ಕೆರೆ ನೀರು ಶುದ್ಧೀಕರಿಸಿ ಪೂರೈಸಲು ಆಗ್ರಹ
Team Udayavani, Jul 26, 2017, 1:07 PM IST
ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಯಿಂದ ಕುಡಿಯುವ ನೀರಿಗಾಗಿ ಕೆರೆಗೆ ನೀರು ಹರಿಸಲಾಗುತ್ತಿದೆ. ಕೆರೆಗೆ ಕಲುಷಿತವಾದ ಪೂರೈಕೆಯಾಗುತ್ತಿದ್ದು, ನಗರಸಭೆಯಿಂದ ಇದೇ ನೀರು ಸರಬರಾಜು ಮಾಡಲಾಗುತ್ತಿದೆ. ಕಾರಣ ಆಡಳಿತ ಮಂಡಳಿ ನೀರು ಶುದ್ಧೀಕರಿಸಿ ನೀರು ಪೂರೈಸಬೇಕೆಂದು ನಗರಾಭಿವೃದ್ಧಿ ಹೋರಾಟ ಸಮಿತಿ ಆಗ್ರಹಿಸಿದೆ.
ಕುಷ್ಟಗಿ ರಸ್ತೆಯಲ್ಲಿರುವ ಕೆರೆ ಮತ್ತು ಶುದ್ಧೀಕರಣ ಘಟಕ ವೀಕ್ಷಿಸಿದ ಹೋರಾಟ ಸಮಿತಿ ಮುಖಂಡರು, ಕೆರೆ ನೀರನ್ನು ಕ್ಲೋರಿನೇಶನ್ ಮಾಡದೆ ಸರಬರಾಜು ಆಗುತ್ತಿರುವುದನ್ನು ನೋಡಿ ಸಿಡಿಮಿಡಿಗೊಂಡು ತಕ್ಷಣ ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕುಡಿಯುವ ನೀರಿನ ಕೆರೆಗೆ ನೀರು ಪೂರೈಸುತ್ತಿರುವುದರಿಂದ ಸಣ್ಣ ಕೆರೆ ತುಂಬಿದೆ. ದೊಡ್ಡ ಕೆರೆಗೆ ಎತ್ತುವಳಿ ಮಾಡಲಾಗುತ್ತಿದೆ. ಈ ಮಧ್ಯೆ ಚಿಕ್ಕಮಕ್ಕಳು ಸೇರಿದಂತೆ ನೂರಾರು ಜನರು ಕೆರೆ ಮೇಲ್ಭಾಗದಲ್ಲಿ ಓಡಾಡುತ್ತಿರುವುದರಿಂದ ಅಪಾಯ ಉಂಟಾಗುವ ಸಂಭವವಿದೆ.
ಈ ಹಿಂದೆ ಇಬ್ಬರು ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಕೆರೆ ಸುತ್ತ ತಂತಿ ಬೇಲಿ ಹಾಕಬೇಕೆಂದು ಹೋರಾಟ ಸಮಿತಿ ಮುಖಂಡರಾದ ಡಿ.ಎಚ್.ಕಂಬಳಿ, ಚಂದ್ರಶೇಖರ ಗೊರೇಬಾಳ ಆಗ್ರಹಿಸಿದರು. ವೆಂಕನಗೌಡ ಗದ್ರಟಗಿ, ಎಸ್ .ದೇವೇಂದ್ರಗೌಡ, ಗುಂಡಪ್ಪ ಬಳಿಗಾರ, ಖಾನ್ ಸಾಬ, ಡಾ| ತಾಹೇರ್ ಅಲಿ, ಕೆ.ಬಸವರಾಜ, ಶಂಕರ ಗುರಿಕಾರ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lost Control: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು
Pune Porsche Car Crash: ರಕ್ತದ ಮಾದರಿ ಬದಲಾಯಿಸಲು 3 ಲಕ್ಷ ರೂ. ಪಡೆದಿದ್ದ ವೈದ್ಯರು
Arrested: ಲಿವ್ ಇನ್ ಸಂಗಾತಿ ಆತ್ಮಹತ್ಯೆ; ಐಆರ್ಎಸ್ ಅಧಿಕಾರಿ ಬಂಧನ
ಕೌಟುಂಬಿಕ ಕಲಹ: ಪತ್ನಿಯನ್ನೇ ಹತ್ಯೆಗೈದು ದೇಹದ ಭಾಗಗಳನ್ನು ತುಂಡರಿಸಿ ವಿಕೃತಿ ಮೆರೆದ ಪತಿ
Threat: ವಿಮಾನಕ್ಕೆ ಬಾಂಬ್ ಬೆದರಿಕೆ… ಜೀವ ಭಯದಿಂದ ವಿಮಾನದ ಕಿಟಕಿಯಿಂದ ಹಾರಿದ ಪ್ರಯಾಣಿಕರು