ಮಂಚನಹಳ್ಳಿಯಲ್ಲಿ ಚಿರತೆ ಸೆರೆ
Team Udayavani, Apr 11, 2020, 4:49 PM IST
ಮಳವಳ್ಳಿ: ತಾಲೂಕಿನ ಮಂಚನಹಳ್ಳಿಯ ತೋಟದ ಮನೆಯಲ್ಲಿ ಗುರುವಾರ ರಾತ್ರಿ ಚಿರತೆ ಕಾಣಿಸಿಕೊಂಡು ಯುವಕರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿರತೆಸೆರೆ ಹಿಡಿಯಲಾಗಿದೆ.
ತಾಲೂಕಿನ ಬೆಳಕವಾಡಿಯ ಶ್ರೀನಿವಾಸರ ತೋಟದ ಮನೆಯಲ್ಲಿ ಹಸುಗಳಿಗಾಗಿ ರವೆ ಬೂಸಾವನ್ನು ಮೂರು ದಿನಗಳ ಹಿಂದೆ ತಂದಿಟ್ಟಿದ್ದರು. ಅದು ದಿನದಿನವೂ ಯಾರೋ ಕಳ್ಳತನ ಮಾಡುತ್ತಿದ್ದಾರೆಂಬ ಅನುಮಾನದಿಂದ ಅವರ ಸಂಬಂಧಿಕರಾದ ನವೀನ್ ಕುಮಾರ್, ಮಧು ಗುರುವಾರ ರಾತ್ರಿ ತೋಟದ ಮನೆಗೆ ಬಂದು ನೋಡಿದಾಗ ರವೆ ಬೂಸಾ ತಿಂದು ಅಲ್ಲೇ ಇದ್ದ ಚಿರತೆ ಘರ್ಜಿಸಿದೆ.
ಯುವಕರ ಮೇಲೆ ದಾಳಿ ಮಾಡಲು ಬಂದಾಗ ಹೆದರಿ ಓಡಿ ತೋಟದ ಮನೆಯ ಬಾಗಿಲು ಹಾಕಿಟ್ಟು ಬೆಳಿಗ್ಗೆ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಕಾರ್ಯಾಚರಣೆಯಲ್ಲಿ ಬೋನಿಟ್ಟು, ಬಲೆ ಹಾಕಿ ಪಟಾಕಿ ಸಿಡಿಸಿ ಚಿರತೆ ಸೆರೆಹಿಡಿದರು. ವಲಯ ಅರಣ್ಯಾಧಿಕಾರಿ ಆಸಿಫ್ ಅಹಮದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾವೇರಿ ಅಭಯಾರಣ್ಯ ವಲಯಕ್ಕೆ ಚಿರತೆ ಬಿಡುವುದಾಗಿ ತಿಳಿಸಿದರು.
ಇದೇ ವೇಳೆ ತಾಪಂ ಸದಸ್ಯ ಪುಟ್ಟಸ್ವಾಮಿ, ಉಪ ಅರಣ್ಯಾಧಿಕಾರಿ ರಮೇಶ್, ಮನೋಹರ್, ನಂದೀಶ್ ಹಾಗೂ 20ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sugar ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು
Ambulance ಸಕಾಲಕ್ಕೆ ಬಂದಿದ್ದರೆ ನಟಿ ಬದುಕುತ್ತಿದ್ದರು: ಸ್ನೇಹಿತ
HD ಕುಮಾರಸ್ವಾಮಿಗೂ ರೇವಣ್ಣ ಸ್ಥಿತಿಯೇ ಬರಲಿದೆ: ಕಾಂಗ್ರೆಸ್ ಶಾಸಕ ಉದಯ್
Protest: ಕೆರಗೋಡು ಹನುಮ ಧ್ವಜ ವಿವಾದ; ಜೆಡಿಎಸ್, ಭಜರಂಗದಳ, ವಿ.ಹಿಂ.ಪ. ಪ್ರತಿಭಟನೆ
Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Taiwan; ಸಂಸತ್ನಲ್ಲಿ ಸಂಸದರ ಭಾರೀ ಬಡಿದಾಟ!
Singapore; ಹೆಚ್ಚಿದ ಕೋವಿಡ್: ಮಾಸ್ಕ್ ಕಡ್ಡಾಯಕ್ಕೆ ಮತ್ತೆ ಆದೇಶ
Gundmi Toll Plaza ಸ್ಥಳೀಯರಿಗೆ ಟೋಲ್ ಬರೆ; ಟೋಲ್ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ
Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’