ಮಂಡಿ ನೋವಿಂದ ಮುಕ್ತಿ ಪಡೆಯಲು…ಪದ್ಮಾಸನ


Team Udayavani, Jul 14, 2020, 3:06 PM IST

ಮಂಡಿ ನೋವಿಂದ ಮುಕ್ತಿ ಪಡೆಯಲು…ಪದ್ಮಾಸನ

ದಿನವೂ ಐದು ನಿಮಿಷ ಪದ್ಮಾಸನದಲ್ಲಿ ಕೂರುವುದರಿಂದ ಇರುವ ಲಾಭ ಏನೆಂದರೆ, ಮಂಡಿ ಹಾಗೂ ಪಾದದ ಭಾಗದಲ್ಲಿ ರಕ್ತ ಚಲನೆ ಸರಾಗವಾಗುತ್ತದೆ.

ಯೋಗದಿಂದ ಪ್ರಯೋಜನವೇನು ಎಂದು ತಿಳಿಯಬೇಕಾದರೆ, ದೇಹದಲ್ಲಿ ಸ್ವಲ್ಪ ನೋವುಗಳು ಸೇರಿಕೊಳ್ಳಬೇಕು. ನಿಮಗೆ ಕಾಲು ನೋವೋ, ಮಂಡಿನೋವೋ ಬಂದು, ಒಂದಷ್ಟು ಪೇನ್‌ ಕಿಲ್ಲರ್‌ ಮಾತ್ರೆಗಳನ್ನು ತಗೊಂಡು ಸುಸ್ತಾಗಿದ್ದರೆ, ಆಗಷ್ಟೇ ಯೋಗ ಮಾಡುವ ಮನಸ್ಸಾಗುತ್ತದೆ. ಈಗಂತೂ ವರ್ಕ್‌ ಫ್ರಂ ಹೋಂ ಜಮಾನ. ಲ್ಯಾಪ್‌ ಟಾಪ್‌ನ ಎಷ್ಟು ಹುಶಾರಾಗಿ ನೋಡಿಕೊಳ್ಳುತ್ತೀವೋ, ಅಷ್ಟೇ ಜೋಪಾನವಾಗಿ ಕಾಲು, ಬೆನ್ನನ್ನೂ ನೋಡಿಕೊಳ್ಳಬೇಕು. ಇದಕ್ಕಾಗಿ ಒಂದಷ್ಟು ಆಸನಗಳು ಇವೆ. ಅವನ್ನು ಪ್ರತಿದಿನ ಅರ್ಧ ಗಂಟೆ ಮಾಡಿದರೂ ಸಾಕು; ಹಲವು ಬಗೆಯ ನೋವುಗಳಿಂದ ಪಾರಾಗಬಹುದು.

ಆರಂಭದಲ್ಲಿ ನೀವು ಪದ್ಮಾಸನ ಹಾಕಬೇಕು. ಇದು ನೋಡಲು ಬಲು ಸುಲಭವಾದ ಆಸನ. ಆದರೆ, ಹಾಕಿದಾಗಲೇ ಹಿತವಾದ ನೋವು ತಿಳಿಯೋದು. ಪದ್ಮಾಸನದಿಂದ ಲಾಭ ಏನೆಂದರೆ, ಮಂಡಿ ಹಾಗೂ ಪಾದದ ಭಾಗದಲ್ಲಿ ರಕ್ತ ಚಲನೆ ಸರಾಗವಾಗುತ್ತದೆ. ಐದು ನಿಮಿಷಗಳ ಕಾಲ ಪದ್ಮಾಸನದಲ್ಲಿ ಕುಳಿತರೆ ಪಾದದ ಸುತ್ತಮುತ್ತಲ ಪ್ರದೇಶದಲ್ಲಿ ನೋವು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಆಗ ಗಾಬರಿಯಾಗಬೇಡಿ. ಕೆಲವೇ ಸೆಕೆಂಡುಗಳಲ್ಲಿ ಆ ನೋವು ಮಾಯವಾಗಿ
ಕಾಲಿಗೆ ಬಲ ಬರುತ್ತದೆ.

ಇದಾದ ನಂತರ, ಕಾಲನ್ನು ಹಾಗೇ ಉದ್ದಕ್ಕೆ ಚಾಚಿ, ಎರಡೂ ಕೈಗಳಿಂದ ಆಯಾ ಕಾಲಿನ ಬೆರಳುಗಳನ್ನು ಮಟ್ಟುವ ಪ್ರಯತ್ನ ಮಾಡಿದರೆ ವಾರ್ಮಪ್‌ ಆಗುತ್ತದೆ. ನಂತರ ವಜ್ರಾಸನ ಹಾಕಿದರೆ, ಮಂಡಿಗೆ ಮತ್ತು ಸೊಂಟಕ್ಕೂ ಶಕ್ತಿ ಬರುತ್ತದೆ. ಇದೂ ಒಂದೇ ದಿನಕ್ಕೆ ಆಗುವ ಕೆಲಸವಲ್ಲ. ಸತತ ಅಭ್ಯಾಸದಿಂದಷ್ಟೇ ಇದನ್ನು
ಒಲಿಸಿಕೊಳ್ಳಲು ಸಾಧ್ಯ. ಬೆನ್ನನ್ನು ಸಂಪೂರ್ಣ ಬಾಗಿಸಿ ಹಣೆಯನ್ನು ಮಂಡಿಯ ಮುಂದಿನ ನೆಲಕ್ಕೆ ಮುಟ್ಟಿಸಿದರೆ ಬೊಜ್ಜು ಕೂಡ ಇಳಿಯುತ್ತದೆ. ಇದಾದ ಮೇಲೆ, ನೇರವಾಗಿ ನಿಂತು ಬಲಗಾಲನ್ನು ಮುಂದಡಿ ಇಡಿ. ಹಾಗೇ ಬೆಂಡ್‌ ಮಾಡಿ, ಎಡಗಾಲನ್ನು ಹಿಂದಕ್ಕೆ ಚಾಚಿ. ಎರಡೂ ಕೈಯನ್ನು ನಮಸ್ಕಾರದ ರೀತಿ ಮಾಡಿದರೆ ಇದೇ ವೀರಭದ್ರಾಸನ. ಇದರೊಂದಿಗೆ ವೀರಾಸನ, ತಾಡಾಸನಗಳನ್ನು ಮಾಡಿದರೆ ಒಳಿತು. ಭಸ್ಕಿ ಹೊಡೆಯೋದೇ ಆದರೆ, ಕಾಲಿನ ಎಲ್ಲ ಮಾಂಸಖಂಡಗಳಿಗೂ
ಲಾಭವಾಗುತ್ತದೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.