ಲಾಕ್ ಡೌನ್: ಪ್ರಕೃತಿ ನಿಯಮ ಪಾಲಿಸುವ ಹೂಗಿಡ ಎಂದಿನಂತೆ ಸಂಭ್ರಮದಿಂದ ಹೂ ಬಿಡುತ್ತಿದೆ…

ಈ ಲಾಕ್ ಡೌನ್ ಕೃಷಿಕರಿಂದ ಹಿಡಿದು ಕಾರ್ಮಿಕ, ಮಾಲೀಕ, ವೈದ್ಯಾಧಿಕಾರಿಗಳಿಗೆ ಪೊಲೀಸರಿಗೆ ಹಾಗೂ ಎಲ್ಲರಿಗೂ ಹೊಸದು.

Team Udayavani, May 4, 2020, 3:52 PM IST

ಲಾಕ್ ಡೌನ್: ಪ್ರಕೃತಿ ನಿಯಮ ಪಾಲಿಸುವ ಹೂಗಿಡ ಎಂದಿನಂತೆ ಸಂಭ್ರಮದಿಂದ ಹೂ ಬಿಡುತ್ತಿದೆ…

ಮೂರನೇ ಕ್ಲಾಸಿನಲ್ಲಿದ್ದಾಗ ಕೇಳಿದ್ದ ಗಾದೆ ಮಾತೊಂದು ಈ ಲಾಕ್ ಡೌನ್ ಅವಧಿಯಲ್ಲಿ ನೆನಪಾಯಿತು. ಅದೇನೆಂದರೆ, ‘ ಹಾಸಿಗೆ ಇದ್ದಷ್ಟೇ ಕಾಲು ಚಾಚು.’ ಬಾಲ್ಯದಲ್ಲಿದ್ದಾಗ ತಲೆಗೆ ಹತ್ತಿದ್ದು ಹಾಸಿಗೆ ಮತ್ತು ಹೊದಿಕೆಯ ಉಪಯೋಗ ಮಾತ್ರ ಅದರ ಒಳಾರ್ಥವಲ್ಲ. ಈ ಸಮಯದಲ್ಲಿ ಈ ಗಾದೆಯ ಪ್ರಸ್ತುತತೆ ಏನೆಂದರೆ, ಇಲ್ಲಿ ಚಾಪೆ ಅಥವಾ ಹಾಸಿಗೆ ನಾವು ಸಂಪಾದಿಸಿದ ಹಣದಂತೆ. ಗಾದೆಯ ಮುಂದುವರಿದ ಭಾಗ, ಇರುವ ಸಂಪಾದನೆಯಲ್ಲೇ ತೃಪ್ತಿಪಡಬೇಕು ಎನ್ನುವುದನ್ನು ಸೂಚಿಸುತ್ತದೆ.

ಇರುವ ಹಾಸಿಗೆಯಲ್ಲೇ ಕಾಲು ಚಾಚಲಾಗದ ನನ್ನ ಕೆಲ ಮಿತ್ರರಿಗೆ ಲಾಕ್ ಡೌನ್ ಅದನ್ನೂ ಕಲಿಸಿಕೊಟ್ಟಿತು. ಅಗತ್ಯತೆ ಹಾಗೂ ಬಯಕೆ ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿಸಿತು. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ’ ಜೀವನವಲ್ಲ ,‌ ಇರುವುದರಲ್ಲೇ ಅಡ್ಜಸ್ಟ್ ಮಾಡಿಕೊಂಡು ತೃಪ್ತಿಯಿಂದಿರುವುದೇ ಜೀವನ ಎಂದು ಕಲಿಸಿತು. ಹಾಗಂತ COVID-19 ತಡೆಗಟ್ಟಲು ಲಾಕ್ ಡೌನ್ ಎಲ್ಲದಕ್ಕೂ ನಿಯಂತ್ರಣ ಹೇರಿಲ್ಲ. ಕಲ್ಪನೆಗೆ, ಸೃಜನಶೀಲತೆಗೆ ಹಾಗೂ ಆತ್ಮಾವಲೋಕನಕ್ಕೆ ಸಾಕಷ್ಟು ಸಮಯ ನೀಡಿದೆ.

ಈ 4G ಯುಗದಲ್ಲಿ ನಮ್ಮಂತವರಿಗೆ ಅರೆತಾಸು ಕುಳಿತು ಆತ್ಮಾವಲೋಕನ ಮಾಡಿಕೊಳ್ಳುವ ಸಮಯವೆಲ್ಲಿದೆ? ನನ್ನ ಕನಸೇನಾಗಿತ್ತು?.. ಗುರಿ ಏನಾಗಿತ್ತು?.. ಆ ಗುರಿ ತಲುಪಿದ್ದೇನೆಯೇ?.. ತಲುಪುವ ದಾರಿಯಲ್ಲಿದ್ದೇನೆಯೇ?.. ಸರಿ ದಾರಿಯಲ್ಲಿದ್ದೇನೆಯೇ? ಇಲ್ಲವೇ? ಅಥವಾ reboot ಮಾಡಬೇಕೇ?.. ಈ ತರಹದ ಚಿಂತನೆಗಳಿಗೆ ಅವಕಾಶ ನೀಡಿದ್ದು ಲಾಕ್ ಡೌನ್.

ವೃತ್ತಿಯಲ್ಲಿ ಉಪನ್ಯಾಸಕನಾಗಿರುವುದರಿಂದ ವಿದ್ಯಾರ್ಥಿಗಳಿಗೆ online ಕ್ಲಾಸ್ ಅರ್ಥವಾಯಿತೇ? ಇಲ್ಲವೇ? ಎಂಬ ಗೊಂದಲ ಬೇರೆ. ದೈನಂದಿನ ತರಗತಿಯಲ್ಲಾದರೆ ಪ್ರಶ್ನೆಗಳನ್ನ ಕೇಳಿ ತಿಳಿದುಕೊಳ್ಳಬಹುದು, ಆದರೆ online ಕ್ಲಾಸ್ ನಲ್ಲಿ ವಿದ್ಯಾರ್ಥಿಗಳು ಅಷ್ಟಾಗಿ ಸ್ಪಂದಿಸುವುದಿಲ್ಲ.

ಈ ಲಾಕ್ ಡೌನ್ ಕೃಷಿಕರಿಂದ ಹಿಡಿದು ಕಾರ್ಮಿಕ, ಮಾಲೀಕ, ವೈದ್ಯಾಧಿಕಾರಿಗಳಿಗೆ ಪೊಲೀಸರಿಗೆ ಹಾಗೂ ಎಲ್ಲರಿಗೂ ಹೊಸದು. ಈ ನಡುವೆ ನನ್ನನ್ನು ಕಾಡಿದ ಕುತೂಹಲಕಾರಿ ಸಂಗತಿಯೆಂದರೆ, ಇತ್ತೀಚಿಗೆ ನೋಡಿದ ಮಲಯಾಳಂ ಸಿನೆಮಾ ‘ ಅಯ್ಯಪ್ಪನುಂ ಕೋಶಿಯುಂ’ ಹಾಗೂ ಬೆಳಗಾವಿಯಲ್ಲಿ ನಡೆದ ಒಂದು ಘಟನೆ. ಪೊಲೀಸ್ ಅಧಿಕಾರಿ ಮತ್ತು ಮಾಜಿ ಯೋಧನ ನಡುವಿನ ego clash ಈ ಸಿನಿಮಾದ ಕಥೆಯಾಗಿತ್ತು. ಕಾಕತಾಳೀಯ ಎಂಬಂತೆ ಬೆಳಗಾವಿಯ ಘಟನೆ ಸಹ ಪೊಲೀಸ್ ಹಾಗೂ ಯೋಧನಿಗೆ ಸಂಬಂಧಪಟ್ಟಿರುವುದು ನನ್ನ ಕುತೂಹಲ ಹೆಚ್ಚಲು ಕಾರಣವಾಯಿತು.

ಕೊನೆಯ ಮಾತು
ಐದಾರು ಹೂಗಳನ್ನು ಕೊಯ್ದಾದ ನಂತರ

ಮಾಲಿಗೆ ನೆನಪಾಯಿತು ಮಗಳ‌ ಜನ್ಮದಿನ

ಆರನೇಯದ್ದನ್ನು ಅಕ್ಕರೆಯಿಂದ ಆಕೆಗೆಂದೆ

ಕಿಸೆಯಲ್ಲಿಟ್ಟುಕೊಂಡು

ಮರುದಿನ ಅಂಗಿ ಒಗೆಯುವ ಮುನ್ನ

ತಪಾಸಣೆಯಲ್ಲಿ

ಅದು ಅವಳಿಗೆ ಸಿಕ್ಕಿತು.

(ಜಯಂತ್ ಕಾಯ್ಕಿಣಿಯವರ ಶ್ರಾವಣ ಮಧ್ಯಾಹ್ನ ನೀಲಿಮಳೆ ಯಿಂದ)

ಲಾಕ್ ಡೌನ್ ಮಧ್ಯೆ ಈ ಸಾಲುಗಳು ಆಗಾಗ ನೆನಪಾಗುತ್ತದೆ. ಕಾರಣ ಪ್ರಕೃತಿ ನಿಯಮ ಪಾಲಿಸದ ಮಾನವನಿಗೆ ಈಗ ಹುಟ್ಟುಹಬ್ಬ ಆಚರಿಸುವ ಸಂಭ್ರಮವಿಲ್ಲ , ಹೂ ಕೊಯ್ಯಲು ಮಾಲಿಯಿಲ್ಲ‌ , ಹೂದೋಟದ ಮಾಲೀಕನೂ ಇಲ್ಲ. ಆದರೆ ಪ್ರಕೃತಿ ನಿಯಮ ಪಾಲಿಸುವ ಹೂಗಿಡ ಎಂದಿನಂತೆ ಸಂಭ್ರಮದಿಂದ ಹೂ ಬಿಡುತ್ತಿದೆ.

ಸುಧೇಶ್ ಚಂದ್ರ ಟಿ
ಉಪನ್ಯಾಸಕ ಪುತ್ತೂರು

ಟಾಪ್ ನ್ಯೂಸ್

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

BelagaviBelagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Belagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-weqeqwe

IPL; ಸಾಯಿ ಸುದರ್ಶನ್ ಹೊಸ ದಾಖಲೆ ; ಗಿಲ್ ಮತ್ತೊಂದು ಶತಕದ ಕಮಾಲ್

Kadaba ರೆಂಜಿಲಾಡಿ: ಎಂಡೋ ಪೀಡಿತ ಯುವಕ ಸಾವು

Kadaba ರೆಂಜಿಲಾಡಿ: ಎಂಡೋ ಪೀಡಿತ ಯುವಕ ಸಾವು

Sullia: ಕೆಂಪು ಕಲ್ಲು ಸಾಗಾಟ ಲಾರಿ ಪಲ್ಟಿ

Sullia: ಕೆಂಪು ಕಲ್ಲು ಸಾಗಾಟ ಲಾರಿ ಪಲ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

BelagaviBelagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Belagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-weqeqwe

IPL; ಸಾಯಿ ಸುದರ್ಶನ್ ಹೊಸ ದಾಖಲೆ ; ಗಿಲ್ ಮತ್ತೊಂದು ಶತಕದ ಕಮಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.