ಪಟ್ಟೆ-ಪುಳಿತ್ತಡಿ: ತಡೆಗೋಡೆಯಿಲ್ಲದ ಅಪಾಯಕಾರಿ ಕೆರೆ
ತಡೆಬೇಲಿ ನಿರ್ಮಿಸಿ ಅಪಾಯ ತಪ್ಪಿಸಿ; ಇಲ್ಲವೇ ಕೆರೆಯನ್ನು ಮುಚ್ಚಿ: ನಾಗರಿಕರ ಆಗ್ರಹ
Team Udayavani, Sep 12, 2019, 5:00 AM IST
ಬಡಗನ್ನೂರು: ಗ್ರಾಮದ ಪಟ್ಟೆಯಿಂದ ಪುಳಿತ್ತಡಿಗೆ ತೆರಳುವ ಒಳರಸ್ತೆಯ ಬದಿಯಲ್ಲಿ ತಡೆಗೋಡೆಯಿಲ್ಲದ ಅಪಾಯಕಾರಿ ಕೆರೆ ಇದ್ದು, ಇಲ್ಲಿ ತಡೆಬೇಲಿ ನಿರ್ಮಿಸಬೇಕು ಅಥವಾ ಕೆರೆಯನ್ನು ಮುಚ್ಚುವ ಮೂಲಕ ಅಪಾಯವನ್ನು ತಪ್ಪಿಸುವಂತೆ ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
ಈ ರಸ್ತೆಯು ಈಶ್ವರಮಂಗಲ ಹನುಮಗಿರಿ, ಗೆಜ್ಜೆಗಿರಿ ನಂದನಬಿತ್ತಿಲು ಕ್ಷೇತ್ರಕ್ಕೆ ತೆರಳುವ ಒಳ ರಸ್ತೆಯಾಗಿದೆ. ಕ್ಷೇತ್ರಕ್ಕೆ ತೆರಳುವ ಯಾತ್ರಿಕರು ಈ ಮಾರ್ಗವಾಗಿ ತೆರಳುತ್ತಿದ್ದಾರೆ. ವಿಶೇಷ ಸಂದರ್ಭದಲ್ಲಿ ಈ ರಸ್ತೆಯ ಮೂಲಕ ಹೆಚ್ಚಿನ ವಾಹನಗಳು ಸಂಚರಿಸುತ್ತವೆ. ರಸ್ತೆಗೆ ಹೊಂದಿಕೊಂಡೇ ಕೆರೆ ಇರುವ ಕಾರಣ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಉಂಟಾಗುವ ಸಾಧ್ಯತೆ ಇದೆ. ಶಾಲಾ ಮಕ್ಕಳು ಇದೇ ರಸ್ತೆಯಾಗಿ ತೆರಳುತ್ತಿದ್ದು, ಜೋರಾಗಿ ಮಳೆ ಬಂದರೆ ಕೆರೆಯಲ್ಲಿ ನೀರು ತುಂಬಿಕೊಳ್ಳುತ್ತದೆ. ರಸ್ತೆಯ ಒಂದು ಬದಿಯಲ್ಲಿ ಕೆರೆ ಇದ್ದು, ಇನ್ನೊಂದು ಬದಿಯಲ್ಲಿ ಹೊಳೆ ಹರಿಯುತ್ತಿರುವ ಕಾರಣ ಈ ಭಾಗ ಅತ್ಯಂತ ಅಪಾಯಕಾರಿಯಾಗಿದೆ. ಇಲ್ಲಿ ಯಾವುದೇ ವಾಹನಗಳು ಸೈಡ್ ಕೊಡುವ ಹಾಗಿಲ್ಲ. ಓವರ್ಟೇಕ್ ಮಾಡಿದ್ದಲ್ಲಿ ವಾಹನಗಳು ಕೆರೆ ಅಥವಾ ಹೊಳೆಗೆ ಬೀಳುವುದು ನಿಶ್ಚಿತ.
ಮನವಿ ಮಾಡಿದರೂ ಪ್ರಯೋಜನವಾಗಿಲ್ಲ
ಕೆರೆಗೆ ತಾತ್ಕಾಲಿಕವಾಗಿ ಅಡಿಕೆ ಮರದ ಸಲಾಕೆಯಿಂದ ತಡೆಬೇಲಿಯನ್ನು ನಿರ್ಮಾಣ ಮಾಡಿದ್ದರೆ ಹೊಳೆ ಬದಿಗೆ ಯಾವುದೇ ತಡೆಬೇಲಿ ಇಲ್ಲ. ಕೆರೆಯ ಅಪಾಯದ ಬಗ್ಗೆ ಪರಿಚಯವೇ ಇಲ್ಲದ ವಾಹನ ಚಾಲಕರು ಈ ರಸ್ತೆಯಾಗಿ ತೆರಳಿದರೆ ಅಪಾಯ ಖಂಡಿತ. ಕೆರೆಯನ್ನು ಮುಚ್ಚುವುದು ಅಥವಾ ಅದಕ್ಕೆ ತಡೆ ಬೇಲಿ ನಿರ್ಮಾಣ ಮಾಡುವಂತೆ ಸ್ಥಳೀಯರು ಕೆಲವು ವರ್ಷಗಳಿಂದ ಸಂಬಂಧಿಸಿದ ಇಲಾಖೆಗೆ ಮನವಿಯನ್ನು ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಮಳೆಗಾಲದಲ್ಲಿ ನೀರು ತುಂಬಿದ ಕೆರೆಗಳಿಂದ ಕೆಲವು ಕಡೆಗಳಲ್ಲಿ ಅನಾಹುತಗಳು ಉಂಟಾಗುತ್ತಿದೆ. ಪಟ್ಟೆಯಿಂದ ಮುಳಿತ್ತಡಿಗೆ ತೆರಳುವ ಒಳರಸ್ತೆಯಾದರೂ ಪ್ರಸಿದ್ಧ ಕ್ಷೇತ್ರಗಳಿಗೆ ತೆರಳುವ ಸಂಪರ್ಕ ರಸ್ತೆಯಾಗಿರುವ ಕಾರಣ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.
ನಿರ್ಣಯ ಮಾಡಿ ಕಳುಹಿಸಿದ್ದೇವೆ
– ವಾಸೀಂ ಗಂಧದ ಪಿಡಿಒ
-ದಿನೇಶ್ ಪೇರಾಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ