ್ಯಾಪ್ಸಿಕಂ ಹಾಗೂ ಇನ್ನಿತರೆ ತರಕಾರಿ ಬೆಳೆಯುವ ರೈತರು ಪಾಸ್ ಪಡದು ಮಾರುಕಟ್ಟೆ, ಇನ್ನಿತರೆ ಕಡೆಗಳಲ್ಲಿ ತರಕಾರಿಗಳನ್ನು ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಗಾಣಿಕೆ, ಮಾರಾಟ ಮಾಡಬಾರದು ಎಂದು ಸೂಚಿಸಲಾಗಿದೆ. –ಮಹಾಂತೇಶ್ ಮುರುಗೋಡ್, ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕ
– ಎಸ್ ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…