ಬೀದಿ ಗುಡಿಸಿದ ಐಷಾರಾಮಿ ಕಾರು


Team Udayavani, Feb 14, 2019, 12:30 AM IST

f-2.jpg

ಸ್ವಾತಂತ್ರ್ಯಕ್ಕೂ ಹಿಂದೆ ನಡೆಯಿತು ಎನ್ನಲಾದ ಘಟನೆಯಿದು. ಭಾರತದ ಮಹಾರಾಜನೊಬ್ಬ ಕಾರ್ಯನಿಮಿತ್ತ ಲಂಡನ್‌ಗೆ ಭೇಟಿದ. ಅವರಿಗೆ ಲಂಡನ್‌ನ ಬೀದಿಗಳನ್ನು ಸುತ್ತುವ ಮನಸ್ಸಾಯಿತು. ಅಧಿಕಾರಿಗಳನ್ನು ಬಿಟ್ಟು ತಾವೊಬ್ಬರೇ ನಗರ ಸಂಚಾರಕ್ಕೆ ಹೊರಟರು. ದಾರಿಯಲ್ಲಿ ಕಾರು ಶೋರೂಮ್‌ ಒಂದು ಅವರ ಗಮನ ಸಳೆಯಿತು. ಮೊದಲೇ ಮಹಾರಾಜರಿಗೆ ಐಷಾರಾಮಿ ಕಾರುಗಳ ಶೋಕಿ ಇತ್ತು. ಅವರು ಕಾತರರಾಗಿ ಕಾರಿನ ಬಗ್ಗೆ ವಿಚಾರಿಸಲು ಒಳಕ್ಕೆ ತೆರಳಿದರು. ಅದು ಪ್ರಸಿದ್ಧ ರೋಲ್‌ರಾಯ್ಸ ಮಳಿಗೆಯಾಗಿತ್ತು. ಭಾರತೀಯನೊಬ್ಬ ಒಳಪ್ರವೇಶಿಸಿದ್ದನ್ನು ಕಂಡ ಸೇಲ್ಸ್‌ಮನ್‌ಗೆ ಅವರು ಮಹಾರಾಜರೆಂದು ತಿಳಿಯಲಿಲ್ಲ. ಇವರೂ ಹೇಳಲಿಲ್ಲ. ಭಾರತೀಯರೆಂದರೆ ಅಸಡ್ಡೆ ತೋರುತ್ತಿದ್ದ ಸೇಲ್ಸ್‌ಮನ್‌ಗೆ ಭಾರತೀಯನೊಬ್ಬ ಒಳಪ್ರವೇಶಿಸಿದ್ದು ಸರಿಕಾಣಲಿಲ್ಲ. ಜಗತ್ತಿನ ಉತ್ಕೃಷ್ಟವಾದ ಕಾರನ್ನು ಭಾರತೀಯ ಕೊಳ್ಳಲಾರ ಎನ್ನುವುದು ಅವನ ಖಚಿತ ಅಭಿಪ್ರಾಯವಾಗಿತ್ತು. ಆತ ಮಹಾರಾಜರನ್ನು ಕೀಳಾಗಿ ಕಂಡ. ಕುಪಿತರಾದ ಮಹಾರಾಜರು ತಾವು ಉಳಿದುಕೊಂಡಿದ್ದ ಹೋಟೆಲ್‌ಗೆ ವಾಪಸ್ಸಾದರು. ಅಧಿಕಾರಿಗಳನ್ನು ಕರೆದು ಮಹಾರಾಜರು ಬರುತ್ತಿರುವುದಾಗಿ ಶೋರೂಮಿನವರಿಗೆ ಸುದ್ದಿ ಮುಟ್ಟಿಸಲು ತಿಳಿಸಿದರು. ಈ ಬಾರಿ ಮಹಾರಾಜರನ್ನು ವೈಭವಯುತವಾಗಿ ಸ್ವಾಗತಿಸಲಾಯಿತು. ಮಳಿಗೆಯ ಮಾಲೀಕ  ಖುದ್ದು ಮಹಾರಾಜರನ್ನು ಬರಮಾಡಿಕೊಂಡ. ಆತಿಥ್ಯ ಸ್ವೀಕರಿಸಿದ ಮಹಾರಾಜರು ತಮಗಾದ ಅವಮಾನದ ಕುರಿತು ಬಾಯಿಬಿಡಲಿಲ್ಲ. ಆ ದಿನ ಒಂದಲ್ಲ, ಎರಡಲ್ಲ, ಆರು ಕಾರುಗಳನ್ನು ಭಾರತಕ್ಕೆ ಕೊಂಡು ತಂದರು. ಭಾರತಕ್ಕೆ ವಾಪಸ್ಸಾದವರೇ ಮಹಾರಾಜರು ಕಾರುಗಳನ್ನು ನಗರ ಸ್ವಚ್ಛಗೊಳಿಸುವ ಕೆಲಸಕ್ಕೆ ಹಚ್ಚಿದರು. ಅಷ್ಟೇ ಸಾಕಾಯಿತು. ಜಗತ್ಪ್ರಸಿದ್ಧ ಐಷಾರಾಮಿ ಕಾರು ಭಾರತದ ಬೀದಿಗಳಲ್ಲಿ ಕಸ ಗುಡಿಸಲು ಬಳಕೆಯಾಗುತ್ತಿದೆ ಎನ್ನುವ ಸುದ್ದಿ ಜಗತ್ತಿನಾದ್ಯಂತ ಹರಡಿತು. ಕಂಪನಿಯ ಹೆಸರಿಗೆ ಇದರಿಂದ ಕುಂದುಂಟಾಯಿತು. ಪರಿಣಾಮವಾಗಿ ಆ ಕಂಪನಿಯ ಕಾರನ್ನು ಕೊಳ್ಳುವವರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿತು. ಕೂಡಲೆ ಎಚ್ಚೆತ್ತ ಸಂಸ್ಥೆಯ ಸಿಬ್ಬಂದಿ ವರ್ಗ ನಡೆದ ಘಟನೆಯೆಲ್ಲವನ್ನೂ ತಿಳಿದುಕೊಂಡು ಮಹಾರಾಜರಿಗೆ ಕ್ಷಮಾಪಣಾ ಪತ್ರ ಬರೆದರು. ತಮ್ಮ ಸಂಸ್ಥೆಯ ಕಾರನ್ನು ಮುನಿಸಿಪಾಲಿಟಿ ವಾಹನವನ್ನಾಗಿ ಬಳಸದಂತೆ ಮನವಿ ಮಾಡಿದರು. ಅಲ್ಲದೆ ರೋಲ್ಸ್‌ರಾಯ್ಸ ಸಂಸ್ಥೆ , ತಮ್ಮಿಂದಾದ ಪ್ರಮಾದಕ್ಕೆ ಪ್ರಾಯಶ್ಚಿತವಾಗಿ ಮಹಾರಾಜರಿಗೆ ಆರು ಕಾರುಗಳನ್ನು ಉಡುಗೊರೆಯಾಗಿ ಕಳಿಸಿಕೊಟ್ಟಿತು. ಈ ಮಹಾರಾಜ ಯಾರೆಂಬುದರ ಬಗ್ಗೆ ಇನ್ನೂ ಗೊಂದಲ ಬಗೆಹರಿದಿಲ್ಲ. ಈ ಘಟನೆಯ ಕುರಿತು ಚರ್ಚೆಗಳು ಇನ್ನೂ ನಡೆದೇ ಇದೆ.

ಹವನ

ಟಾಪ್ ನ್ಯೂಸ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.