ಇಂಡಿಯಾ -ಬಾಂಗ್ಲಾ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದ ಈಕೆ ಯಾರು ?

1983 ರ ವಿಶ್ವಕಪ್‌ ವಿಜಯವನ್ನು ಕಣ್ತುಂಬಿಕೊಂಡಿದ್ದ ಅದೃಷ್ಟವಂತೆ...

Team Udayavani, Jul 3, 2019, 11:02 AM IST

crick

ಮುಂಬಯಿ: ಕ್ರಿಕೆಟ್‌ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಗಳಲ್ಲಿ ಸಾಮಾನ್ಯವಾಗಿ ಅಂದ ಚೆಂದದ ಬೆಡಗಿಯರು ಗಮನ ಸೆಳೆಯುತ್ತಾರೆ. ಆದರೆ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಮಂಗಳವಾರ ನಡೆದ ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಪಂದ್ಯ ಇದಕ್ಕೆ ಹೊರತಾಗಿತ್ತು. ಹರೆಯದ ಯುವತಿಯಂತೆ ಪಂದ್ಯವನ್ನು ಸಂಭ್ರಮಿಸುತ್ತಿದ್ದ ವಯೋ ವೃದ್ಧೆಯೊಬ್ಬರು ಎಲ್ಲರ ಗಮನ ಸೆಳೆದರು.

ಪ್ರೇಕ್ಷಕರ ಗ್ಯಾಲರಿಯಲ್ಲಿ ಮುಂಭಾಗದಲ್ಲಿ ಕುಳಿತು ತುತ್ತೂರಿ ಊದುತ್ತಾ ಕೊಹ್ಲಿ ಪಡೆ ಹುಡುಗರನ್ನು ಹುರಿದುಂಬಿಸುತ್ತಾ, ಕ್ಯಾಮರಾಮೆನ್‌ಗಳನ್ನು ಹಲವು ಬಾರಿ ತನ್ನತ್ತ ಸೆಳೆದು, ಯಾರಿವರು ಎಂದು ಎಲ್ಲಾ ಕ್ರೀಡಾಭಿಮಾನಿಗಳು ಪ್ರಶ್ನಿಸುವಂತೆ ಮಾಡಿದವರು ಮತ್ಯಾರು ಅಲ್ಲ,  87 ರ ಹರೆಯದ ಅನಿವಾಸಿ ಭಾರತೀಯೆ ಚಾರುಲತಾ ಪಟೇಲ್‌.

ಸುದ್ದಿಗಾರರೊಂದಿಗೆ ಮಾತನಾಡಿದ ಚಾರುಲತಾ,ನಾನು ಹುಟ್ಟಿದ್ದು ತಾಂಜಾನಿಯಾದಲ್ಲಿ. ಆದರೆ ನನ್ನ ತಂದೆ, ತಾಯಿ ಭಾರತದಲ್ಲಿದ್ದರು. ನನಗೆ ಭಾರತದ ಬಗ್ಗೆ ಅಪಾರ ಹೆಮ್ಮೆ ಇದೆ. ಈ ಬಾರಿ ಭಾರತ ವಿಶ್ವಕಪ್‌ ಗೆಲ್ಲುತ್ತದೆ. ನಾನು ದೈವ ಭಕ್ತೆ. ಗಣಪತಿಯಲ್ಲಿ ಪ್ರಾರ್ಥಿಸಿದ್ದು ಈ ಬಾರಿ ಭಾರತ ಕಪ್‌ ಗೆಲ್ಲುತ್ತದೆ. ನಾನು ಯಾವಾಗಲೂ ಭಾರತ ತಂಡವನ್ನು ಆಶೀರ್ವದಿಸುತ್ತೇನೆ ಎಂದಿದ್ದಾರೆ.

1975 ರಿಂದ ಲಂಡನ್‌ನಲ್ಲಿ ನೆಲೆಸಿರುವ ಚಾರುಲತಾ ಅವರು 1983 ರ ಭಾರತದ ವಿಶ್ವಕಪ್‌ ವಿಜಯವನ್ನು ಕ್ರೀಡಾಂಗಣದಲ್ಲೇ ಕುಳಿತು ಸಂಭ್ರಮಿಸಿದ್ದರು. ಕಪಿಲ್‌ ದೇವ್‌ ನಾಯಕತ್ವದ ತಂಡ ಕಪ್‌ ಜಯಿಸಿದ್ದನ್ನು ನೆನಪಿಸಿಕೊಂಡರು.

20 ವರ್ಷಗಳಿಂದ ನಾನು ಟಿವಿಯಲ್ಲೇ ಕ್ರಿಕೆಟ್‌ ನೋಡುತ್ತಿದ್ದೆ. ಭಾರತ-ಬಾಂಗ್ಲಾ ನಡುವಿನ ಪಂದ್ಯ ನೋಡಲು ನನಗೆ ಅವಕಾಶ ದೊರಕಿದ್ದು ಅದೃಷ್ಟ ಎಂದರು.

ಪಂದ್ಯದ ವೇಳೆ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರು ಚಾರುಲತಾ ಅವರ ಆಶೀರ್ವಾದ ಪಡೆದಿದ್ದರು. ಕೊಹ್ಲಿ ಅವರು ಸಂಭ್ರಮವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.