48 ವರ್ಷಗಳ ಹಿಂದೆ ಕಲಿಸಿದ ಗುರುವನ್ನು ಹುಡುಕಿ 480 ಕಿ.ಮೀ. ಪಯಣಿಸಿದ ಶಿಷ್ಯರು!

ಕಾರ್ಕಳದಿಂದ ಕೇರಳದ ತ್ರಿಶ್ಶೂರಿಗೆ ಪ್ರಯಾಣ

Team Udayavani, May 23, 2024, 6:19 PM IST

48 ವರ್ಷಗಳ ಹಿಂದೆ ಕಲಿಸಿದ ಗುರುವನ್ನು ಹುಡುಕಿ 480 ಕಿ.ಮೀ. ಪಯಣಿಸಿದ ಶಿಷ್ಯರು!

ಕಾರ್ಕಳ: ಒಂದೇ ತರಗತಿಯಲ್ಲಿ ಕಲಿತ ಕೆಲವು ಸಹಪಾಠಿಗಳು ಸೇರಿ ತಮಗೆ ಪಾಠ ಮಾಡಿದ ಗುರುವೊಬ್ಬರನ್ನು ಹುಡುಕಿ 480 ಕಿ.ಮೀ. ಪ್ರಯಾಣಿಸಿ ಅವರಿಗೆ ಗುರು ನಮನ ಸಲ್ಲಿಸಿದ ಅವಿಸ್ಮರಣೀಯ ವಿದ್ಯಮಾನ ಇದು. ಹಾಗಂತ ಶಿಷ್ಯರು, ಸಹಪಾಠಿಗಳು ಅಂದರೆ ಸಣ್ಣ ಮಕ್ಕಳೇನಲ್ಲ. ಅವರೆಲ್ಲರೂ ಈಗ ಸುಮಾರು 65 ವರ್ಷ ಆಸುಪಾಸಿನವರು. ತಮಗೆ 48 ವರ್ಷಗಳ ಹಿಂದೆ ಪಾಠ ಮಾಡಿದ ಗುರುಗಳನ್ನು ಹುಡುಕಿ ಕೊಂಡು ಕಾರ್ಕಳದಿಂದ ಕೇರಳದ ತ್ರಿಶ್ಶೂರಿಗೆ ಹೋಗಿ ಗೌರವಿಸಿದ್ದಾರೆ. ಇಂಥ ಗುರು ನಮನದ
ಸಾರ್ಥಕತೆಯನ್ನು ಅನುಭವಿಸಿದ ಮಹಾ ಗುರುವಿನ ಹೆಸರು ಮುರಳೀಧರ ಮೆನನ್‌.ವಯಸ್ಸು 85. ಇವರು ಕಾರ್ಕಳ ಭುವನೇಂದ್ರ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರು.

ಏನಿದು ಗುರು-ಶಿಷ್ಯರ ಪ್ರೀತಿ?
ಕಾಲೇಜಿನಲ್ಲಿ ಜತೆಗೆ ಕಲಿತ ವಿದ್ಯಾರ್ಥಿಗಳು ಮತ್ತೆ ಒಂದಾಗಿ ಸ್ನೇಹ ಮಿಲನ ನಡೆಸುವುದು ಈಗ ಸಾಮಾನ್ಯವಾಗಿದೆ. ಕಾರ್ಕಳದ ಭುವ ನೇಂದ್ರ ಕಾಲೇಜಿನ 1976-79ನೇ ಶೈಕ್ಷಣಿಕ ಸಾಲಿನ ಬಿ.ಕಾಂನ ಹಿರಿಯ ವಿದ್ಯಾರ್ಥಿಗಳು ಚರ್ಚೆ ಮಾಡುವುದು ಮಾತ್ರವಲ್ಲ, ತಮಗೆ ಪಾಠ ಕಲಿಸಿದ, ಬದುಕನ್ನು ತಿದ್ದಿದ ಶಿಕ್ಷಕರನ್ನು ಭೇಟಿಯಾಗಿ, ಅವರ ಆರೋಗ್ಯ ವಿಚಾರಿಸಿ, ಅವರಿಗೆ ಗುರು ನಮನ ಸಲ್ಲಿಸುವ ಒಂದು ಪರಿ ಪಾಠ ಆರಂಭಿಸಿದ್ದಾರೆ. ತಮ್ಮ ಪ್ರೀತಿ ಪಾತ್ರ ಉಪ ನ್ಯಾಸಕರನ್ನು ಗೌರವಿಸಿದ ಅವರಿಗೆ ತಮ್ಮ ತುಂಬ ಇಷ್ಟದ ಶಿಕ್ಷಕರೊಬ್ಬರು ತಪ್ಪಿ ಹೋಗಿದ್ದರು. ಅವರೇ ಮುರಳೀಧರ್‌ ಮೆನನ್‌.

ಅವರು ಈಗ ಎಲ್ಲಿದ್ದಾರೆ ಎಂದು ಹುಡುಕಿದಾಗ ಅವರು ಕೇರಳದ ತ್ರಿಶ್ಶೂರು ಸಮೀಪದ ಕೋಡಂಗಲ್ಲಿನಲ್ಲಿ ಇರುವುದು ಗೊತ್ತಾಯಿತು. 85 ವರ್ಷದ ಅವರನ್ನು ಇಲ್ಲಿಗೆ ಕರೆಸುವ ಬದಲು ಅಲ್ಲೇ ಅವರನ್ನು ಮಾತನಾಡಿಸಿಕೊಂಡು ಬರೋಣ ಎಂಬ ನಿರ್ಧಾರಕ್ಕೆ ಬಂತು ಟೀಮ್‌ 1976-79 ಬ್ಯಾಚ್‌.

ಆ ಬ್ಯಾಚ್‌ ನಲ್ಲಿ ಸುಮಾರು 68 ಮಂದಿ ಶಿಷ್ಯರಿದ್ದರು. ಅವರ ಪೈಕಿ ಹಿರಿಯ ವಿದ್ಯಾರ್ಥಿ ಸಹಪಾಠಿಗಳಾದ ತಂಡದ ಕಾರ್ಯನಿರ್ವಾಹಕ ಯೋಗೀಶ್‌ ಕಾಮತ್‌, ಪಾಂಡುರಂಗ ನಾಯಕ್‌, ಆನಂದ ಬೈಲೂರು ಅವರು ತ್ರಿಶ್ಶೂರಿಗೆ ಪಯಣಿಸಿ ಅಲ್ಲಿ ಗುರುವನ್ನು ಕಂಡು ಮಾತನಾ ಡಿಸಿ ಶಿಕ್ಷಕ ದಂಪತಿಯನ್ನು ಸಮ್ಮಾನಿಸಿ ಸಾರ್ಥಕ ಭಾವವನ್ನು ಅನುಭವಿಸಿದರು.

37 ವರ್ಷ ಶಿಕ್ಷಕರಾಗಿದ್ದ ಮೆನನ್‌
1940ರಲ್ಲಿ ಕೇರಳದಲ್ಲಿ ಜನಿಸಿದ ಮುರಳೀಧರ್‌ ಮೆನನ್‌ ಅವರು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ 1963ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ 1988ರ ವರೆಗೆ ವಾಣಿಜ್ಯ ಶಾಸ್ತ್ರ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಮೂಲ್ಕಿಯ ಮಣಿಪಾಲ ಅಕಾಡೆಮಿ ಎಜುಕೇಶನ್‌ನಲ್ಲಿ 7 ವರ್ಷ, ಅನಂತರ ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ 1 ವರ್ಷ ಪ್ರೊಫೆಸರ್‌ ಆಗಿ, 4 ವರ್ಷ ಪ್ರಾಂಶುಪಾಲರಾಗಿ 2000ರಲ್ಲಿ ನಿವೃತ್ತಿ ಹೊಂದಿದ್ದರು.

ಕೈಲ್ಲೊಂದು ಡಸ್ಟರ್‌, ಚಾಕ್‌ ಪೀಸ್‌ ಬಿಟ್ಟರೆ ಬೇರೇನಿಲ್ಲ
ಮೆನನ್‌ ಅವರು ಶ್ರೇಷ್ಠ ಮಟ್ಟದ ವಾಣಿಜ್ಯ ಅರ್ಥಶಾಸ್ತ್ರ ಪ್ರಾಧ್ಯಾಪಕರು. ತರಗತಿಗೆ ಹೋಗುವಾಗ ಕೈಯಲ್ಲೊಂದು
ಡಸ್ಟರ್‌ ಮತ್ತು ಚಾಕ್‌ ಪೀಸ್‌ ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ. ಸುಲಲಿತವಾದ ಪಾಠ. ಮಕ್ಕಳಿಗೆ ಅವರ ಪಾಠವೆಂದರೆ ಓದುವ ಅಗತ್ಯವೇ ಇರುತ್ತಿರಲಿಲ್ಲವಂತೆ. ಮೆನನ್‌ ಅವರು ಅಷ್ಟೊಂದು ಜನಪ್ರಿಯ ಪ್ರಾಧ್ಯಾಪಕರು. ಅಜಾತಶತ್ರು, ಹಸನ್ಮುಖಿ.ಅಪಾರ ಸಂಖ್ಯೆ ಶಿಷ್ಯರು, ಅಭಿಮಾನಿಗಳನ್ನು ಅವರು ಹೊಂದಿದ್ದಾರೆ ಎನ್ನುತ್ತಾರೆ ಅವರೊಂದಿಗೆ ಏಳೆಂಟು ವರ್ಷ ಕೆಲಸ ಮಾಡಿದ ಅನುಭವವುಳ್ಳ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ| ಅರುಣ್‌ಕುಮಾರ್‌.

ಶಿಷ್ಯರ ಸ್ವಾಗತಕ್ಕೆ ರಸ್ತೆ ಬದಿ ಬಂದು ಕಾದು ನಿಂತರು
ಮುರಳೀಧರ ಮೆನನ್‌ ಅವರು 85ನೇ ವಯಸಿನಲ್ಲೂ ಗಟ್ಟಿಮುಟ್ಟಾಗಿದ್ದಾರೆ. ಮನಸ್ಸು, ಜ್ಞಾನ, ಬುದ್ಧಿ ಶಕ್ತಿಗೆ ಮುಪ್ಪಾಗಿಲ್ಲ. ಶಿಷ್ಯರು ಬರುತ್ತಿದ್ದಾರೆಂದು ತಿಳಿದು ಅವರೇ ಕಾಲ್ನಡಿಗೆಯಲ್ಲಿ ಬಹುದೂರದ ತನಕ ಬಂದು ರಸ್ತೆ ಬದಿ ಕಾದು ಸ್ವಾಗತಿಸಲು ನಿಂತಿದ್ದರಂತೆ. ಜತೆಗೆ ಮಕ್ಕಳನ್ನು ಮಾತನಾಡಿಸಿದಂತೆ ಮಾತನಾಡಿ ಕಳುಹಿಸಿದ್ದಾರೆ. ಪತ್ನಿ ಹಾಗೂ ಯುಎಇನಲ್ಲಿ ಉದ್ಯೋಗದಲ್ಲಿರುವ ಪುತ್ರ,ಅಮೆರಿಕದ ಯುನಿವರ್ಸಿಟಿಯಲ್ಲಿ ಉದ್ಯೋಗದಲ್ಲಿರುವ ಪುತ್ರಿಯೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

*ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

ಐಸಿಯುನಲ್ಲಿದ್ದ ತಂದೆಯ ಮುಂದೆಯೇ ನೆರವೇರಿತು ಮಗಳ ಮದುವೆ: ಭಾವುಕ ಕ್ಷಣದ ವಿಡಿಯೋ ವೈರಲ್

ಐಸಿಯುನಲ್ಲಿದ್ದ ತಂದೆಯ ಮುಂದೆಯೇ ನೆರವೇರಿತು ಮಗಳ ಮದುವೆ: ಭಾವುಕ ಕ್ಷಣದ ವಿಡಿಯೋ ವೈರಲ್

11

Siruguppa: ಸಾರ್ವಜನಿಕ ಗ್ರಂಥಾಲಯದಲ್ಲಿ ಶೌಚಕ್ಕಾಗಿ ಸಾಲುಗಟ್ಟಿ ನಿಂತಿರುವ ವಿದ್ಯಾರ್ಥಿನಿಯರು

Veerashaiva-Lingayat separate religion recognition protest back to fore: Eshwar Khandre

ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಹೋರಾಟ ಮತ್ತೆ ಮುನ್ನೆಲೆಗೆ: ಖಂಡ್ರೆ

13

Tollywood: ಚಿರಂಜೀವಿ ನಾಲ್ಕು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ – ರಾಮ್‌ ಚರಣ್

Rahul Gandhi (3)

EVM ವಿಚಾರ; ಮಸ್ಕ್ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ : ಬಿಜೆಪಿ ಆಕ್ರೋಶ

9

ನಿಮಿರು ದೌರ್ಬಲ್ಯ ಚಿಕಿತ್ಸೆಯಲ್ಲಿ ಜೀವನ ವಿಧಾನ ಮತ್ತು ಆಹಾರ ಶೈಲಿ ಬದಲಾವಣೆಗಳು

12

ಕಾಯಲು ಇರುವವಳು: ಮೂಕ ಭಾಷೆ… ಮೌನ ಸಂದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

udupi-1

Udupi; ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರಾಜಾ ನಿಧನ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Udupi ಬೈಕ್‌-ಸ್ಕೂಟರ್‌ ಢಿಕ್ಕಿ; ಗಾಯ

Udupi ಬೈಕ್‌-ಸ್ಕೂಟರ್‌ ಢಿಕ್ಕಿ; ಗಾಯ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ಐಸಿಯುನಲ್ಲಿದ್ದ ತಂದೆಯ ಮುಂದೆಯೇ ನೆರವೇರಿತು ಮಗಳ ಮದುವೆ: ಭಾವುಕ ಕ್ಷಣದ ವಿಡಿಯೋ ವೈರಲ್

ಐಸಿಯುನಲ್ಲಿದ್ದ ತಂದೆಯ ಮುಂದೆಯೇ ನೆರವೇರಿತು ಮಗಳ ಮದುವೆ: ಭಾವುಕ ಕ್ಷಣದ ವಿಡಿಯೋ ವೈರಲ್

Raakha Directed by Malavalli Saikrishna

ಸಂಬಂಧದ ಸುತ್ತ ರಾಖಾ; ಮಳವಳ್ಳಿ ಸಾಯಿಕೃಷ್ಣ ನಿರ್ದೇಶನ

11

Siruguppa: ಸಾರ್ವಜನಿಕ ಗ್ರಂಥಾಲಯದಲ್ಲಿ ಶೌಚಕ್ಕಾಗಿ ಸಾಲುಗಟ್ಟಿ ನಿಂತಿರುವ ವಿದ್ಯಾರ್ಥಿನಿಯರು

Veerashaiva-Lingayat separate religion recognition protest back to fore: Eshwar Khandre

ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಹೋರಾಟ ಮತ್ತೆ ಮುನ್ನೆಲೆಗೆ: ಖಂಡ್ರೆ

10-

Kandagal: ಗಬ್ಬೆದು ನಾರುತ್ತಿರುವ ಮಲೀನ ನೀರು; ನರಕಯಾತನೆ ಅನುಭವಿಸುತ್ತಿರುವ ನಿವಾಸಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.