ಭಾವನೆಗಳಿಗೆ ತಕ್ಕಂತೆ ಭಗವಂತನ ಸ್ಪಂದನೆ


Team Udayavani, Mar 31, 2017, 1:12 PM IST

hub2.jpg

ಹುಬ್ಬಳ್ಳಿ: ನಮ್ಮ ಭಾವನೆಗಳಿಗೆ ತಕ್ಕಂತೆ ಭಗವಂತ ಸ್ಪಂದಿಸುತ್ತಾನೆ ಎಂದು ತೋರಿಸಿಕೊಟ್ಟಿದ್ದೇ ರಾಮಾಯಣ ಎಂದು ಉಡುಪಿ ಪಲಿಮಾರುಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು. ಶ್ರೀ ಕೃಷ್ಣ ಕಲ್ಯಾಣಮಂಟಪದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ಗುರುವಾರ ರಾಮಾಯಣದ ಪ್ರವಚನ ನೀಡಿದರು.

ದಶರಥ ಮಕ್ಕಳು ಬೇಕೆಂದು ದೇವರಲ್ಲಿ ಬೇಡಿಕೊಂಡ. ಅದೇ ರೀತಿ ಜಗವನ್ನು ಉದ್ಧರಿಸಲು ಅವತರಿಸು ಎಂದು ಭುವಿಯ ಜನರೆಲ್ಲ ಭಗವಂತನನ್ನು ಬೇಡಿಕೊಂಡರು. ಇದೇ ಸಂದರ್ಭದಲ್ಲಿ ರಾವಣನ ಕಾಟ ಮಿತಿ ಮೀರಿದ್ದು, ಅವನ ತೊಂದರೆಯಿಂದ ಮುಕ್ತಿ ನೀಡಬೇಕೆಂದು ದೇವತೆಗಳೆಲ್ಲ ಕೇಳಿಕೊಂಡರು.

ಆಗ ಭಗವಂತ ಜನ್ಮ ಪಡೆದ. ರಾಮನಾಗಿ ಹುಟ್ಟಿದ ಎಂದು ವಾಲ್ಮೀಕಿ ರಾಮಾಯಣದಲ್ಲಿ ಬರೆದಿದ್ದಾರೆ ಎಂದರು. ನಾವು ಪ್ರತಿನಿತ್ಯ ಅಶ್ವಮೇಧಯಾಗ ಮಾಡಿದರೆ ನಮ್ಮ ಜೀವನ ಪಾವನವಾಗುತ್ತದೆ. ಇಂದ್ರಿಯಗಳ ಮೇಲಿನ ನಿಯಂತ್ರಣವೇ ಅಶ್ವಮೇಧಯಾಗ. ಇಂದ್ರಿಯಗಳನ್ನು ಭಗವಂತ ನೀಡಿದ್ದೆಂದುಕೊಂಡು ಬದುಕಬೇಕು. 

ಆಗ ಭಗವಂತ ನಮ್ಮನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ. ಎಂದರು. ರಾಮನ ಬಲವನ್ನು ಬಿಂಬಿಸುವುದೇ ಬಾಲಕಾಂಡ. ಬಾಲ ಕಾಂಡದಲ್ಲಿ ಕೇವಲ ರಾಮನ ಬಾಲ್ಯದೊಂದಿಗೆ ರಾಮನ ಸಾಮರ್ಥ್ಯವನ್ನೂ ಚಿತ್ರಿಸಲಾಗಿದೆ. ರಾಮಭೂಮಿಗೆ ಬಂದಿದ್ದು ಪ್ರಾರಬ್ಧವಲ್ಲ, ಎಲ್ಲರ ಸೌಭಾಗ್ಯ.

ಎಲ್ಲರನ್ನು ಅನುಗ್ರಹಿಸಲು ಭಗವಂತ ಭೂಮಿಗೆ ಬಂದ ಎಂದರು. ರಾಮಾಯಣದಲ್ಲಿ 7 ಕಾಂಡಗಳಿವೆ. ಒಂದು ಕಾಂಡದ ಮರ ನೂರಾರು ವರ್ಷ ಬದುಕುತ್ತದೆ. 7 ಕಾಂಡದ ರಾಮಾಯಣ ಲಕ್ಷಾಂತರ ವರ್ಷಗಳವರೆಗೂ ನಿರಾತಂಕವಾಗಿ ಬದುಕುತ್ತದೆ ಎಂದರು. ವೈದ್ಯಕೀಯ ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ರಕ್ತ ತಯಾರು ಮಾಡಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. 

ರಕ್ತ ಉತ್ಪಾದನೆ ಮಾಡುವುದು ಭಗವಂತನಿಂದ ಮಾತ್ರ ಸಾಧ್ಯ. ಬ್ಲಿಡ್‌ ಬ್ಯಾಂಕ್‌ಗಳನ್ನು ಮಾಡಬಹುದೇ ಹೊರತು ಬ್ಲಿಡ್‌ ಫ್ಯಾಕ್ಟರಿಗಳನ್ನು ಮಾಡುವುದು ಸಾಧ್ಯವಾಗಿಲ್ಲ. ಇದು ಭಗವಂತನ ವಿಶೇಷತೆ ಎಂದರು. ಮಾನವರು ಮಾಂಸ-ಖಂಡ ಬೆಳೆಸಲು ಮಾಂಸ ತಿನ್ನಬೇಕಿಲ್ಲ. ಮನುಷ್ಯ ಮೂಲತಃ ಸಸ್ಯಾಹಾರಿ. 

ಸಸ್ಯಾಹಾರಿಗಳಿಗಿದ್ದಂತೆ ನಮಗೆ ಹಲ್ಲು, ದೇಹ ರಚನೆಯಿದೆ. ರಕ್ತ, ಮಾಂಸ ನೀಡಿಯೇ ಭಗವಂತ ನಮ್ಮನ್ನು ಕಳಿಸಿರುತ್ತಾನೆ. ಸಿಂಹ ಮಾಂಸಾಹಾರಿಯಾಗಿದ್ದರೂ, ಸಸ್ಯಾಹಾರಿಯಾಗಿರುವ ಆನೆ ಸಿಂಹಕ್ಕಿಂತ ಬಲಿಷ್ಠವಾದುದು ಎಂದರು. ಒಬ್ಬ ಹಿಂದೂ ಹೇಳಿದ್ದನ್ನು ಇನ್ನೊಬ್ಬ ಕೇಳುವುದಿಲ್ಲ. ನಮ್ಮಲ್ಲಿ ಒಗ್ಗಟ್ಟು ಇರದಿದ್ದರಿಂದ ನಮಗೆ ಇಂಥ ಸ್ಥಿತಿ ಬಂದೊದಗಿದೆ ಎಂದರು.  

ಟಾಪ್ ನ್ಯೂಸ್

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

1-imek

ನಮ್ಮ ‘ಐಮೆಕ್‌’ ಪ್ರಾಜೆಕ್ಟ್ ಗೆ ಜಿ7 ನಾಯಕರ ಬೆಂಬಲ!

vande bharat

ಜೂ.20ಕ್ಕೆ ಬೆಂಗಳೂರು-ಮಧುರೈ ವಂದೇ ಭಾರತ್‌: ಕರ್ನಾಟಕಕ್ಕೆ 9ನೇ ರೈಲು

1-sugopi

ಇಂದಿರಾ ಗಾಂಧಿ ಕಾಂಗ್ರೆಸ್‌ ಮಾತೆ: ಉಲ್ಟಾ ಹೊಡೆದ ಸುರೇಶ್‌ ಗೋಪಿ

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

1-wewwqewq

T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಹ್ಲಾದ ಜೋಶಿ

Hubli: ದಿವಾಳಿಯಾದ ಸರ್ಕಾರ ಜನರಿಗೆ ಬೆಲೆ ಏರಿಕೆಯ ಬರೆ ಹಾಕಿದೆ: ಪ್ರಹ್ಲಾದ ಜೋಶಿ

Politics: ಕಾಂಗ್ರೆಸ್ ಜನರ ಕೈಗೆ ಬೆಲೆ ಏರಿಕೆಯ ಚೊಂಬು ಕೊಟ್ಟಿದೆ; ಅರವಿಂದ ಬೆಲ್ಲದ ವಾಗ್ದಾಳಿ

Politics: ಕಾಂಗ್ರೆಸ್ ಜನರ ಕೈಗೆ ಬೆಲೆ ಏರಿಕೆಯ ಚೊಂಬು ಕೊಟ್ಟಿದೆ; ಅರವಿಂದ ಬೆಲ್ಲದ ವಾಗ್ದಾಳಿ

Hubli; ದರ್ಶನ್ ಅವರನ್ನು ರಾಯಭಾರಿಯಾಗಿ ನೇಮಿಸಿದ್ದು ಸರ್ಕಾರದ ತಪ್ಪು: ಪ್ರಹ್ಲಾದ ಜೋಶಿ

Hubli; ದರ್ಶನ್ ಅವರನ್ನು ರಾಯಭಾರಿಯಾಗಿ ನೇಮಿಸಿದ್ದು ಸರ್ಕಾರದ ತಪ್ಪು: ಪ್ರಹ್ಲಾದ ಜೋಶಿ

Dharwad: ಗೋವು ರಕ್ಷಕರ ಮೇಲೆ ಮುಸ್ಲಿಂ ಯುಕರಿಂದ ಹಲ್ಲೆ… ಭಜರಂಗದಳ ಪ್ರತಿಭಟನೆ

Dharwad: ಗೋವು ರಕ್ಷಕರ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ… ಭಜರಂಗದಳ ಪ್ರತಿಭಟನೆ

prahlad-joshi

CM ಸಿದ್ದರಾಮಯ್ಯ ಬುಡಕ್ಕೆ ನೀರು ಬಂದಿದ್ದಕ್ಕೆ ಯಡಿಯೂರಪ್ಪ ಗುರಿ: ಕೇಂದ್ರ ಸಚಿವ ಜೋಶಿ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

police crime

ಗೇಮಿಂಗ್‌ ಜೋನ್‌ ದುರಂತ: ಇನ್ನೂ ಇಬ್ಬರು ಪೊಲೀಸ್‌ ವಶಕ್ಕೆ

police USA

ಅಮೆರಿಕದಲ್ಲಿ 2 ಪ್ರತ್ಯೇಕ ಶೂಟೌಟ್‌: ಇಬ್ಬರು ಸಾವು

arrested

ಸಲ್ಮಾನ್‌ ಮನೆ ಹೊರಗೆ ಗುಂಡಿನ ದಾಳಿ: ರಾಜಸ್ಥಾನದ ವ್ಯಕ್ತಿ ಸೆರೆ

baby

UP ಕ್ಷುಲ್ಲಕ ಕಾರಣಕ್ಕೆ 2 ವರ್ಷದ ಮಗಳನ್ನು ಕಾಲುವೆಗೆಸೆದ ತಂದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.