ಅನ್ನ ಕೊಡುವ ರೂಫ್ ಟಾಪ್‌


Team Udayavani, Jan 22, 2018, 1:07 PM IST

anna-koduva.jpg

2003ರ ಕಥೆ. ಭದ್ರಾವತಿಯ ಕಬ್ಬಿಣದ ಕಾರ್ಖಾನೆಯಲ್ಲಿ ಎಂಜಿನಿಯರ್‌ ಆಗಿದ್ದ ಬಿ.ಎಂ.ಬಸಪ್ಪರೆಡ್ಡಿ ನಿವೃತ್ತಿಯಾದ ವರ್ಷವೇ ದಾವಣಗೆರೆಯ ತಮ್ಮ ಹೊಸ ಮನೆಗೆ ಬಂದು ನೆಲೆಸಿದರು. ಮನೆಯ ಮಾಳಗಿಯ ಮೇಲೆ ಸೂರ್ಯ ರಶ್ಮಿ ನೇರವಾಗಿ ರಾಚುತ್ತಿತ್ತು. ಎಲ್ಲೋ ಒಂದು ಕಡೆ “ವಾಟ್‌ ಎ ವೇಸ್ಟ್‌’ ಎಂದು ರೆಡ್ಡಿಯವರಿಗೆ ಅನ್ನಿಸಿದ್ದೇ, ತೆರೆದ ಮಹಡಿಯ ಮೇಲೆ ಸೋಲಾರ್‌ ವಿದ್ಯುತ್‌ ಒಲೆಯನ್ನು ಪ್ರತಿಷ್ಠಾಪಿಸಿದರು.

ಆವತ್ತು ರೆಡ್ಡಿ ಒಲೆ ತರಿಸಿದ್ದು ಪೂನಾದಿಂದ. ಅಷ್ಟಾದರೂ ಮನೆಯ ಮೇಲ್ಛಾವಣಿ ಖಾಲಿ ಖಾಲಿಯೇ. ಮುಂದಿನ ಕಂತಾಗಿ ಬಂದಿದ್ದು ಸೋಲಾರ್‌ ಬಿಸಿ ನೀರಿನ ಘಟಕ. ಅನ್ನ ಆಯ್ತು, ನೀರು ಕುದಿಯಿತು. ಮನಸ್ಸು ತಣ್ಣಗಾಗಲಿಲ್ಲ. ಮತ್ತೆ ಸೋಲಾರ್‌ನಿಂದ ಚಾರ್ಜ್‌ ಆಗುವ ವಿದ್ಯುತ್‌ ಇನ್ವರ್ಟರ್‌ನೂ° ಹಾಕಿಕೊಂಡು ವಿದ್ಯುತ್‌ ಸ್ವಾವಲಂಬಿಯಾಗುವುದರಲ್ಲೂ ರೆಡ್ಡಿ ಯಶಸ್ವಿಯಾದರು. 

ಇದು 2013ರ ಕಥೆ. ಬಸಪ್ಪರೆಡ್ಡಿ ಅಮೆರಿಕಾದಲ್ಲಿನ ತಮ್ಮ ಮಗಳ ಮನೆಗೆ ತೆರಳಿದ್ದರು.  ಅಲ್ಲಿ ಅವರಿಗೆ ಸೋಲಾರ್‌ ವಿದ್ಯುತ್‌ ಉತ್ಪಾದನೆ ಮಾಡಿ ರಾಷ್ಟ್ರೀಯ ಗ್ರಿಡ್‌ಗೆ ಮಾರುವ ಮಾದರಿಯ ದರ್ಶನವಾಯಿತು. ಖಡಕ್‌ ನಿರ್ಧಾರಕ್ಕೆ ಬಂದರು. ಇದೇ ಸಮಯದಲ್ಲಿ ಭಾರತದಲ್ಲೂ ಅಸಂಪ್ರದಾಯಿಕ ಇಂಧನ ಇಲಾಖೆಯ ಬೆಂಬಲದೊಂದಿಗೆ ಜನ ಮನೆಯ ರೂಫ್ ಟಾಪ್‌ ಮೇಲೆ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿ ಉತ್ಪಾದನೆಯಾಗುವ ವಿದ್ಯುತ್‌ಅನ್ನು ಗ್ರಿಡ್‌ಗೆ ಮಾರಬಹುದಾದ ಯೋಜನೆಯ ಮಾಹಿತಿ ಹೆಕ್ಕಿದರು.

ನಕಾರಾತ್ಮಕ ಪ್ರತಿಕ್ರಿಯೆಗಳ ಹೊರತಾಗಿಯೂ ಪರಿಸರವಾದಿ ರೆಡ್ಡಿ ಒಂದು ಹೆಜ್ಜೆ ಮುಂದಡಿ ಇಟ್ಟರು. 2015ರ ಆಗಸ್ಟ್‌ನಲ್ಲಿ 20 ಕಿಲೋ ವ್ಯಾಟ್‌ ವಿದ್ಯುತ್‌ ಉತ್ಪಾದಿಸಿ ಮಾರುವ ಯೋಜನೆಗೆ ನೋಂದಣಿ ಮಾಡಿಸಿದರು. ನೈಸರ್ಗಿಕ ವಿದ್ಯುತ್‌ ಯೋಜನೆಯ ಕೆಲಸಗಳು ಲಂಚರುಷುವತ್ತು ಇಲ್ಲದೆ ನಿಚ್ಚಳವಾಗಿ ಆಗಬೇಕೆಂದು ಭಾಸಿದವರು ಬಸಪ್ಪರೆಡ್ಡಿ. ಹಾಗಾಗಿ ತುಸು ವಿಳಂಬವಾಗಿ, 2016ರ ನವೆಂಬರ್‌ ವೇಳೆಗೆ ಹಸಿರು ನಿಶಾನೆ ಪಡೆದರು.

ಆವತ್ತು ಬೆಸ್ಕಾಂ ಬರೋಬ್ಬರಿ 25 ವರ್ಷಗಳ ಒಪ್ಪಂದಕ್ಕೆ ಬರುವುದರ ಜೊತೆ ಪ್ರತಿ ಯೂನಿಟ್‌ಗೆ 9.56 ರೂ.ನಂತೆ ಖರೀದಿಸಲು ಕೂಡ ಒಡಂಬಡಿಕೆಗೆ ಸಹಿ ಹಾಕಿತು. ಮನೆ ನಿರ್ಮಿಸಿದ ಸರಿಸುಮಾರು 13 ವರ್ಷಗಳ ನಂತರ ಆ ಮನೆಯ ಮಾಳಿಗೆಯ ಬಹುಪಾಲು ಜಾಗ ಉತ್ಪಾದನಾ ಕ್ಷೇತ್ರವಾಯಿತು! ಕೇಂದ್ರ ಸರ್ಕಾರದ ಜೆಎನ್‌ಎಸ್‌ಎಸ್‌ ಯೋಜನೆಯಡಿ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಕೂಡ ರೆಡ್ಡಿ ಸರ್ಕಸ್‌ ನಡೆಸಬೇಕಾಯಿತು.

ಸಾಲ ಕೊಡಲು ನಿರಾಕರಿಸಿದಾಗ ಪ್ರಧಾನಿಗೂ ರೆಡ್ಡಿ ಪತ್ರ ಬರೆದರು. ಅಂತೂ ಶೇ. 5ರ ಬಡ್ಡಿದರದಲ್ಲಿ ಸಾಲ ಸಿಕ್ಕಿತು. ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್‌ ವ್ಯವಸ್ಥೆ ಸಿದ್ಧಗೊಂಡು ವಿದ್ಯುತ್‌ ಬಳಕೆದಾರನಿಂದ ರೆಡ್ಡಿ ವಿದ್ಯುತ್‌ ಉತ್ಪಾದಕ, ಮಾರಾಟಗಾರರಾಗಿ ಬಡ್ತಿ ಹೊಂದಿದರು. ರೆಡ್ಡಿ ಇತ್ತೀಚೆಗೊಮ್ಮೆ ಲೆಕ್ಕ ಹೇಳುತ್ತಿದ್ದರು. ಕಳೆದ 20 ತಿಂಗಳಿನಿಂದ ಬೆಸ್ಕಾಂ ವಿದ್ಯುತ್‌ ಖರೀದಿ ನಡೆಸಿದ್ದು ಬ್ಯಾಂಕ್‌ ಖಾತೆಗೆ ಹೆಚ್ಚು ಕಡಿಮೆ ನಾಲ್ಕು ಲಕ್ಷ ರೂ.ಗಳ ಸಂದಾಯವಾಗಿದೆ.

ಬಡ್ಡಿ ಖರ್ಚು ಸವಕಳಿ ಮಣ್ಣು ಮಸಿ ಸೇರಿದರೂ ಮುಂದಿನ ಹತ್ತು ವರ್ಷಗಳಲ್ಲಿ ಆ ಸಾಲ ಶೂಲೆ ಮಾಯವಾಗುತ್ತದೆ. ಬೆಸ್ಕಾಂ ಜೊತೆಗಿನ ಒಪ್ಪಂದ ಇನ್ನೂ 15 ವರ್ಷ ಮುಂದುವರೆಯುವುದರಿಂದ ಯೂನಿಟ್‌ಗೆ 9 ರೂ. ದರದಲ್ಲಿ ಲಾಭ ಖಚಿತ! ದಾವಣಗೆರೆಯಲ್ಲಿ ಬಸಪ್ಪ ರೆಡ್ಡಿ ಮಾರ್ಗದರ್ಶನದಲ್ಲಿ ಜಿಲ್ಲಾ ಸೋಲಾರ್‌ ರೂಫ್ ಟಾಪ್‌ ಪವರ್‌ ಅಸೋಸಿಯೇಶನ್‌ ರಚನೆಯಾಗಿದೆ. ಇಲ್ಲಿನ ಆಸ್ಪತ್ರೆಯೊಂದರ ಮಾಲೀಕರಾದ ಎಸ್‌.ಎಂ.ಬ್ಯಾಡಗಿ ಅಧ್ಯಕ್ಷರು. 

ಸಮಸ್ಯೆಗಳು ಇಲ್ಲ ಅಂತಲ್ಲ. ಮನೆಯಲ್ಲಿ ವಿದ್ಯುತ್‌ ಉತ್ಪಾದನೆಯಾದರೂ ಎಸ್ಕಾಂ ವಿದ್ಯುತ್‌ ಸರಬರಾಜಿನಲ್ಲಿ ತಡೆಯುಂಟಾಗಿದ್ದರೆ ಉತ್ಪಾದಿತ ವಿದ್ಯುತ್‌ ಗ್ರಿಡ್‌ಗೆ ಸೇರ್ಪಡೆಯಾಗುವುದಿಲ್ಲ. ಹೀಗೆ ನೂರಾರು… ಆದರೆ ಮುಖ್ಯವಾದದ್ದು ಸೋಲಾರ್‌ ಘಟಕಗಳ ಮಂಜೂರಾತಿಗೆ ಇರುವ ಲಂಚ ಬೇಡಿಕೆಗೆ ತಿಲಾಂಜಲಿ ಇಡಲೇ ಬೇಕು ಎನ್ನುತ್ತಾರೆ ಬಸಪ್ಪ. 

ಮೊ: 9141942283 

* ಎಂ.ವಿ.ಎಸ್‌.

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.