ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ ರೌಡಿ ಶೀಟರ್ ನಿಂದ ವ್ಯಕ್ತಿಯೋರ್ವನ ಕೊಲೆ
Team Udayavani, Jan 25, 2020, 7:50 AM IST
ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕಾಗಿ ರೌಡಿ ಶೀಟರ್ ಒಬ್ಬ, ವ್ಯಕ್ತಿಯೋರ್ವನನ್ನು ಲಾರಿಯ ಕಬ್ಬಿಣದ ಜಾಕ್ ಲಿವರ್ ನಿಂದ ತಲೆಗೆ ಬಡಿದು ಕೊಲೆ ಮಾಡಿದ ಘಟನೆ ಕುವೆಟ್ಟು ಗ್ರಾಮದ ನಾರವಿ ರಸ್ತೆಯ ಪೊಟ್ಟುಕೆರೆ ಎಂಬಲ್ಲಿ ನಡೆದಿದೆ.
ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ನಾರಾಯಣ ಯಾನೆ ರಮೇಶ್ (45) ಎಂಬಾತನೆ ಕೊಲೆಯಾದ ದುರ್ದೈವಿ. ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮ ಅಣ್ಣು ಯಾನೆ ಅಣ್ಣಯ್ಯ (24) ಕೊಲೆಗೈದ ಆರೋಪಿ ಎಂದು ವರದಿಯಾಗಿದೆ
ಶುಕ್ರವಾರ ರಾತ್ರಿ 9.30 ಸುಮಾರಿಗೆ ಕ್ಷುಲ್ಲಕ ಕಾರಣಕ್ಕಾಗಿ ರೌಡಿ ಶೀಟರ್ ಆಗಿದ್ದ ಅಣ್ಣಯ್ಯ, ರಮೇಶ್ ಎಂಬಾತನಿಗೆ ಲಾರಿಯ ಕಬ್ಬಿಣದ ಜಾಕ್ ಲಿವರ್ ನಿಂದ ತಲೆಗೆ ಹೊಡೆದಿದ್ದಾನೆ. ಪರಿಣಾಮವಾಗಿ ತಲೆಗೆ ಗಂಭೀರ ಗಾಯಗಳಾಗಿ ರಮೇಶ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ಕೊಲೆ ಬಳಿಕ ಪರಾರಿಯಾಗಲು ಯತ್ನಿಸಿದ್ದ ಅಣ್ಣಯ್ಯನನ್ನು, ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಬೆಳ್ತಂಗಡಿ ಇನ್ಸ್ ಪೆಕ್ಟರ್ ನಂದ ಕುಮಾರ್ ಅವರ ತಂಡ ತಕ್ಷಣವೇ ಕಾರ್ಯಪ್ರವೃತ್ತರಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮೃತ ದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮೃತದೇಹ ಪರೀಕ್ಷೆಗೆ ದೇರಳಕಟ್ಟೆಗೆ ರವಾನಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅಣ್ಣು ರೌಡಿಶೀಟರ್ ಆಗಿದ್ದು ಹಲಾವಾರು ವರ್ಷಗಳಿಂದ ಅನೇಕ ಪ್ರಕರಣಗಳಲ್ಲಿ ಈತ ಸೆರೆವಾಸ ಅನುಭವಿಸಿದ್ದ. ಆರೋಪಿ ಕಳೆದ 9 ದಿನಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದ ಎನ್ನಲಾಗಿದೆ.
ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು
ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ
Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ
BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ
Sandalwood; ಎವಿಡೆನ್ಸ್ ಮೇಲೆ ಪ್ರವೀಣ್ ಕಾನ್ಫಿಡೆನ್