ತೆಕ್ಕಟ್ಟೆ: ಕೃಷಿ ಭೂಮಿಯಲ್ಲಿ ಹೆಬ್ಬಾವು ಪತ್ತೆ: ಗ್ರಾಮಸ್ಥರಿಂದ ರಕ್ಷಣೆ
Team Udayavani, Dec 25, 2019, 3:23 PM IST
ತೆಕ್ಕಟ್ಟೆ : ಇಲ್ಲಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಮೀಪ ಹೆಬ್ಬಾವೊಂದು ಪತ್ತೆಯಾಗಿದ್ದು , ಸ್ಥಳೀಯ ಗ್ರಾಮಸ್ಥರು ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ವಾದಿರಾಜ ಉಪಾಧ್ಯಾಯ ಆವರಿಗೆ ಸಂಬಂಧಪಟ್ಟ ಕೃಷಿ ಭೂಮಿಯನ್ನು ಜೆಸಿಬಿ ಯಂತ್ರದ ಮೂಲಕ ಸ್ವಚ್ಚಗೊಳಿಸುವ ಸಂದರ್ಭದಲ್ಲಿ ಈ ಹೆಬ್ಬಾವು ಕಂಡುಬಂದಿದ್ದು ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಆ ಬಳಿಕ ಗ್ರಾಮಸ್ಥರೇ ಅದನ್ನು ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಸದಸ್ಯ ಗಣಪತಿ ಟಿ.ಶ್ರೀಯಾನ್, ವಿಜಯ ಆಚಾರ್ ಮತ್ತಿತರರು ಸಹಕರಿಸಿದರು.