Congress: ಅಧೀರ್ ಅಮಾನತು ರದ್ದು
Team Udayavani, Aug 30, 2023, 11:49 PM IST
ಹೊಸದಿಲ್ಲಿ: ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರ ಲೋಕಸಭೆ ಅಮಾನತನ್ನು ಬುಧವಾರ ರದ್ದುಗೊಳಿಸಲಾಗಿದೆ. ಸಂಸತ್ತಿನ ವಿಶೇಷಾಧಿಕಾರ ಸಮಿತಿಯ ಮುಂದೆ ಚೌಧರಿ ಅವರು ಹಾಜರಾದ ಬಳಿಕ ಅಮಾನತು ರದ್ದುಗೊಳಿಸುವ ಶಿಫಾರಸನ್ನು ಸಮಿತಿ ಅಂಗೀಕರಿಸಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿ ಸಿದಂತೆ ಕೇಂದ್ರ ಸರಕಾರದ ವಿರುದ್ಧ ನಡೆಯುತ್ತಿದ್ದ ಅವಿಶ್ವಾಸ ಗೊತ್ತುವಳಿಯಲ್ಲಿ ಪ್ರಧಾನಿ ಮೋದಿ ಅವರನ್ನು ಧೃತರಾಷ್ಟ್ರ ಹಾಗೂ ದೇಶಭ್ರಷ್ಟ ನೀರವ್ ಮೋದಿಗೆ ಚೌಧರಿ ಹೋಲಿಕೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರು ಚೌಧರಿ ಅಮಾನತಿಗೆ ಪ್ರಸ್ತಾವನೆ ಮಂಡಿಸಿ, ವಿಶೇಷಾಧಿಕಾರ ಸಮಿತಿಗೆ ಉಲ್ಲೇಖೀಸಿದ್ದರು. ಅದರಂತೆ ಸಮಿತಿ ವರದಿ ಬಿಡುಗಡೆಗೊಳ್ಳುವವರೆಗೂ ಅವರನ್ನು ಅಮಾನತುಗೊಳಿಸಲಾಗಿತ್ತು. ಈ ಸಂಬಂಧ ಸಮಿತಿ ಮುಂದೆ ಹಾಜರಾಗಿದ್ದ ಚೌಧರಿ, ತನ್ನ ಮಾತಿನ ಉದ್ದೇಶ ಯಾರನ್ನೂ ನೋಯಿ ಸುವುದಾಗಿರಲಿಲ್ಲ ಎಂದಿದ್ದು, ತಮ್ಮ ಹೇಳಿಕೆ ಬಗ್ಗೆಯೂ ಪಶ್ಚಾತ್ತಾಪಪಟ್ಟಿರುವ ಹಿನ್ನೆಲೆಯಲ್ಲಿ ಸಮಿತಿಯು ಚೌಧರಿ ಅವರ ಅಮಾನತನ್ನು ರದ್ದುಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
V K Saxena ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಕೇಸ್: ಮೇಧಾ ಪಾಟ್ಕರ್ ದೋಷಿ
MEA action; ಪ್ರಜ್ವಲ್ ಗೆ ಶೋಕಾಸ್ ನೋಟಿಸ್ ಕಳುಹಿಸಿದ ವಿದೇಶಾಂಗ ಸಚಿವಾಲಯ
Anwarul Azim Anwar; ಹನಿ ಟ್ರ್ಯಾಪ್ ಮಾಡಿ ಬಾಂಗ್ಲಾ ಸಂಸದನ ಹತ್ಯೆ; ಢಾಕಾದಲ್ಲಿ ಮಹಿಳೆ ಬಂಧನ
10km ದೂರದಲ್ಲಿರುವ ಪ್ರವಾಸಿತಾಣಕ್ಕೆ ಕರೆದೊಯ್ಯಲಿಲ್ಲವೆಂದು ನೇಣಿಗೆ ಶರಣಾದ 10 ವರ್ಷದ ಬಾಲಕಿ
Form 17c: ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ನಕಾರ, ಆದೇಶದಲ್ಲೇನಿದೆ?