ಆ್ಯಂಬುಲೆನ್ಸ್ ಕಂಡರೆ ಬೆಚ್ಚುವ ಜನ!
Team Udayavani, Apr 7, 2020, 3:00 PM IST
ಮಾಲೂರು: ವಿಶ್ವ ಸಮುದಾಯವನ್ನೇ ನಿದ್ದೆ ಕೆಡಿಸಿರುವ ಕೋವಿಡ್ 19 ವೈರಸ್ ತಾಲೂಕಿನ ಗ್ರಾಮೀಣ ಹಾಗೂ ಪಟ್ಟಣದ ಜನರನ್ನೂ ಭೀತಿಗೆ ತಳ್ಳಿದೆ. ಎಷ್ಟರ ಮಟ್ಟಿಗೆ ಅಂದರೆ ಯಾವುದಾದ್ರು ಆ್ಯಂಬುಲೆನ್ಸ್ ಬಂದರೂ ದೂರು ಹೋಗುವುದು, ಬಾಗಿಲು ಮುಚ್ಚಿಕೊಳ್ಳುವುದು, ಆತಂಕದಿಂದ ನೋಡುವಂತಾಗಿದೆ.
ಹಿಂದೆ ಬಡಾವಣೆಯ ಯಾವುದೇ ಮನೆಯ ಮುಂದೆ ಆ್ಯಂಬುಲೆನ್ಸ್ ವಾಹನ ಬಂದರೆ ಸಾಕು ಗುಂಪಾಗಿ ಸೇರುತ್ತಿದ್ದ ಜನ, ಈಗ ಆ್ಯಂಬುಲೆನ್ಸ್ ಕಂಡ ಕೂಡಲೇ ಅನುಮಾನದಿಂದ ನೋಡುತ್ತಾರೆ. ಜೊತೆಗೆ ಮನೆಯ ಕಿಟಕಿ ಬಾಗಿಲು ಹಾಕಿಕೊಳ್ಳುತ್ತಾರೆ. ಅಲ್ಲದೇ, ಪೊಲೀಸ್ ವಾಹನದೊಂದಿಗೆ ಆ್ಯಂಬುಲೆನ್ಸ್ ಕಂಡರೆ ದೂರ ಓಡುವಂತಹ ಪರಿಸ್ಥಿತಿ ಇದೆ.
ತುರ್ತು ಸಂದರ್ಭಗಳಲ್ಲಿ ಬರುವ 108 ಆ್ಯಂಬುಲೆನ್ಸ್ ಕಂಡರೂ ಬೆಚ್ಚಿಬೀಳುತ್ತಿರುವ ಜನರು, ತುರ್ತು ಸಂದರ್ಭದಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಿದ ನಂತರ ಅಕ್ಕಪಕ್ಕದ ಮನೆಯವರಿಗೆ ಸರಿಯಾದ ಮಾಹಿತಿ ಕಲೆ ಹಾಕಿದ ನಂತರವೇ ಮನೆಯಿಂದ ಹೊರ ಬರುತ್ತಿರುವ ಪರಿಸ್ಥಿತಿ ಇದೆ. ಈ ಬಗ್ಗೆ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಸಂತಕುಮಾರ್, ತುರ್ತು ಪರಿಸ್ಥಿಯಲ್ಲಿನ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು 108 ವಾಹನವನ್ನು ಬಳಕೆ ಮಾಡಿಕೊಳ್ಳುತ್ತಿದೆ.
ಗರ್ಭಿಣಿಯರು ಮತ್ತು ನವ ಜಾತ ಶಿಶುಗಳ ಹಾರೈಕೆಗೆ ಸರ್ಕಾರದ ನಗು ಮಗು ತುರ್ತು ವಾಹನ ಬಳಕೆ ಮಾಡಿಕೊಂಡಿದ್ದು, ವಿಶೇಷವಾಗಿ ಕೊರೊನಾ ಸೋಂಕಿತರು, ಅನುಮಾನದ ವ್ಯಕ್ತಿಗಳನ್ನು ಸಾಂಕ್ರಾಮಿಕ ಕೇಂದ್ರಕ್ಕೆ ರವಾನಿಸಲು ತಾಲೂಕುಆಸ್ಪತ್ರೆಯು ಪ್ರತ್ಯೇಕ ಆ್ಯಂಬುಲೆನ್ಸ್ ಸೇವೆ ನೀಡುತ್ತಿದೆ ಎಂದರು. ಇದರಿಂದ ಜನರು 108 ಮತ್ತು ನಗು ಮಗು ವಾಹನಗಳನ್ನು ತಮ್ಮ ಮನೆಯ ಅಕ್ಕ ಪಕ್ಕದಲ್ಲಿ ಕಂಡರೆ ಅಂತಕ ಪಡುವುದು ಬೇಡ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?