ಸೀಬೆ ತಂದ ಸಂಭ್ರಮ


Team Udayavani, Aug 27, 2018, 6:00 AM IST

guava-fruit.jpg

ಒಂದು ವರ್ಷದ ಹಿಂದೆ 10 ಎಕರೆ ಜಮೀನಿನಲ್ಲಿ ನೆಟ್ಟ ಸೀಬೆ ಸಸಿಗಳು ಇವತ್ತು, ಫ‌ಲ ಕೊಟ್ಟು ಲಕ್ಷ ಲಕ್ಷ ಲಾಭ ತಂದು ಕೊಡುತ್ತಿದೆ. ಸೀಬೆ ನಂಬಿದರೆ ನಸೀಬು ಕೂಡ ಬದಲಾಗುತ್ತದೆ ಅನ್ನೋದಕ್ಕೆ ಇಲ್ಲಿದೆ ಉದಾಹರಣೆ. 

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಲಿಂಗದಹಳ್ಳಿಯ ರಾಘವೇಂದ್ರ ಅವರ ಕೃಷಿಯ ಕಡೆಗೇ  ಈಗ ಎಲ್ಲರ ಚಿತ್ತ ನೆಟ್ಟಿದೆ. ಏಕೆಂದರೆ, ಹೊರವಲಯದಲ್ಲಿರುವ ತಮ್ಮ 10 ಎಕರೆ ಜಮೀನಿನಲ್ಲಿ ಕಳೆದ ಒಂದು ವರ್ಷದ ಹಿಂದೆ ನೆಟ್ಟ ಸೀಬೆ ಸಸಿಗಳು ಇವತ್ತು, ಫ‌ಲ ಕೊಟ್ಟು ಲಕ್ಷ ಲಕ್ಷ ಲಾಭ ತಂದು ಕೊಡುತ್ತಿದೆ.  ರಾಘು ಹನಿನೀರಾವರಿ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. 
 
ಒಂದು ಎಕರೆಯಲ್ಲಿ 1,000 ಸಸಿಗಳನ್ನು ನಾಟಿ ಮಾಡಲಾಗಿದೆ. ಆಂಧ್ರ ಪ್ರದೇಶದಿಂದ ತಂದಿರುವ ತೈವಾನ್‌ ಪಿಂಕ ಹೆಸರಿನ ತಳಿ ಇದು.  ಒಂದು ಗಿಡದಲ್ಲಿ  30 ಕ್ಕೂ ಹೆಚ್ಚು ಹಣ್ಣುಗಳು ಬಿಡುತ್ತಿವೆ. ಈ ಮಧ್ಯೆ ಮೊದಲ ಕಟಾವು ಆಗಿದೆ. ಆಗ ಒಂದು ಕೆ.ಜಿ ತೂಕಕ್ಕೆ 2 ಹಣ್ಣು ಮಾತ್ರ ಬರುತ್ತವೆ. ಈ ತಳಿ ಉತ್ತಮ ರುಚಿ ಮತ್ತು ಬೃಹತ್‌ ಗಾತ್ರ ಹೊಂದಿದೆ. ಈಗಾಗಲೇ ಸುಮಾರು ರೂ. 5 ಲಕ್ಷದಷ್ಟು ಬೆಲೆಯ, ಹಣ್ಣುಗಳನ್ನು ಮಾರಾಟ ಮಾಡಲಾಗಿದೆ. ಬೆಳೆದ ಹಣ್ಣಿಗೆ ಈ ಭಾಗದಲ್ಲಿ ಮಾರುಕಟ್ಟೆ ಕೊರತೆ ಇದ್ದು, ಚೆನ್ನೈ ಮತ್ತು ಮಂಗಳೂರು ಮಾರುಕಟ್ಟೆಗೆ ಹಣ್ಣುಗಳನ್ನು ಸಾಗಾಣಿಕೆ ಮಾಡಲಾಗುತ್ತಿದೆ. ಪ್ರತಿ ಕೆ.ಜಿಗೆ 35 ರೂ. ಬೆಲೆ ಸಿಗುತ್ತಿದೆ. ಆದರೆ, ಸ್ಥಳೀಯ ಮಾರುಕಟ್ಟೆಯಲ್ಲೇ ಸೀಬೆ ಹಣ್ಣುಗಳನ್ನು ಮಾರಾಟ ಮಾಡಿದರೆ ರೈತರಿಗೆ ಇನ್ನೂ ಹೆಚ್ಚು ಆದಾಯ ಸಿಗುತ್ತದೆ ಎನ್ನುತ್ತಾರೆ ರೈತ ರಾಘವೇಂದ್ರ.

ಮೊದಲ ಬೆಳೆಯಿಂದ ಸ್ವಲ್ಪ ಫ‌ಸಲು ಸಿಗುತ್ತದೆ. ಮುಂದಿನ ವರ್ಷವು ಕಾಯಿ ಮತ್ತು ಹಣ್ಣಿನ ಪ್ರಮಾಣ ಸಹ ಹೆಚ್ಚಾಗುತ್ತದೆ. ಪ್ರತಿ ಗಿಡವನ್ನೂ ಸಂರಕ್ಷಣೆ ಮಾಡಲು ಶ್ರಮ ವಹಿಸುವುದು ಮುಖ್ಯ. ಹೊಲದಲ್ಲಿರುವ 4 ಬೋರ್‌ವೆಲ್‌ನಲ್ಲಿ ಅಂತರ್ಜಲ ಕಡಿಮೆಯಾಗಿ, ಸಸಿಗಳು ಒಣಗುವ ಸ್ಥಿತಿಯಲ್ಲಿದ್ದವು. ಮಳೆ ಕೊರತೆ ಸಮಯದಲ್ಲಿ ಬೆಳೆಯನ್ನೂ ರಕ್ಷಿಸಲು ಟ್ಯಾಂಕರ್‌ ಮೂಲಕ ನೀರು ಹರಿಸಿದ್ದಾರೆ. ಬೆಳೆ ಮತ್ತು ಕಾಯಿಗೆ ಹುಳ ಹತ್ತದೇ  ಇರಲಿ ಎಂದು ಬೇವಿನ ಎಣ್ಣೆ, ಸಗಣಿ , ಬೆಲ್ಲದ ನೀರು, ಮತ್ತು ಕೆಲವು ಬಾರಿ ರಾಸಾಯನಿಕ ಕ್ರೀಮಿ ನಾಶಕವನ್ನೂ ಸಿಂಪರಣೆ ಮಾಡಿದ್ದಾರೆ.  ಹೀಗಾಗಿ ಸೀಬೆಕಾಯಿಗಳು ಗಾತ್ರ ದೊಡ್ಡದಾಗಿದ್ದು, ಫ‌ಸಲಿನ ಏರಿಕೆ ಕೂಡ ಆಗಿದೆಯಂತೆ.  ಆದರೆ ಸಣ್ಣ ಭೂಮಿ ಹೊಂದಿರುವ ರೈತರು ಈ ಬೆಳೆ ಬೆಳೆದರೆ ಲಾಭ ಪಡೆಯುವುದು ಕಷ್ಟಸಾಧ್ಯ. ಏಕೆಂದರೆ, ಬೆಳೆದ ಫ‌ಸಲಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ. ಬೆಲೆ ಸಿಗಬೇಕೆಂದರೆ ದೂರದ ಪಟ್ಟಣಗಳಿಗೆ ಸಾಗಾಣಿಕೆ ಮಾಡಬೇಕಾಗುತ್ತದೆ. ಇದರಿಂದ ರೈತ ಖರ್ಚು ಮಾಡಿರುವ ಹಣಕ್ಕೆ ಲಾಭ ಬರುವುದಿಲ್ಲ . ಇಂತಹ ಹಣ್ಣಿನ ಫ‌ಸಲಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ಮಾತ್ರ ಲಾಭ ಪಡೆಯಬಹುದು ಎನ್ನುತ್ತಾರೆ ರಾಘವೇಂದ್ರ. 

– ಎನ್‌.ಶಾಮೀದ್‌ ತಾವರಗೇರಾ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.