ಇಂಗ್ಲಿಷ್‌ ಗೊತ್ತಿಲದಿದ್ರೂ ಬಿಜಿನೆಸ್‌ ಮಾಡಬಹುದು


Team Udayavani, Oct 22, 2018, 1:18 PM IST

shruti-sharma.jpg

ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹಣ ಹೂಡಬೇಕೆಂದರೆ ಇಂಗ್ಲಿಷ್‌ ಜ್ಞಾನ ಅಗತ್ಯ ಎಂದು ಹಲವರು ಭಾವಿಸಿದ್ದಾರೆ. ಆದರೆ, ಈ ವಾದದಲ್ಲಿ ಹುರುಳಿಲ್ಲ. ಇಂಗ್ಲಿಷ್‌ ಜ್ಞಾನ ಇಲ್ಲದಿದ್ದರೂ ಷೇರು ಖರೀದಿ ವ್ಯವಹಾರ ಮಾಡಬಹುದು. ಮುಖ್ಯವಾಗಿ ಇರಬೇಕಾದುದು ನಿಯಮಿತ ಸಂಪಾದನೆ ಮತ್ತು ಉಳಿತಾಯ ಮಾಡಲೇಬೇಕು ಎಂಬ ಗಟ್ಟಿ ಮನಸ್ಸು.

ಹಣ ಹೂಡುವುದಕ್ಕೆ, ಷೇರು ಪೇಟೆಯ ಬಗೆಗೆ ತಿಳಿವಳಿಕೆ ಇರುವುದಕ್ಕೆ ಇಂಗ್ಲಿಷ್‌ ಬರಬೇಕಾ? ಉನ್ನತ ಶಿಕ್ಷಣ ಬೇಕಾ? ಬೇಡವೇ ಬೇಡ. ಇಂಗ್ಲಿಷ್‌ ಗೊತ್ತಿದ್ದವರು ಮಾತ್ರ ಷೇರುಪೇಟೆ ವ್ಯವಹಾರ ಮಾಡಬಹುದು ಅನ್ನುವುದೇ ತಪ್ಪುಕಲ್ಪನೆ. ಚೀಟಿಯಲ್ಲಿ ಹಣ ತೊಡಗಿಸುತ್ತಿರುವ ಮಹಿಳೆಯೊಬ್ಬರನ್ನು ಕೇಳಿದೆ, “ಸುಮ್ಮನೇ ಚೀಟಿ ಗೀಟಿ ಹಾಕಿ ಹಣ ಕಳಕೊಳ್ಳಬೇಡಿ. ಈಗ ನಿಮಗೆ ಬೇಕಾದ ಹಾಗೆ ಸುರಕ್ಷಿತ ಹೂಡಿಕೆ ಇದೆ. ಮ್ಯೂಚುವಲ್‌ ಫ‌ಂಡ್‌ನ‌ಲ್ಲಿಯೂ ಹಣ ಹೂಡಬಹುದು’. ಮಾತು ಮುಗಿಯುವ ಮೊದಲೇ ಅವರೆಂದರು: “ನಾನು ಹೆಚ್ಚು ಓದಿದವಳಲ್ಲ. ನನಗೆ ಇದೆಲ್ಲ ಅರ್ಥ ಆಗುವುದಿಲ್ಲ’. 

 ಈ ಉತ್ತರ ಕೇಳಿದ ಮೇಲೆ ಅನಿವಾರ್ಯವಾಗಿ ಮತ್ತೆ ನಾನು ಮಾತಾಡಲೇಬೇಕಾಯಿತು: “ನಿನ್ನ ಓದಿಗೂ ಇದಕ್ಕೂ ಸಂಬಂಧ ಇಲ್ಲ. ಇಷ್ಟಕ್ಕೂ ಇದು ಏನು ಎತ್ತ ಎಂದೂ ನೋಡದೇ ಅರ್ಥ ಆಗುವುದಿಲ್ಲ ಎಂದು ನಿರ್ಧರಿಸುವುದು ಯಾವ ನ್ಯಾಯ?’. ಹೆಚ್ಚಿನ ಸಂದರ್ಭಗಳಲ್ಲಿ ಆಗುವುದೇ ಹೀಗೆ. ನಾವು ಹಣಕಾಸು ಯೋಜನೆ, ಆರ್ಥಿಕ ನಿರ್ವಹಣೆ ಇತ್ಯಾದಿ ಪದಗಳನ್ನು ಬಳಸುಸತ್ತೇವಲ್ಲ; ಅದನ್ನು ಕೇಳುವಾಗ ಇದೇನೋ ಕಬ್ಬಿಣದ ಕಡಲೆ ಅನ್ನಿಸುತ್ತದೆ. 

ನಮ್ಮ ನಿತ್ಯದ ಬದುಕಿನ ಉದಾಹರಣೆಗಳ ಮೂಲಕವೇ ಎಲ್ಲವನ್ನೂ ಸರಳವಾಗಿ ಅರಿಯಬಹುದು. ಮೊದಲು, ವಿಷಯ ತಿಳಿದುಕೊಳ್ಳಲು ನಮಗೆ ಉತ್ಸಾಹ ಇರಬೇಕು. ಈ ಉತ್ಸಾಹ ತೋರದಿದ್ದರೆ ಪ್ರತಿಯೊಂದೂ ಕಷ್ಟವೇ. ಹಣ ಹೂಡಿಕೆಯ ವಿಷಯದಲ್ಲಿ ಗೊತ್ತಿಲ್ಲ, ಅರ್ಥ ಆಗುವುದಿಲ್ಲ ಎನ್ನುವ ಬದಲು, ಏನಿದೆ ನೋಡೋಣ ಎನ್ನಬಹುದಲ್ಲ? ಹಣ ಹೂಡಬೇಕು ಎಂದು ಯೋಚಿಸಿದರೆ ಅಲ್ಲಿ ಹಣ ಉಳಿಸುವುದಕ್ಕೆ ಮಾನಸಿಕವಾಗಿ, ನಮ್ಮೊಳಗೇ ಒಂದು ಸಿದ್ಧತೆ ಆಗುತ್ತದೆ. ಈ ತಯಾರಿಯ ಹಿಂದೆ ಖರ್ಚು ಕಡಿಮೆ ಮಾಡುವ ಸಂಕಲ್ಪ ಮೊಳೆಯುತ್ತದೆ. ಅಗತ್ಯ- ಅನಗತ್ಯ ಖರ್ಚುಗಳ ನಡುವಿನ ಅಂತರ ಗೊತ್ತಾಗುತ್ತದೆ.

ಬದುಕು ಸರಳ ಆಗುವುದು ಇಲ್ಲಿ. ಇಂಗ್ಲಿಷ್‌ ಬರಬೇಕು, ಓದಿರಬೇಕು ಎನ್ನುವುದು ಭಾಷೆಯ ಕಲಿಕೆ, ವಿಷಯದ ಕಲಿಕೆಯ ದೃಷ್ಟಿಯಿಂದ ಅಗತ್ಯ ನಿಜ. ಆದರೆ, ಅನುಭವದಿಂದ, ಬಲ್ಲವರಿಂದ ಕಲಿಯುವುದಿದೆಯಲ್ಲ; ಅದೇ ಉನ್ನತವಾದದ್ದು. ನಿತ್ಯದ ಬದುಕಿಗೆ ಅಗತ್ಯವಾದದ್ದು. ನಮ್ಮ ಬದುಕನ್ನು ಸುಂದರಗೊಳಿಸಲು ಇದು ಅನಿವಾರ್ಯವೂ ಆಗಿದೆ.

 ಸುಧಾಶರ್ಮಾ ಚವತ್ತಿ

ಟಾಪ್ ನ್ಯೂಸ್

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

Loksabha election; ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ

Karnataka ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ

No plan fro rest to Bumrah

Mumbai Indians; ಬುಮ್ರಾಗೆ ವಿಶ್ರಾಂತಿ: ಯಾವುದೇ ಯೋಜನೆಯಿಲ್ಲ

HD ರೇವಣ್ಣ ಜಾಮೀನು ಅರ್ಜಿ: ಎಸ್‌ಐಟಿಗೆ ನೋಟಿಸ್‌

HD ರೇವಣ್ಣ ಜಾಮೀನು ಅರ್ಜಿ: ಎಸ್‌ಐಟಿಗೆ ನೋಟಿಸ್‌

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

Loksabha election; ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ

Karnataka ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ

No plan fro rest to Bumrah

Mumbai Indians; ಬುಮ್ರಾಗೆ ವಿಶ್ರಾಂತಿ: ಯಾವುದೇ ಯೋಜನೆಯಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.