ಆರ್ಥಿಕ, ಮಿಲಿಟರಿಯಲ್ಲಿ ಭಾರತ ಸರ್ವಶಕ್ತ: ನಿವೃತ್ತ ಮೇಜರ್ ಜ|ಜಿ.ಡಿ.ಬಕ್ಷಿ
Team Udayavani, Apr 4, 2023, 6:20 AM IST
ಮಂಗಳೂರು: ಆರ್ಥಿಕವಾಗಿ ಹಾಗೂ ಮಿಲಿಟರಿಯಾಗಿ ಭಾರತ ಈಗ ಸರ್ವಶಕ್ತವಾಗಿದೆ ಎಂದು ನಿವೃತ್ತ ಮೇಜರ್ ಜ| ಜಿ.ಡಿ. ಬಕ್ಷಿ ಹೇಳಿದರು.
“ನ್ಯೂ ಇಂಡಿಯಾ; ಎ ರೈಸಿಂಗ್ ಸೂಪರ್ ಪವರ್’ ಎಂಬ ವಿಷಯದಲ್ಲಿ ಸಿಟಿಜನ್ ಕೌನ್ಸಿಲ್ ಮಂಗಳೂರು ಚಾಪ್ಟರ್ ವತಿಯಿಂದ ಮಂಗಳೂರು ಪುರಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ನಾವು ಮಿಲಿಟರಿ ಸಂಬಂಧಿತ ಶೇ.70ರಷ್ಟು ವಸ್ತುಗಳನ್ನು ಆಮದು ಮಾಡುವಂತಹ ಪರಿಸ್ಥಿತಿ ಇತ್ತು. ಆದರೆ ಈಗ ಬದಲಾವಣೆ ಆಗುತ್ತಿದೆ. ಮೇಡ್ ಇನ್ ಇಂಡಿಯಾ ಸಾಕಾರವಾಗುತ್ತಿದೆ. ಸದ್ಯ ದೇಶವು ಜಗತ್ತಿನಲ್ಲೇ ಬಹುಪ್ರಮಾಣದ ಮಿಲಿಟರಿ ಶಕ್ತಿಯಾಗಿ ರೂಪುಗೊಂಡಿದೆ ಎಂದರು.
ಖಲಿಸ್ಥಾನ್ ಹೋರಾಟದ ಹಿಂದೆ ಐಎಸ್ಐ ಹಾಗೂ ವಿದೇಶದ ಹಲವು ಸಂಘಟನೆಗಳ ಕೈವಾಡ ಸ್ಪಷ್ಟವಾಗಿದೆ. ಪಂಜಾಬ್ನಲ್ಲಿ ಡ್ರಗ್ಸ್ ಲೋಕವನ್ನೇ ಐಎಸ್ಐ ಸೃಷ್ಟಿಸಿದೆ. ಚೀನ ಕೂಡ ಇಲ್ಲಿ ಮೂಗು ತೂರಿಸುತ್ತಿದೆ. ಇದಕ್ಕೆ ಪೂರಕವಾಗಿ ರಾಜಕೀಯ ಲೆಕ್ಕಾಚಾರವೂ ವ್ಯತ್ಯಾಸವಾಗಿ ದೇಶದೊಳಗೆ ವಿಭಜನಕಾರಿ ಶಕ್ತಿ ಬೆಳೆದುಬಂದಿದೆ. ಆದರೆ ಇತ್ತೀಚೆಗೆ ಇದನ್ನು ಮಟ್ಟ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದರು.
ಚೀನ ಹಾಗೂ ಪಾಕಿಸ್ಥಾನ ಜತೆಗೂಡಿ ದಾಳಿ ನಡೆಸಿದರೂ ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಭಾರತವು ಪ್ರಬಲ ಆರ್ಥಿಕ ಶಕ್ತಿಯಾಗುತ್ತಿದೆ. ಜಗತ್ತು ಒಂದೆಡೆ ಧ್ರುವೀಕರಣ ಗೊಂಡಿಲ್ಲ. ಬಹುಧ್ರುವೀಕರಣ ಹೊಂದುತ್ತಿದೆ ಎಂದರು.
ಭಾರತೀಯ ಸೇನೆಯು ಹೆಚ್ಚು ಸ್ವಾವಲಂಬಿಯಾಗುತ್ತಿದೆ. ಇದು ಆತ್ಮ ನಿರ್ಭರತೆಯ ಪರಿಕಲ್ಪನೆ ಎಂದ ಅವರು, ಭಾರತವನ್ನು ಟೀಕಿಸುವವರು, ಭಾರತ ದಲ್ಲಿ ರಾಷ್ಟ್ರಧ್ವಜ ಹಾರಿಸಲು ನಿರಾಕರಿ ಸುವವರ ವಿರುದ್ಧ ಕಿಡಿಕಾರಿದರು.
ಕೆಎಂಸಿ ಯುರೋಲಜಿ ವಿಭಾಗ ಮುಖ್ಯಸ್ಥ ಡಾ|ಜಿ.ಜಿ.ಲಕ್ಷ್ಮಣ್ ಪ್ರಭು ಅವರು ಸಂಯೋಜಕರಾಗಿದ್ದರು. ಸಿಟಿಜನ್ ಕೌನ್ಸಿಲ್ ಅಧ್ಯಕ್ಷ ಡಾ| ಧನೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆಶ್ರಿತ್ ನೋಂಡ, ಸಂಚಾಲಕ ಡಾ| ಅಭಿಷೇಕ್ ಮುಂತಾದವರು ಉಪಸ್ಥಿತರಿದ್ದರು.
ಮೂಡುಬಿದಿರೆಯಲ್ಲೂ ಉಪನ್ಯಾಸ
ಮೂಡುಬಿದಿರೆಯ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲೂ ಸೋಮವಾರ ಬಕ್ಷಿ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Rave Party; 86 ಜನರು ಡ್ರಗ್ ಸೇವೆನೆ ಮಾಡಿರುವುದು ರಕ್ತ ಪರೀಕ್ಷಯಲ್ಲಿ ದೃಢ
Dombivli: ಕೆಮಿಕಲ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ, ಭಾರೀ ಅಗ್ನಿ ಅವಘಡ
Kannada Cinema; ಮೂಲ ನಂಬಿಕೆ- ಮೂಢನಂಬಿಕೆಯ ಸುತ್ತ ‘ಕೌಮುದಿ’
SMVITM; ಬೆಳೆ ರೋಗದ ವೆಬ್ ಅಪ್ಲಿಕೇಶನ್ ಅಭಿವೃದ್ಧಿ
Kutyaru Muldottu: ವರ್ಷಕ್ಕೊಮ್ಮೆ ತಂಪೆರೆಯುವ ನಾಗಬನದಲ್ಲಿ ವಾರ್ಷಿಕ ಪೂಜೆ