ಬೇಳೂರು : ಹಸಿದ ಹೊಟ್ಟೆಗೆ ಅನ್ನ ನೀಡಿ ಮಾನವೀಯತೆ ಮೆರೆದರು
ಗ್ರಾಮದ 200 ಬಡ ಕೂಲಿ ಕಾರ್ಮಿಕರಿಗೆ ನಿತ್ಯ ಭೋಜನದ ವ್ಯವಸ್ಥೆ ಕಲ್ಪಿಸಲು ಮುಂದಾದ ಉದ್ಯಮಿಗಳು
Team Udayavani, Mar 30, 2020, 6:48 PM IST
ತೆಕ್ಕಟ್ಟೆ : ಜಗತ್ತಿನಾದ್ಯಂತ ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ ಕೋವಿಡ್ 19 ವೈರಸ್ ತಡೆಗಟ್ಟಲು ಇಡೀ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಸುಮಾರು 200 ಕ್ಕೂ ಅಧಿಕ ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ಉಪಹಾರ ಹಾಗೂ ಊಟ ವನ್ನು ನೀಡುವ ಕಾರ್ಯಕ್ಕೆ ಉದ್ಯಮಿ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಮಾ.30 ರಂದು ಚಾಲನೆ ನೀಡುವ ಮೂಲಕ ಮಾನವೀಯತೆ ಮೆರೆದರು.
ಬೇಳೂರು ಗ್ರಾಮದಲ್ಲಿರುವ ಉದ್ಯಮಿಗಳಾದ ಮಹೇಂದ್ರ ಮೊಗವೀರ, ಸುರೇಂದ್ರ ಮೊಗವೀರ, ನಿತ್ಯಾನಂದ ಕೊಠಾರಿ, ಪಡುಮುಂಡು ರತ್ನಾಕರ ಶೆಟ್ಟಿ, ಧನಂಜಯ ಕೊಠಾರಿ ಹಾಗೂ ದೇಲಟ್ಟು ಫ್ರೆಂಡ್ಸ್ನ ಸಹಕಾರದೊಂದಿಗೆ ಸುಮಾರು ಬೇಳೂರು, ಮೊಗೆಬೆಟ್ಟು, ದೇಲಟ್ಟು ಪರಿಸರದ ಸುಮಾರು 200 ಮಂದಿ ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ನಿತ್ಯ ಭೋಜನದ ವ್ಯವಸ್ಥೆಯನ್ನು ಕಲ್ಪಿಸುವ ಮಹತ್ವದ ಕಾರ್ಯದಲ್ಲಿ ಗ್ರಾಮದ ಸಮಾನ ಮನಸ್ಕ ದಾನಿಗಳು ಮುಂದೆ ಬಂದೆ ಬರುವ ಜತೆಗೆ ಗ್ರಾಮದಲ್ಲಿನ ಹಸಿದ ಹೊಟ್ಟೆಗೆ ಅನ್ನ ನೀಡುವ ಮಹತ್ವದ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ. ಈ ಸಂದರ್ಭದಲ್ಲಿ ಡಿ.ಸಿ.ಉಮೇಶ್ ಶೆಟ್ಟಿ ದೇಲಟ್ಟು, ರಾಘವೇಂದ್ರ ಶೆಟ್ಟಿ, ಗೌತಮ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಮಹೇಶ್ ಶೆಟ್ಟಿ ದೇಲಟ್ಟು ಮತ್ತಿತರರು ಸಹಕರಿಸಿದರು.
ಚಿತ್ರ/ ವೀಡಿಯೋ: ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…