ಹಂಸಲೇಖ- ಬರಗೂರು ಹೊಸ ಅಧ್ಯಾಯ
ದೇಶವಿದೇಶದ ಸಂಚಾರಿ ಕಣ್ಣಿಗೆ ಕಾಣದ ಸಂಹಾರಿ...
Team Udayavani, Jun 5, 2020, 4:35 AM IST
ಕೋವಿಡ್ 19 ಕುರಿತಾಗಿ ಈಗಾಗಲೇ ಸಾಕಷ್ಟು ಹಾಡುಗಳು, ಕಿರುಚಿತ್ರಗಳು ಬಂದಿವೆ. ಈ ಸಾಲಿಗೆ ಈಗ ಹೊಸದಾಗಿ ಮತ್ತೂಂದು ಆಲ್ಬಂ ಸೇರಿಕೊಳ್ಳುತ್ತಿದೆ. ಅದೇ ಹೊಸ ಅಧ್ಯಾಯ. ಹೌದು. ಹೊಸ ಅಧ್ಯಾಯ ಎಂಬ ಆಲ್ಬಂ ಒಂದು ಬಿಡುಗಡೆಯಾಗಿದೆ. ಈ ಆಲ್ಬಂನ ಹಿಂದಿರೋದು ಕನ್ನಡ ಚಿತ್ರರಂಗದ ಇಬ್ಬರು ಹಿರಿಯ ವ್ಯಕ್ತಿಗಳು.
ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿ ಹೊಸ ಅಧ್ಯಾಯ ಎಂಬ ಕೋವಿಡ್ 19 ಕುರಿತಾದ ಆಲ್ಬಂ ಹೊರತಂದಿದ್ದಾರೆ. ದೇಶ ವಿದೇಶದ ಸಂಚಾರಿ ಕಣ್ಣಿಗೆ ಕಾಣದ ಸಂಹಾರಿ, ಅಂಟಿದ ನಂಟನು ತಂದವನು ಜೀವ ಜೀವನ ಕೊಂದವನು… ಎಂಬ ಅರ್ಥಪೂರ್ಣ ಸಾಲನ್ನು ಬರಗೂರು ರಾಮಚಂದ್ರಪ್ಪನವರು ರಚಿಸಿದ್ದು,
ಈ ಹಾಡಿಗೆ ಹಂಸಲೇಖ ಅವರು ಧ್ವನಿ ನೀಡುವ ಜೊತೆಗೆ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಈ ಹಾಡಿನಲ್ಲಿ ಕೋವಿಡ್ 19 ಪರಿಣಾಮ ಹಾಗೂ ಅದನ್ನು ಹಿಮ್ಮೆಟ್ಟಿಸುವ ಕುರಿತಾದ ಭರವಸೆಯನ್ನು ತುಂಬಲಾಗಿದೆ. ವಿಶ್ವಾಸ್ ಎನ್ನುವವರು ಈ ಹಾಡನ್ನು ಚಿತ್ರೀಕರಿಸಿದ್ದಾರೆ. ಈಗಾಗಲೇ ಹಂಸಲೇಖ ಹಾಗೂ ಅವರ ಕುಟುಂಬ ಕೋವಿಡ್ 19 ಕುರಿತು ತಮ್ಮದೇ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ