ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು: 81 ವರ್ಷಗಳ ಸನ್ಯಾಸ, 6 ವರ್ಷ ಉಪವಾಸ!
Team Udayavani, Dec 12, 2019, 5:00 AM IST
ಉಡುಪಿ: ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಇದುವರೆಗೆ ಒಟ್ಟು ಆರು ವರ್ಷ ಉಪವಾಸ ಮಾಡಿರುವುದು ಒಂದು ವಿಶೇಷವೇ ಸರಿ. 1931ರ ಎ. 27ರಂದು ಜನಿಸಿದ ಇವರು ಸನ್ಯಾಸಾಶ್ರಮ ಸ್ವೀಕರಿಸಿದ್ದು ಬಹುಧಾನ್ಯ ಸಂವತ್ಸರದ ಮಾರ್ಗಶಿರ ಮಾಸದ ದಶಮಿಯಂದು (1938ರ ಡಿ.3). ಅದರ ಮರುದಿನವೇ ಏಕಾದಶಿ. ಸನ್ಯಾಸಾಶ್ರಮದ ಮರುದಿನವೇ ಇವರಿಗೆ ಏಕಾದಶಿ ಉಪವಾಸ ಅಭ್ಯಾಸ ಶುರುವಾಯಿತೆನ್ನಬಹುದು. ಸನ್ಯಾಸಾಶ್ರಮ ಸ್ವೀಕರಿಸಿ 81 ವರ್ಷಗಳು ಸಂದಿವೆ.
ಪ್ರತಿ 15 ದಿನಗಳಿಗೊಮ್ಮೆ ಬರುವ ಏಕಾದಶಿಯಂತೆ ವರ್ಷಕ್ಕೆ 24 ಏಕಾದಶಿ, ವರ್ಷದಲ್ಲಿ ಎರಡು ಗ್ರಹಣ, ಒಂದು ಕೃಷ್ಣಾಷ್ಟಮಿ- ಇವುಗಳನ್ನು ಸೇರಿಸಿದರೆ ವರ್ಷಕ್ಕೆ ಕನಿಷ್ಠ 27 ದಿನ ನಿರ್ಜಲ ಉಪವಾಸ ಮಾಡುತ್ತಾರೆ. ಅವರ ಇತ್ತೀಚೆಗಿನ ಏಕಾದಶಿ ಉಪವಾಸವೆಂದರೆ ಗೀತಾ ಜಯಂತಿಯಂದು.
27 ದಿನ * 81 ವರ್ಷ = ಒಟ್ಟು 2,187 ದಿನಗಳಾಗುತ್ತವೆ. ಇದು 5 ವರ್ಷಗಳು ಮತ್ತು 362 ದಿನಗಳಿಗೆ ಸಮನಾಯಿತು. ಅಂದರೆ ಸ್ವಾಮೀಜಿ ಸುಮಾರು 6 ವರ್ಷ ಉಪವಾಸ ಮಾಡಿ ದ್ದಾರೆ. ಇದರಲ್ಲಿ ಅಧಿಕ ಮಾಸದ ಏಕಾದಶಿ ಲೆಕ್ಕ, ಶ್ರವಣೋಪವಾಸಗಳು ಸೇರಿಲ್ಲ. 27 ದಿನಗಳಿಗೊಮ್ಮೆಯ ಚಾಂದ್ರಮಾನ ತಿಂಗಳನ್ನು ಸೌರಮಾಸದ 30 ದಿನಗಳ ತಿಂಗಳಿಗೆ ಸರಿಹೊಂದಿಸಲು 4 ವರ್ಷಗಳಿಗೊಮ್ಮೆ ಅಧಿಕ ಮಾಸ ಬರುತ್ತದೆ. ನಾಲ್ಕು ವರ್ಷಕ್ಕೊಮ್ಮೆ ಬರುವ ಈ ಎರಡು ಏಕಾದಶಿಗಳು ಪ್ರತ್ಯೇಕ. ಏಕಾದಶಿಯ ಮರುದಿನ ಸೂರ್ಯೋದಯದ ವೇಳೆ ಶ್ರವಣ ನಕ್ಷತ್ರವಿದ್ದರೆ ದ್ವಾದಶಿಯಂದೂ ಉಪವಾಸ ಕೈಗೊಳ್ಳುತ್ತಾರೆ – ಇದು ಶ್ರವಣೋಪವಾಸ. ಇದು ವರ್ಷಕ್ಕೆ ಒಂದೆರಡು ಬಾರಿ ಬರುತ್ತದೆ. ಇದು ಸತತ ಎರಡು ದಿನಗಳ ಉಪವಾಸ.
ಮೊದಲ 8 ವರ್ಷ ಬಾಲ್ಯವಾಯಿತು. ಒಟ್ಟು 81 ವರ್ಷಗಳ ಸನ್ಯಾಸದಲ್ಲಿ ಉಪವಾಸದ ದಿನಗಳೇ 6 ವರ್ಷಗಳಾದವು. ಇಷ್ಟೊಂದು ದಿನ ಉಪವಾಸ ಮಾಡಿದವರು ಬೇರೆ ಯಾರಾದರೂ ಇರುವುದು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಯಾರಾದರೂ ಗಿನ್ನೆಸ್ ದಾಖಲೆಗೆ ಸೇರಿಸುವುದಾದರೆ ಇದೊಂದು ದಾಖಲೆಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ