ಎಲ್ಲೂ ಹೋಗಲ್ಲ ನಾನು ಎಲ್ಲೂ ಹೋಗಲ್ಲ…


Team Udayavani, May 27, 2020, 5:13 AM IST

naanu hog

ಮೊನ್ನೆ, ತುರ್ತಾಗಿ ಬ್ಯಾಂಕ್‌ಗೆ ಹೋಗಬೇಕಾಗಿ ಬಂತು. ಮನೆಯಿಂದ ಹೊರಗೆ ಕಾಲಿಡದೆ ಬರೋಬ್ಬರಿ 50 ದಿನವಾಗಿದ್ದರಿಂದ, ಗೇಟು ದಾಟಿ ಆಚೆ ಹೋಗಲು  ಹೆದರಿಕೆ ಆಗುತ್ತಿತ್ತು. ವಿಧಿ ಇಲ್ಲದೆ, ಕೈಗೆ ಗ್ಲೌಸ್‌, ಮುಖಕ್ಕೆ ಮಾಸ್ಕ್‌ ಹಾಕಿಕೊಂಡು  ಹೊರಟೆ. ಬೆಂಗಳೂರಿನಲ್ಲಿ, ಸಾಮಾನ್ಯ ದಿನಗಳಲ್ಲಿಯೇ ಆಟೋದವರೊಂದಿಗೆ ಚೌಕಾಸಿ ಮಾಡುವುದು ಸವಾ ಲಿನ ಕೆಲಸ. ಇನ್ನು, ಇಂಥ ಪರಿಸ್ಥಿತಿಯಲ್ಲಿ ಕೇಳಬೇಕೆ? ದೇವರ  ದಯಕ್ಕೆ, ಒಬ್ಬ ಆಟೋದವನು ನಾನು ಹೇಳಿದಲ್ಲಿಗೆ ಬರಲು ಒಪ್ಪಿಕೊಂಡ.

(ಅವನೂ ಮಾಸ್ಕ್‌ ಧರಿಸಿದ್ದ.) ಬ್ಯಾಂಕ್‌  ಒಳಗೆ ಉದ್ದ ಕ್ಯೂ ಕಾಣಿಸಿತು. ವಾಸ್ತವವಾಗಿ ಅಲ್ಲಿ 6-7 ಜನ ಇದ್ದರೂ, ಸಾಮಾಜಿಕ ಅಂತರದ ಕಾರಣದಿಂದ, ಕ್ಯೂ  ಉದ್ದ ಕಾಣಿಸುತ್ತಿತ್ತು. ಬಾಗಿಲಿನಬಳಿಯೇ ಸ್ಯಾನಿಟೈಸರ್‌ ಇಟ್ಟಿದ್ದರು. ಒಳಗೆ ಹೋದರೆ, ಬ್ಯಾಂಕ್‌ ಸಿಬ್ಬಂದಿಗೂ ನಮಗೂ ಮೂರಡಿ ಅಂತರ. ನಡುವೆ ಗಾಜಿನ ಪರದೆ! ಮಾಸ್ಕ್‌ ತೆಗೆದು ಉಸಿರಾಡುತ್ತಿದ್ದ  ಕ್ಯಾಶಿಯರ್‌, ನಾನು ಕೌಂಟರ್‌ ನತ್ತ ಹೋಗುತ್ತಿದ್ದಂತೆಯೇ ಮಾಸ್ಕ್‌ ನಿಂದ ಮುಖ ಮುಚ್ಚಿಕೊಂಡರು. ನಾನು  ಕೊಟ್ಟ ನೋಟುಗಳನ್ನು, ಸ್ಯಾನಿಟೈಸ್‌ ಮಾಡಬೇಕಾದ ನೋಟುಗಳ ಕಂತೆಗೆ ಸೇರಿಸಿದರು.

ಕೊಟ್ಟು, ತೆಗೆದುಕೊಳ್ಳುವ ಎಲ್ಲ ವಸ್ತುಗಳನ್ನೂ ಸ್ಯಾನಿಟೈಸ್‌ ಮಾಡುತ್ತಾರಂತೆ ಅವರು. ಅಬ್ಬಬ್ಟಾ, ಜನ ದುಡ್ಡನ್ನು ಇಷ್ಟೊಂದು ಅಸ್ಪೃಶ್ಯವಾಗಿ  ನೋಡುತ್ತಿರುವುದು, ಇದೇ ಮೊದಲಿರ ಬೇಕು. ಇಷ್ಟು ದಿನ ಒಳಗೇ ಇದ್ದವಳಿಗೆ, ಹೊರಗೆ ಜನರು ಇಷ್ಟೆಲ್ಲಾ ಮುಂಜಾಗ್ರತೆಯಿಂದ ನಡೆದುಕೊಳ್ಳುತ್ತಿದ್ದಾರೆ ಅಂತ ಅಂದಾಜಿರಲಿಲ್ಲ. ಕೊನೆಗೆ, ಎಲ್ಲಾ ಕೆಲಸ ಮುಗಿಸಿಕೊಂಡು ಹತ್ತಿರದ ಎಟಿಎಂ  ಬೂತ್‌ಗೆ ಹೋದೆ. ಸೀದಾ ಒಳ ನುಗ್ಗುತ್ತಿದ್ದ ನನ್ನನ್ನು ತಡೆದ ಸೆಕ್ಯುರಿಟಿಯವನು, “ಮೇಡಂ, ಸಿಸಿ ಕ್ಯಾಮೆರಾದಲ್ಲಿ ಮುಖ ಕಾಣಿಸ್ಬೇಕು. ಮಾಸ್ಕ್‌ ತೆಗೆದು ಒಳಗೆ ಹೋಗಿ’ ಅಂದ.

ಯುದ ಮಾಡುವಾಗ ಕತ್ತಿಯನ್ನೇ ಕಿತ್ತುಕೊಂಡರೆ ಹೇಗಾಗುತ್ತೋ, ಹಾಗಾಯ್ತು ನನಗೆ. ಮಾಸ್ಕ್‌ ತೆಗೆದು, ಎಟಿಎಂ ಯಂತ್ರ  ಮುಟ್ಟುತ್ತಿದ್ದಂತೆಯೇ, ಅಲ್ಲೆಲ್ಲೋ ಅದೃಶ್ಯವಾಗಿ ಇರುವ ವೈರಸ್‌ ಅಟ್ಯಾಕ್‌  ಮಾಡಿಬಿಟ್ಟರೆ… ಹೀಗೊಂದು ಯೋಚನೆ ಬಂದದ್ದೇ ತಡ; ನಿಂತಲ್ಲೇ ಮೈ ಬೆವರಿತು.  ಎಟಿಎಂ ಸಹವಾಸವೂ ಬೇಡ, ಹೆಚ್ಚಿನ ಹಣವೂ ಬೇಡ. ಕೊರೊನಾ ಕಾಟ ಮುಗಿಯುವವರೆಗೆ ನಾನು ಹೊರಗೆಲ್ಲೂ ಹೋಗುವುದೇ ಇಲ್ಲ. ಇರುವ ದುಡ್ಡಿನಲ್ಲಿಯೇ ಅಡ್ಜಸ್ಟ್ ಮಾಡಿದರಾಯ್ತು ಅಂತ ಸೀದಾ ಮನೆಗೋಡಿದೆ.

* ಶಾಲಿನಿ

ಟಾಪ್ ನ್ಯೂಸ್

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.