ಎಂಡೋಪೀಡಿತರ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ
ವಾರದಲ್ಲಿ ಕಾರ್ಯಾರಂಭ; ಜಿಲ್ಲೆಯಲ್ಲಿ ಮೊದಲ ಬಾರಿಗೆ ಸೇವೆ
Team Udayavani, Mar 10, 2020, 5:51 AM IST
ಸಾಂದರ್ಭಿಕ ಚಿತ್ರ
ಉಡುಪಿ: ಎಂಡೋ ಪೀಡಿತರ ಅಂಗವಿಕಲರ ನ್ಯೂನತೆಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವುದು ಅಸಾಧ್ಯವಾದರೂ ಅವರಿಗೆ ಸೂಕ್ತ ಚಿಕಿತ್ಸಾ ವಿಧಾನ ಮತ್ತು ತರಬೇತಿ ನೀಡಿದಲ್ಲಿ ಒಂದಷ್ಟು ಸುಧಾರಣೆ ಕಾಣಬಹುದು. ಇದನ್ನು ಮನಗಂಡ ಆರೋಗ್ಯ ಇಲಾಖೆ ಎಂಡೋಪೀಡಿತ ಅಂಗವಿಕಲರಿಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ಮುಂದಾಗಿದೆ.
ಮುಂದಿನ ವಾರದಿಂದ
ಮೊದಲ ಬಾರಿಗೆ ಎಂಡೋಪೀಡಿತರ ಫಿಸಿಯೋಥೆರಪಿ ಮೊಬೈಲ್ ಕ್ಲಿನಿಕ್ ಸೇವೆ ಉಡುಪಿ ಜಿಲ್ಲೆಯಲ್ಲಿ ಮುಂದಿನ ವಾರದಿಂದ ಕಾರ್ಯಾರಂಭಿಸಲಿದೆ. ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಯೋಜನೆಯಡಿ ಸಂಚಾರಿ ಘಟಕ ಕೆಲಸ ನಿರ್ವಹಿಸಲಿದೆ.
ಸಂಚಾರಿ ಘಟಕ ತೆರಳಲಿರುವ ಪ್ರದೇಶಗಳು
ಜಿಲ್ಲೆಯ ಮೂರು ತಾಲೂಕುಗಳಲ್ಲಿ ಹಾಸಿಗೆ ಹಿಡಿದ ಹಲವು ಮಂದಿ ಎಂಡೋಪೀಡಿತರಿದ್ದಾರೆ. ಅವರಿಗೆ ಪಾಲನೆ ಕೇಂದ್ರಕ್ಕೆ ಅಥವಾ ಆಸ್ಪತ್ರೆಗಳಿಗೆ ಬರಲಾಗುತಿಲ್ಲ. ಸಾೖಬರಕಟ್ಟೆ, ಹಿರಿಯಡ್ಕ, ಮಂದರ್ತಿ, ಕುಕ್ಕೆಹಳ್ಳಿ, ಕಾರ್ಕಳ ತಾಲೂಕಿನ ಇರ್ವತ್ತೂರು, ಹೆಬ್ರಿ, ದೊಂಡೆರಂಗಡಿ, ನಿಟ್ಟೆ, ಬೈಲೂರು, ಈದು, ಕುಂದಾಪುರ ತಾಲೂಕಿನ ಕಂಡೂÉರು, ಹಾಲಾಡಿ, ಬಿದ್ಕಲ್ ಕಟ್ಟೆ, ಕೆದೂರು, ಬೆಳ್ವೆ, ಹಕ್ಲಾಡಿ ಶಿರೂರು, ಕಿರಿಮಂಜೇಶ್ವರ, ವಂಡ್ಸೆ ಮೊದಲಾದ ಕಡೆಗಳಲ್ಲಿ ಎಂಡೋಪೀಡಿತರಿದ್ದಾರೆ. ಇವರೆಲ್ಲರೂ ಫಿಸಿಯೋಥೆರಪಿ ಸಂಚಾರಿ ಕ್ಲಿನಿಕ್ ಪ್ರಯೋಜನ ಪಡಕೊಳ್ಳಲಿದ್ದಾರೆ.
ನಾಲ್ವರ ತಂಡ
ಸಂಚಾರಿ ಘಟಕ ತೆರೆಯಲು ವೈದ್ಯಕೀಯ ಮತ್ತು ಫಿಸಿಯೋಥೆರಫಿ ಸಾಧನ ಸಲಕರಣೆ ಖರೀದಿಗೆ 2020ರ ಜ.1ರಂದು ದರ ಪಟ್ಟಿ ಆಹ್ವಾನಿಸಲಾಗಿತ್ತು. ಮಾ.5ರಂದು ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ. ಬೆಳಗಾವಿ ತಾಲೂಕು ಹುಕ್ಕೇರಿಯ ಕರ್ನಾಟಕ ರೂರಲ್ ಎಜ್ಯುಕೇಶನ್ ಸೊಸೈಟಿ ಹಿಡಕಲ್ ಡಾಮ್ ಸೊಸೈಟಿ ಘಟಕ ತೆರೆ ಯುವ ಗುತ್ತಿಗೆ ವಹಿಸಿಕೊಂಡಿದೆ. ಆರೋಗ್ಯ ಇಲಾಖೆ ನೀಡಿರುವ ಎಂಡೋಪೀಡಿತರ ಪಟ್ಟಿಯಲ್ಲಿರುವ ಸಂತ್ರಸ್ತರ ಮನೆಗಳಿಗೆ ಈ ಸಂಚಾರಿ ಘಟಕ ತೆರಳಿ ಚಿಕಿತ್ಸೆ ನೀಡಲಿದೆ. ಫಿಸಿಯೋಥೆರಪಿ ತಜ್ಞರು, ಶುಶ್ರೂಷಕಿ, ಅಸಿಸ್ಟೆಂಟ್, ಚಾಲಕ ಇರಲಿದ್ದಾರೆ.
ಜಿಲ್ಲಾ ಕೇಂದ್ರ ವಿಳಂಬಕ್ಕೆ ಪರ್ಯಾಯ ವ್ಯವಸ್ಥೆ
ದ.ಕ. ಜಿಲ್ಲೆಯಲ್ಲಿ ಎಂಡೋಪೀಡಿತರಿಗೆ ಫಿಸಿಯೋಥೆರಪಿ ಚಿಕಿತ್ಸೆಗೆ 5 ಘಟಕಗಳು ಕಾರ್ಯನಿರ್ವಹಿಸುತ್ತಿದ್ದರೂ, ಉಡುಪಿ ಜಿಲ್ಲೆಯಲ್ಲಿ ಒಂದು ಘಟಕವೂ ಇರಲಿಲ್ಲ. ಉಡುಪಿ ಜಿಲ್ಲಾ ಕೇಂದ್ರದಲ್ಲಿ ಫಿಸಿಯೋಥೆರಪಿ ಕೇಂದ್ರ ಸ್ಥಾಪನೆ ವಿಚಾರ ಪ್ರಸ್ತಾವನೆಯಲ್ಲಿದೆ. ಅದಿನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಇದಕ್ಕೆ ಸಂಬಂದಿಸಿದ ಕಡತ ಜಿಲ್ಲಾಧಿಕಾರಿ ಕಚೇರಿಗೆ ಅನುಮೋದನೆಗೆ ಹೋಗಿದೆ. ಜಾಗದ ಸಮಸ್ಯೆ ಇತ್ಯಾದಿಗಳಿಂದ ಪ್ರಕ್ರಿಯೆ ವಿಳಂಬವಾಗಿದೆ. ಅದು ನಿವಾರಣೆಗೆಯಾಗಲು ಸಮಯ ತೆಗೆದುಕೊಳ್ಳಲಿದೆ. ವಿಳಂಬವಾಗುವುದನ್ನು ಮನಗಂಡು ಸಂಚಾರಿ ಘಟಕ ಕಾರ್ಯಾರಂಭಿಸಲು ಇಲಾಖೆ ಮುಂದಾಗಿದೆ. ಫಿಜಿಯೋಥೆರಪಿಗಾಗಿ ಸಂತ್ರಸ್ತರು ಇನ್ನು ಮುಂದೆ ಅಲೆದಾಡುವ ಕಷ್ಟ ತಪ್ಪಲಿದೆ.
ಕಾರ್ಯಾದೇಶ ಪತ್ರ
ಜಿಲ್ಲೆಯಲ್ಲಿ ಮೂರು ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಾಚರಿಸಲು ಫಿಸಿಯೋಥೆರಪಿ ಸಂಚಾರಿ ಘಟಕ ತೆರೆಯಲು ಟೆಂಡರ್ ಕರೆಯಲಾಗಿತ್ತು. ಅದರಂತೆ ಬೆಳಗಾವಿಯ ಸಂಸ್ಥೆ ಗುತ್ತಿಗೆಯಲ್ಲಿ ಭಾಗವಹಿಸಿ ಗುತ್ತಿಗೆ ಪಡೆದುಕೊಂಡಿದೆ. ಘಟಕಕ್ಕೆ ಕಾರ್ಯಾರಂಭಿಸಲು ಕಾರ್ಯಾದೇಶ ಪತ್ರ ನೀಡಲಾಗಿದೆ.
-ಸತೀಶ್, ಹಿರಿಯ ಆರೋಗ್ಯ ಸಹಾಯಕರು,
ಉಡುಪಿ ಜಿಲ್ಲಾಸ್ಪತ್ರೆ.
ಗುತ್ತಿಗೆದಾರರಿಗೆ ಸೂಚನೆ
ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರಿಗಾಗಿ ಫಿಸಿಯೋಥೆರಪಿ ಕೇಂದ್ರ ತೆರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇನ್ನೂ ಅನುಮೋದನೆ ಸಿಕ್ಕಿಲ್ಲ. ಅದಕ್ಕೆ ಕಾಯದೆ ಫಿಸಿಯೋಥೆರಪಿ ಮೊಬೈಲ್ ಕ್ಲಿನಿಕ್ ಘಟಕ ಆರಂಭಿಸಲು ನಿರ್ಧರಿಸಿದ್ದೇವೆ. ಗುತ್ತಿಗೆ ನೀಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳ ಎಂಡೋಪ್ರದೇಶಗಳಿಗೆ ತೆರಳಿ ಘಟಕ ಚಿಕಿತ್ಸೆ ನೀಡಲಿದೆ. ವಾರದೊಳಗೆ ಘಟಕ ಕಾರ್ಯಾರಂಭಿಸಲು ಕಾರ್ಯಾದೇಶದಲ್ಲಿ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
-ಡಾ| ಸುಧೀರ್ಚಂದ್ರ ಸೂಡ,
ಡಿಎಚ್ಒ, ಜಿಲ್ಲಾ ಆರೋಗ್ಯ ಇಲಾಖೆ, ಉಡುಪಿ.
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ