ಗೋವಾದಲ್ಲಿ ಗೆಲುವು ಯಾರಿಗೆ?

ಕಾಂಗ್ರೆಸ್‌ ಒಡ್ಡುತ್ತಿದೆ ಪ್ರಬಲ ಸ್ಪರ್ಧೆ ; ಎರಡು ಸ್ಥಾನಗಳನ್ನು ಉಳಿಸಿಕೊಳ್ಳಬಲ್ಲದೇ ಬಿಜೆಪಿ?

Team Udayavani, Apr 15, 2019, 6:00 AM IST

BJP-CONGRESS

ಗೋವಾ ರಾಜಕೀಯದಲ್ಲಿ ಕಳೆದೊಂದು ತಿಂಗಳಲ್ಲಿ ಅನೇಕ ಪಲ್ಲಟಗಳು ಸಂಭವಿಸಿಬಿಟ್ಟಿವೆ. ಮನೋಹರ್‌ ಪರಿಕ್ಕರ್‌ ಅವರ ನಿಧನವು ಇದರಲ್ಲಿ ಪ್ರಮುಖವಾದದ್ದು. ಪರಿಕ್ಕರ್‌ ನಿಧನ ನಂತರ ಗೋವಾ ಬಿಜೆಪಿಯ ಕಥೆಯೇನಾಗಲಿದೆ, ಅವರ ಅಭಾವ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದೇ ಎನ್ನುವ ಪ್ರಶ್ನೆಯೂ ಇದೆ. ದೇಶದ ಅತಿ ಚಿಕ್ಕ ರಾಜ್ಯವಾಗಿರುವ ಗೋವಾದಲ್ಲಿ ಕೇವಲ 2 ಲೋಕಸಭಾ ಸ್ಥಾನಗಳಿವೆ. 2 ಸ್ಥಾನಗಳಿದ್ದರೂ ಪೈಪೋಟಿಯೇನೂ ಕಡಿಮೆಯಿಲ್ಲ. 2014ರ ಚುನಾವಣೆಯಲ್ಲಿ ಬಿಜೆಪಿಯೇ ಎರಡೂ ಸ್ಥಾನಗಳಲ್ಲಿ ಗೆದ್ದಿತ್ತು. ಒಟ್ಟು 14.58 ಲಕ್ಷ ಜನಸಂಖ್ಯೆ ಇರುವ ಗೋವಾ ರಾಜ್ಯವು ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಎಂಬ ಎರಡು ಜಿಲ್ಲೆಗಳಾಗಿ ವಿಗಂಡಣೆಯಾಗಿದೆ. ಪ್ರಸಕ್ತ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಕದನವಿರುವುದು ಈ ಎರಡು ಭಾಗಗಳಲ್ಲೇ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಲೆಯಿತ್ತಾದರೂ, 2017ರ ವಿಧಾನ ಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಹೆಚ್ಚಿನ ಸೀಟುಗಳನ್ನು ಪಡೆಯಲು ಯಶಸ್ವಿಯಾಗಿ ಬಿಟ್ಟಿತ್ತು. ಆದರೆ ಬಿಜೆಪಿಯು ಗೋವಾದ ಪ್ರಾದೇಶಿಕ ಪಕ್ಷಗಳಾದ ಮಹಾರಾಷ್ಟ್ರವಾದಿ ಗೋಮಂತಕ್‌ ಪಾರ್ಟಿ(ಎಂಜಿಪಿ), ಗೋವಾ ಫಾರ್ವರ್ಡ್‌ ಪಾರ್ಟಿ(ಜಿಎಫ್ಪಿ) ಜತೆ ಸೇರಿ ಸರ್ಕಾರ ರಚಿಸಲು ಸಫ‌ಲವಾಗಿಬಿಟ್ಟಿತು.ಕಾಂಗ್ರೆಸ್‌ಗೆ ಅಂದು ಸರ್ಕಾರ ರಚಿಸಲು ಸಾಧ್ಯ ವಾಗಲಿಲ್ಲವಾದರೂ, ಲೋಕಸಭಾ ಚುನಾವಣೆಯಲ್ಲಿ ಬಂಪರ್‌ ಪಡೆಯುತ್ತೇವೆ ಎನ್ನುವ ಭರವಸೆಯನ್ನು ಅಂದಿನ ಅದರ ಪ್ರದರ್ಶನ ಬಲವಾಗಿ ಮೂಡಿಸಿತ್ತು. ಇದೇ ಕಾರಣಕ್ಕಾ ಗಿಯೇ, ಈ ಬಾರಿ ಬಿಜೆಪಿಗಿಂತ ಕಾಂಗ್ರೆಸ್‌ ಅತ್ಯುತ್ಸಾಹದಲ್ಲಿರುವುದು ಗೋಚರಿಸುತ್ತಿದೆ. ಈಗ ಎಂಜಿಪಿಯೂ ಸರ್ಕಾರದ ಸಂಗ ತೊರೆದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ನಿಲ್ಲುವ ಬೆದರಿಕೆಯೊಡ್ಡುತ್ತಿರು ವುದರಿಂದ ಬಿಜೆಪಿ ತುಸು ಕಳವಳಗೊಂಡಿರು ವುದಂತೂ ಸತ್ಯ. ಮೇಲ್ನೋಟಕ್ಕೆ ಲೋಕಸಭಾ ಕದನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಷ್ಟೇ ಕಾಣಿಸುತ್ತಿವೆಯಾದರೂ, ಈ ರಾಜ್ಯದಲ್ಲಿ ಈ ಬಾರಿ ಆಪ್‌ ಮತ್ತು ಶಿವಸೇನೆಯೂ ಎರಡೂ ಸೀಟುಗಳ ಮೇಲೆ ದೃಷ್ಟಿ ನೆಟ್ಟು ಕುಳಿತಿವೆ. ಅವುಗಳು ಲೆಕ್ಕಕ್ಕೇ ಇಲ್ಲ ಎಂದು ಚುನಾವಣಾ ಪರಿಣತರು ಹೇಳುತ್ತಾರಾದರೂ, ಅವರ ಲೆಕ್ಕಾಚಾರ ಉಲ್ಟಾ ಆದರೂ ಅಚ್ಚರಿಯಿಲ್ಲ. ಹಿಂದೂಗಳ ಬಾಹುಳ್ಯವಿರುವ ಗೋವಾದಲ್ಲಿ, ಕ್ರಿಶ್ಚಿಯನ್‌ ಸಮುದಾಯವೂ ಕೂಡ ಚುನಾ ವಣಾ ಹಣೆಬರಹವನ್ನು ಬರೆಯುವಂಥ ಶಕ್ತಿ ಹೊಂದಿದೆ.

1)ಗೋವಾ ಉತ್ತರ
ಒಟ್ಟು ಮತದಾರರು- 5.15 ಲಕ್ಷ
ಮೀಸಲು ಕ್ಷೇತ್ರವೇ?: ಅಲ್ಲ
2008ರವರೆಗೂ ಇದನ್ನು ಪಣಜಿ ಲೋಕಸಭಾ ಕ್ಷೇತ್ರವೆಂದು ಕರೆಯಲಾಗುತ್ತಿತ್ತು.
ಈ ಕ್ಷೇತ್ರವು 1999ರಿಂದ ಬಿಜೆಪಿಯ ಕೇಂದ್ರ ಸ್ಥಾನವಾಗಿದ್ದು, ಕೇಂದ್ರ ಸಚಿವರೂ ಆಗಿರುವ ಶ್ರೀಪಾದ್‌ ನಾಯಕ್‌ ಇದರ ಸಂಸದರಾಗಿದ್ದಾರೆ. ಈ ಕ್ಷೇತ್ರದಲ್ಲಿ ಹಿಂದೂ ಮತದಾರರ ಸಂಖ್ಯೆ 76 ಪ್ರತಿಶತವಿದ್ದು, ಕ್ರಿಶ್ಚಿಯನ್ನರ ಸಂಖ್ಯೆ 16.4 ಪ್ರತಿಶತದಷ್ಟಿದೆ.

2) ಗೋವಾ ದಕ್ಷಿಣ
ಒಟ್ಟು ಮತದಾರರು- 5. 45 ಲಕ್ಷ
ಮೀಸಲು ಕ್ಷೇತ್ರವೇ?: ಅಲ್ಲ
2008ರವರೆಗೂ ಈ ಕ್ಷೇತ್ರವನ್ನು ಮರ್ಮಗೋವಾ ಲೋಕಸಭಾ ಕ್ಷೇತ್ರವೆಂದು ಕರೆಯಲಾಗುತ್ತಿತ್ತು.
ಈ ಕ್ಷೇತ್ರವು 1999ರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ನ ನಡುವೆ ಬದಲಾಗುತ್ತಾ ಬಂದಿದೆ. 1999ರಲ್ಲಿ ಬಿಜೆಪಿಯ ರಮಾಕಾಂತ್‌ ಸೋಯು ಕಾಂಗ್ರೆಸ್‌ ಎದುರಾಳಿಯನ್ನು ಬ್ರಾಜ್‌ರನ್ನು ಸೋಲಿಸಿ ಸಂಸದರಾದರು, 2004ರಲ್ಲಿ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬ್ರಾಜ್‌, ಸೋಯು ಅವರನ್ನು ಸೋಲಿಸಿದರು. 2009ರಲ್ಲಿ ಕಾಂಗ್ರೆಸ್‌ನ ಫ್ರಾನ್ಸಿಸ್ಕೋ ಸಾರ್ಡಾನಾ ಅವರು ಬಿಜೆಪಿ ನಾಯಕ ನರೇಂದ್ರ ಕೇಶವ ಸವಾಯ್ಕರ್‌ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಆದರೆ 2014ರಲ್ಲಿ ಸವಾಯ್ಕರ್‌ ಕಾಂಗ್ರೆಸ್‌ ಅನ್ನು ಸೋಲಿಸಿ ಸಂಸದರಾದರು.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.