![renukaacharya](https://www.udayavani.com/wp-content/uploads/2024/06/renukaacharya-1-415x276.jpg)
ಎಚ್ಚರ: ತಾಯಿ ಆಸ್ಪತ್ರೆಯಲ್ಲಿದ್ದಾರೆಂದು ನಂಬಿಸಿ ಜನರಿಂದ ದುಡ್ಡು ಪಡೆಯುವ ತಂಡ ಸಕ್ರಿಯ
Team Udayavani, Oct 20, 2022, 7:45 AM IST
![ಎಚ್ಚರ: ತಾಯಿ ಆಸ್ಪತ್ರೆಯಲ್ಲಿದ್ದಾರೆಂದು ನಂಬಿಸಿ ಜನರಿಂದ ದುಡ್ಡು ಪಡೆಯುವ ತಂಡ ಸಕ್ರಿಯ](https://www.udayavani.com/wp-content/uploads/2022/10/sakriya-620x405.jpg)
ಮಲ್ಪೆ: ತಮ್ಮ ಮನೆಯವರು ಕಾಯಿಲೆಗೆ ತುತ್ತಾಗಿದ್ದಾರೆ. ಚಿಕಿತ್ಸೆಗೆ ಹಣ ಇಲ್ಲ, ಹಣ ಸಂಗ್ರಹಿಸಿ ಕೊಡುತ್ತೇನೆಂದು ಬೆಂಗಳೂರಿನಿದ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದ ವ್ಯಕ್ತಿ ಈಗ ನಾಪತ್ತೆಯಾಗಿದ್ದಾನೆ. ಹೀಗೆ ಮಾತಿನಲ್ಲೇ ಮರಳು ಮಾಡುವ ತಂಡವೊಂದು ಹಲವರನ್ನು ತಮ್ಮ ಕಟ್ಟುಕತೆಗಳಿಂದಲೇ ನಂಬಿಸಿ ಹಣ ಪೀಕಿಸಿ ವಂಚಿಸಿದ ಘಟನೆ ಮಲ್ಪೆ ಬಂದರು ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಮಗುವಿನ ಜತೆಯಲ್ಲಿ ಗಂಡ-ಹೆಂಡತಿ ಎಂದು ಹೇಳಿಕೊಂಡು ಮಲ್ಪೆಗೆ ಬಂದಿದ್ದ ಈ ತಂಡದವರು ಆಂಧ್ರಪ್ರದೇಶದವರು ಎಂದು ಹೇಳಲಾಗುತ್ತಿದೆ. ಬಂದರಿನಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಅವರನ್ನು ಭೇಟಿಯಾಗಿ ಅವರಲ್ಲಿ ತಮ್ಮ ವಿಚಾರವನ್ನು ಹೇಳಿಕೊಂಡಿದ್ದರು. ನಮಗೆ ಬಂಧು-ಬಳಗ ಯಾರೂ ಇಲ್ಲ, ತಾಯಿ ಆಸ್ಪತ್ರೆಯಲ್ಲಿದ್ದಾರೆ. ತಮ್ಮ ಕೈಲಾದ ನೆರವನ್ನು ನೀಡಿ ಸಹಕರಿಸುವಂತೆ ವಿನಂತಿಸಿದ್ದರು. ಅವರು ಸುಮಾರು 2 ಸಾವಿರ ರೂಪಾಯಿ ಸಂಗ್ರಹಿಸಿ ಅವರಿಗೆ ನೀಡಿ ರೈಲು ನಿಲ್ದಾಣಕ್ಕೆ ಕಳುಹಿಸಿ ಕೊಟ್ಟಿದ್ದರು. ಮಲ್ಪೆ ಬಂದರಿನಲ್ಲಿ ನಾನಾ ಕಥೆ ಕಟ್ಟಿದ ಈ ತಂಡ ಬೇರೆ ಬೇರೆ ಜನರಿಂದ ಸಾವಿರಾರು ರೂ. ಪಡೆದುಕೊಂಡಿದೆ ಎನ್ನಲಾಗುತ್ತಿದೆ.
ಇಂತಹ ವಂಚಕರ ತಂಡ ಸಕ್ರಿಯವಾಗಿವೆ – ಎಚ್ಚರ
ಮಹಿಳೆ, ಮಕ್ಕಳನ್ನು ಜತೆಗೆ ಕರೆದುಕೊಂಡು ಬಂದು ಜನರನ್ನು ಯಾಮಾರಿಸಿ ದುಡ್ಡು ಪಡೆಯುವ ತಂಡ ಕರಾವಳಿಯಲ್ಲಿ ಮತ್ತೆ ಸಕ್ರಿಯವಾಗುತ್ತಿದೆ. ಈ ಹಿಂದೆ ಹಲವೆಡೆಗಳಲ್ಲಿ ಹೆಚ್ಚಾಗಿ ರಾತ್ರಿ ಹೊತ್ತು ಜನರಲ್ಲಿಗೆ ಬಂದು ಯಾವುದಾದರೊಂದು ಕಷ್ಟಗಳನ್ನು (ಕಟ್ಟುಕತೆ) ಹೇಳಿ ಅವರು ಹಣ ನೀಡುವಲ್ಲಿಯವರೆಗೆ ತಮ್ಮ ಗೋಳನ್ನು ಮುಂದುವರಿಸುತ್ತಲೇ ಇರುತ್ತಾರೆ. ಇಂತಹವರ ಬಗ್ಗೆ ಪೊಲೀಸರೂ ನಿಗಾ ವಹಿಸಬೇಕಿದೆ. ಜನರು ಕೂಡ ಮಹಿಳೆ, ಮಕ್ಕಳನ್ನು ಮುಂದೆ ಬಿಟ್ಟು ಕಷ್ಟದ ಕಥೆ-ವ್ಯಥೆಗಳನ್ನು ಹೇಳುವವರ ಬಗ್ಗೆ ಎಚ್ಚರ ವಹಿಸಬೇಕಿದೆ.
ಟಾಪ್ ನ್ಯೂಸ್
![renukaacharya](https://www.udayavani.com/wp-content/uploads/2024/06/renukaacharya-1-415x276.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Kaup; ಮೂಳೂರಿನಲ್ಲಿ ಹೊಡೆದಾಟ: ಆರು ಮಂದಿಯ ವಿರುದ್ಧ ಪ್ರಕರಣ ದಾಖಲು](https://www.udayavani.com/wp-content/uploads/2024/06/mulur-150x83.jpg)
Kaup; ಮೂಳೂರಿನಲ್ಲಿ ಹೊಡೆದಾಟ: ಆರು ಮಂದಿಯ ವಿರುದ್ಧ ಪ್ರಕರಣ ದಾಖಲು
![Dendoor Katte: 2 cows, 1 calf found illegally transported in separate cases](https://www.udayavani.com/wp-content/uploads/2024/06/dendur-150x83.jpg)
Dendoor Katte: ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2 ಹಸು, 1 ಕರು ಪತ್ತೆ
![Innanje Railway Station; A gold chain was stolen from a woman who was traveling from Madurai to Mumbai](https://www.udayavani.com/wp-content/uploads/2024/06/chain-150x83.jpg)
Innanje Railway Station; ಮಧುರೈನಿಂದ ಮುಂಬಯಿಗೆ ತೆರಳುತ್ತಿದ್ದ ಮಹಿಳೆಯ ಚಿನ್ನದ ಸರ ಕಳವು
![Udupi: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿಯಿಂದ ರಸ್ತೆ ತಡೆದು ಪ್ರತಿಭಟನೆ](https://www.udayavani.com/wp-content/uploads/2024/06/udupi2-150x81.jpg)
Udupi: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿಯಿಂದ ರಸ್ತೆ ತಡೆದು ಪ್ರತಿಭಟನೆ
![4-udupi](https://www.udayavani.com/wp-content/uploads/2024/06/4-udupi-2-150x90.jpg)
Udupi: ಮುಗಿದ ಗಡುವು; ಸಿಟಿ ಬಸ್ಸುಗಳ ಕರ್ಕಶ ಹಾರ್ನ್ ತೆರವುಗೊಳಿಸಿದ ಟ್ರಾಫಿಕ್ ಪೊಲೀಸರು
MUST WATCH
ಹೊಸ ಸೇರ್ಪಡೆ
![Alnavar: ಎತ್ತ ನೋಡಿದರೂ ಹಕ್ಕಿಗಳ ಕಲರವ](https://www.udayavani.com/wp-content/uploads/2024/06/BIRDS-150x80.jpg)
Alnavar: ಎತ್ತ ನೋಡಿದರೂ ಹಕ್ಕಿಗಳ ಕಲರವ
![renukaacharya](https://www.udayavani.com/wp-content/uploads/2024/06/renukaacharya-1-150x100.jpg)
BJP vs BJP; ಶಾಸಕ ಬಿ.ಪಿ. ಹರೀಶ್ ವಿರುದ್ಧ ಕಿಡಿ ಕಾರಿದ ರೇಣುಕಾಚಾರ್ಯ
![Rabkavi Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ](https://www.udayavani.com/wp-content/uploads/2024/06/MODI-PM-1-150x75.jpg)
Rabkavi-Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ
![ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್](https://www.udayavani.com/wp-content/uploads/2024/06/ravindranath-150x83.jpg)
Davanagere;ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್
![Ekam web series produced by Rakshit is coming to the audience; Full details are here](https://www.udayavani.com/wp-content/uploads/2024/06/rakshit-150x83.jpg)
ಪ್ರೇಕ್ಷಕರೆದುರು ಬರುತ್ತಿದೆ ರಕ್ಷಿತ್ ನಿರ್ಮಾಣದ Ekam ವೆಬ್ ಸಿರೀಸ್; ಪೂರ್ಣಮಾಹಿತಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.