ಕೊಯಿಲ: ಪಾಳು ಬಿದ್ದಿದ್ದ ನಾಲ್ಕು ಬಾವಿಗಳಿಗೆ ಕಾಯಕಲ್ಪ
ಗ್ರಾಮ ಪಂಚಾಯತ್ನಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪೂರ್ವಸಿದ್ಧತೆ
Team Udayavani, Feb 21, 2020, 5:16 AM IST
ಆಲಂಕಾರು: ಸಮಸ್ಯೆ ತಲೆದೋರುವುದಕ್ಕಿಂತ ಮೊದಲೇ ಆ ಕುರಿತು ಆಲೋಚಿಸಿ ಪೂರ್ವಸಿದ್ಧತೆ ಮಾಡಿಕೊಳ್ಳುವುದು ಜಾಣತನ. ಕಡಬ ತಾಲೂಕು ಕೊಯಿಲ ಗ್ರಾ.ಪಂ. ಇಂತಹ ಜಾಣ ನಡೆಯನ್ನು ಇರಿಸಿದೆ. ಫೆಬ್ರವರಿ ಕೊನೆಯ ಅವಧಿಯಲ್ಲಿ ಕೊಳವೆ ಬಾವಿಗಳಲ್ಲಿ ನೀರು ಬರಿದಾಗಿ ಕುಡಿಯುವ ನೀರಿಗಾಗಿ ಈ ಗ್ರಾಮದಲ್ಲಿ ಹಾಹಾಕಾರ ಪ್ರಾರಂಭವಾಗುತ್ತದೆ. ಈ ಸಮಸ್ಯೆ ಜೂನ್ ತಿಂಗಳ ವರೆಗೆ ಕಾಡುತ್ತಿರುವುದರಿಂದ, ಇದರ ನಿವಾರಣೆಗೆ ಗ್ರಾ.ಪಂ. ಆಡಳಿತ ಸಜ್ಜಾಗಿದೆ. ಗ್ರಾಮದ ಕೊಳವೆ ಬಾವಿಗಳಲ್ಲಿ ನೀರು ಬರಿದಾದರೂ ತೆರೆದ ಬಾವಿಗಳು ತುಂಬಿರುವ ಕಾರಣ ಈ ನೀರನ್ನು ಬಳಸಿಕೊಳ್ಳಲು ಸ್ಥಳೀಯ ಆಡಳಿತ ಮಂಡಳಿ ನಿರ್ಧರಿಸಿದೆ.
ಸ್ವಂತ ಅನುದಾನದಲ್ಲಿ ದುರಸ್ತಿ
ಕೊಯಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಾಳು ಬಿದ್ದಿದ್ದ 4 ಬಾವಿಗಳನ್ನು ದುರಸ್ತಿ ಮಾಡಿ ಸಂಭವನೀಯ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಗಂಡಿಬಾಗಿಲು, ಗೋಕುಲ ನಗರ, ವಳಕಡಮ ಮತ್ತು ಸಬಲೂರು ಸಹಿತ 4 ಕಡೆಗಳಲ್ಲಿ ತೆರೆದ ಬಾವಿಗಳಿವೆ. ಇವುಗಳಲ್ಲಿ ನೀರಿದ್ದರೂ ಬಳಸಲಾಗದ ಸ್ಥಿತಿಯಿತ್ತು. ಹೂಳು ತುಂಬಿದ್ದ ಕಾರಣ ಅವು ಪಾಳು ಬಿದ್ದಿದ್ದವು. ಇನ್ನೂ ಕೆಲವರು ಈ ಬಾವಿಗಳಿಗೆ ತ್ಯಾಜ್ಯ ಎಸೆದು, ನೀರನ್ನು ಮಲಿನಗೊಳಿಸಿದ್ದರಿಂದ ಅದನ್ನು ಕುಡಿಯಲು ಅಥವಾ ದಿನಬಳಕೆಗೆ ಪಡೆಯದಂತಹ ಸ್ಥಿತಿ ಉಂಟಾಗಿತ್ತು.
ಹೀಗಾಗಿ ಇದೀಗ ಈ ಎಲ್ಲ ತೆರೆದ ಬಾವಿ ಗಳನ್ನು ಗ್ರಾ.ಪಂ. ಸ್ವಂತ ಅನುದಾನದಲ್ಲಿ ದುರಸ್ತಿ ಮಾಡಲು ಪ್ರಾರಂಭಿಸಿದೆ. ಪ್ರತೀ ವರ್ಷದ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಬೋರ್ವೆಲ್ಗಳಲ್ಲಿ ಅಂತರ್ಜಲ ಕುಸಿತ ಆಗಿ ಕುಡಿಯುವ ನೀರಿಗೆ ತೊಂದರೆ ಪಡುವಂತಾಗುತ್ತದೆ. ಈ ಸಂದರ್ಭಗಳಲ್ಲಿ ಇಂತಹ ಬಾವಿಗಳಲ್ಲಿ ನೀರು ಇರುತ್ತಿತ್ತು. ಆದರೆ ಮಲೀನಗೊಂಡಿದ್ದ ಕಾರಣ ತೆಗೆಯುವಂತಿಲ್ಲದೆ ಊಟಕ್ಕೆ ಇಲ್ಲದ ಉಪ್ಪಿನಕಾಯಿ ಎಂಬಂತಾಗಿತ್ತು. ಇದೀಗ ಕೊಯಿಲ ಗ್ರಾ.ಪಂ. ಮಾದರಿ ಹೆಜ್ಜೆ ಇರಿಸಿ, ಬೇಸಗೆಯಲ್ಲಿ ನೀರಿನ ಅಭಾವ ಇಲ್ಲದಂತಾಗಿಸಲು ಕ್ರಮ ಕೈಗೊಂಡಿದೆ.
ಗ್ರಾ.ಪಂ. ಕ್ರಮಕ್ಕೆ ಪ್ರಶಂಸೆ
ಹತ್ತಾರು ವರ್ಷಗಳಿಂದ ಪಾಳು ಬಿದ್ದಿದ್ದ ಬಾವಿಯನ್ನು ದುರಸ್ತಿ ಮಾಡುವ ಮೂಲಕ ಬಿರು ಬೇಸಿಗೆ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಸಮಸ್ಯೆಯನ್ನು ಎದುರಾಗಬಾರದೆಂದು ಗ್ರಾ.ಪಂ. ಕೈಗೊಂಡಿರುವ ಬಾವಿ ದುರಸ್ತಿ ಕ್ರಮದ ಬಗ್ಗೆ ಗ್ರಾಮಸ್ಥರಿಂದ ಪ್ರಶಂಸೆ ವ್ಯಕ್ತವಾಗಿದೆ.
ಸಮಸ್ಯೆ ಆಗಬಾರದು
ವರ್ಷಂಪ್ರತಿ ಬೇಸಗೆಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿಗೆ ಸಮಸ್ಯೆ ಎದುರಾಗುತ್ತಿತ್ತು. ಇದನ್ನು ಅರ್ಥೈಸಿಕೊಂಡು ಅಂತಹ ಸಮಸ್ಯೆ ಎದುರಾದಾಗ ಕನಿಷ್ಠ ನೀರಿನ ಸಲುವಾಗಿಯಾದರೂ ನೀರು ಸೇದಿ ತಂದು ತುರ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಬಾವಿಯನ್ನು ಸುಸ್ಥಿತಿಯಲ್ಲಿ ಇಟ್ಟು ಕೊಳ್ಳಬೇಕು ಎಂದು ನಿರ್ಧರಿಸಿದ್ದೆವು. ಆದರೆ ಕಾರ್ಮಿಕರು ಸಿಗದೆ ತಡವಾಗಿತ್ತು. ಇದೀಗ ಬಾವಿಗಳನ್ನು ದುರಸ್ತಿ ಮಾಡಲು ಸಾಧ್ಯವಾಗಿದೆ.
– ಹೇಮಾ ಮೋಹನ್ದಾಸ್, ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ
ಸದಾನಂದ ಆಲಂಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ