Mangaluru ಮನ ಸೆಳೆಯುವ ಆಕರ್ಷಕ “ಮತ್ಸ್ಯ ಲೋಕ’!
ರಾಷ್ಟ್ರೀಯ ಗ್ರಾಹಕ ಮೇಳ ನ. 19ರ ವರೆಗೆ ವಿಸ್ತರಣೆ
Team Udayavani, Nov 4, 2023, 11:30 PM IST
ಮಂಗಳೂರು: ಲಾಲ್ಬಾಗ್ನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಗ್ರಾಹಕ ಮೇಳದಲ್ಲಿ “ಅಕ್ವಾ ಟನೆಲ್’ (“ಅಂತರ್ಜಲ ಸುರಂಗ ಮಾರ್ಗ’) ಗಮನಸೆಳೆಯುತ್ತಿದ್ದು, ನ. 19ರ ವರೆಗೆ ವೀಕ್ಷಣೆಗೆ ಅವಕಾಶವಿದೆ. ಸಂಜೆ 4ರಿಂದ 9ರ ವರೆಗೆ ಪ್ರದರ್ಶನವಿರುತ್ತದೆ.
ರಾಷ್ಟ್ರೀಯ ಗ್ರಾಹಕರ ಮೇಳದ ಮೂಲಕ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಕ್ವಾ ಟನೆಲ್ನಲ್ಲಿ 200ಕ್ಕೂ ಹೆಚ್ಚು ಅಕ್ವೇರಿಯಂ ಮೀನುಗಳನ್ನು ವೀಕ್ಷಿಸಬಹುದಾಗಿದೆ.
ಮಂಗಳೂರು ನಗರದಲ್ಲಿ ಈ ಹಿಂದೆ ಸ್ನೋವಲ್ಡ್, ಅಕ್ವಾ ಶೋ, ಬರ್ಡ್ಶೋ, ತಾಜ್ಮಹಲ್ನಂತಹ ವಿನೂತನ ರೀತಿಯ ಮೆಗಾ ಶೋಗಳನ್ನು ನೀಡಿರುವ ಈ ಸಂಸ್ಥೆ ಪ್ರತಿ ಬಾರಿಯೂ ಹೊಚ್ಚ ಹೊಸ ಶೋಗಳನ್ನು ನೀಡುತ್ತಾ ಬಂದಿದೆ. ಎನ್ಸಿಎಫ್ ರಾಷ್ಟ್ರೀಯ ಗ್ರಾಹಕರ ಮೇಳವು ಸಂಪೂರ್ಣ ಕುಟುಂಬಕ್ಕಾಗಿ ಶಾಪಿಂಗ್ ಮತ್ತು ಮನೋರಂಜನ ಮೇಳವಾಗಿದೆ.
ರೊಬೋಟಿಕ್
ಎನಿಮಲ್ ಪ್ರದರ್ಶನ
ರಾಷ್ಟ್ರೀಯ ಗ್ರಾಹಕ ಮೇಳದಲ್ಲಿ ಅಕ್ವಾ ಟನೆಲ್ ಶೋ ಜತೆ ರೋಬೋಟಿಕ್ ಎನಿಮಲ್ ಪ್ರದರ್ಶನ ಆಕರ್ಷಣೆ ಪಡೆಯುತ್ತಿದೆ. ಆನೆ, ಸಿಂಹ, ಗೊರಿಲ್ಲಾ ಮುಂತಾದ ರೊಬೋಟಿಕ್ ಪ್ರಾಣಿಗಳು, ಅವುಗಳ ಗರ್ಜನೆ ವಿಶೇಷವಾಗಿದೆ.
ಗೃಹೋಪಯೋಗಿ ಮಳಿಗೆ
ರಾಷ್ಟ್ರೀಯ ಗ್ರಾಹಕರ ಮೇಳವು ವ್ಯಾಪಾರ ಮಳಿಗೆಗಳೊಂದಿಗೆ ರಿಯಾಯಿತಿ ದರದಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಗೃಹ ಬಳಕೆ ಉತ್ಪನ್ನ, ಅಡುಗೆ ಮನೆ ಉತ್ಪನ್ನ, ಕೈಮಗ್ಗದ ಉತ್ಪನ್ನ, ಕರಕುಶಲ ಉತ್ಪನ್ನ, ಡ್ರೆಸ್ ಮೆಟೀರಿಯಲ್ಸ್, ಫ್ಯಾಶನ್ ಪಾದರಕ್ಷೆಗಳು, ಆಟಿಕೆಗಳು, ಆಹಾರೋತ್ಪನ್ನಗಳು ಮತ್ತು ಇನ್ನೂ ಹಲವಾರು ಉತ್ಪನ್ನಗಳು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಲಭ್ಯವಾಗಿವೆ.
ಮನೋರಂಜನಾ ವಿಭಾಗದಲ್ಲಿ ಟೋರಾ ಟೋರಾ, ಡ್ಯಾಶಿಂಗ್ ಕಾರ್, ಜೈಂಟ್ ವ್ಹೀಲ್, ಟ್ರೇನ್, ಮೆರ್ರಿ ಕೊಲಂಬಸ್, 3ಡಿ ಶೋಸ್, ಸ್ಕೇರಿ ಹೌಸ್, ಏರ್ ಶಾಟ್, ಸ್ಪೇಸ್ ಜೆಟ್ ಇತ್ಯಾದಿ ಗಮನಸೆಳೆಯುತ್ತಿವೆ. ನ. 19ರ ವರೆಗೆ ಪ್ರತೀ ಸಂಜೆ 4ರಿಂದ ರಾತ್ರಿ 9ರ ವರೆಗೆ ಪ್ರದರ್ಶನ ಇರಲಿದ್ದು, 100 ರೂ. ದರ ನಿಗದಿಪಡಿಸಲಾಗಿದೆ ಎಂದು ರಾಷ್ಟ್ರೀಯ ಗ್ರಾಹಕ ಮೇಳದ ಮ್ಯಾನೇಜರ್ ವಿಜಯ ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ನಮಾಜ್ ಪ್ರಕರಣ: ಬಿ ರಿಪೋರ್ಟ್ ಸಲ್ಲಿಕೆ; ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ
Legislative Council Polls; ಪದವೀಧರ ಮತದಾರರ ನಿರಾಸಕ್ತಿ!
Mangaluru: ಆಸ್ಪತ್ರೆಯಲ್ಲೇ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ! ಜಿಮ್ ಟ್ರೈನರ್ ಬಂಧನ
Nitte Institute of Communication; ಮೇ 31ರಂದು ನಿಟ್ಟೆ ಕ್ರಿಯೇಟಿವಿಟಿ ಫೆಸ್ಟಿವಲ್
Mangaluru; ಲವ್ ಜಿಹಾದ್ ತಡೆಯಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ
MUST WATCH
ಹೊಸ ಸೇರ್ಪಡೆ
Belagavi: ಪರೀಕ್ಷೆ ಮುಗಿದ 3 ಗಂಟೆಗಳಲ್ಲಿ ವಿಟಿಯು ಫಲಿತಾಂಶ ಪ್ರಕಟ!
Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ
Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ
Subrahmanya ಪರಿಸರದಲ್ಲಿ ಧಾರಾಕಾರ ಮಳೆ: ಕೆಲವೆಡೆ ಹಾನಿ
Mangaluru ನಮಾಜ್ ಪ್ರಕರಣ: ಬಿ ರಿಪೋರ್ಟ್ ಸಲ್ಲಿಕೆ; ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ