ಅದು ಅವರ ಒತ್ತಡ ನಿವಾರಣಾ ಮಾರ್ಗ


Team Udayavani, Jan 6, 2020, 4:09 AM IST

20

ನನ್ನ ಹಿರಿಯರೊಬ್ಬರು 25 ವರ್ಷಗಳ ಹಿಂದೆ ಯಾವುದೋ ಪ್ರಶ್ನೆಯನ್ನು ಕೇಳಿದ್ದಕ್ಕೆ ನಮ್ಮದೇ ಸಮಸ್ಯೆಗೆ ನಮ್ಮದೇ ಪರಿಹಾರ ಎಂಬ ಉತ್ತರ ಕೊಟ್ಟಿದ್ದರು. ಆಗ ಅದು ವಿಚಿತ್ರವೆನಿಸಿತ್ತು.

ಅವರು ನಿತ್ಯವೂ ಸಂಜೆ ದೇವರ ಮನೆಗೆ ಹೋಗಿ ಏನೋ ಹೇಳುತ್ತಿದ್ದರು. ದೀಪದ ಬತ್ತಿಯ ತುದಿಯಲ್ಲಿ ಸಂಗ್ರಹವಾದ ಕಸ (ಉರಿದು ಕಪ್ಪಗಾದ ಹತ್ತಿಯ ಸುಟ್ಟ ಭಾಗ)ವನ್ನು ಶುಚಿಗೊಳಿಸಿ, ದೀಪದ ಬೆಳಕು ಮತ್ತಷ್ಟು ಪ್ರಜ್ವಲಗೊಳಿಸುತ್ತಾ, ಮಾತನಾಡುತ್ತಿದ್ದರು ಮೆಲುದನಿಯಲ್ಲಿ.

ಹಲವು ಬಾರಿ ಈ ಪ್ರಸಂಗವನ್ನು ಕಂಡಿದ್ದೆ. ನನಗೆ ನಿಜಕ್ಕೂ ಆಗ ಅರ್ಥವಾಗಿರಲಿಲ್ಲ. ಒಂದು ದಿನ, ನೀವು ನಿತ್ಯವೂ ಸಂಜೆ ದೇವರ ಮನೆಗೆ ಹೋಗಿ ಮಾಡುವುದೇನು? ನೀವು ಮಾತನಾಡುವುದು ದೇವರೊಂದಿಗೋ? ಎಂದು ಕೇಳಿದ್ದೆ. ಒಂದು ಬಗೆಯ ಮುಗುಳ್ನಗೆ ತೋರಿದ್ದರು. ಅದು ಹೌದೆಂದು ಅರ್ಥ ಮಾಡಿಕೊಂಡು, ನಿಮ್ಮ ಮಾತು ದೇವರಿಗೆ ಅರ್ಥವಾಗುತ್ತದೋ ಎಂದು ಕೇಳಿದ್ದೆ. ಅದಕ್ಕೂ ಮುಗುಳ್ನಗೆಯೇ ಉತ್ತರವಾಗಿತ್ತು.

ಅದಾದ ಬಳಿಕ ಕೆಲವು ದಿನ ಅವರನ್ನು ಸ್ವಲ್ಪ ಗಂಭೀರವಾಗಿ ಅಭ್ಯಾಸ ಮಾಡತೊಡಗಿದೆ. ದೇವರ ಮನೆಯಿಂದ ಹೊರ ಬರುವ ಮುಖದಲ್ಲಿ ಪ್ರಶಾಂತತೆ ಹೆಚ್ಚಿಗೆ ತೋರುತ್ತಿತ್ತು. ಇದೊಂದು ಬಗೆಯ ವಿಚಿತ್ರವೆನ್ನಿಸದೇ ಇರಲಿಲ್ಲ ಆ ದಿನಗಳಲ್ಲಿ. ಆಗೆಲ್ಲಾ ಬದುಕು-ಅಧ್ಯಾತ್ಮ ಎಂಬ ಪದಗಳ ಸಂಪೂರ್ಣ ಅರ್ಥವನ್ನು ಅನುಭವದ ಮೂಸೆಯಿಂದ ನೋಡದ ದಿನಗಳು. ಆದರೆ ಈ ಬದಲಾಗುವ ಮುಖದ ಚಹರೆ ಸ್ಪಷ್ಟವಾಗುತ್ತಿತ್ತು.

ಆದರೆ, ಕ್ರಮೇಣ ಅದನ್ನು ಅರ್ಥ ಮಾಡಿಕೊಳ್ಳಲು ಹೊರಟೆ. ನಿಧಾನ ವಾಗಿ ಒಂದು ಕಲ್ಲಿನ ಚಲನೆಯಿಂದ ಕೊಳದಲ್ಲಿ ಉಂಟಾದ ತರಂಗಗಳನ್ನು ಎಣಿಸುವಂತೆಯೇ ಅರಿಯುತ್ತಾ ಹೊರಟೆ. ಬಳಿಕ ಆ ಹಿರಿಯರ ಮಾತಿನ ಭಾಗಶಃ ಅರ್ಥ ತಿಳಿಯಿತು. ನನ್ನ ಭಾಗಶಃ ಅರ್ಥ ಸರಿಯಿದೆಯೋ, ಇಲ್ಲವೋ ಎಂದು ಪರಿಶೀಲಿಸಿ ಕೊಳ್ಳಬೇಕಿತ್ತು. ಅಂಥದೊಂದು ಸಂದರ್ಭಕ್ಕೆ ಕಾಯುತ್ತಿದ್ದೆ.

ಹೀಗೆಯೇ ಒಂದಿಷ್ಟು ವರ್ಷಗಳು ಉರುಳಿದವು. ಹದಿನೈದು ವರ್ಷಗಳ ಹಿಂದೆ ನಾನೂ ಕೆಲಸದ ಒತ್ತಡಕ್ಕೆ ಸಿಲುಕಿ ನಲುಗಿದ್ದೆ. ಕೆಲಸ ಸಾಕೆನಿಸಿ, ಅಧ್ಯಾತ್ಮವೇ ಒಳ್ಳೆಯದೆನಿಸತೊಡಗಿತ್ತು. ಆದರೆ, ಜವಾಬ್ದಾರಿಗಳು ಹೆಚ್ಚಿದ್ದವು. ಒಂದು ದಿನ ಅವರಲ್ಲಿ ಹೋಗಿ ನನ್ನ ಸಮಸ್ಯೆಯನ್ನು ಹೇಳಿಕೊಂಡೆ. ಅವರು ಒಂದೇ ಉತ್ತರ ಕೊಟ್ಟರು, “ನಾನು ಮಾಡುತ್ತಿದ್ದು ಅದನ್ನೇ’.

ಅವರು ನಿತ್ಯವೂ ಸಂಜೆ ದೇವರಮನೆ ಒಳಹೊಕ್ಕು ಮಾತನಾಡುತ್ತಿದ್ದ ಪ್ರಸಂಗ ಒತ್ತಡ ನಿವಾರಣಾ ತಂತ್ರ. ತನ್ನೊಳಗೆ ಇದ್ದುದ್ದೆಲ್ಲವನ್ನೂ ಮೌನದೊಳಗೆ (ದೇವರ ಮನೆಯಲ್ಲಿ ಅವರು ಮತ್ತು ದೇವರು ಇಬ್ಬರೇ) ವಿವರಿಸಿ, ತಮ್ಮ ಮನಸ್ಸನ್ನು ಹಗುರಗೊಳಿಸಿಕೊಳ್ಳುತ್ತಿದ್ದರು. ಎಲ್ಲವನ್ನೂ ವಿವರಿಸಿಬಿಟ್ಟಿದ್ದೇನೆ ದೇವರಿಗೆ/ಮೌನಕ್ಕೆ/ ಅತೀಂದ್ರೀಯ ಶಕ್ತಿಗೆ. ನನ್ನ ಹೊಣೆ ಮುಗಿಯಿತು ಎಂದುಕೊಳ್ಳುತ್ತಿದ್ದರೇನೋ. ಅದಕ್ಕೇ ಅವರು ದೇವರ ಮನೆಯಿಂದ ಹೊರ ಬರುವಾಗ ಹೆಚ್ಚು ನಳನಳಿಸುತ್ತಿದ್ದರು. ಈ ಅಭ್ಯಾಸ ನನಗೆ ಇಂದು ಒಂದು ಪರಿಹಾರವಾಗಿ ಕಂಡಿದೆ.

 ಆನಂದಕುಮಾರ, ಕುಂದಾಪುರ

ಟಾಪ್ ನ್ಯೂಸ್

Prajwal Revanna

Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ

1-qewqweeeqw

Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ

reliance

TIME ನಿಯತಕಾಲಿಕ: ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

1-aaa

Kanniyakumari; 45 ಗಂಟೆಗಳ ಧ್ಯಾನವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ

Hasana: ಪೈನ್‌ಡ್ರೈವ್‌ ಹಂಚಿಕೆ; ಚೇತನ್‌, ಲಿಖಿತ್‌ ಗೌಡಗೆ ಜಾಮೀನು

Hasana: ಪೈನ್‌ಡ್ರೈವ್‌ ಹಂಚಿಕೆ; ಚೇತನ್‌, ಲಿಖಿತ್‌ ಗೌಡಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bike accident: ಅಲ್ಬಾಡಿಯಲ್ಲಿ ಬೈಕ್‌ ಅಪಘಾತ; ಯುವಕ ಸಾವು

Bike accident: ಅಲ್ಬಾಡಿಯಲ್ಲಿ ಬೈಕ್‌ ಅಪಘಾತ; ಯುವಕ ಸಾವು

10

Siddapur ಸಾರ್ವಜನಿಕ ಬಸ್‌ ನಿಲ್ದಾಣದ ಬಳಿ ಗಾಂಜಾ ಸೇವನೆ; ಆರೋಪಿ ವಶಕ್ಕೆ

15-

Kundapura: ಕಾರುಗಳ ಢಿಕ್ಕಿ; ಚಾಲಕನಿಗೆ ಗಾಯ

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Byndoor 50 ಕಡೆ ಬಸ್‌, ಲಾರಿ ಚಾಸಿಸ್‌ ಬಳಸಿ ಕಾಲುಸಂಕ! ಆರಂಭಿಕ ಹಂತದಲ್ಲಿ 3 ಕಡೆ ನಿರ್ಮಾಣ

Byndoor 50 ಕಡೆ ಬಸ್‌, ಲಾರಿ ಚಾಸಿಸ್‌ ಬಳಸಿ ಕಾಲುಸಂಕ! ಆರಂಭಿಕ ಹಂತದಲ್ಲಿ 3 ಕಡೆ ನಿರ್ಮಾಣ

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

Belagavi: ಪರೀಕ್ಷೆ ಮುಗಿದ 3 ಗಂಟೆಗಳಲ್ಲಿ ವಿಟಿಯು ಫಲಿತಾಂಶ ಪ್ರಕಟ!

Belagavi: ಪರೀಕ್ಷೆ ಮುಗಿದ 3 ಗಂಟೆಗಳಲ್ಲಿ ವಿಟಿಯು ಫಲಿತಾಂಶ ಪ್ರಕಟ!

Prajwal Revanna

Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ

1-qewqweeeqw

Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ

1-sub

Subrahmanya ಪರಿಸರದಲ್ಲಿ ಧಾರಾಕಾರ ಮಳೆ: ಕೆಲವೆಡೆ ಹಾನಿ

1-qewqeweqw

Mangaluru ನಮಾಜ್‌ ಪ್ರಕರಣ: ಬಿ ರಿಪೋರ್ಟ್‌ ಸಲ್ಲಿಕೆ; ಶರಣ್‌ ಪಂಪ್‌ವೆಲ್‌ ವಿರುದ್ಧ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.