ಆ ಲಿಂಕ್ ಕ್ಲಿಕ್ ಮಾಡಲೇಬೇಡಿ: ತನ್ನ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ಕೊಟ್ಟ ಪೇಟಿಎಂ
Team Udayavani, Nov 21, 2019, 8:16 AM IST
ನವದೆಹಲಿ: ಇಂದು ಡಿಜಿಟಲ್ ಪೇಮೆಂಟ್ ಎಂಬುದು ಜನರ ಜೀವನದ ಒಂದು ಭಾಗವಾಗಿದ್ದು, ಸಾಕಷ್ಟು ಮಂದಿ ಇದನ್ನು ಬಳಸುತ್ತಿದ್ದಾರೆ. ಹಲವಾರು ಪೇಮೆಂಟ್ ಆ್ಯಪ್ ಗಳು ಕೂಡ ಬಂದಿದ್ದು ಆನ್ ಲೈನ್ ಬ್ಯಾಂಕಿಂಗ್, ರೀಚಾರ್ಜ್ ಸೇರಿದಂತೆ ಹಲವಾರು ಉಪಯುಕ್ತ ಸೇವೆಗಳನ್ನು ಕುಳಿತಲ್ಲಿಂದಲೇ ಜನರು ಬಳಸುತ್ತಿದ್ದಾರೆ. ಆದರೆ ಆನ್ಲೈನ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹ್ಯಾಕರ್ಸ್ಗಳ ಉಪಟಳವೂ ಮಿತಿಮೀರುತ್ತಿದೆ.
ಡಿಜಿಟಲ್ ಪೆಮೆಂಟ್ ಆ್ಯಪ್ಗಳಲ್ಲಿ ಬಹಳ ಪ್ರಸಿದ್ಧಿ ಪಡೆದ ಪೆಟಿಎಂ ಆ್ಯಪ್ ತನ್ನ ಬಳಕೆದಾರರಿಗೆ ಎಚ್ಚರಿಕೆ ಸಂದೇಶವೊಂದನ್ನು ಹೊರಡಿಸಿದ್ದು, ಕೆವೈಸಿ (ನೋ ಯುವರ್ ಕಸ್ಟಮರ್) ಪೂರ್ಣಗೊಳಿಸುವ ಸಲುವಾಗಿ ಆ್ಯಪ್ ಡೌನ್ಲೋಡ್ ಮಾಡುವಂತೆ ಯಾವುದಾರರು ಎಸ್ಎಮ್ಎಸ್, ಕರೆ ಬಂದರೆ ಅವುಗಳನ್ನು ಬಳಸದಿರಿ ಎಂದು ಎಚ್ಚರಿಕೆ ನೀಡಿದೆ.
ನಕಲಿ ಕರೆಯನ್ನು ಮಾಡಿ ಬಳಕೆದಾರರ ಖಾಸಗಿ ಮಾಹಿತಿಯನ್ನು ಮತ್ತು ಬ್ಯಾಂಕ್ ನಲ್ಲಿದ್ದ ಹಣವನ್ನು ಎಗರಿಸುವ ಹ್ಯಾಕರ್ಸ್ ಗುಂಪೊಂದು ಬಗ್ಗೆ ಪೇಟಿಎಂ ಸಂಸ್ಥೆಯ ಗಮನಕ್ಕೆ ಬಂದಿದ್ದು, ಈ ಹಿನ್ನಲೆಯಲ್ಲಿ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ಮಾತ್ರವಲ್ಲದೆ ಆ್ಯಪ್ ರಿ- ಇನ್ಸ್ಟಾಲ್ ಮಾಡುವಾಗ ಎನಿಡೆಸ್ಕ್, ಟೀಮ್ವ್ಯೂವರ್ ಕ್ವಿಕ್ ಸಪೋರ್ಟ್ ಮೂಲಕ ಪರ್ಮಿಷನ್ ಕೇಳುತ್ತದೆ .ಇನ್ಸ್ಟಾಲ್ ಮಾಡಿದಂತೆ 9 ಸಂಖ್ಯೆಯ ಕೋಡ್ ಅನ್ನು ಕೂಡ ಕೇಳುತ್ತದೆ. ಜಾಗರೂಕರಾಗದೆ ಆ ಕೋಡ್ ಟೈಪ್ ಮಾಡಿದರೆ ನಿಮ್ಮ ಪೇಟಿಎಂ ಖಾತೆ ಬೇರೆಯವರು ಹಿಡಿತದಲ್ಲಿರುತ್ತದೆ ಮಾತ್ರವಲ್ಲದೆ ಹಣವೂ ಕೂಡ ಹ್ಯಾಕರ್ಸ್ ಗಳ ಪಾಲಾಗುತ್ತದೆ ಎಂದು ತಿಳಿಸಿದೆ.
ಅದರ ಜೊತೆಗೆ ಎಸ್ ಎಮ್ ಎಸ್ ರೂಪದಲ್ಲಿ ಕ್ಯಾಶ್ಬ್ಯಾಕ್ ಸೇರಿದಂತೆ ಹಲವಾರು ಆಫರ್ಗಳು ಬರುತ್ತವೆ. ಅಲ್ಲಿ ಕಾಣುವ ಲಿಂಕ್ ಅನ್ನು ಕ್ಲಿಕ್ ಮಾಡದೇ ತಕ್ಷಣವೇ ಡಿಲೀಟ್ ಮಾಡಿ ಎಂದು ಪೇಟಿಎಂ ತಿಳಿಸಿದೆ. ಇಲ್ಲಿಯವರೆಗೆ ಆಫರ್ ಅಥವಾ ಸಂದೇಶದ ಮೂಲಕ ಯಾವುದೇ ಲಿಂಕ್ ಅನ್ನು ಕಳುಹಿಸಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ. ಪೇಟಿಎಂ ಸೇರಿದಂತೆ ಫೋನ್ ಪೇ, ಗೂಗಲ್ ಪೇ ಮುಂತಾದ ಬಳಕೆದಾರರೂ ಕೂಡ ಈ ಕುರಿತು ಎಚ್ಚರವಹಿಸುವುದು ಸೂಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು