ಆಫೀಸ್‌ನಲ್ಲಿ ಗಬ್ಬುವಾಸನೆ…‌


Team Udayavani, Jun 9, 2020, 4:52 AM IST

lock kathegalu

ಭಣಗುಡುವ ಆಫೀಸಲ್ಲಿ,  ಯಾವುದೋ ಫೈಲ್‌ ಗಳನ್ನು ತೆರೆದು ಕೂರುವ ಶಿಕ್ಷೆ ಇದೆಯಲ್ಲ, ಅದು ಯಾರಿಗೂ ಬೇಡ. ಸಮಯಕ್ಕೆ ಸರಿಯಾಗಿ ಬರುತ್ತಿದ್ದ ಕಾಫಿ, ಟೀ ಸರಬರಾಜು ಇಲ್ಲ. ನೀರು ಕುಡಿಯಲು ಕೈ ಇಟ್ಟರೆ, ಕೋವಿಡ್‌ 19 ಭಯ!

ಆಫೀಸಿಗೆ ಹೋಗುವುದಕ್ಕೆ ಭಯವಾಗುತ್ತದೆ. ಮೊದಲೇ ನಮ್ಮ ಬಾಸ್‌ ಶಾರ್ಟ್‌ ಟೆಂಪರ್‌. ಅವರು ಕಂಪನಿಯ ಪಾರ್ಟನರ್‌ ಕೂಡಾ. ಕೋವಿಡ್‌ 19ದಿಂದ ಯಾವುದೇ ವ್ಯವಹಾರ ನಡೆಯದೆ, ಆದಾಯ ಖೋತಾ ಆಗಿದೆ. ಆದರೂ ಅವರು ನೌಕರರಿಗೆ ಸಂಬಳ ಕೊಡಬೇಕು. ಈ ಕಾರಣಕ್ಕೇ ಅವರಿಗೆ ಟೆನ್ಶನ್‌. ಪರಿಣಾಮ, ಎದುರಿಗೆ ಯಾರು ಸಿಕ್ಕರೂ ಅವರ ಮೇಲೆ ಎಗರಾಡಿ, ಕೂಗಾಡುವುದು ಅವರ ರೂಢಿ.  ನಮ್ಮಲ್ಲಿ ಸುಮಾರು ಎರಡು ಸಾವಿರ ಜನ ಕೆಲಸಗಾರರಿದ್ದಾರೆ.

ನಮ್ಮದು ಪೊ›ಡಕ್ಷನ್‌ ಕಂಪೆನಿ, ಮಾರ್ಕೆಟಿಂಗ್‌ ಔಟ್‌ಸೋರ್ಸ್‌ ಕೊಟ್ಟಿಲ್ಲ. ನಮ್ಮ ಕಂಪೆನಿಯೇ ಅದನ್ನು ಮಾಡುತ್ತದೆ. ನಮ್ಮ ಪ್ರಾಡಕr… ವಿದೇಶಕ್ಕೆಲ್ಲಾ ಹೋಗುತ್ತದೆ. ಕಾರ್ಖಾನೆಯ ಕೆಲಸಗಾರರ ಯೋಗಕ್ಷೇಮ ನೋಡಿಕೊಳ್ಳುವ ಉಸಾಬರಿ ನನ್ನ ಹೆಗಲ ಮೇಲೆ. ಲಾಕ್‌ಡೌನ್‌ ಅಲ್ವಾ? ಇವನಿಗೇನೂ ಕೆಲಸ ಇಲ್ಲ ಅಂತ ಯೋಚಿಸಿದ ನಮ್ಮ ಬಾಸ್‌, ಪೊ›ಡಕ್ಷನ್‌ ಲೆಕ್ಕಗಳನ್ನೆಲ್ಲಾ ನನ್ನ ತಲೆಗೆ ಕಟ್ಟಿಬಿಟ್ಟಿದ್ದಾರೆ.

ಇದೇನಾಗಿದೆ ಅಂದರೆ, ಕಳೆದ ಜನವರಿ- ಫೆಬ್ರವರಿಯಲ್ಲಿ  ತೆಗೆದುಕೊಂಡ ಆರ್ಡರ್‌ಗಳನ್ನು ಏಪ್ರಿಲ್‌ನಲ್ಲಿ ಡಿಲಿವರಿ ಕೊಡಬೇಕಿತ್ತು. ಲಾಕ್‌ಡೌನ್‌ನಿಂದ ಪೊ›ಡಕ್ಷನ್‌ ಪೂರ್ತಿ ಆಗಿಲ್ಲ. ಆದರೆ ಮುಂಗಡ ಹಣ ಕೊಟ್ಟವರು ಕೈ ಕೊಟ್ಟಿ ಕುಳಿತಿಲ್ಲ. ವಿದೇಶಿಗರಂತೂ ಅಡ್ವಾನ್ಸ್‌ ಹಣವನ್ನು ವಾಪಸ್‌  ಕೊಡಿ ಎಂದೇ ಕೇಳುತ್ತಿದ್ದಾರೆ. ಅದರ ಫೈಲನ್ನು ನಾನೇ ಕ್ಲಿಯರ್‌ ಮಾಡಬೇಕು. ಹೀಗಾಗಿ, ಲಾಕ್‌ ಡೌನ್‌ ಆದರೂ, ಮನೆಯಲ್ಲಿ ಕೆಲಸ.

ಇವರು ಕೆಲಸ ಮಾಡುವುದಿಲ್ಲ ಅಂತ ಬಾಸ್‌ಗೆ ಅನಿಸಿದ ದಿನ, ನಾನು ಆಫೀಸಿಗೆ ಬರಬೇಕು. ಹೀಗಾಗಿ,  ವಾರಕ್ಕೆ ಮೂರು ದಿನವಾದರೂ, ನಾನು ನನ್ನ ಕೆಲಸ ಸಾಬೀತು ಮಾಡಲಾದರೂ ಆಫೀಸಿಗೆ ಹೋಗಲೇಬೇಕಾಗಿದೆ.ಭಣಗುಡುವ ಆಫೀಸಲ್ಲಿ, ಯಾವುದೋ ಫೈಲ್‌ಗ‌ಳನ್ನು ತೆರೆದು ಕೂರುವ ಶಿಕ್ಷೆ ಇದೆಯಲ್ಲ, ಅದು ಯಾರಿಗೂ ಬೇಡ.  ಸಮಯಕ್ಕೆ ಸರಿಯಾಗಿ ಬರುತ್ತಿದ್ದ ಕಾಫಿ, ಟೀ ಇಲ್ಲ. ನೀರು ಕುಡಿಯಲು ಕೈ ಇಟ್ಟರೆ ಕೋವಿಡ್‌ 19 ಭಯ.  ಎಲ್ಲಕ್ಕಿಂತ ಮುಖ್ಯವಾಗಿ, ಆಫೀಸನ್ನು ಶುಚಿ  ಗೊಳಿಸುವ ಮಂದಿ ಬಂದು ಅದ್ಯಾವ ಕಾಲ ಆಯ್ತೋ.

ಕಂಪ್ಯೂಟರ್‌ ಮೇಲೆ ಒಂದು  ಮಣ ಧೂಳು. ಎಸಿ ಇಲ್ಲದ್ದರಿಂದ ವಿಚಿತ್ರವಾದ ಗಬ್ಬುವಾಸನೆ… ಇಂಥ ಪರಿಸ್ಥಿತಿ ಯಲ್ಲಿ, ಆಗಾಗ ಬಂದು ರೇಗಾ ಡುವ ಬಾಸ್‌ ಅನ್ನು ಸಹಿಸಿಕೊಂಡು ಕೆಲಸ ಮಾಡುವ ಸ್ಥಿತಿ ಬಂದಿದೆ. ಕೋವಿಡ್‌ 19 ಅಟ್ಟಹಾಸ ಹೀಗೇ ಮುಂದುವರಿ ದರೆ, ನಮ್ಮ ಕೆಲಸಗಳಿಗೆ ಕುತ್ತು ಬರುವ ಆತಂಕ ಬೇರೆ. ಒಟ್ಟಾರೆ, ಈ ಕೋವಿಡ್‌ 19 ಯಾವಾಗ ತೊಲಗುತ್ತದೆಯೋ. ನಮ್ಮಗಳ ಪರಿಸ್ಥಿತಿ ಯಾವಾಗ ಸರಿಯಾಗು ತ್ತದೆಯೋ ಅನಿಸತೊಡಗಿದೆ.

ಟಾಪ್ ನ್ಯೂಸ್

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.