ಗಾನಪ್ರಿಯ ಗಣೇಶನನ್ನು ನೆನೆಯೋಣ ಎಲ್ಲ !


Team Udayavani, Sep 1, 2019, 9:03 PM IST

Music-Ganapa-726

ಗಣೇಶ ನಮ್ಮೊಳಗಿನ ಬೆಳಕು. ಆತ್ಮವಿಶ್ವಾಸದ ದೀಪಕ್ಕೆ ತೈಲದಂತೆ ಶಕ್ತಿ ತುಂಬುವುದೇ ಈ ಗಣೇಶ. ಅದಕ್ಕೇ ನಾವು ಏನನ್ನು ಆರಂಭಿಸುವುದಿದ್ದರೂ ಮೊದಲು ವಂದಿಸುವುದು ಗಣಪನಿಗೆ. ಅಂಥ ಗಣಪ ಗಾನಪ್ರಿಯ ಎಂದರೆ ಅಚ್ಚರಿಯೇನೂ ಇಲ್ಲ. ಅದರಲ್ಲೂ ಹಂಸಧ್ವನಿ ರಾಗದಿಂದ ಪೂಜಿತನಾಗುವವನು ಗಣೇಶನೆಂಬ ಮಾತಿದೆ.

ಗಣೇಶನಂತೂ ಗಾನಪ್ರಿಯ. ಸಂಗೀತಾರಾಧಕರ ಇಷ್ಟ ದೇವತೆಯೂ ಸಹ. ಸಂಗೀತಕ್ಕೂ ಗಜಾನನನಿಗೂ ಅದ್ಭುತ ಸಂಬಂಧ. ಅದು ಶಾಸ್ತ್ರೀಯ ಸಂಗೀತವಾಗಲೀ, ಸುಗಮ ಸಂಗೀತವಾಗಲೀ ಗಣಪತಿಯನ್ನು ನೆನೆಸಿಕೊಳ್ಳುವುದು ಇದ್ದೇ ಇರುತ್ತದೆ. ನಿಮಗೆ ನೆನಪಿರಬಹುದು. ಸುಮಾರು ಮೂವತ್ತು ವರ್ಷಗಳ ಹಿಂದೆ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪ್ರತಿ ಆರ್ಕೆಸ್ಟ್ರಾ ಆರಂಭವಾಗುತ್ತಿದ್ದುದೇ ಸರ್ವಕಾಲಕ್ಕೂ ಜನಪ್ರಿಯವೆನಿಸುವ  ‘ಗಜಮುಖನೇ ಗಣಪತಿಯೇ ನಿನಗೆ ವಂದನೆ…’ ಎಂಬ ಗೀತೆಯಿಂದಲೇ.

ಆಗ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದವರದ್ದು ಬೇರೆ ಮಾತು. ಆದರೆ ಉಳಿದವರಿಗೆ ಸಂಗೀತ ಎಂಬುದು ಸಿಗುತ್ತಿದ್ದುದು ರಾಮೋತ್ಸವ ಮತ್ತು ಸಾರ್ವಜನಿಕ ಗಣೇಶೋತ್ಸವಗಳಲ್ಲಿ. ಶಾಸ್ತ್ರೀಯ ಸಂಗೀತಗಾರರೂ ಅಲ್ಲಿ ಬಂದು ಹಾಡುತ್ತಿದ್ದರು. ಹಲವು ವಿನಾಯಕ ಸೇವಾ ಮಂಡಳಿಗಳು ಬೆಂಗಳೂರು, ಮೈಸೂರು ಸೇರಿದಂತೆ ಹಲವೆಡೆ ಸಂಗೀತ ಕಛೇರಿಗಳನ್ನು ಏರ್ಪಡಿಸುತ್ತಿದ್ದರು. ಅದರೊಂದಿಗೆ ಆರ್ಕೆಸ್ಟ್ರಾಗಳಿಗೂ ಅವಕಾಶವಿರುತ್ತಿತ್ತು. ಹಾಗೆ ನೋಡುವುದಾದರೆ ಗಣೇಶ ಎಲ್ಲ ಬಗೆಯ ಸಂಗೀತ ಪ್ರಿಯರ ಮನವನ್ನೂ ತಣಿಸುತ್ತಿದ್ದ ಎಂದೇ ಹೇಳಬೇಕು.

ಲಲಿತಕಲೆಗಳ ಆರಾಧನೆಯಲ್ಲಿ ಗಣೇಶನಿಗೆ ಆದ್ಯತಾ ಸ್ಥಾನ ಇರುವುದು ಎಲ್ಲರಿಗೂ ತಿಳಿದದ್ದೇ. ಅದು ಚಿತ್ರಕಲೆ ಇರಬಹುದು, ನೃತ್ಯವಿರುವುದು, ಸಂಗೀತವಿರಬಹುದು-ಮಿಕ್ಕಾವುದೇ ಕಲೆ ಇರಬಹುದು. ಅಲ್ಲೆಲ್ಲವೂ ಗಣೇಶನನ್ನು ಮರೆಯುವುದು ಕಡಿಮೆ. ವಿಶಿಷ್ಟವೆನ್ನಬಹುದಾದರೆ ಗಣೇಶನೂ ಎಲ್ಲದಕ್ಕೂ ಒಪ್ಪಬಲ್ಲವನು. ಸಂಗೀತದ ನೆಲೆಯಲ್ಲೇ ಹೇಳುವುದಾದರೆ ಸಾಕಷ್ಟು ಗೀತೆಗಳು ಪುಂಖಾನುಪುಂಖವಾಗಿ ಹರಿದು ಬಂದಿವೆ.

ಶಾಸ್ತ್ರೀಯ ಸಂಗೀತದಲ್ಲಂತೂ ಲೆಕ್ಕಕ್ಕೇ ಸಿಗದು. ವಾಗ್ಗೇಯಕಾರರಾದ ಮುತ್ತುಸ್ವಾಮಿ ದೀಕ್ಷಿತರು ಹಂಸಧ್ವನಿ ರಾಗವನ್ನೇ ಗಣೇಶನಿಗೆ ಅರ್ಪಿಸಿದರು. ಅತ್ಯಂತ ಪ್ರಸಿದ್ಧಿಯಾದ ಕೃತಿ ವಾತಾಪಿ ಗಣಪತಿಂ ಭಜೇಯಲ್ಲಿ ಹಂಸಧ್ವನಿ ರಾಗದಿಂದ ಭೂಷಿತನಾದ ಹೇರಂಬನೇ ಎಂದು ವ್ಯಾಖ್ಯಾನಿಸುತ್ತಾರೆ. ಆ ಗೀತೆಯಂತೂ ನಿತ್ಯ ಹರಿದ್ವರ್ಣ ಕಾಡುಗಳಂತೆ ಜನಪ್ರಿಯವಾದುದು. ಅದನ್ನು ಹಾಡದವರು ಇಲ್ಲ. ಅಷ್ಟೇ ಏಕೆ? ವಿವಿಧ ಸಂಗೀತ ಪ್ರಕಾರಗಳಲ್ಲೂ ಪ್ರಯೋಗಕ್ಕೆ ಒಳಗಾದ ಕೃತಿ. ಗಣೇಶನನ್ನು ಕುರಿತಾದ ಮುದ್ಗಲ ಪುರಾಣದಲ್ಲಿ 32 ಬಗೆಯ ಗಣೇಶನನ್ನು ಉಲ್ಲೇಖಿಸಲಾಗುತ್ತದೆ. ಹದಿನಾರು ಗಣಪತಿಗಳ ಕುರಿತು ದೀಕ್ಷಿತರು ಕೃತಿಗಳನ್ನು ರಚಿಸಿದ್ದಾರೆ.

ಸಂಗೀತ ಕಲಿಯುವವರಾಗಲೀ, ಸಾಮಾನ್ಯ ಜನರಿಗಾಗಲೀ ಪುರಂದರ ದಾಸರ ಲಂಬೋದರ..ಲಕುಮಿಕರ ಗೊತ್ತಿರದಿರಲು ಸಾಧ್ಯವೇ? ಖಂಡಿತಾ ಇಲ್ಲ. ಮತ್ತೊಬ್ಬ ವಾಗ್ಗೇಯಕಾರ ತ್ಯಾಗರಾಜರು ಅಭೀಷ್ಟ ವರದ ಶ್ರೀ ಮಹಾಗಣಪತಿ ಎಂದು ಕರೆದರು. ಈ ಕೃತಿಯೂ ಸಾಕಷ್ಟು ಪ್ರಸಿದ್ಧವಾದುದೇ. ಮೈಸೂರು ವಾಸುದೇವಾಚಾರ್ಯರೂ ಸಹ ‘ವಂದೆ ಅನಿಶಂ ಅಹಂ ವಾರಣ ವದನಂ’ ಎಂದು ಕೃತಿ ರಚಿಸಿದ್ದಾರೆ. ಒಂದು ಲೆಕ್ಕದ ಪ್ರಕಾರ ಮುತ್ತುಸ್ವಾಮಿ ದೀಕ್ಷಿತರೇ ಸುಮಾರು 27 ಕ್ಕೂ ಹೆಚ್ಚು ಕೃತಿಗಳನ್ನು ವಿನಾಯಕನ ಕುರಿತು ಬರೆದಿದ್ದಾರೆ. ವಿವಿಧ ವಾಗ್ಗೇಯಕಾರರೂ ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ. ಪುರಂದರದಾಸರೂ ಸೇರಿದಂತೆ ವಿವಿಧ ದಾಸವರೇಣ್ಯರೂ ಗಜವದನನ್ನು ಆರಾಧಿಸಿದ್ದಾರೆ.

ರಂಗ ಸಂಗೀತದಲ್ಲಂತೂ ಅವನಿಗೆ ಸ್ಥಾನ ಇದ್ದೇ ಇದೆ. ರಂಗಶೈಲಿಗೆ ಒಪ್ಪುವಂತೆ ಗಣೇಶನ ಕೃತಿಗಳನ್ನು ಮಾರ್ಪಡಿಸಿಕೊಂಡ ಸಂದರ್ಭಗಳೂ ಇವೆ. ಸಿನಿಮಾಗಳಲ್ಲಿ ಕೇಳಲೇಬೇಡಿ. ಅವನ ಕುರಿತಾಗಿ ಸಾಕಷ್ಟು ಗೀತೆಗಳು ಜನಪ್ರಿಯವಾಗಿವೆ. ಭಕ್ತಿಗೀತೆಗಳ ಲೆಕ್ಕದಲ್ಲಿ ಹೇಳುವುದಾದರೆ ಲೆಕ್ಕಕ್ಕೆ ಸಿಗದು.

ಇದೇ ಕಾರಣಕ್ಕಾಗಿ ನೃತ್ಯದೊಂದಿಗೆ ಗಣಪತಿಯ ಸಂಬಂಧ ಹೇಗಿದೆಯೋ ಅಷ್ಟೇ ಅಥವಾ ಅದಕ್ಕಿಂತ ತುಸು ಹೆಚ್ಚಿನ ಸಂಬಂಧ ಸಂಗೀತದೊಂದಿಗೆ ಇದೆ ಎಂದರೆ ತಪ್ಪೇನೂ ಇಲ್ಲ.

– ವೇಣು, ಬೆಂಗಳೂರು

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.