ಮೂರ್ಖ ರಾಜಕುಮಾರರು


Team Udayavani, Nov 15, 2018, 6:00 AM IST

q-3.jpg

ಬಹಳ ಹಿಂದೆ ಅಮರ ಶಕ್ತಿ ಎಂಬ ಒಬ್ಬ ರಾಜನಿದ್ದ. ಅವನು ಶೂರ, ವಿವೇಕಿ. ಆದರೆ ಅವನಿಗೆ ತುಂಬಾ ದುಃಖ ಉಂಟಾಗಿತ್ತು. ಯಾಕೆಂದರೆ ಅವನ ಮೂವರು ಗಂಡು ಮಕ್ಕಳು ಹೆಡ್ಡರು . ಆ ರಾಜಕುಮಾರರ ಹೆಸರು ಬಾಹುಶಕ್ತಿ, ಉಗ್ರಶಕ್ತಿ ಮತ್ತು ಅನಂತಶಕ್ತಿ. ಶಕ್ತಿ ಅಂದರೆ ಬಲ. ಅವರ ಹೆಸರಿನಲ್ಲಿತ್ತೇ ಹೊರತು ಅವರ ಬುದ್ಧಿಯಲ್ಲಿರಲಿಲ್ಲ. ಅವರ ದಡ್ಡತನವೇ ರಾಜನ ಚಿಂತೆಗೆ ಕಾರಣವಾಗಿತ್ತು.

ಸತ್ತ ಮಕ್ಕಳಿಗಿಂತಲೂ,  ಕೆಲಸಕ್ಕೆ ಬಾರದಂಥ ಬರುಕಿರುವ ಮಕ್ಕಳು, ತಂದೆಗೆ ದುಃಖವನ್ನುಂಟು ಮಾಡುತ್ತಾರೆ  ಎಂಬ ಮಾತಿನಲ್ಲಿ  ಎಷ್ಟು ಸತ್ಯವಿದೆ! ಬಹುಶಃ ಸರಿಯಾದ ಶಿಕ್ಷಣ ಮೊದ್ದುತಲೆಯ ನನ್ನ ಮಕ್ಕಳನ್ನು ಸುಧಾರಿಸಬಹುದು. ನನ್ನ ಆಸ್ಥಾನದಲ್ಲಿರುವ ವಿದ್ವಾಂಸರಲ್ಲಿ  ಯಾರೊಬ್ಬರಾದರೂ ನನ್ನ ಮಕ್ಕಳ ಬುದ್ಧಿವಂತರನ್ನಾಗಿ ಮಾಡಲಾರರೇ.? ಎಂದು ಒಂದು ದಿನ ರಾಜ ತನ್ನ ಮಂತ್ರಿಗಳನ್ನು ಕೇಳಿದ.

ನಿಜ, ಪ್ರಭು. ರಾಜಕುಮಾರರಿಗೆ ತಕ್ಕ ಶಿಕ್ಷಣ ಕೊಡಿಸಬೇಕು. ಆದರೆ ಅದು ಶಾಸ್ತ್ರದ ಪ್ರಕಾರವಾಗಿ ಇರಬೇಕು. ಮೊದಲು ವ್ಯಾಕರಣದಿಂದ ಆರಂಭಿಸಿ ಕ್ರಮವಾಗಿ ಉಳಿದ ಶಾಸ್ತ್ರಗಳನ್ನು ಕಲಿಸಬೇಕು. ಎಂದ ಒಬ್ಬ ಮಂತ್ರಿ. ಆದರೆ ಅವೆಲ್ಲ ಬಹಳ ಸಮಯ ತೆಗೆದುಕೊಳ್ಳುತ್ತವೆ. ಪ್ರಖ್ಯಾತ ವಿದ್ವಾಂಸನಾದ  ವಿಷ್ಣುಶರ್ಮನಿಗೆ ಸುಲಭದ ದಾರಿ ಗೊತ್ತಿರುತ್ತದೆ, ಎಂದ ಇನ್ನೊಬ್ಬ ಮಂತ್ರಿ.  ಅಮರಶಕ್ತಿ ವಿದ್ವಾಂಸ ವಿಷ್ಣುಶರ್ಮನಿಗೆ ಹೇಳಿ ಕಳುಹಿಸಿದ.

ವಿಷ್ಣುಶರ್ಮ, ನನ್ನ ಮಕ್ಕಳ ವಿದ್ಯಾಭ್ಯಾಸವನ್ನು ನಿನಗೆ ಒಪ್ಪಿಸಿದ್ದೇನೆ. ಇದಕ್ಕೆ ನಿನಗೆ ಸೂಕ್ತ ಬಹುಮಾನ ಕೊಡುತ್ತೇನೆ, ಎಂದ ರಾಜ. 
ದೊರೆಯೆ, ಈ ಮಕ್ಕಳಿಗೆ ನಾನು ಸಂತೋಷದಿಂದ ವಿದ್ಯೆ ಬುದ್ಧಿ ಕಲಿಸುತ್ತೇನೆ. ಆದರೆ ನಾನು ಯಾವುದೇ ರೀತಿಯ ಬಹುಮಾನ ತೆಗೆದು ಕೊಳ್ಳುವುದಿಲ್ಲ. ನಾನು ಜ್ಞಾನವನ್ನು ಮಾರಾಟಕ್ಕೆ ಇಟ್ಟಿಲ್ಲ, ಎಂದು ಉತ್ತರಕೊಟ್ಟ ವಿಷ್ಣುಶರ್ಮ.

ರಾಜ ಒಪ್ಪಿಕೊಂಡ. ಈ ಘನ ವಿದ್ವಾಂಸ ಮೂವರು ರಾಜಕುಮಾರರಿಗೆ ಶಾಸ್ತ್ರಗಳನ್ನಾಗಲಿ, ವ್ಯಾಕರಣವನ್ನಾಗಲೀ ಹೇಳಿಕೊಡಲಿಲ್ಲ. ಅದರ ಬದಲು ಆತ ಅವರಿಗೆ ವಿವೇಕ, ವಿಚಾರ ತುಂಬಿದ ಕತೆಗಳನ್ನು ಹೇಳಿದ.  ಮಕ್ಕಳಿಗೆ ಸಕ್ಕರೆ ಹಚ್ಚಿದ ಕಹಿಗುಳಿಗೆಗಳನ್ನು ಕೊಡುವ ವೈದ್ಯನಂತೆ ಆತ ಈ ಕತೆಗಳನ್ನು ಹೇಳುತ್ತಿದ್ದ. ಕೇವಲ ಆರು ತಿಂಗಳ ಕಾಲದಲ್ಲಿ ರಾಜಕುಮಾರರು ಬಹಳಷ್ಟು ಬುದ್ಧಿವಂತಿಕೆ ಗಳಿಸಿದರು.

ವಿಷ್ಣು ಶರ್ಮ ಹೇಳಿದ ಈ ಕಥೆಗಳನ್ನು  ಐದು ಭಾಗಗಳನ್ನಾಗಿ ವಿಂಗಡಿಸಿದೆ. ಈ ಐದೂ ಸೇರಿರುವ ಪಂಚತಂತ್ರ ಎಂಬ ಸಂಗ್ರಹ ಜಗತ್ತಿನ ಶ್ರೇಷ್ಠ ಕಥೆಗಳಲ್ಲಿ ಒಂದುಎಂದು ಹೆಸರು ಪಡೆದಿದೆ. ಅವು ಪ್ರಾಣಿಗಳು, ಹಕ್ಕಿಗಳು, ಹಾವು ಮುಂತಾದ ಸರೀಸೃಪಗಳು ಮತ್ತು ಮನುಷ್ಯರನ್ನು ಕುರಿತ ಸೊಗಸಾದ ಕಥೆಗಳು. ಲೋಕದ ರೀತಿನೀತಿಗಳನ್ನು ತಿಳಿಯಲು , ಒಳ್ಳೆಯದು ಕೆಟ್ಟದನ್ನು ಗುರುತಿಸಲು, ಉತ್ತಮವಾದ, ಸುಖವಾದ ಬದುಕನ್ನು ಬಾಳಲು ಸಹಾಯ ಮಾಡುವಂಥ ನೀತಿ ಕತೆಗ ಸಂಗ್ರಹ ಪಂಚತಂತ್ರ.

 (ಓರಿಯೆಂಟಲ್‌ ಲಾಂಗ್‌ಮನ್‌ ಪಂಚತಂತ್ರ ಪುಸ್ತಕದಿಂದ ಆರಿಸಿದ್ದು)

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.